ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಪನಗದೀಕರಣದಿಂದ ನಕ್ಸಲರಿಗೆ ಸಮಸ್ಯೆಯಾಗಿದೆಯಾ? ಖಂಡಿತಾ ಹಾಗನಿಸಲ್ಲ

ನಕ್ಸಲರಿಗೆ ಪಾಕಿಸ್ತಾನದ ಐಎಸ್ ಐ ಏಜೆಂಟರು ಶಸ್ತ್ರಾಸ್ತ್ರ ಪೂರೈಕೆ ಮಾಡಿದರೆ, ಲೂಟಿ ಮಾಡುವ ಮೂಲಕ ಹಣ ಸಂಗ್ರಹಿಸುತ್ತಾರೆ. ಆದ್ದರಿಂದಲೇ ಅಪನಗದೀಕರಣದಿಂದ ಯಾವುದೇ ತೊಂದರೆಯಾಗಿಲ್ಲ ಎಂಬುದು ತಿಳಿಯುತ್ತದೆ

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಏಪ್ರಿಲ್ 25: ಈ ವರ್ಷದ ಜನವರಿಯಲ್ಲಿ ಲೋಕಸಭೆಯಲ್ಲಿ ಹೇಳಿಕೆ ನೀಡಿದ್ದ ಕೇಂದ್ರ ಗೃಹ ಸಚಿವ ರಾಜ್ ನಾಥ್ ಸಿಂಗ್, ಅಪನಗದೀಕರಣದಿಂದ ನಕ್ಸಲರಿಗೆ ನಗದಿಗಾಗಿ ಸಮಸ್ಯೆಯಾಗಿದೆ ಎಂದು ಹೇಳಿದ್ದರು. ಅಪನಗದೀಕರಣದ ನಂತರ ಹಣಕಾಸಿನ ಸಮಸ್ಯೆಯಾಗಿರುವ ನಕ್ಸಲರಿಗೆ ಕಾರ್ಯಾಚರಣೆಯೇ ಕಷ್ಟವಾಗಿದೆ ಎಂದಿದ್ದರು.

ಆ ಹೇಳಿಕೆ ನೀಡಿ ಮೂರು ತಿಂಗಳು ಕಳೆದಿದೆ. ಛತ್ತೀಸ್ ಗಢದಲ್ಲೇ ನಕ್ಸಲರಿಂದ ನಡೆದ ಎರಡು ಭೀಕರ ದಾಳಿಯಲ್ಲಿ ಒಟ್ಟು ಮೂವತ್ತೆಂಟು ಸಿಆರ್ ಪಿಎಫ್ ಯೋಧರು ಹುತಾತ್ಮರಾಗಿದ್ದಾರೆ. ಇದರರ್ಥ ಅಪನಗದೀಕರಣವು ನಕ್ಸಲರ ಕಾರ್ಯಾಚರಣೆ ಮೇಲೆ ಯಾವುದೇ ಪರಿಣಾಮ ಬೀರಿಲ್ಲ.[ಛತ್ತೀಸ್ ಗಢ ನಕ್ಸಲರ ದಾಳಿ, ಗುರುತೇ ಸಿಗದಂತಾಗಿದ್ದ ಯೋಧರ ದೇಹ]

ಆದರೆ, ನಕ್ಸಲರ ಪ್ರಭಾವವಿರುವ ಹಳ್ಳಿಗಳ ಸಂಖ್ಯೆ 106ರಿಂದ 68ಕ್ಕೆ ಇಳಿದಿದೆ. ಆದರೆ ನಕ್ಸಲರ ಹಿಡಿತವು ಈ ಪ್ರದೇಶದಲ್ಲಿ ತುಂಬ ಬಲವಾಗಿದೆ. ಮೊದಲನೆಯದಾಗಿ ನಕ್ಸಲರಿಗೆ ಹಣ ಪೂರೈಕೆ ಆಗುತ್ತಿರುವುದು ದೇಶದ ಹೊರಭಾಗದಿಂದ. ದರೋಡೆ ಮಾಡುವ ಮೂಲಕವು ನಕ್ಸಲರು ಹಣ ಸಂಗ್ರಹಿಸುತ್ತಾರೆ.

Naxal

ಮೂಲಗಳು ತಿಳಿಸುವ ಪ್ರಕಾರ ನಕ್ಸಲರಿಗೆ ಶಸ್ತ್ರಾಸ್ತ್ರ ಪೂರೈಕೆ ಆಗುವುದು ಪಾಕಿಸ್ತಾನದ ಐಎಸ್ ಐ ಏಜೆಂಟರ ಮೂಲಕ. ನಕ್ಸಲರ ಸಮಸ್ಯೆಯನ್ನು ನಿವಾರಿಸುವಲ್ಲಿ ಎಲ್ಲಿ ಸೋಲುತ್ತಿದ್ದೇವೆ ಅನ್ನೋದನ್ನು ಸರಕಾರ ಗುರುತಿಸಬೇಕು. ಸತ್ಯ ಏನೆಂದರೆ, ತಳಮಟ್ಟದ ಗುಪ್ತಚರ ದಳ ಹೀನಾಯವಾಗಿ ವೈಫಲ್ಯ ಕಂಡಿದೆ.['ರಜಾ ಹಾಕ್ತೀನಿ ಅಂದಿದ್ದ ನನ್ನ ಮಗ ಇನ್ಯಾವತ್ತೂ ಮನೆಗೆ ಬರಲ್ಲ']

ಇನ್ನೊಂದು ಕಡೆ ನಕ್ಸಲರಿಗೆ ಸ್ಥಳೀಯರ ಬೆಂಬಲ ದೊರೆಯುತ್ತಿದ್ದು, ಸ್ಥಳೀಯವಾಗಿ ಅವರಿಗೆ ಮಾಹಿತಿ ನೀಡುವ ಜಾಲ ತುಂಬ ಪ್ರಬಲವಾಗಿದೆ.

English summary
It was in January that Union Home Minister, Rajnath Singh had said in the Lok Sabha that the Naxals were cash starved due to demonetisation. He said that the decision on demonetisation had left the Naxalites without money which in turn was making it hard for them to operate.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X