IIT JEE Exam results 2023: ಫಲಿತಾಂಶ ಬಿಡುಗಡೆ, ಹೈದರಾಬಾದ್ ವಿದ್ಯಾರ್ಥಿ ಪ್ರಥಮ, ಫಲಿತಾಂಶ ನೋಡುವುದು ಹೇಗೆ?.
ಬೆಂಗಳೂರು, ಜೂನ್ 18: ಭಾರತೀಯ ತಂತ್ರಜ್ಞಾನ ಸಂಸ್ಥೆಗಳ (IIT) ಪ್ರವೇಶಾತಿಗಾಗಿ ಇತ್ತೀಚೆಗೆ ಜರುಗಿದ್ದ ಜಂಟಿ ಉನ್ನತ ಪರೀಕ್ಷೆ (JEE Advanced) ಫಲಿತಾಂಶ ಇಂದು ಭಾನುವಾರ ಪ್ರಕಟಗೊಂಡಿದೆ. ಹೈದರಾಬಾದ್ ವಿದ್ಯಾರ್ಥಿಯೊಬ್ಬರು ಈ ಪರೀಕ್ಷೆಯಲ್ಲಿ ಅಗ್ರಸ್ಥಾನ ಪಡೆದಿದ್ದಾರೆ.
ಜಂಟಿ ಉನ್ನತ ಪರೀಕ್ಷೆಯಲ್ಲಿ ಹೈದರಾಬಾದಿನ ಚಿದ್ವಿಲಾ ರೆಡ್ಡಿ ಅವರು ಮೊದಲ ಶ್ರೇಣಿಯಲ್ಲಿದ್ದಾರೆ. ಚಿದ್ವಿಲಾ ರೆಡ್ಡಿ ಅವರು, ಒಟ್ಟು 360 ಅಂಕಗಳ ಪೈಕಿ ಒಟ್ಟು 341 ಅಂಕ ಪಡೆದಿದ್ದಾರೆ. ವಿದ್ಯಾರ್ಥಿನಿಯರಲ್ಲಿ ಐಐಟಿ ಹೈದರಾಬಾದ್ ವಲಯ ನಯಕಾಂತಿ ನಾಗಭವ್ಯಶ್ರೀ ಅವರು 298 ಅಂಕಗಳನ್ನು ಪಡೆದಿದ್ದಾರೆ. ಈ ಮೂಲಕ ಅವರು ಟಾಪರ್ ಆಗಿ ಹೊರ ಹೊಮ್ಮಿದ್ದಾರೆ.

ಇನ್ನೂ ಗುವಾಹಟಿಯಲ್ಲಿ ಸಹ ಐಐಟಿ ಪ್ರವೇಶಕ್ಕಾಗಿ ಪರೀಕ್ಷೆ ನಡೆದಿತ್ತು, ಇಲ್ಲಿ ಒಟ್ಟು 1.80 ಲಕ್ಷ ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದು, ಅವರಲ್ಲಿ 43,773 ವಿದ್ಯಾರ್ಥಿಗಳು ಅರ್ಹತೆ ಪಡೆದಿದ್ದಾರೆ. ಒಟ್ಟಾರೆ ಜೆಇಇ ಪರೀಕ್ಷೆಯಲ್ಲಿ ಪರೀಕ್ಷೆ ಬರೆದವರ ಪೈಕಿ ಒಟ್ಟು 36,204 ಮಂದಿಗೆ ಪುರುಷ ಅಭ್ಯರ್ಥಿಗಳು ಮತ್ತು 7,509 ಮಂದಿ ಹೆಣ್ಣು ಮಕ್ಕಳು ಅರ್ಹತೆ ಪಡೆದವರಾಗಿದ್ದಾರೆ.
ಕಳೆದ ಜೂನ್ 04ರಂದು ದೇಶಾದ್ಯಂತ ಇರುವ ಐಐಟಿಗಳ ಪ್ರವೇಶಾತಿಗಾಗಿ ಜೆಇಇ ಅಡ್ವಾನ್ಸ್ ಪರೀಕ್ಷೆ ನಡೆಸಲಾಗಿತ್ತು.
ಜೆಇಇ-ಅಡ್ವಾನ್ಸ್ಡ 2023 ಫಲಿತಾಂಶ ಪರಿಶೀಲನೆ ವಿಧಾನ
* ಮೊದಲು ಅಧಿಕೃತ JEE- ಅಡ್ವಾನ್ಸ್ಡ ಫಲಿತಾಂಶಗಳು 2023 ವೆಬ್ಸೈಟ್ಗೆ jeeadv.ac.in. ಗೆ ಭೇಟಿ ನೀಡಿ.
* ನಂತರ ಮುಖಪುಟದಲ್ಲಿ JEE 2023 ಫಲಿತಾಂಶದ ಲಿಂಕ್ ಅನ್ನು ಆಯ್ಕೆಮಾಡಿ.
* ನಿಮ್ಮ ಜನ್ಮ ದಿನಾಂಕ, ರೋಲ್ ಸಂಖ್ಯೆ ನಮೂದಿದ ಲಾಗಿನ್ ಆಗಿ.
* ಬಳಿಕ ನಿಮ್ಮ ಫಲಿತಾಂಶವನ್ನು ಪರದೆಯ ಮೇಲೆ ಪ್ರದರ್ಶಿಸಲಾಗುತ್ತದ.
* ಅಲ್ಲಿ ಕಾಣುವ ಫಲಿತಾಂಶವನ್ನು ಕೂಡಲೇ ಡೌನ್ಲೋಡ್ ಮಾಡಿಕೊಂಡಿ ಬೇಕಿದ್ದಲ್ಲಿ ಪ್ರಿಂಟ್ ಔಟ್ ತೆಗೆದುಕೊಳ್ಳಿ.

ಜೂನ್ 19ಕ್ಕೆ ಕೌನ್ಸೆಲಿಂಗ್ ಆರಂಭ
ಐಐಟಿ-ಜೆಇಇ ಪರೀಕ್ಷೆ 2023 ರಲ್ಲಿ ಅರ್ಹತೆ ಪಡೆಯಲು ಸಮರ್ಥರಾದವರು ಐಐಟಿಗಳಿಗೆ ಪ್ರವೇಶಕ್ಕಾಗಿ ಜಂಟಿ ಸೀಟ್ ಅಲೊಕೇಶನ್ ಅಥಾರಿಟಿ (JoSAA) ಕೌನ್ಸೆಲಿಂಗ್ 2023 ನಲ್ಲಿ ಪಾಲ್ಗೊಳ್ಳಲು ಅರ್ಹರಾಗಿರುತ್ತಾರೆ. JoSAA ಕೌನ್ಸೆಲಿಂಗ್ ಆರಂಭದ ತಾತ್ಕಾಲಿಕ ದಿನಾಂಕ ಜೂನ್ 19 ಎಂದು ತಿಳಿದು ಬಂದಿದೆ. ಆರ್ಕಿಟೆಕ್ಚರಲ್ ಆಪ್ಟಿಟ್ಯೂಡ್ ಟೆಸ್ಟ್ (AAT) 2023 ಜೂನ್ 21 ರಂದು ನಡೆಯುತ್ತದೆ, AAT 2023 ರ ಫಲಿತಾಂಶಗಳನ್ನುಇದೇ ಜೂನ್ 24 ರಂದು ಪ್ರಕಟಿಸಲಾಗುವುದು ಎಂದು ಐಐಟಿ ಸಂಸ್ಥೆಗಳು ತಿಳಿಸಿವೆ.
-
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video












Click it and Unblock the Notifications