ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಮಕೃಷ್ಣ ಮಿಷನ್ ಗೆ ಐಡಿಬಿಐ ಬ್ಯಾಂಕ್ ನಿಂದ ದೇಣಿಗೆ

|
Google Oneindia Kannada News

ಮುಂಬೈ, ನ.11 : ಶಿಕ್ಷಣ ಕ್ಷೇತ್ರದಲ್ಲಿ ಸಾಮಾಜಿಕವಾಗಿ ತೊಡಗಿಕೊಂಡಿರುವ ರಾಮಕೃಷ್ಣ ಮಿಷನ್ ಗೆ ಐಡಿಬಿಐ ಬ್ಯಾಂಕ್ 5 ಕೋಟಿ ರೂ. ದೇಣಿಗೆ ನೀಡಿದೆ. 'ಐಡಿಬಿಐ ಬ್ಯಾಂಕ್ ಗೋಲ್ಡನ್ ಜ್ಯುಬ್ಲಿ ಸ್ಕಾಲರ್ ಶಿಪ್ ಫಂಡ್' ಎಂಬ ಹೆಸರಿನಲ್ಲಿ ದೇಣಿಗೆ ವಿನಿಯೋಗವಾಗಲಿದೆ.

ಐಡಿಬಿಐ ಬ್ಯಾಂಕ್ ಅಧ್ಯಕ್ಷ ಎಂ.ಎಸ್.ರಾಘವನ್ ದೇಣಿಗೆ ಚೆಕ್ ನ್ನು ನವೆಂಬರ್ 3 ರಂದು ಸಂಸ್ಥೆಯ ಸ್ವಾಮಿ ಬೋಧಸಾರಾನಂದ ಅವರಿಗೆ ಹಸ್ತಾಂತರ ಮಾಡಿದರು. ಈ ದೇಣಿಗೆ ಹಣವನ್ನು ಫಿಕ್ಸೆಡ್ ಡಿಪಾಸಿಟ್ ರೀತಿಯಲ್ಲಿ ಇಡಲಾಗುವುದು. ಬರುವ ಬಡ್ಡಿಯಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ನೀಡಲಾಗುವುದು.[ಕಾಮುಕರಿಂದ ಮಕ್ಕಳ ರಕ್ಷಿಸಲು ಲಾವಣ್ಯ ಹೋರಾಟ]

students

5 ಮತ್ತು 9 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಸಮಾಜದ ಕೆಳ ವರ್ಗದಿಂದ ಬಂದ ಮಕ್ಕಳನ್ನು ಗುರುತಿಸಿ ವೇತನ ನೀಡಲಾಗುವುದು ದೇಶದ ಮೂಲೆ ಮೂಲೆಯಲ್ಲಿರುವ ಸಂಸ್ಥೆಯ ಯಾವುದೇ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ ಇದಕ್ಕೆ ಅರ್ಹನಾಗುತ್ತಾನೆ ಎಂದು ಸ್ವಾಮೀಜಿ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಐಡಿಬಿಐ ಬ್ಯಾಂಕ್ ಕಾರ್ಯನಿರ್ವಾಹಕ ನಿರ್ದೇಶಕ ವಿನಯ್ ಕುಮಾರ್, ಆರ್.ವಿ.ಅಯ್ಯರ್ ಮತ್ತಿತರರು ಹಾಜರಿದ್ದರು.

English summary
IDBI Bank, as part of its CSR initiative of promoting education among students from weaker sections of the society, has contributed Rs. 5 crore to Ramakrishna Mission towards creation of an endowment fund named "IDBI Bank Golden Jubilee Scholarship Fund".
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X