ಮಾಜಿ ವಿತ್ತ ಸಚಿವ ಅರುಣ್ ಜೇಟ್ಲಿ ಅವರ ಪ್ರಮುಖ ಹೇಳಿಕೆಗಳು
ನವದೆಹಲಿ, ಆಗಸ್ಟ್ 24: ಮಾಜಿ ವಿತ್ತ ಸಚಿವ ಅರುಣ್ ಜೇಟ್ಲಿ ಶನಿವಾರ(ಆಗಸ್ಟ್ 24)ರಂದು ನಿಧನರಾಗಿದ್ದಾರೆ.
ವೃತ್ತಿಯಲ್ಲಿ ವಕೀಲರಾಗಿದ್ದ ಅರುಣ್ ಜೇಟ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಚಿವ ಸಂಪುಟದಲ್ಲಿ ಪ್ರಮುಖರಾಗಿದ್ದರು. ಹಣಕಾಸು ಮತ್ತು ರಕ್ಷಣಾ ಖಾತೆಗಳನ್ನು ನಿರ್ವಹಿಸಿದ್ದರು.
ಪ್ರಧಾನಿ ಮೋದಿ ತೆಗೆದುಕೊಂಡ ನೋಟು ರದ್ದು ನಿರ್ಧಾರದ ಬಳಿಕ ಉಂಟಾದ ಏರುಪೇರುಗಳನ್ನು ನಿಭಾಯಿಸುವ ಜೊತೆಗೆ ಸರ್ಕಾರದ ನಿರ್ಧಾರವನ್ನು ಬಹುವಾಗಿ ಸಮರ್ಥಿಸಿಕೊಂಡಿದ್ದರು.

ಅನಾರೋಗ್ಯದ ಕಾರಣದಿಂದಾಗಿ ಅವರು 2019ರ ಲೋಕಸಭಾ ಚುನಾವಣೆಯಿಂದ ಹಿಂದೆ ಸರಿದಿದ್ದರು. ಅವರು ಹೇಳಿರುವ ಪ್ರಮುಖ ಹೇಳಿಕೆಗಳು ಇಲ್ಲಿವೆ.
-ಸರ್ಕಾರದ ಭಾಗವಾಗಿರುವ ನಾವು ಠೀಕೆಗೆ ಅರ್ಹರು
-ಸಂಸತ್ತಿನಲ್ಲಿ ಚರ್ಚೆ ಮುಖ್ಯವಾಗಿದ್ದು, ಸಂಸದೀಯ ಅಡಚಣೆಯನ್ನು ನಾವು ತಪ್ಪಿಸಬೇಕು. ಇದು ಅತಿ ಅಪರೂಪದ ಪ್ರಕರಣಗಳಲ್ಲಿ ಬಳಸಬೇಕಾದ ವಿಚಾರ. ಸಂಸತ್ತಿನಲ್ಲಿ ಹೊಣೆಗಾರಿಕೆ ಹಾಗೂ ಚರ್ಚೆ ಎರಡೂ ಒಂದಾಗಿ ಸಾಗಬೇಕು.
-ಏಕರೂಪದ ತೆರಿಗೆ ಭಾರತದಲ್ಲಿ ಸಾಧ್ಯವಿಲ್ಲ, ಹವಾಯಿ ಚಪ್ಪಲಿಗೂ ಹಾಗೂ ಮರ್ಸಿಡಿಸ್ ಕಾರಿಗೂ ಒಂದೇ ದರದಲ್ಲಿ ತೆರಿಗೆ ಕಟ್ಟುವ ವ್ಯವಸ್ಥೆಯನ್ನು ಭಾರತದಲ್ಲಿ ತಲು ಸಾಧ್ಯವಿಲ್ಲ.
-ನಾವು ಸಬ್ಸಿಡಿಯಲ್ಲಿ ಆಗುತ್ತಿರುವ ಸೋರಿಕೆಗೆ ಕತ್ತರಿ ಹಾಕಬೇಕಿದೆ. ನೇರವಾಗಿ ಸಬ್ಸಿಡಿಗೆ ಕತ್ತರಿ ಹಾಕುವುದಲ್ಲ.
-ಹಳೆ ಭಾರತ ಆರ್ಥಿಕವಾಗಿ ಛಿದ್ರಗೊಂಡಿತ್ತು. ಹೊಸ ಭಾರತ ಒಂದೇ ತೆರಿಗೆ , ಒಂದು ಮಾರುಕಟ್ಟೆ ಒಂದೇ ರಾಷ್ಟ್ರವನ್ನು ಸೃಷ್ಟಿ ಮಾಡಿದೆ. ಕೇಂದ್ರ ಮತ್ತು ರಾಜ್ಯಗಳು ದೇಶದ ಉನ್ನತಿಯ ಕಡೆಗೆ ಹೋಗಲು ಶ್ರಮಿಸುತ್ತಿರುವುದನ್ನು ಕಾಣಲು ಭಾರತದಲ್ಲಿ ಮಾತ್ರ ಸಾಧ್ಯ.
-ಚರ್ಚೆಗಳನ್ನು ನಡೆಸುವುದು ಸಂಸತ್ತಿನ ಕೆಲಸ. ಆದರೆ ಅನೇಕ ಸಲ ಸಂಸತ್ತಿನಲ್ಲಿ ಪ್ರಮುಖ ವಿಷಯಗಳನ್ನು ನಿರ್ಲಕ್ಷಿಸಲಾಗುತ್ತದೆ. ಅಂತಹ ಸಂದರ್ಭದಲ್ಲಿ ಕಲಾಪಕ್ಕೆ ತಡೆ ಒಡ್ಡಿದರೆ ಅದು ಪ್ರಜಾಪ್ರಭುತ್ವದ ಪರವಾಗಿದೆ ಎಂದರ್ಥ, ಆದ್ದರಿಂದ ಕಲಾಪಕ್ಕೆ ತಡೆ ಒಡ್ಡುವುದನ್ನು ಅಸಂವಿಧಾನಿಕ ಎಂದು ಹೇಳಲಾಗದು.
-ಕೆಲವೊಂದು ಬಾರಿ ಕಲಾಪಕ್ಕೆ ತಡೆ ಒಡ್ಡುವುದು ಒಳ್ಳೆಯದು. ಏಕೆಂದರೆ ಕಲಾಪಕ್ಕೆ ಅಡ್ಡಿ ಉಂಟು ಮಾಡಿದ ಅನೇಕ ಸಂದರ್ಭಗಳಲ್ಲಿ ಅದರಿಂದ ದೇಶಕ್ಕೆ ಒಳಿತೇ ಆಗಿದೆ.
-
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ..












Click it and Unblock the Notifications