'ಹುಟ್ಟಿದ ಕೂಡಲೇ ಅಮ್ಮ ನನ್ನನ್ನು ಕೊಂದಿದ್ದರೆ!'
ಭೋಪಾಲ್, ಜೂ. 28 : "'ಹೆಣ್ಣುಮಗಳೆಂದರೆ ಅದೊಂದು ಹೊರೆ. ಅದನ್ನು ಕೊಂದುಬಿಡಿ' ಹೀಗೆಂದು ನನ್ನ ಸಂಬಂಧಿಯೊಬ್ಬರು ನಾನು ಹುಟ್ಟಿದಾಗ ನನ್ನ ತಾಯಿಗೆ ಕಿವಿಯೂದಿದ್ದರು. ಆದರೆ, ನನ್ನ ತಾಯಿ ಭಾರೀ ಧೈರ್ಯವಂತೆ. ಹೀಗಾಗಿಯೇ ನಾನೀಗ ನಿಮ್ಮ ಮುಂದೆ ನಿಲ್ಲಲು ಸಾಧ್ಯವಾಗಿದ್ದು!"
ಹೀಗೆಂದು, ಕಣ್ಣಂಚಿನಲ್ಲಿ ಜಿನುಗಿದ ನೀರನ್ನು ಸೀರೆಯ ಚುಂಗಿನಿಂದ ಒರೆಸಿಕೊಂಡು ತನ್ನ ಕಥನವನ್ನು ಕೇಂದ್ರ ಮಾನವ ಸಂಪನ್ಮೂಲ ಖಾತೆ ಸಚಿವೆ ಸ್ಮೃತಿ ಇರಾನಿ ಅವರು ಭಾವುಕರಾಗಿ ಹಂಚಿಕೊಂಡಿದ್ದಾರೆ. ಭ್ರೂಣ ಹತ್ಯೆಯ ಕುರಿತು ಶಾಲಾ ಬಾಲಕಿಯೊಬ್ಬಳು ಕೇಳಿದ ಪ್ರಶ್ನೆಗೆ ಸ್ಮೃತಿ ಅವರು ತಮ್ಮ ಜೀವನದಲ್ಲಿ ನಡೆದ ಘಟನೆಯನ್ನೇ ಹಂಚಿಕೊಂಡರು.
"ಈ ಘಟನೆಯನ್ನು ನಾನು ಮೊದಲ ಬಾರಿಗೆ ಹಂಚಿಕೊಳ್ಳುತ್ತಿದ್ದೇನೆ. ನಾನು ಹುಟ್ಟಿದಾಗ ಸಂಬಂಧಿಯೊಬ್ಬರು, ಹೆಣ್ಣೆಂದರೆ ಹೊರೆಯಾಗಿರುತ್ತಾಳೆ, ಆಕೆಯನ್ನು ಕೊಂದುಬಿಡಿ, ಎಂದು ನಿರ್ದಯವಾಗಿ ಹೇಳಿದ್ದರು. ನನ್ನ ತಾಯಿ ಧೈರ್ಯವಂತೆ, ಗಟ್ಟಿಗಿತ್ತಿ ಹಾಗೆ ಮಾಡಲಿಲ್ಲ" ಎಂದು ಶುಕ್ರವಾರ ನಡೆದ ಕಾರ್ಯಕ್ರಮವೊಂದರಲ್ಲಿ ಸ್ಮೃತಿ ಅವರು ನೆನಪಿನಂಗಳಕ್ಕೆ ಜಾರಿದರು.

"ಭ್ರೂಣ ಹತ್ಯೆಯಂಥ ಹೇಯ ಕೃತ್ಯಕ್ಕೆ ಮಂಗಳ ಹಾಡಬೇಕು. ಕೇಂದ್ರ ಸರಕಾರ ಇದಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಿದೆ. ಒಬ್ಬ ಬಾಲಕಿಗೆ ವಿದ್ಯಾದಾನ ಮಾಡಿದರೆ ಆಕೆಗೆ ಮಾತ್ರವಲ್ಲ, ಇಡೀ ಕುಟುಂಬಕ್ಕೆ ನಾವು ಶಿಕ್ಷಣ ನೀಡಿದಂತೆ. ಇದು ದೇಶ ಕಟ್ಟಲು ಸಹಾಯವಾಗುತ್ತದೆ" ಎಂದು ಸ್ಮೃತಿ ಅವರು ವಿಚಾರ ಮಂಡಿಸಿದರು.
ಬೇರೆಬೇರೆ ರಾಜ್ಯಗಳಲ್ಲಿ ಇರುವ ಶೈಕ್ಷಣಿಕ ವಿಭಿನ್ನತೆಯ ಬಗ್ಗೆ ಒಬ್ಬರು ಪ್ರಶ್ನಿಸಿದಾಗ, ಏಕರೀತಿಯ ಶಿಕ್ಷಣದ ಬಗ್ಗೆ ರಾಷ್ಟ್ರೀಯ ಶಿಕ್ಷಣ ನೀತಿ ನಿರ್ಧಾರ ತೆಗೆದುಕೊಳ್ಳುತ್ತದೆ. ದೇಶದ ನಿರುದ್ಯೋಗ ನಿವಾರಿಸಲು ಶಿಕ್ಷಣವನ್ನು ನೈಪುಣ್ಯತೆ ಅಭಿವೃದ್ಧಿಯ ಜೊತೆ ಜೋಡಿಸಲಾಗುವುದು ಮತ್ತು ಪಠ್ಯಕ್ರಮದಲ್ಲಿ ಪ್ರಾಯೋಗಿಕತೆಯನ್ನು ತರಲಾಗುವುದು ಎಂದು ಅವರು ವಿವರಿಸಿದರು.
ಅಂತಾರಾಷ್ಟ್ರೀಯ, ರಾಷ್ಟ್ರೀಯ, ರಾಜ್ಯ ಮತ್ತು ಪ್ರಾದೇಶಿಕ ಮಟ್ಟದಲ್ಲಿ ಚರ್ಚೆ ನಡೆಸಿದ ನಂತರ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರೂಪಿಸಲಾಗುವುದು. ಇಲಾಖೆ ರಾಷ್ಟ್ರೀಯ ಈ-ಲೈಬ್ರರಿ ಯೋಜನೆ ಕೂಡ ಹಾಕಿಕೊಂಡಿದ್ದು, ಅಗಾಧವಾದ ಜ್ಞಾನಸಂಪತ್ತು ವಿದ್ಯಾರ್ಥಿಗಳಿಗೆ ಮತ್ತು ಇತರರಿಗೆ ಸುಲಭವಾಗಿ ದೊರೆಯುವಂತೆ ಆಗುತ್ತದೆ ಎಂದು ಅವರು ಹೇಳಿದರು. (ಪಿಟಿಐ)
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications