Get Updates
Get notified of breaking news, exclusive insights, and must-see stories!

ಬುಧವಾರದ ಹಲವು ಸುದ್ದಿ ಚಿತ್ರ ಸಹಿತ ನೋಡಿ

ಬೆಂಗಳೂರು, ಫೆ. 4: ದೇಶ ಹಾಗೂ ವಿದೇಶಗಳಲ್ಲಿ ಬುಧವಾರ ನಡೆದ ಹಲವು ಘಟನಾವಳಿಗಳ ಚಿತ್ರ ಸಹಿತ ಸುದ್ದಿಯನ್ನು ಇಲ್ಲಿ ನೀಡಲಾಗಿದೆ.

ನವದೆಹಲಿಯಲ್ಲಿ ವಿಧಾನಸಭೆ ಚುನಾವಣೆ ಪ್ರಚಾರ, ತೈಪೆಯಲ್ಲಿ ನದಿಗೆ ಬಿದ್ದು ಅಪಘಾತಕ್ಕೀಡಾದ ವಿಮಾನದಿಂದ ಬದುಕುಳಿದ ಪ್ರಯಾಣಿಕರನ್ನು ರಕ್ಷಿಸಲಾಯಿತು. ಐಎಸ್ಐಎಸ್ ಉಗ್ರರು ಹತ್ಯೆಗೈದ ಜೋರ್ಡಾನ್ ಪೈಲೆಟ್‌ನ ಛಾಯಾಚಿತ್ರ ಹಿಡಿದು ಆತನ ತಾಯಿ ಹಾಗೂ ಪತ್ನಿ ದುಃಖಿಸಿದರು. ನವದೆಹಲಿಯ ಗುರ್ಗಾಂವ್‌ನಲ್ಲಿ ತರಬೇತಿ ಮುಗಿಸಿದ ಸಿಆರ್‌ಪಿಎಫ್ ಯೋಧರು ಪಾಸಿಂಗ್ ಔಟ್ ಪರೇಡ್ ಸಮಯದಲ್ಲಿ ವಿವಿಧ ಬಹುಮಾನ ಗಳಿಸಿದರು.

ಶ್ರೀಲಂಕಾದಲ್ಲಿ ಆಯೋಜಿಸಿದ್ದ ಸ್ವಾತಂತ್ರ್ಯೋತ್ಸವ ಸಂದರ್ಭ ತಮಿಳು ನರ್ತಕಿಯೊಬ್ಬರು ತಮ್ಮ ಕಲೆ ಪ್ರದರ್ಶಿಸಿದರು. ಹರ್ಯಾಣದ ಸೂರಜ್‌ಕುಂಡ್‌ನ ಅಂತಾರಾಷ್ಟ್ರೀಯ ಕೌಶಲ್ಯ ಮೇಳದಲ್ಲಿ ವಿದೇಶಿ ಕಲಾವಿದರು ತಮ್ಮ ಪ್ರತಿಭೆ ಪ್ರದರ್ಶಿಸಿದರು. ಇನ್ನೂ ಹಲವು ಸುದ್ದಿಗಳಿಗಾಗಿ ಈ ಕೆಳಗೆ ಕ್ಲಿಕ್ ಮಾಡಿ.

ಬೆಸ್ಟ್ ಆಲ್ ರೌಂಡರ್ ಟ್ರೇನಿ

ಬೆಸ್ಟ್ ಆಲ್ ರೌಂಡರ್ ಟ್ರೇನಿ

ಗುರ್ಗಾಂವ್‌ನಲ್ಲಿ ಆಯೋಜಿಸಿದ್ದ ಸಿಆರ್‌ಪಿಎಫ್ ಪಾಸಿಂಗ್ ಔಟ್ ಅಕಾಡೆಮಿ ಪರೇಡ್‌ನಲ್ಲಿ ತರಬೇತಿ ಸಂದರ್ಭ ಉತ್ತಮ ಪ್ರದರ್ಶನ ತೋರಿದ ಸೈನಿಕನಿಗೆ 'ಬೆಸ್ಟ್ ಆಲ್ ರೌಂಡರ್ ಟ್ರೇನಿ' ಗೌರವದ ನಿಮಿತ್ತ ಖಡ್ಗ ನೀಡಿ ಗೌರವಿಸಲಾಯಿತು.

ಉತ್ತಮ ಪ್ರದರ್ಶನಕ್ಕೆ ಬಹುಮಾನ

ಉತ್ತಮ ಪ್ರದರ್ಶನಕ್ಕೆ ಬಹುಮಾನ

ಗುರ್ಗಾಂವ್‌ನಲ್ಲಿ ಆಯೋಜಿಸಿದ್ದ ಸಿಆರ್‌ಪಿಎಫ್ ಪಾಸಿಂಗ್ ಔಟ್ ಅಕಾಡೆಮಿ ಪರೇಡ್‌ನಲ್ಲಿ ತರಬೇತಿ ಸಂದರ್ಭ ಉತ್ತಮ ಪ್ರದರ್ಶನ ತೋರಿದವರಿಗೆ ಬಹುಮಾನ ನೀಡಲಾಯಿತು.

ತಮಿಳಿಗರ ನರ್ತನ

ತಮಿಳಿಗರ ನರ್ತನ

ಶ್ರೀಲಂಕಾದ ಕೊಲಂಬೋದಲ್ಲಿ ಏರ್ಪಡಿಸಿದ್ದ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ತಮಿಳು ನರ್ತಕಿಯೊಬ್ಬರು ತೋರಿದ ಪ್ರದರ್ಶನ.

ವಿದೇಶಿ ಕಲಾವಿದರು

ವಿದೇಶಿ ಕಲಾವಿದರು

ಹರ್ಯಾಣದ ಸೂರಜ್‌ಕುಂಡ್‌ನ ಅಂತಾರಾಷ್ಟ್ರೀಯ ಕೌಶಲ್ಯ ಮೇಳದಲ್ಲಿ ವಿದೇಶಿ ಕಲಾವಿದರು ತೋರಿದ ಪ್ರದರ್ಶನ.

ಬ್ರಿಟಿಷ್ ಏಶಿಯನ್ ಟ್ರಸ್ಟ್ ಊಟ

ಬ್ರಿಟಿಷ್ ಏಶಿಯನ್ ಟ್ರಸ್ಟ್ ಊಟ

ಲಂಡನ್‌ನಲ್ಲಿ ಭಾರತೀಯ ಮಕ್ಕಳ ಹಕ್ಕು ಹೋರಾಟಗಾರ ಕೈಲಾಶ್ ಸತ್ಯಾರ್ಥಿ, ಬಾಲಿವುಡ್ ನಟಿ ರಾಣಿ ಮುಖರ್ಜಿ, ಬ್ರಿಟನ್ ರಾಜಕುಮಾರ ಚಾರ್ಲ್ಸ್, ಡಚೆಸ್ ಕಾರ್ನವಾಲ್ ಅವರು ಬ್ರಿಟಿಷ್ ಏಶಿಯನ್ ಟ್ರಸ್ಟ್ ಊಟದಲ್ಲಿ ಭಾಗವಹಿಸಿದ್ದರು.

ಉಪ ಕುಲಪತಿಗಳ ಸಭೆ

ಉಪ ಕುಲಪತಿಗಳ ಸಭೆ

ರಾಷ್ಟ್ರಪತಿ ಭವನದಲ್ಲಿ ಆಯೋಜಿಸಿದ್ದ ಕೇಂದ್ರೀಯ ವಿಶ್ವವಿದ್ಯಾಲಯಗಳ ಉಪ ಕುಲಪತಿಗಳ ಸಭೆಯಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹಾಗೂ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ಭಾಗವಹಿಸಿದ್ದರು.

ಕೇಜ್ರಿವಾಲ್, ಅಶುತೋಶ್

ಕೇಜ್ರಿವಾಲ್, ಅಶುತೋಶ್

ನವದೆಹಲಿಯಲ್ಲಿ ಆಮ್ ಆದ್ಮಿ ಮುಖಂಡ ಅರವಿಂದ ಕೇಜ್ರಿವಾಲ್ ಅವರು ಮುಖ್ಯ ಚುನಾವಣಾ ಆಯುಕ್ತರನ್ನು ಭೇಟಿ ಮಾಡಿ ಹೊರಬರುತ್ತಿರುವುದು. ಅವರೊಂದಿಗೆ ಇನ್ನೋರ್ವ ಮುಖಂಡ ಅಶುತೋಶ್ ಇದ್ದರು.

ರಾಹುಲ್ ಪ್ರಚಾರ

ರಾಹುಲ್ ಪ್ರಚಾರ

ನವದೆಹಲಿಯಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಚುನಾವಣೆ ಪ್ರಚಾರದಲ್ಲಿ ಭಾಗವಹಿಸಿದ್ದರು.

ನಾವು ವಲಸಿಗರಲ್ಲ

ನಾವು ವಲಸಿಗರಲ್ಲ

ಬಿಜೆಪಿ ಬಿಡುಗಡೆ ಮಾಡಿರುವ ದೂರದೃಷ್ಟಿ ದಾಖಲೆಯಲ್ಲಿ ಪೂರ್ವ ರಾಜ್ಯಗಳ ಜನರನ್ನು ವಲಸಿಗರು ಎಂದು ಹೇಳಿದ್ದನ್ನು ಉಲ್ಲೇಖಿಸಿ ಗುವಾಹಟಿಯಲ್ಲಿ ಎಸ್ಎಫ್ಐ ನೇತೃತ್ವದಲ್ಲಿ ಜನರು ಪ್ರತಿಭಟನೆ ನಡೆಸಿದರು.

ಬದುಕುಳಿದವರ ರಕ್ಷಣೆ

ಬದುಕುಳಿದವರ ರಕ್ಷಣೆ

ತೈವಾನ್‌ನ ತೈಪೆಯಲ್ಲಿ ನದಿಯೊಂದರಲ್ಲಿ ಬಿದ್ದು ಅಪಘಾತಕ್ಕೀಡಾದ ವಿಮಾನದಲ್ಲಿ ಬದುಕುಳಿದವರ ರಕ್ಷಣಾ ಕಾರ್ಯ ನಡೆಯಿತು.

ತಾಯಿಯ ದುಃಖ

ತಾಯಿಯ ದುಃಖ

ಐಎಸ್ಐಎಸ್ ಉಗ್ರರು ಸುಟ್ಟು ಕೊಂದ ಜೋರ್ಡಾನ್ ಪೈಲಟ್ ಲೆ. ಮುವಾತ್ ಅಲ್-ಕಾಸೀಸ್ಬೆ ಅವರ ತಾಯಿ ತಮ್ಮ ಮಗುವಿನ ಛಾಯಾಚಿತ್ರವನ್ನು ಹಿಡಿದು ಅಮ್ಮಾನ್‌ನಲ್ಲಿ ಪ್ರತಿಭಟನೆ ನಡೆಸಿದರು.

ಪತ್ನಿಯ ಸಂಕಟ

ಪತ್ನಿಯ ಸಂಕಟ

ಐಎಸ್ಐಎಸ್ ಉಗ್ರರು ಸುಟ್ಟು ಕೊಂದ ಜೋರ್ಡಾನ್ ಪೈಲಟ್ ಪತ್ನಿ ಅನ್ವರ್ ಅಲ್ ತರಾವ್ನೆ ತಮ್ಮ ಪತಿಯ ಛಾಯಾಚಿತ್ರ ಹಿಡಿದು ಅಮ್ಮಾನ್‌ನಲ್ಲಿ ಪ್ರತಿಭಟಿಸಿದರು.

ಕಟಕಟೆಯಲ್ಲಿ ದಾವೂದ್ ಸಹೋದರ

ಕಟಕಟೆಯಲ್ಲಿ ದಾವೂದ್ ಸಹೋದರ

ಹಲ್ಲೆ ಹಾಗೂ ಸುಲಿಗೆ ನಡೆಸಿದ ಆರೋಪ ಎದುರಿಸುತ್ತಿರುವ ದಾವೂದ್ ಇಬ್ರಾಹಿಂ ಸಹೋದರ ಇಕ್ಬಾಲ್ ಕಾಸ್ಕರ್‌ನನ್ನು ಮುಂಬೈಯ ನ್ಯಾಯಾಲಯದಲ್ಲಿ ಹಾಜರುಪಡಿಸಲಾಯಿತು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+