'ಇಷ್ಟು ವರ್ಷಗಳಿಂದ ನನಗೆ ತುಂಬಾ ನೋವು ಇತ್ತು...' ರಾಹುಲ್ ಗಾಂಧಿ ಟ್ವೀಟ್
ದೆಹಲಿ ಆಗಸ್ಟ್ 15: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ 77ನೇ ಸ್ವಾತಂತ್ರ್ಯ ದಿನದಂದು ದೇಶವಾಸಿಗಳಿಗೆ ಶುಭಾಶಯ ಕೋರಿದರು. ಜೊತೆಗೆ ಈ ಸಮಯದಲ್ಲಿ ತಮ್ಮ ಭಾರತ್ ಜೋಡೋ ಯಾತ್ರೆಯನ್ನು ನೆನಪಿಸಿಕೊಂಡರು.
ರಾಹುಲ್ ಗಾಂಧಿ ಅವರು ಭಾರತ್ ಜೋಡೋ ಯಾತ್ರೆಯನ್ನು ಆರಂಭಿಸಿದ್ದನ್ನು ನೆನಪಿಸಿಕೊಂಡರು. ಅವರು ಪ್ರೀತಿಸಿದ್ದು ಏನೆಂಬುದನ್ನು ಅರ್ಥಮಾಡಿಕೊಳ್ಳಲು ಭಾರತ್ ಜೋಡೋ ಯಾತ್ರೆಯನ್ನು ಆರಂಭಿಸಿ ಮತ್ತು ಅವರು ವರ್ಷಗಳಿಂದ ನಿಂದನೆಯನ್ನು ಸಹಿಸಿಕೊಂಡಿರುವುದನ್ನು ಈ ಸಂದರ್ಭದಲ್ಲಿ ನೆನೆದರು.

ಭಾರತದ 77ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ರಾಹುಲ್ ಗಾಂಧಿ ಟ್ವೀಟ್ ಮಾಡಿ, "ಕಳೆದ ವರ್ಷ ನಾನು ನನ್ನ ಮನೆ ಎಂದು ಕರೆಯುವ ಭೂಮಿಯಲ್ಲಿ 145 ದಿನಗಳು ನಡೆದಿದ್ದೇನೆ. ದಾರಿಯುದ್ದಕ್ಕೂ ಅನೇಕ ಜನರು ನನ್ನನ್ನು ಕೇಳಿದರು. ನೀವು ಹೀಗಿದ್ದೀರಾ?" ನೀವು ಯಾಕೆ ಇದನ್ನು ಮಾಡುತ್ತಿದ್ದೀರಿ? ನೀವು ಏನನ್ನು ಹುಡುಕುತ್ತಿದ್ದಿರಿ? ನಿಮಗೆ ಏನು ಸಿಕ್ಕಿದೆ? ಎಂದು ಕೇಳಿದರು. ನಾನು ಇಷ್ಟಪಡುವದನ್ನು ಅರ್ಥಮಾಡಿಕೊಳ್ಳಲು ನಾನು ಬಯಸುತ್ತೇನೆ. ಅದಕ್ಕಾಗಿ ನಾನು ನನ್ನ ಪ್ರಾಣ ಸೇರಿದಂತೆ ಎಲ್ಲವನ್ನೂ ತ್ಯಜಿಸಲು ಸಿದ್ಧನಾಗಿದ್ದೇನೆ. ಇಷ್ಟು ವರ್ಷಗಳ ಕಾಲ ತುಂಬಾ ನೋವು ಮತ್ತು ನಿಂದನೆಯನ್ನು ಸಹಿಸಿಕೊಂಡಿದ್ದೇನೆ'' ಎಂದು ಅವರು ಬರೆದಿದ್ದಾರೆ.
ಭಾರತ್ ಜೋಡೋ ಯಾತ್ರೆ
12 ರಾಜ್ಯಗಳು, ಎರಡು ಕೇಂದ್ರಾಡಳಿತ ಪ್ರದೇಶ ಹಾಗೂ 150 ದಿನಗಳ ಕಾಲ 3570 ಕಿ. ಮೀ ನಡಿಗೆ. ತಮಿಳು ನಾಡಿನ ಕನ್ಯಾಕುಮಾರಿಯಿಂದ ಆರಂಭಗೊಂಡು ಕೇರಳ, ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ, ಮಧ್ಯಪ್ರದೇಶ, ರಾಜಸ್ಥಾನ, ಹರಿಯಾಣ, ಉತ್ತರ ಪ್ರದೇಶ, ದೆಹಲಿ, ಪಂಜಾಬ್ ಮೂಲಕ ಕೊನೆಗೆ ಜಮ್ಮು ಹಾಗೂ ಕಾಶ್ಮೀರದಲ್ಲಿ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಅಂತ್ಯಕಂಡಿದೆ.
'ಒಟ್ಟಿಗೆ ನಡಿಯಿರಿ ದೇಶವನ್ನು ಒಂದುಗೂಡಿಸಿ' ಎಂಬ ಘೋಷಾವಾಕ್ಯದೊಂದಿಗೆ ಆರಂಭಗೊಂಡ ಈ ಯಾತ್ರೆ ಪರ ವಿರೋಧ ಚರ್ಚೆಗಳು, ಕೆಲವೊಂದು ಅಡೆ ತಡೆಗಳ ನಡುವೆಯೂ ಯಶಸ್ವಿಯಾಗಿ ಮುಕ್ತಾಯಕಂಡಿದೆ. ಹರಿಯಾಣದ ರಾಹುಲ್ ರಾವ್ ಭಾರತ್ ಜೋಡೋ ಯಾತ್ರೆಯಲ್ಲಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಹೆಜ್ಜೆ ಹಾಕಿದ್ದಾರೆ. ಭಾರತ್ ಜೋಡೋ ಯಾತ್ರೆಯಲ್ಲಿ ಭಾಗಿಯಾಗುವ ಮೂಲಕ ವೈಯಕ್ತಿಕವಾಗಿ ದೇಶವನ್ನು ಅರ್ಥ ಮಾಡಿಕೊಳ್ಳಲು ಸಿಕ್ಕಂತಹ ದೊಡ್ಡ ಅವಕಾಶ ಇದಾಗಿದೆ. ವಿವಿಧ ರಾಜ್ಯಗಳ ಪ್ರವಾಸದಲ್ಲಿ ಅಲ್ಲಿಯ ರಾಜಕೀಯ ಪರಿಸ್ಥಿತಿ, ಜನ ಸಂಸ್ಕೃತಿ, ಸ್ಥಳೀಯ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳುವುದು ಒಂದು ಅತ್ಯುತ್ತಮ ಅನುಭವವನ್ನು ನೀಡಿದೆ. ಯಾತ್ರೆಯುದ್ದಕ್ಕೂ ಜನರ ಪ್ರೀತಿ, ಸಹಕಾರ ಅಭೂತಪೂರ್ವವಾಗಿ ಸಿಕ್ಕಿದ್ದು ಇದೊಂದು ವಿಶಿಷ್ಟವಾದ ಅನುಭವವಾಗಿತ್ತು ಎಂದು ರಾಹುಲ್ ಗಾಂಧಿ ಹೇಳಿಕೊಂಡಿದ್ದರು.












Click it and Unblock the Notifications