ಕಾಶ್ಮೀರದ ಅತ್ಯಂತ ಅಪಾಯಕಾರಿ ಮಹಿಳೆ ಮೇಲೆ ಎನ್ಐಎ ಕಣ್ಣು
ಜಮ್ಮು ಮತ್ತು ಕಾಶ್ಮೀರ, ಜುಲೈ 31: ಹುರಿಯತ್ ಭಯೋತ್ಪಾದನಾ ನಿಧಿ ಪ್ರಕರಣದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆ 'ದೂಖ್ತರಣ್-ಎ-ಮಿಲ್ಲತ್ ಎಂಬ ಸಂಘಟನೆ ವಿರುದ್ಧ ಎಫ್ಐಆರ್ ದಾಖಲಿಸಿದೆ. ಈ ಸಂಘಟನೆಯನ್ನು ಆಶಿಯಾ ಅಂದ್ರಾಬಿ ಎಂಬ ಮಹಿಳೆ ಮುನ್ನಡೆಸುತ್ತಿದ್ದು, ಈಕೆ ಕಾಶ್ಮೀರದ ಅತ್ಯಂತ ಅಪಾಯಕಾರಿ ಮಹಿಳೆಯರಲ್ಲಿ ಒಬ್ಬರಾಗಿದ್ದಾಳೆ.
ಇತ್ತೀಚೆಗೆ ಸ್ವಾತಂತ್ರ್ಯ ದಿನದಂದು ಪಾಕಿಸ್ತಾನದ ಜನರಿಗೆ ಶುಭಾಶಯ ಹೇಳಿ ಈಕೆ ಸುದ್ದಿಯಲ್ಲಿದ್ದಳು. ಲಾಹೋರ್ ನ ಕಾರ್ಯಕ್ರಮದಲ್ಲಿ ಪಾಕಿಸ್ತಾನದ ಸ್ವಾತಂತ್ರ್ಯ ದಿನವನ್ನು ಉದ್ದೇಶಿಸಿ ಮಾತನಾಡಿದ್ದಲ್ಲದೆ, ಅದಕ್ಕೂ ಮೊದಲು ಮನೆಯಲ್ಲಿ ಪಾಕಿಸ್ತಾನದ ಸ್ವಾತಂತ್ರ್ಯ ದಿನವನ್ನು ಆಚರಿಸಿದ್ದಳು.

ಕಾಶ್ಮೀರದಲ್ಲಿ ಅಶಾಂತಿ ಸೃಷ್ಟಿಸಲು ಧನ ಸಹಾಯ ಮಾಡುವುದಲ್ಲಿ ಈಕೆ ಸಕ್ರಿಯ ಪಾತ್ರ ವಹಿಸಿದ್ದಾಳೆಂದು ಎನ್ಐಎ ಅಧಿಕಾರಿಗಳು ಹೇಳಿದ್ದಾರೆ. ಆಕೆ ತನ್ನ ಸಂಸ್ಥೆಗೆ ಪಡೆದ ಹಣದ ಮೇಲೆ ತನಿಖಾ ಸಂಸ್ಥೆ ನಿಗಾ ಇಟ್ಟಿದ್ದು, ಸದ್ಯದಲ್ಲೇ ಈಕೆಯನ್ನು ಪ್ರಶ್ನಿಸುವ , ಅಗತ್ಯ ಬಿದ್ದರೆ ಬಂಧಿಸುವ ಸಾಧ್ಯತೆ ಇದೆ.
ಕಾಶ್ಮೀರದ ಅತ್ಯಂತ ಅಪಾಯಕಾರಿ ಮಹಿಳೆ
ಪ್ರಚೋದನಕಾರಿ ಹಾಗೂ ಪ್ರತ್ಯೇಕತಾವಾದಿಗಳ ಉಕ್ಕಿನ ಮಹಿಳೆಯಾಗಿ ಈಕೆ ಗುರುತಿಸಿಕೊಂಡಿದ್ದಾಳೆ. ಈಕೆಯ ದುಖ್ತರಣ್-ಎ-ಮಿಲ್ಲತ್ ಕಾಶ್ಮೀರದ ಸರ್ವ ಪಕ್ಷಗಳ ಹುರಿಯತ್ ಕಾನ್ಫರೆನ್ಸ್ ನ ಭಾಗವಾಗಿದ್ದು ಭಾರತದಿಂದ ಕಾಶ್ಮೀರವನ್ನು ಪ್ರತ್ಯೇಕಿಸುವ ಉದ್ದೇಶವನ್ನೇ ಪ್ರತಿಪಾದಿಸುತ್ತಿದೆ.
ಅಶಿಯಾ ಹಲವು ಕಾಲದಿಂದ ಹಲವಾರು ಕಾರಣಗಳಿಗಾಗಿ ಸುದ್ದಿಯಲ್ಲಿದ್ದವಳು. ಆಕೆ ಹಿಜ್ಬುಲ್ ಮುಜಾಹಿದ್ದೀನ್ ಸಂಸ್ಥಾಪಕರಲ್ಲಿ ಒಬ್ಬರಾದ ಆಶಿಕ್ ಹುಸೇನ್ ಫಕ್ತೂ ಜತೆ ವಿವಾಹವಾಗಿದ್ದಾಳೆ.
ಯಾವಾಗಲೂ ಬುರ್ಕಾದಲ್ಲಿ ಕಾಣಿಸಿಕೊಳ್ಳುವ ಈಕೆ ಭಾರತದಲ್ಲಿ ಯುದ್ಧ ನಡೆಸಿದ, ಹಿಂಸಾಚಾರವನ್ನು ಉಂಟುಮಾಡಿದ ಅಪರಾಧದ ಮೇಲೆ 2010 ರಲ್ಲಿಯೂ ಬಂಧಿತೆಯಾಗಿದ್ದಳು.
ತೀರಾ ಇತ್ತೀಚೆಗೆ ಪಾಕಿಸ್ತಾನದ ಧ್ವಜವನ್ನು ಹಾರಿಸಿದ್ದಕ್ಕಾಗಿ ಮತ್ತು ಅಲ್ಲಿನ ರಾಷ್ಟ್ರೀಯ ಗೀತೆಯನ್ನು ಮಾರ್ಚ್ 25, 2015 ರಂದು ಹಾಡಿ ಸುದ್ದಿಯಲ್ಲಿದ್ದಾಳೆ.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications