ಭಾರತದಲ್ಲಿ ಲೈಂಗಿಕತೆ: ಕೌಟುಂಬಿಕ ಆರೋಗ್ಯ ಸಮೀಕ್ಷೆ ಹೇಳುವುದು ಹೀಗೆ
ನವದೆಹಲಿ, ಮೇ 25: ಒಂದೊಮ್ಮೆ ನೀವು 30 ವರ್ಷ ದಾಟಿಯೂ ಲೈಂಗಿಕ ಅನುಭವ ಪಡೆಯದೇ ಇದ್ದಲ್ಲಿ, ಭಾರತದಲ್ಲಿ ನಿಮ್ಮ ಗುಂಪು ತೀರಾ ಸಣ್ಣದು. ಕಾರಣ ರಾಷ್ಟ್ರೀಯ ಕೌಟುಂಬಿಕ ಆರೋಗ್ಯ ಸಮೀಕ್ಷೆಯ ಪ್ರಕಾರ ಭಾರದಲ್ಲಿ 30 ವರ್ಷ ದಾಟುವ ಹೊತ್ತಿಗೆ ಶೇಕಡಾ 90 ಜನ ಲೈಂಗಿಕ ಸಂಪರ್ಕ ಹೊಂದಿರುತ್ತಾರೆ.
30 ವರ್ಷ ದಾಟಿಯೂ ಭಾರತದಲ್ಲಿ ಲೈಂಗಿಕ ಅನುಭವ ಪಡೆಯದೇ ಇರುವ ಜನರ ಸಂಖ್ಯೆ ಕೇವಲ ಶೇಕಡಾ 10 ಮಾತ್ರ.
2015-16ರಲ್ಲಿ ದೇಶದಲ್ಲಿ ಈ ಸಮೀಕ್ಷೆ ನಡೆಸಲಾಗಿದ್ದು, ಹಲವು ಆಸಕ್ತಿಕರ ವಿಚಾರಗಳನ್ನು ಈ ಸರ್ವೆ ಹೊರಹಾಕಿದೆ. ಅವುಗಳ ವಿವರ ಇಲ್ಲಿದೆ.

ಮೊದಲ ಲೈಂಗಿಕ ಸಂಪರ್ಕ
ಸಮೀಕ್ಷೆ ಪ್ರಕಾರ ಹೆಚ್ಚಿನ ಪುರುಷರು 20-24 ನೇ ವಯಸ್ಸಿನಲ್ಲಿ ತಮ್ಮ ಮೊದಲ ಲೈಂಗಿಕ ಸಂಪರ್ಕ ನಡೆಸಿರುತ್ತಾರೆ. ಮಹಿಳೆಯರ ವಿಚಾರಕ್ಕೆ ಬಂದಾಗ 15 - 19 ವಯಸ್ಸಲ್ಲಿ ಮೊದಲ ಬಾರಿಗೆ ಸೆಕ್ಸ್ ನಡೆಸಿರುತ್ತಾರೆ ಎಂದು ಸಮೀಕ್ಷೆ ಹೇಳಿದೆ. ಮಹಿಳೆಯರು ಬೇಗ ಮದುವೆಯಾಗುವುದೇ ಈ ವಯಸ್ಸಿನ ಅಂತರಕ್ಕೆ ಕಾರಣ ಎನ್ನಲಾಗಿದೆ.
ಚಿತ್ರ ಕೃಪೆ: ಲೈವ್ ಮಿಂಟ್

ಶೈಕ್ಷಣಿಕ ಕಾರಣಗಳಿಗೆ ವ್ಯತ್ಯಾಸ
ಭಾರತದಲ್ಲಿ ಲೈಂಗಿಕತೆ ಶಿಕ್ಷಣದ ಮೇಲೆ ವ್ಯತ್ಯಾಸ ಹೊಂದುವುದನ್ನು ಕಾಣಬಹುದಾಗಿದೆ. ಉನ್ನತ ಶಿಕ್ಷಣ ಪಡೆದವರು ಕಾಲೇಜಿನಲ್ಲಿ ಹೆಚ್ಚಿನ ವರ್ಷಗಳನ್ನು ಕಳೆಯುವುದರಿಂದ ತುಂಬಾ ತಡವಾಗಿ ಗೃಹಸ್ಥಾಶ್ರಮ ಪ್ರವೇಶಿಸುತ್ತಾರೆ. ಹೀಗಾಗಿ ಇವರಲ್ಲಿ ದೈಹಿಕ ಸಂಪರ್ಕವೂ ತಡವಾಗಿಯೇ ನಡೆಯುತ್ತದೆ. ಅದರಲ್ಲೂ ಉನ್ನತ ಶಿಕ್ಷಣ ಪಡೆದ ಪುರುಷರು ತೀರಾ ತಡವಾಗಿ ಮದುವೆಯಾಗುತ್ತಾರೆ ಎಂಬುದನ್ನು ಸಮೀಕ್ಷೆ ಹೇಳುತ್ತಿದ್ದು, ಅವರ ಲೈಂಗಿಕ ಜೀವನವೂ ತಡವಾಗಿಯೇ ಆರಂಭವಾಗುತ್ತದೆ.
ಚಿತ್ರ ಕೃಪೆ: ಲೈವ್ ಮಿಂಟ್

ವಿವಾಹ ಪೂರ್ವ ಲೈಂಗಿಕ ಸಂಪರ್ಕ
ದೇಶದಲ್ಲಿ ಇನ್ನೂ ವಿವಾಹ ಪೂರ್ವ ಲೈಂಗಿಕ ಸಂಪರ್ಕವನ್ನು ಅಪರಾಧವಾಗಿ, ಮೈಲಿಗೆಯಂತೆ ನೋಡಲಾಗುತ್ತಿದೆ. ಒಂಟಿಯಾಗಿರುವ ಶೇಕಡಾ 11 ಪುರುಷರು ಮತ್ತು ಶೇಕಡಾ 2 ಮಹಿಳೆಯರು ಮಾತ್ರ 15-24 ವರ್ಷದೊಳಗೆ ಲೈಂಗಿಕ ಸಂಪರ್ಕ ಪಡೆದಿದ್ದೇವೆ ಎಂದು ಹೇಳಿದ್ದಾರೆ. ವಿಶೇಷವೆಂದರೆ ಛತ್ತಿಸ್ ಗಢ ಮತ್ತು ಮಧ್ಯ ಪ್ರದೇಶದಲ್ಲಿ ಕ್ರಮವಾಗಿ ಬರೋಬ್ಬರಿ ಶೇಕಡಾ 21.1 ಮತ್ತು ಶೇಕಡಾ 20.7 ಪುರುಷರು ಮದುವೆ ಆಗದೆಯೂ ದೈಹಿಕ ಸಂಪರ್ಕ ಪಡೆದಿದ್ದೇವೆ ಎಂದಿದ್ದಾರೆ.
ಚಿತ್ರ ಕೃಪೆ: ಲೈವ್ ಮಿಂಟ್

ಉತ್ತರದವರು ಮುಂದೆ
ನಿರಂತರ ಲೈಂಗಿಕ ಸಂಪರ್ಕ ಇಟ್ಟುಕೊಳ್ಳುವ ವಿಚಾರಕ್ಕೆ ಬಂದಾಗ ಉತ್ತರ ರಾಜ್ಯದ ಜನರು ದಕ್ಷಿಣ ರಾಜ್ಯದ ಜನರಿಗಿಂತ ಮುಂದಿದ್ದಾರೆ ಎಂದು ಸಮೀಕ್ಷೆ ಬೆಟ್ಟು ಮಾಡಿದೆ. ಹರ್ಯಾಣ, ಛತ್ತೀಸ್ ಗಢ, ಪಶ್ಚಿಮ ಬಂಗಾಳ, ಪಂಜಾಬ್ ರಾಜ್ಯಗಳ ಶೇಕಡಾ 55 ಕ್ಕಿಂತ ಹೆಚ್ಚು ಮಹಿಳೆಯರು ಮತ್ತು ಪುರುಷರು ಸಮೀಕ್ಷೆ ನಡೆಸಿದ ಅವಧಿಗೂ ಮುಂಚಿನ ನಾಲ್ಕು ವಾರಗಳಲ್ಲಿ ಲೈಂಗಿಕ ಸಂಪರ್ಕ ಹೊಂದಿದ್ದೇವೆ ಎಂಬುದನ್ನು ಒಪ್ಪಿಕೊಂಡಿದ್ದಾರೆ. ಇನ್ನು ಮಧ್ಯ ಪ್ರದೇಶ ಮತ್ತು ರಾಜಸ್ಥಾನದ ಜನರೂ ಸೆಕ್ಸ್ ನಲ್ಲಿ ಉಳಿದ ರಾಜ್ಯಗಳಿಗಿಂತ ಮುಂದಿದ್ದಾರೆ.
ಒಟ್ಟಾರೆ ದೇಶದಲ್ಲಿ ಶೇಕಡಾ 47 ಪುರುಷರು ಮತ್ತು ಶೇಕಡಾ 48 ಮಹಿಳೆಯರು ತಾವು ಕಳೆದ 4 ವಾರಗಳಲ್ಲಿ ಲೈಂಗಿಕ ಸಂಪರ್ಕ ಬೆಳೆಸಿದ್ದೇವೆ ಎಂದು ಸಮೀಕ್ಷೆ ನಡೆಸುವ ಸಂದರ್ಭದಲ್ಲಿ ಹೇಳಿಕೊಂಡಿದ್ದಾರೆ.
ಚಿತ್ರ ಕೃಪೆ: ಲೈವ್ ಮಿಂಟ್

ಅವಿವಾಹಿತರ ಲೈಂಗಿಕ ಜೀವನ
ಸಮೀಕ್ಷೆ ನಡೆಸುವ ವೇಳೆ ಒಂಟಿಯಾಗಿರುವ ಶೇಕಡಾ 3 ಪುರುಷರು ಮತ್ತು ಶೇಕಡಾ 1 ಮಹಿಳೆಯರು ತಾವು ಕಳೆದ ನಾಲ್ಕು ವಾರಗಳಲ್ಲಿ ದೈಹಿಕ ಸಂಪರ್ಕ ಹೊಂದಿದ್ದೇವೆ ಎಂದಿದ್ದಾರೆ.
ಪಂಜಾಬ್, ಹರ್ಯಾಣ, ಛತ್ತೀಸ್ ಗಢ ಮತ್ತು ಮಧ್ಯ ಪ್ರದೇಶದಲ್ಲಿ ಶೇಕಡಾ 5 ಕ್ಕಿಂತ ಹೆಚ್ಚಿನ ಒಂಟಿ ಪುರುಷರು ತಾವು ನಿರಂತರ ಲೈಂಗಿಕ ಸಂಪರ್ಕ ನಡೆಸುತ್ತಿರುತ್ತೇವೆ ಎಂದಿದ್ದಾರೆ. ಕರ್ನಾಟಕದ ಶೇ. 2 ಮತ್ತು ಗುಜರಾತಿನ ಶೇ. 1.9 ನ ಒಂಟಿ ಮಹಿಳೆಯರು ತಾವು ನಿರಂತರವಾಗಿ ಸೆಕ್ಸ್ ನಡೆಸುತ್ತೇವೆ ಎಂದಿದ್ದಾರೆ.
ಎಂದೂ ಮದುವೆಯಾಗದ ಶೇಕಡಾ 14 ಪುರುಷರು ಮತ್ತು ಶೇಕಡಾ 2 ಮಹಿಳೆಯರು ತಾವು ದೈಹಿಕ ಸಂಪರ್ಕ ಹೊಂದಿದ್ದೇವೆ ಎಂದಿದ್ದಾರೆ.
ಚಿತ್ರ ಕೃಪೆ: ಲೈವ್ ಮಿಂಟ್

ಯಾರ ಜೊತೆ ಲೈಂಗಿಕ ಸಂಪರ್ಕ?
ನಿರಂತರವಾಗಿ ಲೈಂಗಿಕ ಸಂಪರ್ಕ ಹೊಂದುತ್ತಿರುವ ಒಂಟಿ ಮಹಿಳೆಯರು ಮತ್ತು ಪುರುಷರು ಯಾರ ಜೊತೆ ನಡೆಸುತ್ತಾರೆ ಎಂಬುದನ್ನೂ ಸಮೀಕ್ಷೆಯಲ್ಲಿ ಪತ್ತೆಹಚ್ಚಲಾಗಿದೆ. ಇದರಲ್ಲಿ ಹೆಚ್ಚಿನವರು ತಮ್ಮ ಬಾಯ್ ಫ್ರೆಂಡ್ ಮತ್ತು ಗರ್ಲ್ ಫ್ರೆಂಡ್ ಜೊತೆಗೆ ದೈಹಿಕ ಸಂಪರ್ಕ ಹೊಂದುತ್ತೇವೆ ಎಂದಿದ್ದಾರೆ. ಸರಿ ಸುಮಾರು ಶೇಕಡಾ 10 ಜನರು ಮದುವೆಯಾಗದೆ ಸಹ ಜೀವನ ನಡೆಸುವ ಸಂಗಾತಿಗಳ ಜೊತೆಗೆ ಸೆಕ್ಸ್ ನಡೆಸುತ್ತಿದ್ದೇವೆ ಎಂದಿದ್ದಾರೆ.
ಶೇಕಡಾ 6 ಪುರುಷರು ವೇಶ್ಯೆಯರ ಜೊತೆ ಹಾಗೂ ಮಹಿಳೆಯರು ಶೇ. 1 ಈ ರೀತಿ ಹಣ ಕೊಟ್ಟು ಲೈಂಗಿಕ ಸಂಪರ್ಕ ಪಡೆಯುತ್ತೇವೆ ಎಂದಿದ್ದಾರೆ. ವಿಶೇಷವೆಂದರೆ ಶೇಕಡಾ 22 ಮಹಿಳೆಯರು ತಾವು ದೈಹಿಕ ಸಂಪರ್ಕ ಪಡೆಯುವ ವ್ಯಕ್ತಿಯನ್ನು ಇತರ ಎಂದು ಹೇಳಿದ್ದಾರೆ. ಹೀಗಾಗಿ ಇವರು ಯಾರು ಎಂಬುದು ಲೆಕ್ಕಕ್ಕೆ ಸಿಕ್ಕಿಲ್ಲ.
ಚಿತ್ರ ಕೃಪೆ: ಲೈವ್ ಮಿಂಟ್
-
Vastu Tips for Kitchen: ವಾಸ್ತು ಪ್ರಕಾರ ಅಡುಗೆ ಮನೆಯಲ್ಲಿ ಇವು ಇರಬಾರದು.. ಒಮ್ಮೆ ನೋಡಿ! -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ












Click it and Unblock the Notifications