Get Updates
Get notified of breaking news, exclusive insights, and must-see stories!

ಭೀಕರ ಬರ, ಮಳೆ ಕೊಯ್ಲು, ನದಿ ಸ್ವಚ್ಛತೆ ಬಗ್ಗೆ ಮೋದಿ

ನವದೆಹಲಿ, ಏಪ್ರಿಲ್ 24: ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ತಿಂಗಳ ಬಾನುಲಿ ಕಾರ್ಯಕ್ರಮ 'ಮನ್ ಕಿ ಬಾತ್' ನ 19ನೇ ಸಂಚಿಕೆಯಲ್ಲಿ ನೀರಿನ ಮಹತ್ವದ ಬಗ್ಗೆ ಭಾನುವಾರ ಮಾತನಾಡಿದರು.

ದೇಶದ ಹಲವೆಡೆ ಭೀಕರ ಬರ ಪರಿಸ್ಥಿತಿ ಎದುರಾಗಿದೆ. ಜಲ ಕ್ಷಾಮ, ಪಂಚಾಯತ್ ರಾಜ್, ಮಳೆ ಕೊಯ್ಲು, ನದಿ ಸ್ವಚ್ಛತೆ ಬಗ್ಗೆ ಮಾತನಾಡಿದರು. ಮನ್ ಕಿ ಬಾತ್ ಸಂಚಿಕೆಯ ಮುಖ್ಯಾಂಶಗಳು ಹೀಗಿದೆ:

* ಮಹಾರಾಷ್ಟ್ರದ ಅಹ್ಮದ್ ನಗರದಲ್ಲಿ ಬರ ಪರಿಸ್ಥಿತಿ ಎದುರಿಸಲು ಅಲ್ಲಿನ ಜನರು ತಮ್ಮ ಬೆಳೆಪದ್ಧತಿಯನ್ನೇ ಬದಲಾಯಿಸಿದ್ದಾರೆ. ತಮ್ಮ ಜಮೀನಿನಲ್ಲಿ ನೀರಿಂಗಿಸುವ ಹೊಂಡಗಳನ್ನು ನಿರ್ಮಿಸಿದ್ದಾರೆ. ಗಿಡಗಳನ್ನು ಬೆಳೆಸಲು ಅವರಿಗೆ ಹೆಚ್ಚು ನೀರು ಬೇಕಿಲ್ಲ
* ಈ ಬಾರಿ ಉತ್ತಮ ಮುಂಗಾರುಮಳೆ ನಿರೀಕ್ಷೆಯಿದೆ. ಜೊತೆಗೆ ಬೆಳೆ ಉತ್ಪಾದನೆ ಹೆಚ್ಚಳ ಮಾಡಬೇಕಾದ ಹೊಣೆಗಾರಿಕೆಯೂ ಇದೆ.
* ನೀರಿನ ಸಮಸ್ಯೆ ನಿವಾರಿಸಲು ದೇಶದಲ್ಲಿ ವ್ಯಾಪಕ ಪ್ರಮಾಣದಲ್ಲಿ ಮಳೆನೀರು ಕೊಯ್ಲು ಅಳವಡಿಸಿಕೊಳ್ಳಬೇಕಿದೆ.

Highlights of PM Narendra Modi's Mann Ki Baat address on April 24

* ಮಳೆನೀರಿನ ಕೊಯ್ಲಿನಿಂದ ಭೂಮಿಯ ಜಲಮಟ್ಟ ಏರುತ್ತದೆ. ನೀರಿನ ಗುಣಮಟ್ಟ ಸುಧಾರಿಸುತ್ತದೆ. ಸ್ವಚ್ಛ ನೀರಿನಿಂದ ಆರೋಗ್ಯವೂ ಸುಧಾರಿಸುತ್ತದೆ. ಹಳ್ಳಿಗಳಲ್ಲಿ ಮಳೆ ನೀರು ಕೊಯ್ಲು ಪದ್ಧತಿ ಅಳವಡಿಸಿಕೊಳ್ಳಲು ಪ್ರಚಾರ ಅಭಿಯಾನ ಕೈಗೆತ್ತಿಕೊಳ್ಳಬೇಕು
* ಗಂಗಾನದಿ ನಮ್ಮ ಪ್ರಮುಖ ಜಲ ಸಂಪನ್ಮೂಲ. ಗಂಗಾನದಿ ಸ್ವಚ್ಛತೆಗೆ ಕ್ರಮ ಕೈಗೊಂಡು, ಸ್ವಚ್ಛತೆಯ ಏಜೆಂಟರಾಗಬೇಕು.
* ಪಂಚಾಯ್ತಿ ರಾಜ್ ವ್ಯವಸ್ಥೆಯು ಗ್ರಾಮಗಳಲ್ಲಿ ಪ್ರಜಾತಾಂತ್ರಿಕ ಮೌಲ್ಯಗಳು ಜನರಿಗೆ ತಲುಪಲು ನೆರವಾಗಿದೆ
* ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟ ಹೆಚ್ಚಳದ ಬಗ್ಗೆ ಪೋಷಕರಿಗೆ ಅರಿವು ಅಗತ್ಯ. ಮಕ್ಕಳೊಡನೆ ನಿರಂತರ ಮಾತುಕತೆಯಿಂದ ದೈನಂದಿನ ಆಗು ಹೋಗುಗಳು ತಿಳಿಯಲಿದೆ.
* ಶಿಕ್ಷಣದ ಜೊತೆಗೆ ಕೌಶಲ್ಯ ಅಭಿವೃದ್ಧಿ ಮುಖ್ಯ, ಶಿಕ್ಷಣದ ಗುಣಮಟ್ಟ ಹೆಚ್ಚಳದಲ್ಲಿ ತಂತ್ರಜ್ಞಾನ ಮಹತ್ವದ ಪಾತ್ರ ವಹಿಸಲಿದೆ. ವಿಡಿಯೋ ಇಲ್ಲಿದೆ:
More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+