Get Updates
Get notified of breaking news, exclusive insights, and must-see stories!

ಮೋಹನ್ ಭಾಗವತ್‌ರನ್ನು 'ರಾಷ್ಟ್ರಪಿತ' ಎಂದ ಇಮಾಮ್‌ ಮುಖ್ಯಸ್ಥ

ನವದೆಹಲಿ, ಸೆಪ್ಟೆಂಬರ್‌ 22: ಗುರುವಾರದಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರನ್ನು ಭೇಟಿ ಮಾಡಿದ ಅಖಿಲ ಭಾರತ ಇಮಾಮ್ ಸಂಘಟನೆಯ ಮುಖ್ಯಸ್ಥ ಇಮಾಮ್ ಉಮರ್ ಅಹ್ಮದ್ ಇಲ್ಯಾಸಿ ಅವರು ಮೋಹನ್ ಭಾಗವತ್ ಅವರು 'ರಾಷ್ಟ್ರಪಿತ (ರಾಷ್ಟ್ರದ ಪಿತಾಮಹ) ಮತ್ತು 'ರಾಷ್ಟ್ರ ಋಷಿ' (ರಾಷ್ಟ್ರದ ಋಷಿ) ಎಂದು ಹೇಳಿದರು.

ಸಭೆಯ ನಂತರ ಐಎಎನ್‌ಎಸ್‌ನೊಂದಿಗೆ ಮಾತನಾಡಿದ ಇಲ್ಯಾಸಿ, ಮೋಹನ್ ಭಾಗವತ್ ಅವರು ನಮ್ಮನ್ನು ಭೇಟಿ ಮಾಡುವುದು ಒಂದು ವಿಶೇಷವಾಗಿದೆ. ಭಾಗವತ್ ಅವರು ಇಮಾಮ್ ಹೌಸ್‌ ಸಭೆಗೆ ಬಂದರು. ಅವರು ನಮ್ಮ ರಾಷ್ಟ್ರಪಿತ ಮತ್ತು ರಾಷ್ಟ್ರ ಋಷಿಗಳು. ಎಲ್ಲರೂ ವಿಭಿನ್ನ ರೀತಿಯಲ್ಲಿ ಪೂಜಿಸುತ್ತಾರೆ. ಆದರೆ ಅದಕ್ಕೂ ಮೊದಲು ನಾವೆಲ್ಲರೂ ಮನುಷ್ಯರು, ನಾವು ಭಾರತೀಯರು, ಭಾರತದಲ್ಲಿ ವಾಸಿಸುತ್ತೇವೆ. ದೇಶದ ಏಕತೆ ಮತ್ತು ಸಮಗ್ರತೆಯನ್ನು ಕಾಪಾಡಿಕೊಳ್ಳಬೇಕು ಎಂದರು.

ಭಾರತ ವಿಶ್ವಗುರುವಾಗುವತ್ತ ಸಾಗುತ್ತಿದ್ದು, ಅದಕ್ಕಾಗಿ ನಾವೆಲ್ಲರೂ ಶ್ರಮಿಸಬೇಕು ಎಂದ ಅವರು, ನೀವು ಭಾಗವತ್ ಅವರನ್ನು 'ರಾಷ್ಟ್ರ ಪಿತ' ಎಂದು ಉಲ್ಲೇಖಿಸಿದ್ದೀರಾ ಎಂದು ಕೇಳಿದಾಗ, "ಖಂಡಿತವಾಗಿ, ಅವರು 'ರಾಷ್ಟ್ರ ಪಿತ' (ರಾಷ್ಟ್ರದ ಪಿತಾಮಹ)" ಎಂದು ಇಲ್ಯಾಸಿ ಹೇಳಿದರು.

ಉಮರ್ ಇಲ್ಯಾಸಿ ಅವರ ಸಹೋದರ ಸುಹೈಬ್ ಇಲ್ಯಾಸಿ ಮಾತನಾಡಿ, ನಮ್ಮ ತಂದೆಗೆ ಸಂಘದೊಂದಿಗೆ ಹಳೆಯ ಸಂಬಂಧವಿತ್ತು. ಜಮೀಲ್ ಇಲ್ಯಾಸಿ ಅವರ ಪುಣ್ಯತಿಥಿಯಂದು ಮೋಹನ್ ಭಾಗವತ್ ಅವರು ಮಸೀದಿಗೆ ಬಂದಿದ್ದರು. ಇದೊಂದು ಕೌಟುಂಬಿಕ ಕಾರ್ಯಕ್ರಮವಾಗಿದ್ದು, ಆ ಹಿನ್ನೆಲೆಯಲ್ಲಿ ಮಾತ್ರ ನೋಡಬೇಕು ಎಂದರು.

ಮಸೀದಿಯ ಕಚೇರಿಯಲ್ಲಿ ಇಲ್ಯಾಸಿ ಭೇಟಿ

ಮಸೀದಿಯ ಕಚೇರಿಯಲ್ಲಿ ಇಲ್ಯಾಸಿ ಭೇಟಿ

ಕೋಮು ಸೌಹಾರ್ದತೆಯನ್ನು ಬಲಪಡಿಸಲು ಮುಸ್ಲಿಂ ಬುದ್ಧಿಜೀವಿಗಳೊಂದಿಗೆ ಭಾಗವತ್ ಚರ್ಚೆ ನಡೆಸಿದ್ದಾರೆ ಎಂದು ಸುಹೇಬ್ ಇಲ್ಯಾಸಿ ಹೇಳಿದರು. ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್‌ ಭಾಗವತ್‌ ಇಮಾಮ್ ಉಮರ್ ಅಹ್ಮದ್ ಇಲ್ಯಾಸಿ ಅವರನ್ನು ರಾಷ್ಟ್ರ ರಾಜಧಾನಿ ನವದೆಹಲಿಯ ಕಸ್ತೂರಬಾ ಗಾಂಧಿ (ಕೆಜಿ) ಮಾರ್ಗದಲ್ಲಿರುವ ಮಸೀದಿಯಲ್ಲಿ ಅವರ ಕಚೇರಿಯಲ್ಲಿ ಭೇಟಿಯಾದರು.

ನಿರಂತರ ಸಂವಾದ ಭಾಗ ಈ ಭೇಟಿ

ನಿರಂತರ ಸಂವಾದ ಭಾಗ ಈ ಭೇಟಿ

ಸಭೆಯ ಬಗ್ಗೆ ವಿವರಗಳನ್ನು ನೀಡಿದ ಆರ್‌ಎಸ್‌ಎಸ್ ಪ್ರಚಾರ ಪ್ರಮುಖ್, ಆರ್‌ಎಸ್‌ಎಸ್ ಮುಖ್ಯಸ್ಥ ಭಗವತ್‌ ಅವರು ಸಮಾಜದ ವಿವಿಧ ವರ್ಗಗಳ ಜನರನ್ನು ಭೇಟಿ ಮಾಡುತ್ತಾರೆ. ಇದು ನಿರಂತರ ಸಂವಾದ (ಸಂವಾದ) ಪ್ರಕ್ರಿಯೆಯ ಭಾಗವಾಗಿದೆ ಎಂದು ಹೇಳಿದರು. ಮುಸ್ಲಿಮರನ್ನು ತಲುಪಲು ಪ್ರಯತ್ನಿಸುತ್ತಿರುವ ಭಾಗವತ್, ಆಗಸ್ಟ್‌ನಲ್ಲಿಯೂ ಇಲ್ಯಾಸಿಯನ್ನು ಭೇಟಿಯಾಗಿದ್ದರು. ಇತ್ತೀಚೆಗಷ್ಟೇ ಭಾಗವತ್ ಅವರು ಕೋಮು ಸೌಹಾರ್ದತೆಯನ್ನು ಬಲಪಡಿಸಲು ಮುಸ್ಲಿಂ ಬುದ್ಧಿಜೀವಿಗಳೊಂದಿಗೆ ಚರ್ಚೆ ನಡೆಸಿದ್ದರು.

ಸಮಾಜ ಸೇವಕ ಸಯೀದ್ ಶೆರ್ವಾನಿ ತಂಡದಲ್ಲಿದ್ದರು.

ಸಮಾಜ ಸೇವಕ ಸಯೀದ್ ಶೆರ್ವಾನಿ ತಂಡದಲ್ಲಿದ್ದರು.

ಆಗಸ್ಟ್ 22 ರಂದು ನಡೆದ ಸಭೆಯಲ್ಲಿ ಭಾಗವತ್ ಅವರು ಮಾಜಿ ಮುಖ್ಯ ಚುನಾವಣಾ ಆಯುಕ್ತ ಎಸ್ ವೈ ಖುರೈಶಿ, ದೆಹಲಿಯ ಮಾಜಿ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್, ಅಲಿಘರ್ ಮುಸಿಲ್ಮ್ ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿ ಎಲ್-ಜಿ (ನಿವೃತ್ತ) ಜಮೀರ್ ಉದ್ದೀನ್ ಶಾ, ಮಾಜಿ ಸಂಸದ ಶಾಹಿದ್ ಸಿದ್ದಿಕಿ ಮತ್ತು ಕೈಗಾರಿಕೋದ್ಯಮಿ ಮತ್ತು ಸಮಾಜ ಸೇವಕ ಸಯೀದ್ ಶೆರ್ವಾನಿ ಅವರನ್ನು ಭೇಟಿ ಮಾಡಿದ್ದರು.

ಸಾಮರಸ್ಯ ಕಾಪಾಡಿಕೊಳ್ಳಲು ಸಭೆ

ಸಾಮರಸ್ಯ ಕಾಪಾಡಿಕೊಳ್ಳಲು ಸಭೆ

ಮಾಜಿ ಸಂಸದ ಶಾಹಿದ್ ಸಿದ್ದಿಕಿ ಮಾತನಾಡಿ, ಭಾರತದಲ್ಲಿ ಶಾಂತಿ ಮತ್ತು ಸಹೋದರತ್ವವನ್ನು ಬಲಪಡಿಸಲು ಇಲ್ಲಿ ನಡೆದ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ದೇಶದಲ್ಲಿ ನಡೆಯುತ್ತಿರುವ ಧಾರ್ಮಿಕ ಸಾಮರಸ್ಯ ದುರ್ಬಲಗೊಳಿಸುತ್ತಿದೆ ಎಂದು ನಾವು ಕಳವಳ ವ್ಯಕ್ತಪಡಿಸುತ್ತೇವೆ. ಆದ್ದರಿಂದ, ದೇಶದಲ್ಲಿ ಶಾಂತಿ ಮತ್ತು ಸಾಮರಸ್ಯವನ್ನು ಹೇಗೆ ಉಳಿಸಿಕೊಳ್ಳುವುದು ಮತ್ತು ಬಲಪಡಿಸುವುದು ಎಂಬುದರ ಕುರಿತು ನಾವೆಲ್ಲರೂ ಚರ್ಚೆ ನಡೆಸಿದ್ದೇವೆ ಎಂದು ಸಿದ್ದಿಕಿ ಹೇಳಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+