ನಾನು ಶ್ರೇಷ್ಠ ಬರಹಗಾರನಲ್ಲː ಚೇತನ್ ಭಗತ್
ನವದೆಹಲಿ, ಅ.19 :' ನಾನು ಶ್ರೇಷ್ಠ ಬರಹಗಾರನಲ್ಲ, ಆದರೆ ಜನಪ್ರಿಯ ಬರಹಗಾರ' ಹೀಗೆ ತಮ್ಮನ್ನು ತಾವೇ ಚಿತ್ರಿಸಿಕೊಂಡವರು ಖ್ಯಾತ ಕಾದಂಬರಿಕಾರ ಚೇತನ್ ಭಗತ್.
ದೆಹಲಿಯ ಇಂಡಿಯನ್ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿಯ ಕಾರ್ಯಕ್ರಮವೊಂದರಲ್ಲಿ ಉಪನ್ಯಾಸ ನೀಡಿದ ಚೇತನ್ ಭಗತ್, ನನ್ನ ಪುಸ್ತಕಗಳು ಉತ್ತಮ ರೀತಿಯಲ್ಲಿ ಮಾರಾಟವಾಗುತ್ತವೆ ಎಂದ ಮಾತ್ರಕ್ಕೆ ಬರವಣಿಗೆ ಶ್ರೇಷ್ಠವಾಗಿದೆ ಎಂದಲ್ಲ ಎಂದು ಹೇಳಿದ್ದಾರೆ.[ಚೇತನ್ ಭಗತ್ 'ಹಾಫ್ ಗರ್ಲ್ ಫ್ರೆಂಡ್' ಬುಕ್ ಮಾಡ್ಕೊಳಿ]

ಭಾರತೀಯರು ನನ್ನ ಕಾದಂಬರಿ ಓದಬೇಕು ಎಂದು ಇಷ್ಟಪಡುತ್ತೇನೆ. ಯಾಕೆಂದರೆ ನಾನು ಭಾರತೀಯರಿಗಾಗಿ, ಭಾರತೀಯ ಕತೆಯನ್ನೇ ಬರೆಯುತ್ತಾನೆ ಎಂದಿದ್ದಾರೆ.
ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಭಗತ್, ಬಾಲಿವುಡ್ ಸಿನಿಮಾಗಳ ವಿವರಣೆ ನೀಡಿದರು. ಥ್ರೀ ಇಡಿಯಟ್ಸ್ ಸಿನಿಮಾದ ಕತೆಯನ್ನು ಇಟ್ಟುಕೊಂಡು ಜೀವನದಲ್ಲಿ ಸ್ಫೂರ್ತಿ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು. ವಿಶ್ವವಿದ್ಯಾಲಯದಿಂದ ಬಾಲಿವುಡ್ ವರೆಗೆ ಪ್ರಯಾಣ ಬೆಳೆಸಿದ ರೀತಿಯನ್ನು ವಿವರಿಸಿದರು. ನಮ್ಮ ಅಂತರಾಳದ ಮಾತನ್ನು ಯಾಕೆ ಕೇಳಬೇಕು? ಎಂಬ ವಿವರಣೆ ನೀಡಿದರು.
2004ರಲ್ಲಿ ನನ್ನ ಮೊದಲ ಕಾದಂಬರಿ ಬಿಡುಗಡೆಯಾದಾಗ ಭಾರತದ ಸಾಹಿತ್ಯದ ದೃಷ್ಟಿಕೋನ, ಯುವಜನರ ಚಿಂತನೆಗಳು ಬೇರೆಯಾಗಿದ್ದವು. ಆ ಸಮಯದಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳಲು ಇಂಗ್ಲಿಷ್ ಕಲಿಯಬೇಕು ಎಂಬ ಮನಸ್ಥಿತಿ ಯುವಕರಲ್ಲಿತ್ತು ಎಂದು ಹೇಳಿದರು.[ಭಾರತೀಯ ಸಂಜಾತ ನೀಲ್ ಮುಖರ್ಜಿ ಕೈತಪ್ಪಿದ ಬೂಕರ್]
ನನಗೆ ಗೊತ್ತು ನಾನೊಬ್ಬ ಉತ್ತಮ ಬರಹಗಾರ, ಅಷ್ಟೇ ಅಲ್ಲದೇ ಉತ್ತಮ ಆದಾಯ ತಂದುಕೊಡಬಲ್ಲ ಬರಹಗಾರ, ನಾನು ಜನರಿಗಾಗಿ ಬರೆಯುತ್ತೇನೆ. ಜನ ಅದನ್ನು ಒಪ್ಪಿಕೊಳ್ಳುತ್ತಾರೆ. ಇಲ್ಲಿ ಬರೆಯುವುದಕ್ಕಿಂತ ಒಪ್ಪಿಕೊಳ್ಳುವ ಗುಣ ಮುಖ್ಯ ಎಂದರು.
ಸಂವಾದವಾಗಿ ಬದಲಾದ ಭಾಷಣ ಭಗತ್ ರ ಇತ್ತೀಚಿನ ಕೃತಿ 'ಹಾಫ್ ಗರ್ಲ್ ಫ್ರೆಂಡ್ ' ಕಡೆ ಹೊರಳಿತು. ವಿದ್ಯಾವಂತ ಯುವತಿಯರು ಅವಿದ್ಯಾವಂತ ಯುವಕರೊಂದಿಗೆ ನಡೆದುಕೊಳ್ಳುವ ರೀತಿ, ಬದಲಾಗುವ ಅವರ ಭಾವನೆಗಳನ್ನು ನಾನು ಕೃತಿಯಲ್ಲಿ ಉಲ್ಲೇಖಿಸಿದ್ದೇನೆ ಎಂದು ತಿಳಿಸಿದರು.
-
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Rain Alert: ಕರ್ನಾಟಕದಲ್ಲಿ ಮಾ.27ರವರೆಗೆ ಗುಡುಗು ಸಹಿತ ಮಳೆ, ಕರಾವಳಿಗೆ ಉಷ್ಣ ಅಲೆ ಎಚ್ಚರಿಕೆ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
India Rain Forecast: ಮುಂದಿನ 5 ದಿನ ಈ ಭಾಗಗಳಲ್ಲಿ ವ್ಯಾಪಕ ಮಳೆ, ಉಷ್ಣ ಅಲೆ ಎಚ್ಚರಿಕೆ -
ಶೃಂಗೇರಿ ಮಠದಿಂದ ಶಾಲಾ ಮಕ್ಕಳಿಗೆ ಸುವರ್ಣಾವಕಾಶ: 'ರಾಮಾಯಣ ಪರೀಕ್ಷೆ' ಬರೆದು 50 ಸಾವಿರ ರೂ. ನಗದು ಗೆಲ್ಲಿ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
ಕರ್ನಾಟಕ PGCET 2026 ಅಧಿಸೂಚನೆ ಪ್ರಕಟ: ಎಂಬಿಎ ಸೇರಿ ವಿವಿಧ ಸ್ನಾತಕೋತ್ತರ ಪದವಿ ಪ್ರವೇಶಾತಿಗೆ ಮಾರ್ಚ್ 23 ರಿಂದ ಅರ್ಜಿ ಆಹ್ವಾನ -
ವಿಶ್ವಮಾತೆ ಎನ್ನುತ್ತಾ ಶ್ರೀಚಾಮುಂಡೇಶ್ವರಿಯ ಕನ್ನಡ ಹಾಡು ಹಂಚಿಕೊಂಡ ಪ್ರಧಾನಿ ಮೋದಿ -
ಮಾರ್ಚ್ 21ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ












Click it and Unblock the Notifications