Get Updates
Get notified of breaking news, exclusive insights, and must-see stories!

ಗಣತಂತ್ರ ದಿನಕ್ಕಾಗಿ ಕಣ್ಮನ ಸೆಳೆಯುವ ತಯಾರಿ

ನವದೆಹಲಿ, ಜ.23: ಭಾರತದ ಗಣರಾಜ್ಯೋತ್ಸವ ದಿನದಂದು ಪಥ ಸಂಚಲನ ನೋಡುವುದು ಕಣ್ಣಿಗೆ ಹಬ್ಬ. 65ನೇ ಗಣತಂತ್ರ ದಿನಕ್ಕೆ ನವದೆಹಲಿಯಲ್ಲಿ ಭರ್ಜರಿ ತಯಾರಿ ನಡೆದಿದೆ.

65ನೇ ಗಣತಂತ್ರ ದಿನ ಮುಖ್ಯ ಅತಿಥಿಯಾಗಿ ಜಪಾನ್ ಪ್ರಧಾನಿ ಶಿಂಜೋ ಅಬೆ ಹಾಗೂ ಅವರ ಪತ್ನಿ ಅಕಿ ಅಬೆ ಅವರು ಆಗಮಿಸಿದ್ದಾರೆ. ಜಪಾನ್ ಹಾಗೂ ಭಾರತ ನಡುವಿನ ದ್ವಿಪಕ್ಷೀಯ ಮಾತುಕತೆಗೂ ಇದರ ಬೆನ್ನಲ್ಲೇ ಚಾಲನೆ ಸಿಗಲಿದೆ.

ಪರೇಡ್ ನೋಡಲು ದೇಶದ ಪ್ರಥಮ ಪ್ರಜೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಪ್ರಧಾನಿ ಮನಮೋಹನ್ ಸಿಂಗ್ ಉಪಸ್ಥಿತರಿರುತ್ತಾರೆ. ದೆಹಲಿಯಲ್ಲಿ ಅಭೂತಪೂರ್ವ ಭದ್ರತೆ ಒದಗಿಸಲಾಗಿದ್ದು, ಭೂ ಸೇನಾ ಮುಖ್ಯಸ್ಥ ವಿಕ್ರಮ್ ಸಿಂಗ್ ಅವರು ತಾಲೀಮು ನಿರತ ಪಥಸಂಚಲನ ತಂಡಗಳನ್ನು ಭೇಟಿ ಮಾಡಿ ಹುರುಪು ತುಂಬಿದ್ದಾರೆ. ದೆಹಲಿ ಐಜಿಐ ವಿಮಾನ ನಿಲ್ದಾಣ, ಮೆಟ್ರೋ ನಿಲ್ದಾಣ, ರೈಲ್ವೆ ಸ್ಟೇಷನ್, ಬಸ್ ಡಿಪೋ ಗಳಲ್ಲಿ ಕಮಾಂಡೋ ಪಡೆ ಗಸ್ತು ತಿರುಗುತ್ತಿದ್ದಾರೆ.

ಎಲ್ಲಾ ಭದ್ರತೆ, ಆತಂಕದ ನಡುವೆ ಆಬಾಲವೃದ್ಧರಾದಿಯಾಗಿ ಎಲ್ಲರೂ ಕೊರೆಯುವ ಚಳಿಯಲ್ಲಿ ತಾಲೀಮು ನಡೆಸುತ್ತಿದ್ದಾರೆ. ಗಣತಂತ್ರದಿನದಂದು ಕಾಣ ಸಿಗುವ ಪಥ ಸಂಚಲನ, ಸ್ತಬ್ದ ಚಿತ್ರಗಳು, ಸಾಂಸ್ಕೃತಿಕ ನೃತ್ಯಗಳ ಚಿತ್ರ ದರ್ಶನ ನಿಮ್ಮ ಮುಂದಿದೆ. ಇನ್ನಷ್ಟು ಚಿತ್ರಗಳು ಗಣರಾಜ್ಯೋತ್ಸವ ಸಂಭ್ರಮದ ನಡುವೆ ನೋಡುವಿರಂತೆ....

ಗಣತಂತ್ರದಿನಕ್ಕಾಗಿ ದೇಶದೆಲ್ಲೆಡೆ ಸಂಭ್ರಮದ ತಯಾರಿ

ಗಣತಂತ್ರದಿನಕ್ಕಾಗಿ ದೇಶದೆಲ್ಲೆಡೆ ಸಂಭ್ರಮದ ತಯಾರಿ

ಅಲಹಾಬಾದಿನಲ್ಲಿ ಮಾಘ ಮೇಳದ ನಡುವೆ ತ್ರಿವರ್ಣ ಧ್ವಜ ಹಿಡಿದು ಹೆಮ್ಮೆಯಿಂದ ಓಡುತ್ತಿರುವ ದೃಶ್ಯ

ಸ್ವಚ್ಛ ಗಂಗೆ ಅಭಿಯಾನಕ್ಕಾಗಿ ಮ್ಯಾರಾಥಾನ್

ಸ್ವಚ್ಛ ಗಂಗೆ ಅಭಿಯಾನಕ್ಕಾಗಿ ಮ್ಯಾರಾಥಾನ್

ಅಲಹಾಬಾದ್ ನಲ್ಲಿ ಗಣತಂತ್ರದಿನದ ಅಂಗವಾಗಿ National Mission for Clean Gangaಆಯೋಜಿಸಿದ್ದ ಮ್ಯಾರಥಾನ್

ಎನ್ ಸಿಸಿ ಕ್ಯಾಡೆಟ್ಸ್ ಹಾಗೂ ವಾಯುಸೇನೆ ಮುಖ್ಯಸ್ಥ

ಎನ್ ಸಿಸಿ ಕ್ಯಾಡೆಟ್ಸ್ ಹಾಗೂ ವಾಯುಸೇನೆ ಮುಖ್ಯಸ್ಥ

ತಾಲೀಮಿನ ನಡುವೆ ವಾಯುಸೇನೆ ಮುಖ್ಯಸ್ಥ ಅರುಪ್ ರಹಾ ಹಾಗೂ ಅವರ ಪತ್ನಿ ಜತೆ ಎನ್ ಸಿಸಿ ಕ್ಯಾಡೆಟ್ಸ್ ಹಾಗೂ ಎನ್ ಸಿಸಿ ಡಿಜಿ ಅನಿರುದ್ಧ ಚಕ್ರವರ್ತಿ

ಗಣರಾಜ್ಯೋತ್ಸವ ದಿನಕ್ಕಾಗಿ ಶಾಲಾ ಮಕ್ಕಳು

ಗಣರಾಜ್ಯೋತ್ಸವ ದಿನಕ್ಕಾಗಿ ಶಾಲಾ ಮಕ್ಕಳು

ದೆಹಲಿಯಲ್ಲಿ ಗಣರಾಜ್ಯೋತ್ಸವ ದಿನಕ್ಕಾಗಿ ಶಾಲಾ ಮಕ್ಕಳು ಹುಲಿವೇಷ ಧರಿಸಿ ತಾಲೀಮು ನಡೆಸಿದ್ದಾರೆ

ಬಿಎಸ್ ಎಫ್ ಡೇರ್ ಡೇವಿಲ್ಸ್ ಗಳ ಪ್ರದರ್ಶನ

ಬಿಎಸ್ ಎಫ್ ಡೇರ್ ಡೇವಿಲ್ಸ್ ಗಳ ಪ್ರದರ್ಶನ

ದೆಹಲಿಯಲ್ಲಿ ಗಣರಾಜ್ಯೋತ್ಸವ ದಿನದ ಪಥ ಸಂಚಲನ ಕಾರ್ಯಕ್ರಮಕ್ಕಾಗಿ ಬಿಎಸ್ ಎಫ್ ಡೇರ್ ಡೇವಿಲ್ಸ್ ಗಳು

ಪರೇಡ್ ನಲ್ಲಿ ಜನರಲ್ ವಿಕ್ರಮ್ ಸಿಂಗ್

ಪರೇಡ್ ನಲ್ಲಿ ಜನರಲ್ ವಿಕ್ರಮ್ ಸಿಂಗ್

ಭೂ ಸೇನೆ ಮುಖ್ಯಸ್ಥ ಜನರಲ್ ವಿಕ್ರಮ್ ಸಿಂಗ್ ಅವರು ಎನ್ ಸಿಸಿ ಕ್ಯಾಂಪಿನಲ್ಲಿ ಗೌರವ ಸ್ವೀಕರಿಸುತ್ತಿದ್ದಾರೆ.

ಅರುಣಾಚಲಪ್ರದೇಶದಿಂದ ಬಂದ ಮಕ್ಕಳಿಂದ ನೃತ್ಯ

ಅರುಣಾಚಲಪ್ರದೇಶದಿಂದ ಬಂದ ಮಕ್ಕಳಿಂದ ನೃತ್ಯ

ದೆಹಲಿಯಲ್ಲಿ ಗಣರಾಜ್ಯೋತ್ಸವ ದಿನಕ್ಕಾಗಿ ರಾಜಪಥದಲ್ಲಿ ಅರುಣಾಚಲಪ್ರದೇಶದಿಂದ ಬಂದ ಶಾಲಾ ಮಕ್ಕಳಿಂದ ಸಾಂಪ್ರದಾಯಿಕ ನೃತ್ಯ

ಮೈಸೂರು ಹುಲಿ ಟಿಪ್ಪು ಸುಲ್ತಾನ್ ಸ್ತಬ್ದ ಚಿತ್ರ

ಮೈಸೂರು ಹುಲಿ ಟಿಪ್ಪು ಸುಲ್ತಾನ್ ಸ್ತಬ್ದ ಚಿತ್ರ

ಗಣರಾಜ್ಯೋತ್ಸವ ಪರೇಡ್ ನಲ್ಲಿ ಕರ್ನಾಟಕ ರಾಜ್ಯದಿಂದ ಮೈಸೂರು ಹುಲಿ ಟಿಪ್ಪು ಸುಲ್ತಾನ್ ಸ್ತಬ್ದ ಚಿತ್ರ

ಅರುಣಾಚಲಪ್ರದೇಶದಿಂದ ಬಂದ ಮಕ್ಕಳಿಂದ ನೃತ್ಯ

ಅರುಣಾಚಲಪ್ರದೇಶದಿಂದ ಬಂದ ಮಕ್ಕಳಿಂದ ನೃತ್ಯ

ಗಣರಾಜ್ಯೋತ್ಸವ ದಿನಕ್ಕಾಗಿ ಉತ್ತರಾಖಂಡ್ ನ ಸ್ತಬ್ದ ಚಿತ್ರ ನಿರ್ಮಿಸಲು ಬಂದಿರುವ ಕಲಾವಿದೆ

ಗಣತಂತ್ರ ದಿನಕ್ಕೂ ಮುನ್ನ ಜಾಗ್ವರ್ ದುರಂತ

ಗಣತಂತ್ರ ದಿನಕ್ಕೂ ಮುನ್ನ ಜಾಗ್ವರ್ ದುರಂತ

ಗಣರಾಜ್ಯೋತ್ಸವ ದಿನದ ಅಭ್ಯಾಸ ನಿರತ ಜಾಗ್ವರ್ ಯುದ್ಧ ವಿಮಾನ ಬಿಕಾನೇರ್ ನ ಭೋಲಾಸಾರ್ ಗ್ರಾಮದ ಬಳಿ ಉರುಳಿ ಬಿದ್ದಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+