Delhi Election Result 2025: ದೆಹಲಿಯಲ್ಲಿ ಎಎಪಿ ಹೀನಾಯ ಸೋಲಿಗೆ ಕಾರಣಗಳೇನು?
ನವದೆಹಲಿ, ಫೆಬ್ರವರಿ 08: ರಾಷ್ಟ್ರ ರಾಜಧಾನಿ ದೆಹಲಿ ವಿಧಾನಸಭಾ ಚುಣಾವಣೆ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿತ್ತು. ದೆಹಲಿಯಲ್ಲಿ ಆಡಳಿತರೂಢ ಎಎಪಿ ಸತತ ಮೂರನೇ ಬಾರಿಗೆ ಅಧಿಕಾರ ಹಿಡಯುವ ಕನಸು ಕಂಡಿತ್ತು. 2015 ಹಾಗೂ 2020 ರ ಅವಧಿಯಲ್ಲಿನ ಚುನಾವಣೆಯಲ್ಲಿ ಎಎಪಿ ಭರ್ಜರಿ ಗ್ಯಾರಂಟಿಗಳನ್ನ ನೀಡುವ ಮೂಲಕ ಅಧಿಕಾರಕ್ಕೆ ಬಂದಿತ್ತು. ಈ ಬಾರಿಯೂ ನಾವು ಅಧಿಕಾರಕ್ಕೆ ಬರುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಅರವಿಂದ್ ಕನಸು ಕಂಡಿದ್ದು, ಕೇಜ್ರಿವಾಲ್ ಕನಸು ನುಚ್ಚು ನೂರಾಗಿದೆ.
2015 ಹಾಗೂ 2020 ರ ಅವಧಿಯಲ್ಲಿನ ಚುನಾವಣೆಗೂ ಎಎಪಿ ಭರ್ಜರಿ ಗ್ಯಾರಂಟಿಗಳನ್ನ ನೀಡುವ ಮೂಲಕ ದೆಹಲಿ ಜನತೆಯ ಮನಗೆದಿದ್ರು. ಆದರೆ, 2025 ರ ವಿಧಾನಸಭಾ ಚುನಾವಣೆಯಲ್ಲಿ ಎಎಪಿ ಮಾತ್ರವಲ್ಲದೇ ಬಿಜೆಪಿ ಹಾಗೂ ಕಾಂಗ್ರೆಸ್ ಸಹ ಗ್ಯಾರಂಟಿ ಅಸ್ತ್ರವನ್ನ ಪ್ರಯೋಗ ಮಾಡಿದೆ. ಅಲ್ಲದೇ ಸಾಲು ಸಾಲು ಗ್ಯಾರಂಟಿಗಳನ್ನ ಕೊಟ್ಟ ಎಎಪಿ ಪಕ್ಷವನ್ನ ಈ ಬಾರಿ ದೆಹಲಿ ಜನತೆ ಕೈ ಹಿಡಿಯುವುದಿಲ್ಲ ಎಂದು ಹಲವು ಸಮೀಕ್ಷೆಗಳು ಭವಿಷ್ಯ ನುಡಿದಿದ್ವು. ಅದರಂತೆ ದೆಹಲಿಯಲ್ಲಿ ಬಿಜೆಪಿ ಬರೋಬ್ಬರಿ 27 ವರ್ಷಗಳ ಬಳಿಕ ಅಧಿಕಾರದ ಗದ್ದುಗೆ ಬಿಡಿದಿದ್ದು, 70 ಕ್ಷೇತ್ರಗಳ ಪೈಕಿ 46 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದೆ.

ಭಷ್ಟ್ರಚಾರ ರಹಿತ ಆಡಳಿತವನ್ನ ನೀಡುತ್ತೇವೆ ಎಂದು ಅಧಿಕಾರಕ್ಕೆ ಬಂದ ಎಎಪಿ ಹಲವು ಹಗರಣಗಳ ಮೂಲಕ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿದ್ದರು. ಅಬಕಾರಿ ಹಗರಣ, ಶೀಷ್ಮಹಲ್ ಬಂಗಲೆ ವಿವಾದ, ಕೇಜ್ರಿವಾಲ್, ಸಿಸೋಡಿಯಾ ಸೇರಿದಂತೆ ಸಚಿವರ ವಿರುದ್ಧ ಸಾಲು ಸಾಲು ಭ್ರಷ್ಟಾಚಾರ ಆರೋಪಗಳು ಆಪ್ಗೆ ಹಿನ್ನಡೆಯಾಗಿದೆ ಎಂದು ಹೇಳಲಾಗಿದೆ. 2025 ರ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ (ಎಎಪಿ) ಗಮನಾರ್ಹ ಸೋಲನ್ನು ಅನುಭವಿಸಿದೆ. ರಾಜಧಾನಿಯಲ್ಲಿ ತನ್ನ ದಶಕದ ಪ್ರಾಬಲ್ಯವನ್ನು ಕೊನೆಗೊಳಿಸಿದೆ. ಹಾಗಾದ್ರೆ ದೆಹಲಿಯಲ್ಲಿ ಎಎಪಿ ಸೋಲಿಗೆ ಕಾರಣವೇನು? ಇಲ್ಲಿದೆ ಸಂಪೂರ್ಣ ಮಾಹಿತಿ.
* ಆಡಳಿತ ವಿರೋಧಿ ಅಲೆ
ಕಳೆದ ಹತ್ತು ವರ್ಷಗಳ ಕಾಲ ದೆಹಲಿ ಜನತೆಗೆ ಗ್ಯಾರಂಟಿಗನ್ನ ನೀಡುತ್ತಾ ಅಧಿಕಾರಕ್ಕೆ ಬಂದ ಎಎಪಿಗೆ ಪ್ರಬಲವಾಗಿ ಆಡಳಿತ ವಿರೋಧಿ ಅಲೆ ಎದುರಾಗಿತ್ತು. ಆರೋಗ್ಯ, ಶಿಕ್ಷಣ ಮತ್ತು ವಿದ್ಯುತ್ ಮತ್ತು ನೀರಿಗಾಗಿ ಸಬ್ಸಿಡಿಗಳ ಮೇಲೆ ಕೇಂದ್ರೀಕರಿಸಿದ್ದರೂ, ದೆಹಲಿಯು ಮಾಲಿನ್ಯ, ನೀರಿನ ಕೊರತೆ ಮತ್ತು ಕುಸಿಯುತ್ತಿರುವ ಮೂಲಸೌಕರ್ಯದಂತಹ ಸಮಸ್ಯೆಗಳನ್ನು ಎದುರಿಸುತ್ತಲೇ ಇತ್ತು. ಯಮುನಾ ನದಿಯನ್ನು ಸ್ವಚ್ಛಗೊಳಿಸುವಂತಹ ತನ್ನ ಭರವಸೆಗಳನ್ನು ಈಡೇರಿಸುವಲ್ಲಿ ಎಎಪಿ ಸರ್ಕಾರ ಸಂಪೂರ್ಭ ವಿಫಲವಾಗಿದೆ ಎಂದು ವಿಮರ್ಶಕರು ತಿಳಿಸಿದ್ದಾರೆ. ಅಲ್ಲದೇ ಇದು ಬಗೆಹರಿಯದ ಪ್ರಮುಖ ಸಮಸ್ಯೆಯಾಗಿ ಉಳಿದಿದೆ. ಕಳಪೆ ರಸ್ತೆ ಪರಿಸ್ಥಿತಿಗಳು ಮತ್ತು ಅಸಮರ್ಪಕ ನೀರು ಸರಬರಾಜು ಮುಂತಾದ ಮೂಲಭೂತ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಎಎಪಿ ಸಮರ್ಪಕವಾಗಿ ಕೆಲಸ ಮಾಡಿಲ್ಲ. ಹೀಗಾಗಿ ಎಎಪಿಗೆ ದೆಹಲಿಯಲ್ಲಿ ಆಡಳಿತ ವಿರೋಧಿ ಅಲೆ ಎದುರಾಗಿತ್ತು.
* ಸಾಲು ಸಾಲು ಭ್ರಷ್ಟಾಚಾರ ಆರೋಪಗಳು
ಭ್ರಷ್ಟಾಚಾರ ರಹಿತವಾಗಿ ನಾವು ಆಡಳಿತವನ್ನ ನೀಡುತ್ತೇನೆ ಎಂದು ಅಧಿಕಾರಕ್ಕೆ ಬಂದ ಎಎಪಿಯೂ ಸಾಲು ಸಾಲು ಭ್ರಷ್ಟಾಚಾರವೇ ದೆಹಲಿಯಲ್ಲಿ ಎಎಪಿ ಸೋಲಿಗೆ ಪ್ರಮುಖ ಕಾರಣವಾಗಿದೆ. ವಿಶೇಷವಾಗಿ ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಗಂಭೀರ ಭ್ರಷ್ಟಾಚಾರ ಆರೋಪಗಳನ್ನು ಎದುರಿಸಿತು. ಮನೀಶ್ ಸಿಸೋಡಿಯಾ ಮತ್ತು ಸತ್ಯೇಂದ್ರ ಜೈನ್ ಸೇರಿದಂತೆ ಹಲವಾರು ಉನ್ನತ ನಾಯಕರನ್ನು ಜೈಲಿಗೆ ಹೋಗಬೇಕಾಯಿತು. ಇದು ಪಕ್ಷದ ವರ್ಚಸ್ಸಿಗೆ ಕಳಂಕ ತಂದಿದೆ.
* ಬಿಜೆಪಿಯ ಆಕ್ರಮಣಕಾರಿ ಅಭಿಯಾನ
ಭಾರತೀಯ ಜನತಾ ಪಕ್ಷ (ಬಿಜೆಪಿ) ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯತೆಯನ್ನು ಬಳಸಿಕೊಂಡು ಮತ್ತು ಹಿಂದುತ್ವ ಮತ್ತು ರಾಷ್ಟ್ರೀಯತೆಯ ಮೇಲೆ ಕೇಂದ್ರೀಕರಿಸುವ ಮೂಲಕ ಹೆಚ್ಚು ಕಾರ್ಯತಂತ್ರದ ಮತ್ತು ಆಕ್ರಮಣಕಾರಿ ಅಭಿಯಾನವನ್ನು ದೆಹಲಿಯಲ್ಲಿ ನಡೆಸಿತು. ಬಿಜೆಪಿಯೂ ಎಎಪಿಯ ವೈಫಲ್ಯಗಳನ್ನು ಪರಿಣಾಮಕಾರಿಯಾಗಿ ಎತ್ತಿ ತೋರಿಸಿತು. ಎಎಪಿಯ ಕಲ್ಯಾಣ ಯೋಜನೆಗಳನ್ನು ಹೆಚ್ಚು ಪಾರದರ್ಶಕ ರೀತಿಯಲ್ಲಿ ಮುಂದುವರಿಸುವುದಾಗಿ ಬಿಜೆಪಿ ಭರವಸೆ ನೀಡಿತ್ತು. ಇದು ಬಿಜೆಪಿ ಗೆಲುವಿಗೆ ಪ್ರಮುಖ ಕಾರಣವಾಗಿದೆ.
* ಪಕ್ಷದ ಆಂತರಿಕ ಭಿನ್ನಾಭಿಪ್ರಾಯ ಮತ್ತು ನಾಯಕತ್ವದ ಸಮಸ್ಯೆ
ಎಎಪಿ ಪಕ್ಷದಲ್ಲಿ ಆಂತರಿಕ ಭಿನ್ನಾಭಿಪ್ರಾಯ ಹೆಚ್ಚಾಗಿತ್ತು. ಅಲ್ಲದೇ ಎಎಪಿಯಲ್ಲಿ ನಾಯಕತ್ವದ ಕೊರತೆ ಎದುರಾಗಿತ್ತು. ಚುನಾವಣೆ ಸಮೀಪಿಸುತ್ತಿದ್ದಂತೆ ಆಪ್ ಹಲವಾರು ಹಿರಿಯ ನಾಯಕರು ಪಕ್ಷವನ್ನು ತೊರೆದರು. ಬಹಿರಂಗವಾಗಿಯೇ ಹಲವು ನಾಯಕರು ಅಸಮಾಧಾನವನ್ನ ಹೊರಹಾಕಿದ್ರು. ಇದು ಪಕ್ಷದ ತಳಮಟ್ಟದ ಸಂಘಟನೆ ಮತ್ತು ಚುನಾವಣಾ ಯಂತ್ರೋಪಕರಣವನ್ನು ದುರ್ಬಲಗೊಳಿಸಿತು. ಇನ್ನೂ ದೆಹಲಿಯಲ್ಲಿ ಎಎಪಿ ಗೆಲುವಿನ ನಂತರ ಪಕ್ಷದಲ್ಲಾದ ಬೆಳವಣಿಗೆ ಹಾಗೂ ಅರವಿಂದ್ ಕೇಜ್ರಿವಾಲ್ ಜೈಲಿಗೆ ಹೋಗಿ ಬಂದ ನಂತರ ದೆಹಲಿ ಕೇಜ್ರಿವಾಲ್ ಜನಪ್ರಿಯತೆ ಕಡಿಮೆಯಾಯಿತು.
* ಕೊಟ್ಟ ಮಾತು ತಪ್ಪಿದ ಎಎಪಿ
ಯಮುನಾ ನದಿಯನ್ನು ಸ್ವಚ್ಛಗೊಳಿಸುವಂತಹ ಎಎಪಿಯ ಭರವಸೆಯನ್ನ ನೀಡಿತ್ತು. ಆದರೆ, ಎಎಪಿ ತನ್ನ ಅವಧಿಯಲ್ಲಿ ಈ ಭರವಸೆಯನ್ನ ಈಡೇರಿಸುವಲ್ಲಿ ವಿಫಲವಾಗಿದೆ. ಈ ಬದ್ಧತೆಗಳನ್ನು ಪೂರೈಸುವಲ್ಲಿ ಪಕ್ಷ ವಿಫಲವಾದ ಕಾರಣ ಮತದಾರ ಒಲುವು ಬದಲಾಗಿದೆ ಎಂದು ಹೇಳಲಾಗಿದೆ.
* ಬಿಜೆಪಿಯ ನಿರ್ವಹಣಾ ತಂತ್ರ
ಬಿಜೆಪಿಯು ಬೂತ್ ಮಟ್ಟದ ಸಂಪರ್ಕದ ಮೇಲೆ ಕೇಂದ್ರೀಕರಿಸಿ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಜಾಲವನ್ನು ಬಳಸಿಕೊಂಡು ಹೆಚ್ಚು ಸೂಕ್ಷ್ಮ-ನಿರ್ವಹಣಾ ಅಭಿಯಾನವನ್ನು ಜಾರಿಗೆ ತಂದಿತು, ಎಎಪಿಯ ತಳಮಟ್ಟದಿಂದ ಪಕ್ಷವನ್ನ ಸಂಘಟಿಸುವಲ್ಲಿ ವಿಫಲವಾಯಿತು. ಪ್ರಮುಖ ಕ್ಷೇತ್ರಗಳಲ್ಲಿ ಬಿಜೆಪಿಯು ಮತ ಸೆಳೆಯಲು ಹಲವು ತಂತ್ರಗಾರಿಕೆಯನ್ನ ನಡೆಸಿತ್ತು.












Click it and Unblock the Notifications