ಗಣತಂತ್ರ ದಿನಕ್ಕಾಗಿ ಕಣ್ಮನ ಸೆಳೆಯುವ ತಯಾರಿ
ನವದೆಹಲಿ, ಜ.23: ಭಾರತದ ಗಣರಾಜ್ಯೋತ್ಸವ ದಿನದಂದು ಪಥ ಸಂಚಲನ ನೋಡುವುದು ಕಣ್ಣಿಗೆ ಹಬ್ಬ. 65ನೇ ಗಣತಂತ್ರ ದಿನಕ್ಕೆ ನವದೆಹಲಿಯಲ್ಲಿ ಭರ್ಜರಿ ತಯಾರಿ ನಡೆದಿದೆ.
65ನೇ ಗಣತಂತ್ರ ದಿನ ಮುಖ್ಯ ಅತಿಥಿಯಾಗಿ ಜಪಾನ್ ಪ್ರಧಾನಿ ಶಿಂಜೋ ಅಬೆ ಹಾಗೂ ಅವರ ಪತ್ನಿ ಅಕಿ ಅಬೆ ಅವರು ಆಗಮಿಸಿದ್ದಾರೆ. ಜಪಾನ್ ಹಾಗೂ ಭಾರತ ನಡುವಿನ ದ್ವಿಪಕ್ಷೀಯ ಮಾತುಕತೆಗೂ ಇದರ ಬೆನ್ನಲ್ಲೇ ಚಾಲನೆ ಸಿಗಲಿದೆ.
ಪರೇಡ್ ನೋಡಲು ದೇಶದ ಪ್ರಥಮ ಪ್ರಜೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಪ್ರಧಾನಿ ಮನಮೋಹನ್ ಸಿಂಗ್ ಉಪಸ್ಥಿತರಿರುತ್ತಾರೆ. ದೆಹಲಿಯಲ್ಲಿ ಅಭೂತಪೂರ್ವ ಭದ್ರತೆ ಒದಗಿಸಲಾಗಿದ್ದು, ಭೂ ಸೇನಾ ಮುಖ್ಯಸ್ಥ ವಿಕ್ರಮ್ ಸಿಂಗ್ ಅವರು ತಾಲೀಮು ನಿರತ ಪಥಸಂಚಲನ ತಂಡಗಳನ್ನು ಭೇಟಿ ಮಾಡಿ ಹುರುಪು ತುಂಬಿದ್ದಾರೆ. ದೆಹಲಿ ಐಜಿಐ ವಿಮಾನ ನಿಲ್ದಾಣ, ಮೆಟ್ರೋ ನಿಲ್ದಾಣ, ರೈಲ್ವೆ ಸ್ಟೇಷನ್, ಬಸ್ ಡಿಪೋ ಗಳಲ್ಲಿ ಕಮಾಂಡೋ ಪಡೆ ಗಸ್ತು ತಿರುಗುತ್ತಿದ್ದಾರೆ.
ಎಲ್ಲಾ ಭದ್ರತೆ, ಆತಂಕದ ನಡುವೆ ಆಬಾಲವೃದ್ಧರಾದಿಯಾಗಿ ಎಲ್ಲರೂ ಕೊರೆಯುವ ಚಳಿಯಲ್ಲಿ ತಾಲೀಮು ನಡೆಸುತ್ತಿದ್ದಾರೆ. ಗಣತಂತ್ರದಿನದಂದು ಕಾಣ ಸಿಗುವ ಪಥ ಸಂಚಲನ, ಸ್ತಬ್ದ ಚಿತ್ರಗಳು, ಸಾಂಸ್ಕೃತಿಕ ನೃತ್ಯಗಳ ಚಿತ್ರ ದರ್ಶನ ನಿಮ್ಮ ಮುಂದಿದೆ. ಇನ್ನಷ್ಟು ಚಿತ್ರಗಳು ಗಣರಾಜ್ಯೋತ್ಸವ ಸಂಭ್ರಮದ ನಡುವೆ ನೋಡುವಿರಂತೆ....

ಗಣತಂತ್ರದಿನಕ್ಕಾಗಿ ದೇಶದೆಲ್ಲೆಡೆ ಸಂಭ್ರಮದ ತಯಾರಿ
ಅಲಹಾಬಾದಿನಲ್ಲಿ ಮಾಘ ಮೇಳದ ನಡುವೆ ತ್ರಿವರ್ಣ ಧ್ವಜ ಹಿಡಿದು ಹೆಮ್ಮೆಯಿಂದ ಓಡುತ್ತಿರುವ ದೃಶ್ಯ

ಸ್ವಚ್ಛ ಗಂಗೆ ಅಭಿಯಾನಕ್ಕಾಗಿ ಮ್ಯಾರಾಥಾನ್
ಅಲಹಾಬಾದ್ ನಲ್ಲಿ ಗಣತಂತ್ರದಿನದ ಅಂಗವಾಗಿ National Mission for Clean Gangaಆಯೋಜಿಸಿದ್ದ ಮ್ಯಾರಥಾನ್

ಎನ್ ಸಿಸಿ ಕ್ಯಾಡೆಟ್ಸ್ ಹಾಗೂ ವಾಯುಸೇನೆ ಮುಖ್ಯಸ್ಥ
ತಾಲೀಮಿನ ನಡುವೆ ವಾಯುಸೇನೆ ಮುಖ್ಯಸ್ಥ ಅರುಪ್ ರಹಾ ಹಾಗೂ ಅವರ ಪತ್ನಿ ಜತೆ ಎನ್ ಸಿಸಿ ಕ್ಯಾಡೆಟ್ಸ್ ಹಾಗೂ ಎನ್ ಸಿಸಿ ಡಿಜಿ ಅನಿರುದ್ಧ ಚಕ್ರವರ್ತಿ

ಗಣರಾಜ್ಯೋತ್ಸವ ದಿನಕ್ಕಾಗಿ ಶಾಲಾ ಮಕ್ಕಳು
ದೆಹಲಿಯಲ್ಲಿ ಗಣರಾಜ್ಯೋತ್ಸವ ದಿನಕ್ಕಾಗಿ ಶಾಲಾ ಮಕ್ಕಳು ಹುಲಿವೇಷ ಧರಿಸಿ ತಾಲೀಮು ನಡೆಸಿದ್ದಾರೆ

ಬಿಎಸ್ ಎಫ್ ಡೇರ್ ಡೇವಿಲ್ಸ್ ಗಳ ಪ್ರದರ್ಶನ
ದೆಹಲಿಯಲ್ಲಿ ಗಣರಾಜ್ಯೋತ್ಸವ ದಿನದ ಪಥ ಸಂಚಲನ ಕಾರ್ಯಕ್ರಮಕ್ಕಾಗಿ ಬಿಎಸ್ ಎಫ್ ಡೇರ್ ಡೇವಿಲ್ಸ್ ಗಳು

ಪರೇಡ್ ನಲ್ಲಿ ಜನರಲ್ ವಿಕ್ರಮ್ ಸಿಂಗ್
ಭೂ ಸೇನೆ ಮುಖ್ಯಸ್ಥ ಜನರಲ್ ವಿಕ್ರಮ್ ಸಿಂಗ್ ಅವರು ಎನ್ ಸಿಸಿ ಕ್ಯಾಂಪಿನಲ್ಲಿ ಗೌರವ ಸ್ವೀಕರಿಸುತ್ತಿದ್ದಾರೆ.

ಅರುಣಾಚಲಪ್ರದೇಶದಿಂದ ಬಂದ ಮಕ್ಕಳಿಂದ ನೃತ್ಯ
ದೆಹಲಿಯಲ್ಲಿ ಗಣರಾಜ್ಯೋತ್ಸವ ದಿನಕ್ಕಾಗಿ ರಾಜಪಥದಲ್ಲಿ ಅರುಣಾಚಲಪ್ರದೇಶದಿಂದ ಬಂದ ಶಾಲಾ ಮಕ್ಕಳಿಂದ ಸಾಂಪ್ರದಾಯಿಕ ನೃತ್ಯ

ಮೈಸೂರು ಹುಲಿ ಟಿಪ್ಪು ಸುಲ್ತಾನ್ ಸ್ತಬ್ದ ಚಿತ್ರ
ಗಣರಾಜ್ಯೋತ್ಸವ ಪರೇಡ್ ನಲ್ಲಿ ಕರ್ನಾಟಕ ರಾಜ್ಯದಿಂದ ಮೈಸೂರು ಹುಲಿ ಟಿಪ್ಪು ಸುಲ್ತಾನ್ ಸ್ತಬ್ದ ಚಿತ್ರ

ಅರುಣಾಚಲಪ್ರದೇಶದಿಂದ ಬಂದ ಮಕ್ಕಳಿಂದ ನೃತ್ಯ
ಗಣರಾಜ್ಯೋತ್ಸವ ದಿನಕ್ಕಾಗಿ ಉತ್ತರಾಖಂಡ್ ನ ಸ್ತಬ್ದ ಚಿತ್ರ ನಿರ್ಮಿಸಲು ಬಂದಿರುವ ಕಲಾವಿದೆ

ಗಣತಂತ್ರ ದಿನಕ್ಕೂ ಮುನ್ನ ಜಾಗ್ವರ್ ದುರಂತ
ಗಣರಾಜ್ಯೋತ್ಸವ ದಿನದ ಅಭ್ಯಾಸ ನಿರತ ಜಾಗ್ವರ್ ಯುದ್ಧ ವಿಮಾನ ಬಿಕಾನೇರ್ ನ ಭೋಲಾಸಾರ್ ಗ್ರಾಮದ ಬಳಿ ಉರುಳಿ ಬಿದ್ದಿದೆ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications