ಪೊಲೀಸರಿಗೆ ಸಿಗದ ಹನಿಪ್ರೀತ್ ಚಾನೆಲ್ ಗೆ ಸಿಕ್ಕಿದ್ದು ಹೇಗೆ? ಟ್ವಿಟ್ಟಿಗರ ಪ್ರಶ್ನೆ!
ನವದೆಹಲಿ, ಅಕ್ಟೋಬರ್ 03: ಎರಡು ಅತ್ಯಾಚಾರ ಪ್ರಕರಣದಲ್ಲಿ ಸಿಬಿಐ ವಿಶೇಷ ನ್ಯಾಯಾಲಯ ಸ್ವಯಂಘೋಷಿತ ದೇವಮಾನವ ಬಾಬಾ ರಾಮ್ ರಹೀಮ್ ಗೆ 20 ವರ್ಷಗಳ ಜೈಲುಶಿಕ್ಷೆ ವಿಧಿಸಿ ಈಗಾಗಲೇ ತಿಂಗಳು ಕಳೆದಿದೆ. ಆದರೆ ರಾಮ್ ರಹೀಮ್ ದತ್ತುಪುತ್ರಿ ಹನೀಪ್ರೀತ್ ಇನ್ಸಾನ್ ಮಾತ್ರ ಅಂದಿನಿಂದ ಕಾಣೆಯಾಗಿದ್ದರು.
ಅವರ ಮೇಲೆ ಹಲವು ಪ್ರಕರಣಗಳನ್ನು ದಾಖಲಿಸಿರುವ ಪೊಲೀಸರು ಆಕೆಯ ಪತ್ತೆಗೆ ಸಾಕಷ್ಟು ಪ್ರಯತ್ನಪಟ್ಟರೂ ಆಕೆ ಎಲ್ಲಿಯೂ ಕಾಣಿಸಿಕೊಂದಿರಲಿಲ್ಲ. ಆದರೆ ಇದ್ದಕ್ಕಿದ್ದಂತೆ ಆಕೆ ಚಾನೆಲ್ ವೊಂದಕ್ಕೆ ಸಂದರ್ಶನ ನೀಡಿರುವುದು ಪೊಲೀಸ್ ವ್ಯವಸ್ಥೆಯ ವೈಫಲ್ಯವನ್ನು ಎತ್ತಿಹಿಡಿದೆ.
ಪೊಲೀಸರ ಕಣ್ಣಿಗೆ ಮಣ್ಣೆರೆಚಿದ್ದ ಹನೀಪ್ರೀತ್ ಚಾನೆಲ್ ಗಳಿಗೆ ಸಿಕ್ಕಿದ್ದು ಹೇಗೆ? ಪೊಲೀಸರು ಹುಡುಕಾಡುತ್ತಿರುವ ಹನೀಪ್ರೀತ್ ರನ್ನು ಟಿಆರ್ ಪಿ ಗಾಗಿ ಸಂದರ್ಶನ ಮಾಡಿ, ಪೊಲೀಸರಿಗೆ ಆಕೆ ಇರುವ ಸ್ಥಳದ ಮಾಹಿತಿಯನ್ನೂ ನೀಡದ ಚಾನೆಲ್ ನ ನಿಲುವು ಸರಿಯೇ?
ಸಂದರ್ಶನದಲ್ಲಿ ಆಕೆ ಹೇಳಿದಂತೆ, ಆಕೆಗೂ-ರಾಮ್ ರಹೀಮ್ ಗೂ ತಂದೆ-ಮಗಳ ಪವಿತ್ರ ಸಂಬಂಧ ಬಿಟ್ಟು ಬೇರೆ ಸಂಬಂಧ ಇರಲೇ ಇಲ್ಲವೇ..? ಎಂಬಿತ್ಯಾದಿ ಪ್ರಶ್ನೆಗಳು ಇದೀಗ ಎದ್ದಿವೆ. ಟ್ವಿಟ್ಟರ್ ನಲ್ಲಿ ಹನೀಪ್ರೀತ್ ಇನ್ಸಾನ್ ಟ್ರೆಂಡಿಂಗ್ ಆಗಿದ್ದು, ಈ ಕುರಿತು ಹಲವರು ತಮ್ಮ ಅಭಿಪ್ರಾಯ ಹೇಳಿದ್ದಾರೆ. ಹೆಚ್ಚಿನ ಜನ ಪೊಲೀಸ್ ವ್ಯವಸ್ಥೆಯ ವೈಫಲ್ಯವನ್ನು ಖಂಡಿಸಿದ್ದಾರೆ.
|
ಹರ್ಯಾಣ ಪೊಲೀಸರ ವೈಫಲ್ಯ
ಹರ್ಯಾಣ ಪೊಲೀಸರು ಹನೀಪ್ರೀತ್ ಪತ್ತೆಹಚ್ಚುವಲ್ಲಿ ವಿಫಲರಾಗಿದ್ದಾರೆ. ಆದರೆ ಚಾನೆಲ್ ವೊಂದು ಅವರ ಸಂದರ್ಶನ ಮಾಡಿದೆ. ಇದು ಹರ್ಯಾಣ ಸರ್ಕಾರದ ಮತ್ತು ಪೊಲೀಸರಸ ವೈಫಲ್ಯವನ್ನು ಸಾಬೀತುಪಡದಿಸಿದೆ ಎಂದು ಪ್ರತಿಭಾ ಭಾಸ್ಕರ್ ಎನ್ನುವವರು ಟ್ವೀಟ್ ಮಾಡಿದ್ದಾರೆ.
|
ದಾವೂದ್ ಇಬ್ರಾಹಿಂ ಪತ್ತೆಗೂ ಸರ್ಕಾರ ಚಾನೆಲ್ ಸಹಾಯ ಕೇಳಲಿ!
ಹನೀಪ್ರೀತ್ ರನ್ನು ಸುದ್ದಿ ವಾಹಿನಿ ಪತ್ತೆಹಚ್ಚಿದೆ. ದಾವೂದ್ ಇಬ್ರಾಹಿಂ ಪತ್ತೆಗೂ ಸರ್ಕಾರ ಸುದ್ದಿ ವಾಹಿನಿಗಳ ಸಹಾಯ ಕೇಳಬೇಕಿದೆ ಎಂದು ಠಾಕೂರ್ ಎಂಬುವವರು ಟ್ವೀಟ್ ಮಾಡಿದ್ದಾರೆ.
|
ಚಾನೆಲ್ ಗಳಿಗೆ ಟಿಆರ್ ಪಿಯೇ ಎಲ್ಲ!
ಕೆಲವು ಚಾನೆಲ್ ಗಳು ಹನೀಪ್ರೀತ್ ರನ್ನು ಪತ್ತೆ ಮಾಡಬಲ್ಲವು. ಆದರೆ ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಲಾರವು. ಏಕೆಂದರೆ ಅವಕ್ಕೆ ಟಿಆರ್ ಪಿಯೇ ಎಲ್ಲ ಎಂದು ಆನಂದ್ ಪಾಂಡೆ ಎನ್ನುವವರು ಟ್ವೀಟ್ ಮಾಡಿದ್ದಾರೆ.
|
ಚಾನೆಲ್ ಗಳು ಹೇಗೆ ಪತ್ತೆ ಮಾಡಿದವು?
ತನ್ನೆಲ್ಲ ಬಲಗಳನ್ನು ಉಪಯೋಗಿಸಿಯೂ ಸರ್ಕಾರ, ಹನೀಪ್ರೀತ್ ಇನ್ಸಾನ್ ಕುರಿತು ಯಾವುದೇ ಸುಳಿವನ್ನೂ ಪತ್ತೆ ಮಾಡಲಾಗದಿರುವಾಗ ನಮ್ಮ ಚಾನೆಲ್ ಗಳು ಹೇಗೆ ಪತ್ತೆ ಮಾಡಿದವು? ಎಂದು ಜಿಯಾ ನೋಮನಿ ಎನ್ನುವವರು ಟ್ವೀಟ್ ಮಾಡಿದ್ದಾರೆ.
|
ಪಂಖುರಿ ಪಾಠಕ್
ಹನೀಪ್ರೀತ್ ರನ್ನು ಚಾನೆಲ್ ಗಳು ಪತ್ತೆ ಮಾಡಬಲ್ಲವು, ಆದರೆ ಎಲ್ಲ ಸಂಪನ್ಮೂಲಗಳನ್ನು ಹೊಂದಿದ್ದರೂ ನಮ್ಮ ಸರ್ಕಾರಕ್ಕೆ, ಏಜೆನ್ಸಿಗಳಿಗೆ ಅದು ಸಾಧ್ಯವಾಗಿಲ್ಲ. ಅಚ್ಚರಿಯ ವಿಷಯವಲ್ಲವೇ? ಎಂದು ಪಂಖುರಿ ಪಾಠಕ್ ಎನ್ನುವವರು ಟ್ವೀಟ್ ಮಾಡಿದ್ದಾರೆ.
-
ಪ್ರಧಾನಿ ಮೋದಿಗೆ ಕರೆ ಮಾಡಿದ ಟ್ರಂಪ್: ಶಾಂತಿ ಸ್ಥಾಪನೆಗೆ ಭಾರತದ ಬೆಂಬಲ, ಮಹತ್ವ ಮಾತುಕತೆ -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Yami Gautam: ಕನ್ನಡದಲ್ಲೇ ಧುರಂಧರ್ ನಿರ್ದೇಶಕನ ಪತ್ನಿ ಯಾಮಿ ಗೌತಮ್ ಮೊದಲ ಸಿನಿಮಾ, ಸ್ಟಾರ್ ಹೀರೋ ಜೊತೆ ಚೊಚ್ಚಲ ನಟನೆ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು












Click it and Unblock the Notifications