Get Updates
Get notified of breaking news, exclusive insights, and must-see stories!

Hamas Israel War: ಮೋದಿ ನಿಲುವು ವಿದೇಶಾಂಗ ಸಚಿವಾಲಯದ ಹೇಳಿಕೆಗಿಂತ ಭಿನ್ನವಾಗಿದೆ- ಶರದ್ ಪವಾರ್

ಮುಂಬೈ ಅಕ್ಟೋಬರ್ 14: ಹಮಾಸ್-ಇಸ್ರೇಲ್ ಯುದ್ಧದ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಗಳು ವಿದೇಶಾಂಗ ವ್ಯವಹಾರಗಳ ಸಚಿವಾಲಯ (ಎಂಇಎ) ವ್ಯಕ್ತಪಡಿಸಿದ ನಿಲುವಿಗಿಂತ ಭಿನ್ನವಾದ ನಿಲುವನ್ನು ಪ್ರತಿಬಿಂಬಿಸುತ್ತವೆ ಎಂದು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಅಧ್ಯಕ್ಷ ಶರದ್ ಪವಾರ್ ಶುಕ್ರವಾರ ಹೇಳಿದ್ದಾರೆ.

ಭಾರತ ಸರ್ಕಾರ ಇಸ್ರೇಲ್‌ನ ಪರವಾಗಿ 100 ಪ್ರತಿಶತ ಬೆಂಬಲ ನೀಡುತ್ತಿದೆ ಎಂದು ನಾನು ನಂಬುವುದಿಲ್ಲ ಎಂದು ಮಾಜಿ ರಕ್ಷಣಾ ಸಚಿವ ಶರದ್ ಪವಾರ್ ಸುದ್ದಿಗಾರರಿಗೆ ತಿಳಿಸಿದರು. "ಭಾರತ ಯಾವಾಗಲೂ ಪ್ಯಾಲೆಸ್ತೀನ್ ಸಮಸ್ಯೆಯನ್ನು ಬೆಂಬಲಿಸುತ್ತದೆ. ನಾವು ಅದನ್ನು ಮುಂದುವರಿಸುತ್ತೇವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಹೇಳಿಕೆಯು ದೃಢಪಡಿಸಿದೆ. ಆದರೆ ನಾವು (ಭಯೋತ್ಪಾದಕ) ದಾಳಿಗಳಲ್ಲಿ ತೊಡಗಿರುವ ಯಾವುದೇ ಸಂಘಟನೆಯನ್ನು ವಿರೋಧಿಸುತ್ತೇವೆ. ನಾವು ನಿಮ್ಮೊಂದಿಗೆ ಇದ್ದೇವೆ ಎಂದು ಪ್ರಧಾನಿ ಮೋದಿ ಇಸ್ರೇಲ್ ಪ್ರಧಾನಿಗೆ ಭರವಸೆ ನೀಡಿದ್ದಾರೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿಕೆ ಹಾಗೂ ಎಂಇಎ ವ್ಯಕ್ತಪಡಿಸಿದ ನಿಲುವಿಗಿಂತ ಭಿನ್ನವಾದ ನಿಲುವನ್ನು ಪ್ರತಿಬಿಂಬಿಸುತ್ತವೆ'' ಎಂದು ಶರದ್ ಪವಾರ್ ಹೇಳಿದ್ದಾರೆ.

Hamas-Israel conflict: Modis stand different from MEA statement - Sharad Pawar

ರಾಷ್ಟ್ರದ ಮುಖ್ಯಸ್ಥರು ಒಂದು ನಿಲುವು ತಳೆದಿರುವುದು ಮತ್ತು ಅವರ ಸಚಿವಾಲಯವು ಇನ್ನೊಂದು ನಿಲುವನ್ನು ತೆಗೆದುಕೊಂಡಿರುವುದು ಇದೇ ಮೊದಲು ಎಂದು ಪವಾರ್ ಹೇಳಿದ್ದಾರೆ. ಇಸ್ರೇಲ್-ಪ್ಯಾಲೆಸ್ತೀನ್ ಸಮಸ್ಯೆ ಗಂಭೀರ ಮತ್ತು ಸೂಕ್ಷ್ಮವಾಗಿದೆ. ಇದರ ಕುರಿತಾಗಿ ಅಫ್ಘಾನಿಸ್ತಾನ ಯುಎಇ ಮತ್ತು ಇತರ ಮುಸ್ಲಿಂ ರಾಷ್ಟ್ರಗಳ ಅಭಿಪ್ರಾಯಗಳನ್ನು ನಿರ್ಲಕ್ಷಿಸಲಾಗುವುದಿಲ್ಲ ಎಂದು ಅವರು ಹೇಳಿದರು.

ಹಮಾಸ್-ಇಸ್ರೇಲ್ ಸಂಘರ್ಷ

ಪ್ಯಾಲೆಸ್ತೀನ್‌ನ ಹಮಾಸ್ ಉಗ್ರರು ಇಸ್ರೇಲ್ ಮೇಲೆ ಯುದ್ಧ ಸಾರಿ ಇಂದಿಗೆ ಒಂದು ವಾರ ಕಳೆದಿವೆ. ಆದರಿನ್ನೂ ಈ ದಾಳಿಗಳು ಪರಸ್ಪರ ನಡೆಯುತ್ತಲೇ ಇವೆ. ಹಮಾಸ್ ಉಗ್ರರು ಆರಂಭಿಸಿದ ಈ ದಾಳಿಗೆ ಅಂತ್ಯ ಹಾಡುವುದು ನಾವೇ ಎಂದು ಇಸ್ರೇಲ್ ಪ್ರಧಾನಿ ಎಚ್ಚರಿಕೆ ಕೊಟ್ಟಿದ್ದಾರೆ. ಹೀಗಾಗಿ ಇಸ್ರೇಲ್ ಪ್ಯಾಲೆಸ್ತೀನ್ ಮೇಲೆ ದಾಳಿಗೆ ಮುಂದಾಗಿದ್ದು ಈ ಪರಸ್ಪರ ದಾಳಿಗಳು ಇಂದಿಗೂ ಮುಂದುವರೆದಿದ್ದು ಅಪಾರದ ಸಾವು ಸೋವು ಸಂಭವಿಸಿವೆ. ಅಧಿಕ ಪ್ರವಾಣದ ಆಸ್ತಿ ನೆಲಸಮವಾಗಿದೆ.

Hamas-Israel conflict: Modis stand different from MEA statement - Sharad Pawar

ವಿದೇಶಾಂಗ ನೀತಿ ಏನು?

ಭಾರತ ಸರ್ಕಾರವು ಗಾಂಧೀಜಿಯವರ ಕಾಲದಿಂದಲೂ ಪಾಲಿಸುತ್ತಾ ಬಂದಿರುವ ವಿದೇಶಾಂಗ ನೀತಿಗೆ ಬದ್ಧವಾಗಿರಬೇಕು ಮತ್ತು ಫ್ಯಾಲೆಸ್ತೇನಿಯರ ಸಮಸ್ಯೆಗೆ ಧ್ವನಿಯಾಗಬೇಕು ಎಂದು ಮಜ್ಲಿಸೆ ಇಸ್ಲಾಹ್ ವ ತಂಝಿಮ್ ಕೇಂದ್ರ ಸರಕಾರವನ್ನು ಒತ್ತಾಯಿಸಿದೆ.

ಈ ಕುರಿತಂತೆ ಪ್ರಕಟನೆ ಹೊರಡಿಸಿರುವ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಕೀಬ್ ಎಂ.ಜೆ ಹಾಗೂ ರಾಜಕೀಯ ಸಮಿತಿಯ ಸಂಚಾಲಕ ಸಯ್ಯದ್ ಇಮ್ರನ್ ಲಂಕಾ, ಗಾಜಾ ಕರಾವಳಿಯಲ್ಲಿ ನಡೆಯುತ್ತಿರುವ ನಿರ್ದಿಷ್ಟ ಗುರಿಯಿಲ್ಲದ ಬಾಂಬ್ ದಾಳಿಗಳ ಮೂಲಕ ಅಮಾಯಕ ಜನರ ಹತ್ಯೆಯನ್ನು ನಾವು ಖಂಡಿಸುತ್ತೇವೆ ಎಂದು ಹೇಳಿದ್ದಾರೆ.

ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ನಡುವಿನ ಘರ್ಷಣೆ ತೀವ್ರಗೊಂಡಿರುವುದಕ್ಕೆ ಅವರು ಆತಂಕ ವ್ಯಕ್ತಪಡಿಸಿದ್ದು, ಮಕ್ಕಳು ಸೇರಿದಂತೆ ಫ್ಯಾಲಸ್ತೇನಿಯರ ಬದುಕನ್ನು ಹರಣ ಮಾಡಿದ ಬಲಪಂಥೀಯ ನೇತನ್ಯಾಹು ಸರಕಾರದ ಅಕ್ರಮಗಳ ಫಲಿತಾಂಶವೇ ಈ ಸಂಘರ್ಷ.

ಇಂಗ್ಲೆಂಡ್ ಇಂಗ್ಲಿಷರಿಗೆ ಮತ್ತು ಫ್ರಾನ್ಸ್ ಫ್ರೆಂಚರಿಗೆ ಎಂಬಂತೆ ಪ್ಯಾಲೆಸ್ತೀನ್ ಪ್ಯಾಲೆಸ್ತೀನಿಯರಿಗಾಗಿ ಎಂಬ ಮಹಾತ್ಮ ಗಾಂಧಿಯವರ ಮಾತುಗಳು ಭಾರತದ ನಿಲುವಾಗಿರಬೇಕು. ಅತ್ತ ಇಸ್ರೇಲ್ ಗಾಝಾವನ್ನು ನಾಲ್ಕು ಸುತ್ತಲೂ ಸುತ್ತುವರಿದು ಲಕ್ಷಾಂತರ ಇಸ್ರೇಲಿ ಸೈನಿಕರು ಭೂ ಯುದ್ಧಕ್ಕೂ ತಯಾರಿ ನಡೆಸುತ್ತಿದ್ದಾರೆ. ಫೆಲಸ್ತೀನಿನ ಮತ್ತು ಇಸ್ರೇಲಿನ ನಡುವೆ ತೀವ್ರ ತೆರನಾದ ಯುದ್ಧ ಇದು. ಇದು ಮಧ್ಯಪ್ರಾಚ್ಯದುದ್ದಕ್ಕೂ ಹರಡಬಹುದು. ಅದನ್ನು ತಡೆಯುವುದಕ್ಕೆ ಎಲ್ಲ ಅಂತಾರಾಷ್ಟ್ರೀಯ ಪ್ರಯತ್ನಗಳಿಗೆ ಅನುವು ಮಾಡಿಕೊಡಬೇಕು ಎಂಬ ನಿಲುವು ವ್ಯಕ್ತಪಡಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+