ಕೇಂದ್ರದ ಅಧಿಸೂಚನೆಯಲ್ಲಿ ಗೋ ಹತ್ಯೆ ನಿಷೇಧ ಅಂತ ಎಲ್ಲಿದೆ?
ಬೆಂಗಳೂರು, ಮೇ 30: ಕೇಂದ್ರ ಸರಕಾರವು ಪ್ರಾಣಿಗಳ ಮಾರಾಟದ ವಿಚಾರವಾಗಿ ಹೊರಡಿಸಿದ ಅಧಿಸೂಚನೆಯೂ ಸಾಮಾಜಿಕ ಜಾಲತಾಣಗಳಲ್ಲಿ ಗದ್ದಲ ಎಬ್ಬಿಸಿದೆ. ಇನ್ನು ರಾಜಕಾರಣಿಗಳು ಕೇಂದ್ರದ ವಿರುದ್ಧ ಹುಯಿಲೆಬ್ಬಿಸುತ್ತಿದ್ದಾರೆ. ರಾಜ್ಯ ಸರಕಾರಗಳಂತೂ ಈ ಅಧಿಸೂಚನೆಗೆ ಪ್ರತಿಯಾಗಿ ಶಾಸನ ಮಂಡಿಸುವುದಕ್ಕೆ ಮುಂದಾಗಿವೆ.
ಮುಖ್ಯವಾದ ಪ್ರಶ್ನೆ ಏನೆಂದರೆ, ಕೇಂದ್ರದ ಅಧಿಸೂಚನೆಯಲ್ಲಿ ನಿಜವಾಗಲೂ ಗೋ ಹತ್ಯೆ ನಿಷೇಧದ ಬಗ್ಗೆ ಪ್ರಸ್ತಾವ ಇದೆಯಾ? ಕೇಂದ್ರ ಪರಿಸರ ಹಾಗೂ ಅರಣ್ಯ ಸಚಿವಾಲಯ ಹೊರಡಿಸಿದ ಅಧಿಸೂಚನೆಯನ್ನು ಪರಿಶೀಲಿಸೋಣ. ಇಷ್ಟುದ್ದದ ಅಧಿಸೂಚನೆಯನ್ನು ತುಂಬ ಸರಳವಾಗಿ ಹೇಳಬೇಕು ಅಂದರೆ, ಪಶು ಮಾರುಕಟ್ಟೆಯಲ್ಲಿ ರಾಸುಗಳನ್ನು ಕಸಾಯಿ ಖಾನೆಗಳಿಗೆ ಮಾರುವುದಕ್ಕೆ ಮಾತ್ರ ನಿಷೇಧವಿದೆ.[ಪುಣ್ಯಕೋಟಿಯ ಉಳಿಸಿ ಕೋಟಿ ಪುಣ್ಯವ ಗಳಿಸಿದ ಮೋದಿ ಸರ್ಕಾರ]
ಈ ಅಶಿಸೂಚನೆಯಲ್ಲಿ ನಿಯಮಗಳು ಹಾಘೂ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಿರುವುದು ಹೌದು. ಆದರೆ ಅವುಗಳನ್ನು ಮಾಡಿರುವುದು ಪಶು ಮಾರುಕಟ್ಟೆ ವ್ಯವಸ್ಥೆಯನ್ನು ಸರಿಪಡಿಸುವುದಕ್ಕೆ. ಪಶುಗಳ ಮಾರಾಟದ ಸಂದರ್ಭದಲ್ಲಿ ಹೇಗೆಂದರೆ ಹಾಗೆ ನಡೆಸಿಕೊಳ್ಳದಿರಲಿ ಎಂದು ನಿಯಮಗಳನ್ನು ರೂಪಿಸಲಾಗಿದೆ.

ಅಂದಹಾಗೆ, ಅಧಿಸೂಚನೆಯಲ್ಲಿ ಇರುವುದೇನು?
* ಪಶು ಮಾರುಕಟ್ಟೆಗೆ ಜಾನುವಾರುಗಳನ್ನು ತರುವಾಗ ಲಿಖಿತ ಘೋಷಣೆಗೆ ಅದರ ಮಾಲೀಕರ ಸಹಿ ಒಳಗೊಂಡ ಪತ್ರವನ್ನು ಸಲ್ಲಿಸಬೇಕು. ಮಾಲೀಕರಾದವರು ತಮ್ಮ ಏಜೆಂಟ್ ಗಾದರೂ ಈ ರೀತಿಯ ಲಿಖಿತ ದಾಖಲೆ ನೀಡಬೇಕು. ಮತ್ತು ಅದನ್ನು ಹೊಸ ಸಮಿತಿಯ ಕಾರ್ಯದರ್ಶಿಗೆ ಕೊಡಬೇಕು.
* ರಾಸುಗಳ ಮಾಲೀಕರ ಹೆಸರು ಹಾಗೂ ವಿಳಾಸ, ಫೋಟೋ ಒಳಗೊಂಡಂಥ ಗುರುತಿನ ಚೀಟಿಯನ್ನು ನೀಡಬೇಕು.
* ಪಶು ಮಾರುಕಟ್ಟೆಯಲ್ಲಿ ನಡೆಯುವ ರಾಸುಗಳ ವ್ಯಾಪಾರ ಕೃಷಿ ಉದ್ದೇಶಕ್ಕಾಗಿಯೇ ನಡೆಯಬೇಕು.[ಗೋಹತ್ಯೆ ನಿಷೇಧ ಕಾಯ್ದೆ ಬಗ್ಗೆ ಪೇಜಾವರ ಶ್ರೀ ಹೇಳಿದ್ದಿಷ್ಟು...]
* ಧಾರ್ಮಿಕ ಉದ್ದೇಶಗಳಿಗೆ ಬಲಿ ಕೊಡುವ ಕಾರಣಕ್ಕೆ ರಾಸುಗಳನ್ನು ಖರೀದಿಸುವುದಕ್ಕೆ ನಿಬಂಧನೆ ಇದೆ.

ಪಶು ಮಾರುಕಟ್ಟೆ ಅಂದರೇನು?
ಯಾವುದೇ ಸ್ಥಳದಲ್ಲಿ ಅಥವಾ ಮಾರುಕಟ್ಟೆ ಪ್ರದೇಶ ಅಥವಾ ಅಂಗಳ-ಸ್ಥಳದಲ್ಲಿ ಪ್ರಾಣಿಗಳ ಪ್ರದರ್ಶನ ಮಾಡಿ, ಮಾರಾಟ ಹಾಗೂ ಹರಾಜು ಹಾಕುವುದಕ್ಕೆ ಪಶು ಮಾರುಕಟ್ಟೆ ಅಂತ ಕರೆಯುತ್ತಾರೆ. ಮಾರುಕಟ್ಟೆಗೆ ಹೊಂದಿಕೊಂಡಂತೆ ಇರುವ ಕಸಾಯಿ ಖಾನೆ, ಅದಕ್ಕೆ ಹೊಂದಿದಂತೆ ಇರುವ ವಾಹನ ನಿಲುಗಡೆ ಸ್ಥಳ, ಮತ್ತು ಜಾಣುವಾರುಗಳ ಜಾತ್ರೆ ನಡೆವ ಸ್ಥಳ, ಎಲ್ಲಿ ಪಶುಗಳ ಪ್ರದರ್ಶನ ಹಾಗೂ ಮಾರಾಟ ಮಾಡುತ್ತಾರೋ ಅದು ಪಶು ಮಾರುಕಟ್ಟೆ.

ಗೊಂದಲ ಇರುವುದೆಲ್ಲಿ?
ಕಸಾಯಿಖಾನೆಗಳವರು ನೇರವಾಗಿ ರೈತರಿಂದ ಜಾನುವಾರುಗಳನ್ನು ಖರೀದಿಸಲು ಅನುಮತಿ ಇದೆಯಾ ಎಬ ವಿಚಾರದಲ್ಲಿ ಸ್ಪಷ್ಟನೆ ಇಲ್ಲ. ಎಲ್ಲೂ ಕೂಡ ಅದಕ್ಕೆ ನಿಷೇಧ ಹೇರಿದ ಬಗ್ಗೆ ಉಲ್ಲೇಖವಿಲ್ಲ. ಈ ನಿಯಮಗಳು ಕಸಾಯಿಖಾನೆಗಳು ಕಾರ್ಯನಿರ್ವಹಿಸುವುದಕ್ಕೆ ತೊಡಕಾಗಿವೆ.[ಗೋಹತ್ಯೆ ನಿಷೇಧದ ವಿರುದ್ಧ ಗೋಮಾಂಸ ಭಕ್ಷಣೆ ಉತ್ಸವ]
ಕೆಲವು ಕಠಿಣ ನಿಬಂಧನೆಗಳಿವೆ. ಆದರೆ ಅವು ಗೋ ಹತ್ಯೆ ನಿಷೇಧದ ಬಗ್ಗೆ ಎಲ್ಲೂ ಹೇಳಿಲ್ಲ. ಜಾನುವಾರುಗಳನ್ನು ಕೆಟ್ಟದಾಗಿ ನಡೆಸುಕೊಳ್ಳುತ್ತಿದ್ದ ರೀತಿಗೆ ಕಡಿವಾಣ ಬಿದ್ದಿದೆ. ಈಗ ಕಸಾಯಿಖಾನೆ ನಡೆಸುವವರು ರಾಸುಗಳನ್ನು ನೇರವಾಗಿ ರೈತರಿಂದಲೇ ಖರೀದಿಸಬೇಕು, ಅದೂ ಅವರು ಮಾರಾಟ ಮಾಡುವವರೆಗೆ ಅವಕಾಶ ಇಲ್ಲ.
ಪರವಾನಗಿ ಇರುವ ಕಸಾಯಿಕಾನೆ ಮಾಲೀಕರು ರಾಸುಗಳನ್ನು ಖರೀದಿಸಲು ಕೃಷಿಕರನ್ನೇ ಅವಲಂಬಿಸಬೇಕು.
-
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
Power Cut: ನಾಳೆ ಮಾ.22 ರಿಂದ 25ರವರೆಗೆ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ: ಬೆಸ್ಕಾಂ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
India Rain Forecast: ಮುಂದಿನ 5 ದಿನ ಈ ಭಾಗಗಳಲ್ಲಿ ವ್ಯಾಪಕ ಮಳೆ, ಉಷ್ಣ ಅಲೆ ಎಚ್ಚರಿಕೆ












Click it and Unblock the Notifications