ಹವಾಯಿಯಲ್ಲಿ ಜ್ವಾಲಾಮುಖಿ ಸ್ಫೋಟ: ದೇಶದಲ್ಲಿ ನಡೆದ ಪ್ರಮುಖ ಘಟನೆಗಳು
ಪಹೋ(ಹವಾಯಿ) ಮೇ 26: ಹವಾಯಿಯ ಕಿಲವ್ಯಾ ಜ್ವಾಲಾಮುಖಿ ಶುಕ್ರವಾರ ಮತ್ತೆ ಸ್ಫೋಟಿಸಿದ್ದು, ನೂರಾರು ಅಡಿ ಎತ್ತರಕ್ಕೆ ಬೆಂಕಿಯ ಕೆನ್ನಾಲಿಗೆ ಚಿಮ್ಮಿದೆ. ಆಗಸದಲ್ಲಿ 30 ಸಾವಿರ ಅಡಿ ಎತ್ತರಕ್ಕೆ ಜ್ವಾಲಾಮುಖಿಯ ಬೂದಿ ಹಾರಿದೆ.
ಮೇ 3ರಂದು ಉದ್ಭವವಾಗಿದ್ದ ಜ್ವಾಲಾಮುಖಿಯು 2,200 ಎಕರೆಗೆ ಹರಡಿದೆ. ಇದರಿಂದ ಸಾವಿರಾರು ಮಂದಿ ತಮ್ಮ ಮನೆಗಳನ್ನು ಕಳೆದುಕೊಂಡಿದ್ದಾರೆ. ಅಮೆರಿಕದ ಜಿಯೋಲಾಜಿಕಲ್ ಸರ್ವೆ ವಿಜ್ಞಾನಿ ಮೈಕೆಲ್ ಕೂಂಬ್ಸ್ ಹೇಳುವಂತೆ ಮತ್ತೆ ಇಷ್ಟೇ ದೊಡ್ಡ ಪ್ರಮಾಣದ ಜ್ವಾಲಾಮುಖಿ ಚಿಮ್ಮುವ ಸಾಧ್ಯತೆ ಇದೆ.
ಹವಾಯಿ ಜ್ವಾಲಾಮುಖಿ ವೀಕ್ಷಣಾಲಯದ ವೆಬ್ ಕ್ಯಾಮೆರಾದಲ್ಲಿ ಈ ಜ್ವಾಲಾಮುಖಿಯ ಪರಿಣಾಮವನ್ನು ಸೆರೆಹಿಡಿಯಲಾಗಿದ್ದು, ಧೂಳುಯುಕ್ತ ಬೂದಿಯ ಮಳೆ ಈಗಾಗಲೇ ಕಪ್ಪುಗಟ್ಟಿರುವ ದೃಶ್ಯಾವಳಿಯ ಮೇಲೆ ಆಗುತ್ತಿರುವುದನ್ನು ಇದು ಚಿತ್ರಿಸಿದೆ. ಬೆಂಕಿಯ ಜ್ವಾಲೆ ಒಂಬತ್ತು ಕಿಲೋ ಮೀಟರ್ ಎತ್ತರಕ್ಕೆ ವ್ಯಾಪಿಸಿರುವುದು ಕಂಡುಬಂದಿದೆ.
ಈಗಾಗಲೇ ಸಂಭವಿಸಿರುವ ಜ್ವಾಲಾಮುಖಿಯ ಲಾವಾರಸ ಮತ್ತೆ ನೆಲದೊಳಕ್ಕೆ ಸೇರುವ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಇದು ಇನ್ನಷ್ಟು ದೊಡ್ಡ ಜ್ವಾಲಾಮುಖಿಗೆ ಅವಕಾಶ ಮಾಡಿಕೊಡಲಿದೆ ಎಂಬ ಎಚ್ಚರಿಕೆಯನ್ನು ವಿಜ್ಞಾನಿಗಳು ನೀಡಿದ್ದಾರೆ. ಮುಳುಗುತ್ತಿರುವ ಜ್ವಾಲಾಮುಖಿ ಶಿಲೆ ಅಂತರ್ಜಲದೊಂದಿಗೆ ಸೇರಿದಾಗ ಒತ್ತಡ ಮತ್ತಷ್ಟು ಹೆಚ್ಚಿ ಅದು ಮೇಲ್ಮುಖವಾಗಿ ಚಿಮ್ಮುವ ಸಾಧ್ಯತೆ ಹೆಚ್ಚು. ಇದರಿಂದಾಗಿ ದೊಡ್ಡ ಗಾತ್ರದ ಬಂಡೆ ಹಾಗೂ ಬೂದಿ ಹೊರಚಿಮ್ಮಲಿದೆ ಎಂದು ಎಚ್ಚರಿಸಿದ್ದಾರೆ.
ಕಳೆದ ಮೂರು ವಾರಗಳಿಂದ ಹೊಗೆಯುಗುಳುತ್ತಿದ್ದ ಜ್ವಾಲಾಮುಖಿ 1924ರಿಂದೀಚೆಗೆ ಸ್ಫೋಟಗೊಂಡಿದ್ದು ಇದೇ ಮೊದಲ ಬಾರಿಯಾಗಿದೆ. ಸ್ಫೋಟದಿಂದಾಗಿ ವಾತಾವರಣದಲ್ಲಿ ತುಂಬಿರುವ ಇಂಗಾಲದ ಡೈಆಜ್ಸೈಡಿನಿಂದ ರಕ್ಷಿಸಿಕೊಳ್ಳುವ ಸಲುವಾಗಿ ಜ್ವಾಲಾಮುಖಿಯಿಂದ 25 ಮೈಲಿ ದೂರದಲ್ಲಿರುವ ಪಹೋವ ಗ್ರಾಮದ ಎಲ್ಲಾ ಶಾಲೆಗಳನ್ನು ಮುಚ್ಚಲಾಗಿದೆ. ಹಲವಾರು ಮನೆಗಳೂ ನಾಶಗೊಂಡಿದ್ದು ಸುಮಾರು 2000 ಮಂದಿಯನ್ನು ಸ್ಥಳಾಂತರಿಸಲಾಗುತ್ತಿದೆ.

ಹವಾಯಿ ಜ್ವಾಲಾಮುಖಿ ಮತ್ತೆ ಸ್ಫೋಟ
ಪಹೋದಲ್ಲಿ ಶುಕ್ರವಾರ ಸ್ಫೋಟಗೊಂಡಿರುವ ಹವಾಯಿ ಜ್ವಾಲಾಮುಖಿಯ ದೃಶ್ಯವನ್ನು ಅಮೆರಿಕಾದ ಜಿಯೋಲಾಜಿಕಲ್ ಸರ್ವೆ ಸೆರೆಹಿಡಿದಿದ್ದು ಹೀಗೆ. ಕಳೆದ ಮೂರು ವಾರಗಳಿಂದ ಹವಾಯಿಯಲ್ಲಾಗುತ್ತಿರುವ ಜ್ವಾಲಾಮುಖಿ ಸ್ಫೋಟದಿಂದ 2 ಸಾವಿರಕ್ಕೂ ಹೆಚ್ಚು ಮಂದಿ ನಿರಾಶ್ರಿತರಾಗಿದ್ದಾರೆ.

ಜಬಲ್ಪುರದಲ್ಲಿ ಕೋಲ್ಮಿಂಚು ಕಾಣಿಸಿಕೊಂಡಿದ್ದು ಹೀಗೆ
ಜಬಲ್ಪುರದಲ್ಲಿ ಶುಕ್ರವಾರ ಮೋಡಕವಿತ ವಾತಾರವಣ ನಿರ್ಮಾಣವಾಗಿತ್ತು. ಮಳೆಯ ಬರುವಿಕೆಗಾಗಿ ಅಲ್ಲಿನ ಜನ ಕಾದು ಕುಳಿತಿದ್ದರು ಆ ಸಂದರ್ಭದಲ್ಲಿ ಆಗಸದಲ್ಲಿ ಕಂಡ ಕೋಲ್ಮಿಂಚು ಇದಾಗಿದೆ.

ಆರ್ಎಸ್ಎಸ್ ಮಹಿಳೆಯರಿಂದ ಪಥಸಂಚನ
ಜಬಲ್ಪುರದಲ್ಲಿ ಶುಕ್ರವಾರ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಹಿಳಾ ಕಾರ್ಯಕರ್ತರು ಅಲ್ಲಿನ ರಸ್ತೆಗಳಲ್ಲಿ ಪಥಸಂಚಲನ ನಡೆಸಿದರು.

ವಿಶ್ವಾಸಮತ ಯಾಚನೆ: ಬಿಜೆಪಿ ಸದನದಿಂದ ಹೊರಕ್ಕೆ
ಎಚ್ಡಿ ಕುಮಾರಸ್ವಾಮಿಯವರು ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಶುಕ್ರವಾರ ವಿಧಾನಸಭೆಯಲ್ಲಿ ವಿಶ್ವಾಸ ಮತ ಯಾಚನೆ ಮಾಡಿದರು. ಸಂದರ್ಭದಲ್ಲಿ ಸದನದಿಂದ ಹೊರ ನಡೆಯುತ್ತಿರುವ ಬಿಜೆಪಿ ನಾಯಕರು.

ಸೇಫ್ಟಿ ಮಾಸ್ಕ್ ಧರಿಸಿರುವ ಬಾಲಕಿ
ಕೇರಳದ ಕೊಯಿಕ್ಕೊಡ್ ನಲ್ಲಿ ನಿಪಾಹ್ ವೈರಸ್ನಿಂದಾಗಿ ಈಗಾಗಲೇ 12 ಮಂದಿ ಮೃತಪಟ್ಟಿದ್ದಾರೆ. ಇದಕ್ಕೆ ಮುಂಜಾಗ್ರತಾ ಕ್ರಮವಾಗಿ ಅಲ್ಲಿನ ಮಕ್ಕಳು, ಪೋಷಕರು ಸೇರಿದಂತೆ ಪ್ರತಿಯೊಬ್ಬರು ಸೇಫ್ಟಿ ಮಾಸ್ಕ್ ಧರಿಸಿ ಮನೆಯಿಂದ ತೆರಳುತ್ತಿದ್ದಾರೆ.
-
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು












Click it and Unblock the Notifications