Get Updates
Get notified of breaking news, exclusive insights, and must-see stories!

ಭಾರತ-ಚೀನಾ ನಡುವಿನ ಅನಿರೀಕ್ಷಿತ ಬೆಳವಣಿಗೆಗಳ ಕುರಿತು ಜೈಶಂಕರ್ ಮಾತು

ನವದೆಹಲಿ, ಮಾರ್ಚ್ 25: ಭಾರತ ಮತ್ತು ಚೀನಾ ನಡುವಿನ ಸಂಬಂಧದಲ್ಲಿ ಕಳೆದ ಎರಡು ವರ್ಷ ಹಲವು ರೀತಿ ಅನಿರೀಕ್ಷಿತ ಬೆಳವಣಿಗೆಗಳು ನಡೆದಿವೆ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ.

ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಭಾರತಕ್ಕೆ ಭೇಟಿ ನೀಡಿರುವ ಸಂದರ್ಭದಲ್ಲಿ ಸೇಂಟ್ ಸ್ಟೀಫನ್ ಅವರ ವಿಶಿಷ್ಟ ಹಳೆಯ ವಿದ್ಯಾರ್ಥಿಗಳ ವಾರ್ಷಿಕದಲ್ಲಿ ಅವರು ಮಾತನಾಡಿದರು. ಕಳೆದ ಎರಡು ವರ್ಷಗಳಲ್ಲಿ ಉಭಯ ರಾಷ್ಟ್ರಗಳ ನಡುವೆ ಕೆಲವು ಅನಿರೀಕ್ಷಿತ ಬೆಳವಣಿಗೆಗಳು ನಡೆದರೆ, ಇನ್ನೂ ಕೆಲವು ನಿರೀಕ್ಷಿತ ಬೆಳವಣಿಗೆಗಳೂ ನಡೆದಿವೆ ಎಂದು ಹೇಳಿದ್ದಾರೆ.

ಲಡಾಖ್‌ನಲ್ಲಿನ ವಾಸ್ತವಿಕ ನಿಯಂತ್ರಣ ರೇಖೆಯಾದ್ಯಂತ ಚೀನಾದ ಸೈನಿಕರು ಹಲವು ಬಾರಿ ಆಕ್ರಮಣ ಮಾಡುತ್ತಿರುವ ಬಗ್ಗೆ ಜೈಶಂಕರ್ ಉಲ್ಲೇಖಿಸಿದರು. 20 ಭಾರತೀಯ ಯೋಧರು ಸಾವನ್ನಪ್ಪಿರುವ ಘಟನೆಯು ಎರಡು ರಾಷ್ಟ್ರಗಳ ನಡುವಿನ ಸಂಬಂಧ ಕುಸಿದಿರುವ ಕುರಿತು ಮಾತನಾಡಿದರು.

How Indias relations with China have taken an unexpected turn in the last two years

2 ವರ್ಷಗಳಲ್ಲೇ ಮೊದಲ ಬಾರಿ ಉನ್ನತ ಮಟ್ಟದ ಸಭೆ:

ಭಾರತ ಮತ್ತು ಚೀನಾ ನಡುವಿನ ಸಂಘರ್ಷದ ಘಟನೆ ನಡೆದ ನಂತರದಲ್ಲಿ ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಮತ್ತು ಭಾರತೀಯ ವಿದೇಶಾಂಗ ಸಚಿವ ಎಸ್ ಜೈಶಂಕರ್ ಹಲವು ಸುತ್ತಿನ ಮಾತುಕತೆಗಳಲ್ಲಿ ಭಾಗಿಯಾಗಿದ್ದಾರೆ. ಆದರೆ ಈ ಎರಡು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಭಾರತದಲ್ಲಿ ಉನ್ನತ ಮಟ್ಟದ ಸಭೆ ನಡೆಸಲಾಗುತ್ತಿದೆ.

ಗಡಿಯಲ್ಲಿ ಸೇನೆ ನಿಷ್ಕ್ರಿಯತೆ ಮೊದಲ ಹೆಜ್ಜೆ:

ಚೀನಾ ಮತ್ತು ಭಾರತದ ಗಡಿಯಲ್ಲಿ ಸೇನಾ ನಿಷ್ಕ್ರಿಯತೆಯು ಸುರಕ್ಷತೆಯ ಮೊದಲ ಹೆಜ್ಜೆ ಆಗಿರುತ್ತದೆ. ಚೀನಾ ವಿಷಯದಲ್ಲಿ, "ಕಳೆದ 2020ರ ಮೇ ತಿಂಗಳಿನಿಂದಲೂ ಮಿಲಿಟರಿ ನಿಲುವಿಗೆ ಸಮಾನಾಂತರವಾಗಿ ರಾಜತಾಂತ್ರಿಕ ಸಂವಾದಗಳು ವಿದೇಶಿ ಮತ್ತು ರಕ್ಷಣಾ ನೀತಿಗಳು ನಡೆಯುತ್ತಿವೆ ಎಂಬುದನ್ನು ವಿವರಿಸುತ್ತದೆ. ಯಾವುದೇ ವಿವೇಕಯುತ ನೀತಿಯು ಸಾಮರ್ಥ್ಯ ಮತ್ತು ನಿರೋಧಕಗಳೊಂದಿಗೆ ನಿಲುವನ್ನು ಬೆಂಬಲಿಸುತ್ತದೆ. ಭಾರತೀಯ ರಾಜತಾಂತ್ರಿಕತೆಯು ಅಂತಹ ಅನಿಶ್ಚಿತತೆಗಳಿಗೆ ವ್ಯಾಪಕವಾದ ಆಯ್ಕೆಗಳನ್ನು ನೀಡುತ್ತದೆ. ಇದು ರಕ್ಷಣಾ ಸಾಮರ್ಥ್ಯಗಳ ಸ್ವಾಧೀನತೆಯನ್ನು ಅರ್ಥೈಸಬಲ್ಲದು" ಎಂದು ಎಸ್ ಜೈಶಂಕರ್ ಹೇಳಿದ್ದಾರೆ.

ಪಾಕಿಸ್ತಾನದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಕಾಶ್ಮೀರದ ಕುರಿತು ನೀಡಿದ ಹೇಳಿಕೆ ವಿವಾದದ ನಡುವೆಯೇ ವಾಂಗ್ ಯಿ, ಭಾರತಕ್ಕೆ ಭೇಟಿ ನೀಡಿದರು. ಜಮ್ಮು ಮತ್ತು ಕಾಶ್ಮೀರ ಎಂಬುದು ಭಾರತದ ಆಂತರಿಕ ವಿಷಯ ಎಂದು ಪಾಕಿಸ್ತಾನ ಮತ್ತು ಚೀನಾ ಎರಡಕ್ಕೂ ತಿಳಿದಿದೆ ಎಂದರು. ಭಾರತಕ್ಕೆ ಭೇಟಿ ನೀಡುವುದಕ್ಕೂ ಒಂದು ದಿನ ಮೊದಲು ಪಾಕಿಸ್ತಾನದಲ್ಲಿ ಕಾರ್ಯಕ್ರಮವೊಂದನ್ನು ಉದ್ದೇಶಿಸಿ ಮಾತನಾಡಿದ ವಾಂಗ್ ಯಿ, ಕಾಶ್ಮೀರ ವಿಷಯದ ಕುರಿತು ಪ್ರಸ್ತಾಪಿಸಿದ್ದರು.

ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಹೇಳಿಕೆಗೆ ತಿರುಗೇಟು:

"ಕೇಂದ್ರಾಡಳಿತ ಪ್ರದೇಶ ಜಮ್ಮು ಮತ್ತು ಕಾಶ್ಮೀರದ ಕುರಿತು ಚೀನಾದ ಸೇರಿದಂತೆ ಯಾವುದೇ ಮೂರನೇ ರಾಷ್ಟ್ರವು ಮಧ್ಯಪ್ರವೇಶ ಮಾಡುವ ಅಗತ್ಯವಿಲ್ಲ. ಅದು ಭಾರತದ ಆಂತರಿಕ ವಿಷಯವಾಗಿದೆ. ದೇಶದ ಆಂತರಿಕ ವಿಷಯಗಳನ್ನು ಸಾಮಾಜಿಕ ನ್ಯಾಯದ ಆಧಾರದ ಮೇಲೆ ಭಾರತವೇ ನಿಭಾಯಿಸಲಿದೆ," ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಪ್ರತಿಕ್ರಿಯೆ ನೀಡಿದ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+