ಪಾಕ್ ಬಂಕರ್ ದ್ವಂಸ: ಟ್ವಿಟ್ಟರ್ ನಲ್ಲಿ ಹರ್ಷದ ಹೊಳೆ
ಪಾಕ್ ಸೇನೆಯ ಎರಡು ಬಂಕರ್ ಗಳನ್ನು ಕೇವಲ 60 ಸೆಕೆಂಡ್ ಗಳಲ್ಲಿ ದ್ವಂಸ ಮಾಡಿದ ಭಾರತೀಯ ಸೇನೆಯ ನಡೆಯನ್ನು ಟ್ವಿಟ್ಟಿಗರು ಅತೀವ ಹೆಮ್ಮೆಯಿಂದ ಸ್ವಾಗತಿಸಿದ್ದಾರೆ.
ಜಮ್ಮು-ಕಾಶ್ಮೀರ, ಮೇ 08: ಪಾಕ್ ಸೇನೆಯ ಎರಡು ಬಂಕರ್ ಗಳನ್ನು ಕೇವಲ 60 ಸೆಕೆಂಡ್ ಗಳಲ್ಲಿ ದ್ವಂಸ ಮಾಡುವ ಮೂಲಕ ಭಾರತೀಯ ಸೇನೆ ತಕ್ಕ ಪ್ರತ್ಯುತ್ತರ ನೀಡಿದೆ. ಮೇ 1 ರಂದು ಅಪ್ರಚೋದಿತ ದಾಳಿ ನಡೆಸಿದ್ದ ಪಾಕ್, ಭಾರತೀಯ ಸೇನೆಯ ಇಬ್ಬರು ಯೋಧರ ತಲೆಯನ್ನು ತುಂಡರಿಸಿ ತನ್ನ ಎಂದಿನ ಕ್ರೌರ್ಯ ಮೆರೆದಿತ್ತು.
ಪಾಕ್ ನ ಈ ಹೇಯ ಕೃತ್ಯಕ್ಕೆ ಇನ್ನೊಂದೇ ವಾರದಲ್ಲಿ ತಕ್ಕ ಉತ್ತರ ನೀಡುವುದಾಗಿ ಭಾರತೀಯ ಸೇನಾ ಮುಖ್ಯಸ್ಥ ಜ.ಬಿಪಿನ್ ರಾವತ್ ಅಂದೇ ಶಪಥ ಮಾಡಿದ್ದರು. ಆ ಘಟನೆ ನಡೆದು ಒಂದು ವಾರ ತುಂಬುವ ಹೊತ್ತಿಗೇ ಪಾಕ್ ಬಂಕರ್ ಗಳನ್ನು ಭಾರತೀಯ ಸೇನೆ ದ್ವಂಸ ಮಾಡಿರುವುದು ಭಾರತದ ತಾಕತ್ತೇನು ಎಂಬುದನ್ನು ಮತ್ತೊಮ್ಮೆ ಪಾಕಿಸ್ತಾನಕ್ಕೆ ಪರಿಚಯಿಸಿದಂತಾಗಿದೆ. [ಪಾಕ್ ಬಂಕರ್ ದ್ವಂಸ: ಪಾಕ್ ಹೀನ ಕೃತ್ಯಕ್ಕೆ ಇದು ಭಾರತದ ಉತ್ತರ!]
2016, ಸೆಪ್ಟೆಂಬರ್ ನಲ್ಲಿ ನಡೆದ ಉರಿ ದಾಳಿಗೆ ಪ್ರತಿಯಾಗಿ ಭಾರತ ಪಾಕಿಸ್ತಾದ ವಿರುದ್ಧ ಸರ್ಜಿಕಲ್ ದಾಳಿ ನಡೆಸಿದ್ದನ್ನೂ ಇಲ್ಲಿ ಸ್ಮರಿಸಬಹುದಾಗಿದೆ. [ಸರ್ಜಿಕಲ್ ಸ್ಟ್ರೈಕ್ ನಡೆದದ್ದು ಹೇಗೆ? 10 ಬೆಳವಣಿಗೆಗಳು]
ಜಮ್ಮು-ಕಾಶ್ಮೀರದ ಗಡಿ ಭಾಗದ ನೌಶೆರಾ ಸೆಕ್ಟರ್ ಬಳಿ ಇದ್ದ ಪಾಕಿಸ್ತಾನದ 2 ಬಂಕರ್ ಗಳನ್ನು 6 ರಾಕೆಟ್ ಗಳನ್ನು ಬಳಸಿ ಭಾರತ ದ್ವಂಸಗೊಳಿಸಿದೆ. ಒಟ್ಟಿನಲ್ಲಿ ನಮ್ಮ ಯೋಧರನ್ನು ಸುಖಾ ಸುಮ್ಮನೆ ಕೆರಳಿಸಿದರೆ ನಾವು ಸುಮ್ಮನಿರಲಾರೆವು ಎಂಬ ಉಗ್ರ ಸಂದೇಶವನ್ನು ಈ ನಡೆಯ ಮೂಲಕ ಭಾರತ- ಪಾಕಿಸ್ಥಾನಕ್ಕೆ ತೋರಿಸಿಕೊಟ್ಟಿದೆ.
ಪಾಕಿಸ್ತಾನ ಈ ಬಂಕರ್ ಗಳನ್ನು ಭಾರತದ ಮೇಲೆ ದಾಳಿ ಮಾಡುವುದಕ್ಕೆ ಮತ್ತು ಭಯೋತ್ಪಾದಕರನ್ನು ರಕ್ಷಿಸುವುದಕ್ಕೆ ಬಳಸುತ್ತಿತ್ತು. ನಿನ್ನೆ ತಾನೇ ಮುಂಬೈ-ಕರಾಚಿ ನಡುವಿನ ವಿಮಾನ ಯಾನ ರದ್ದುಗೊಳಿಸುವ ಮೂಲಕ ಭಾರತದ ಮೇಲಿನ ತನ್ನ ಮುನಿಸನ್ನು ತನ್ನದೇ ರೀತಿಯಲ್ಲಿ ವ್ಯಕ್ತಪಡಿಸಿದ್ದ ಪಾಕಿಸ್ತಾನಕ್ಕೆ ಇಂದು ಭಾರತ ನೀಡಿದ ಉತ್ತರ ನುಂಗಲಾರದ ತುತ್ತಾಗಿದೆ!
ಪಾಕ್ ಬಂಕರ್ ದ್ವಂಸಗೊಳಿಸಿದ ಭಾರತದ ನಡೆಯನ್ನು ಟ್ವಿಟ್ಟಿಗರು ಅತೀವ ಹೆಮ್ಮೆಯಿಂದ ಸ್ವಾಗತಿಸಿದ್ದಾರೆ.[ಪಾಕಿಸ್ತಾನಕ್ಕೆ ನಡುಕ ಹುಟ್ಟಿಸಲಿರುವ ನ್ಯೂ ಜನರೇಶನ್ ಬ್ರಹ್ಮೋಸ್!]
|
ಪಾಕಿಸ್ತಾನಕ್ಕೆ ಅರ್ಥವಾಗುವ ರೀತಿಯಲ್ಲಿ ಉತ್ತರ
ಸಿಕ್ಖ್ ರೆಜಿಮೆಂಟ್ ಘಟಕ ಪಾಕಿಸ್ತಾನಿ ಬಂಕರ್ ಗಳನ್ನು ನಾಶ ಮಾಡುವ ಮೂಲಕ ಪಾಕ್ ಗೆ ಅರ್ಥವಾಗುವ ದಾಟಿಯಲ್ಲೇ ಉತ್ತರ ನೀಡಿದೆ ಎಂದು ಮೇಜರ್ ಗೌರವ್ ಆರ್ಯ ಟ್ವೀಟ್ ಮಾಡಿದ್ದಾರೆ.
|
ಅವರದೇ ಔಷಧಿಯ ರುಚಿ ಅವರಿಗೇ ತೋರಿಸಿದ್ದೇವೆ!
ಪಾಕ್ ಬಂಕರ್ ಗಳನ್ನು ದ್ವಂಸಗೊಳಿಸುವ ಮೂಲಕ ನೆರೆ ರಾಷ್ಟ್ರಕ್ಕೆ ಅವರ ಸ್ವಂತ ಔಷಧಿಯ ರುಚಿ ತೋರಿಸಿದೆ. ಈಗ ನಿಮಗಿದು ಇಷ್ಟವಾಯಿತೆ? ಎಂಬ ಟ್ವೀಟ್ ಲೋನ್ಲೀ ಗೀಕ್ ಎಂಬ ಟ್ವಿಟ್ಟರ್ ಖಾತೆಯಿಂದ ಪೋಸ್ಟ್ ಆಗಿದೆ.
|
ನಾವು ಹೆಚ್ಚು ದಿನ ಬಾಕಿ ಉಳಿಸಿಕೊಳ್ಳೋದಿಲ್ಲ!
ಭಾರತದ ಪ್ರಧಾನಿ ನರೇಂದ್ರ ಮೋದಿ ಹೆಚ್ಚು ದಿನ ಬಾಕಿಯನ್ನು ಉಳಿಸಿಕೊಳ್ಳೋದಿಲ್ಲ. ಅದಕ್ಕೆಂದೇ ಆದಷ್ಟು ಬೇಗ ವಾಪಾಸ್ ಮಾಡಿದ್ದೇವೆ! ಎಂದು ರಾಜು ಸಿಂಗ್ ಎನ್ನುವವರು ಟ್ವೀಟ್ ಮಾಡಿದ್ದಾರೆ.
|
ಪಾಕ್ ಬಗ್ಗೆ ಕನಿಕರ ಬೇಡವೇ ಬೇಡ
ನಿಜಕ್ಕೂ ಇದು ಸಂತಸದ ಸುದ್ದಿ. ಭಾರತೀಯ ಸೇನೆಯ ಬಗ್ಗೆ ಹೆಮ್ಮೆ ಎನ್ನಿಸುತ್ತಿದೆ. ಪಾಕಿಸ್ತಾನಕ್ಕೆ ಪಾಠ ಕಲಿಸುವ ಇಂಥ ಇನ್ನಷ್ಟು ದಾಳಿ ನಡೆಯಲಿ. ಅವರ ಬಗ್ಗೆ ಕನಿಕರ ತೋರುವ ಅಗತ್ಯವಿಲ್ಲ ಎಂದು ಮಾಧವಿ ದಿವಾಡ್ಕರ್ ಎನ್ನುವವರು ಟ್ವೀಟ್ ಮಾಡಿದ್ದಾರೆ.
|
ಮುಯ್ಯಿಗೆ ಮುಯ್ಯಿ
ಟಿಟ್ ಫಾರ್ ಟ್ಯಾಟ್, ಭಾರತೀಯ ಸೇನೆ ಬೆಸ್ಟ್ ಅಂತ ವಿಷ್ಣು ವಿಶಾಕ್ ಎನ್ನುವವರು ಟ್ವೀಟ್ ಮಾಡಿದ್ದಾರೆ.