Get Updates
Get notified of breaking news, exclusive insights, and must-see stories!

ಜ್ಞಾನವಾಪಿ ಮಸೀದಿ ಸಮೀಕ್ಷೆ: ಬಾಬರಿ ಮಸೀದಿ ಧ್ವಂಸ ನೆನಪಿಸಿಕೊಂಡ ಅಸಾದುದ್ದೀನ್ ಓವೈಸಿ

ವಾರಣಾಸಿ, ಆಗಸ್ಟ್. 05: ಮಸೀದಿ ಇರುವ ಜ್ಞಾನವಾಪಿ ಸಂಕೀರ್ಣದ ವಿವಾದಾತ್ಮಕ ವೈಜ್ಞಾನಿಕ ಸಮೀಕ್ಷೆ ನಡೆಯುತ್ತಿದ್ದು, ಅಯೋಧ್ಯೆ ತೀರ್ಪಿನಲ್ಲಿ ಪೂಜಾ ಸ್ಥಳಗಳ ಕಾಯ್ದೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನ ಹೇಳಿಕೆಯನ್ನು ಅವಮಾನ ಮಾಡಬಾರದು ಎಂದು ಎಐಎಂಐಎಂ ಸಂಸದ ಅಸಾದುದ್ದೀನ್ ಓವೈಸಿ ಶನಿವಾರ ಹೇಳಿದ್ದಾರೆ.

ಜ್ಞಾನವಾಪಿ ಮಸೀದಿ ಸಮೀಕ್ಷೆ ಈ ಬಗ್ಗೆ ತಮ್ಮ ಕಳವಳವನ್ನು ವ್ಯಕ್ತಪಡಿಸಿ ಟ್ವೀಟ್ ಮಾಡಿರುವ ಅಖಿಲ ಭಾರತ ಮಜಿಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಸಂಸದ ಅಸಾದುದ್ದೀನ್ ಓವೈಸಿ, "ಆರ್ಕಿಯಾಲಾಜಿಕಲ್ ಸರ್ವೆ ಆಫ್ ಇಂಡಿಯಾ (ಎಎಸ್‌ಐ) ನಡೆಸಿದ ಸಮೀಕ್ಷೆಯ ವರದಿಗಳು ಬಹಿರಂಗಗೊಂಡ ನಂತರ ಏನಾಗಲಿದೆ ಎಂಬುದು ಯಾರಿಗೆ ಗೊತ್ತು. "ಡಿಸೆಂಬರ್ 23 ಅಥವಾ ಡಿಸೆಂಬರ್ 6" ಘಟನೆಗಳು ಪುನರಾವರ್ತನೆಯಾಗುವುದಿಲ್ಲ ಎಂಬ ನಂಬಿಕೆ ಒಬ್ಬರದ್ದು" ಎಂದು ಓವೈಸಿ ಹೇಳಿದ್ದಾರೆ.

1949 ರಲ್ಲಿ ಬಾಬರಿ ಮಸೀದಿಯೊಳಗೆ ರಾಮ್ ಲಲ್ಲಾ (ಬಾಲ ರಾಮ) ಯ ವಿಗ್ರಹವು "ಪ್ರತ್ಯಕ್ಷವಾಯಿತು" ಎನ್ನಲಾಗಿತ್ತು. 1992 ರಲ್ಲಿ ಕರಸೇವಕರು ಮಸೀದಿಯನ್ನು ಬಾಬರಿ ಕೆಡವಿದ್ದರು. ಅಸಾದುದ್ದೀನ್ ಓವೈಸಿ ತಮ್ಮ ಟ್ವೀಟ್‌ನಲ್ಲಿ ಉಲ್ಲೇಖಿಸಿರುವುದು ಕೂಡ ಇದೇ ದಿನಾಂಕಗಳನ್ನು. ಇವುಗಳ ಜೊತೆಗೆ ಮತ್ತೆ ಆ ಘಟನೆಗಳು ನಡೆಯದಿರಲಿ ಎಂದಿದ್ದಾರೆ.

Gyanvapi survey: AIMIM MP Asaduddin Owaisi reaction on scientific survey of Gyanvapi

"ಒಮ್ಮೆ ಜ್ಞಾನವಾಪಿ ಎಎಸ್‌ಐ ವರದಿಗಳನ್ನು ಸಾರ್ವಜನಿಕಗೊಳಿಸಿದರೆ, ವಿಷಯಗಳು ಹೇಗೆ ಹೊರಹೊಮ್ಮುತ್ತವೆ ಎಂದು ಯಾರಿಗೆ ತಿಳಿದಿದೆ. ಡಿಸೆಂಬರ್ 23 ಅಥವಾ ಡಿಸೆಂಬರ್ 6 ಪುನರಾವರ್ತನೆಯಾಗುವುದಿಲ್ಲ ಎಂದು ಒಬ್ಬರು ಆಶಿಸುತ್ತಿದ್ದಾರೆ. ಆರಾಧನಾ ಸ್ಥಳಗಳ ಕಾಯಿದೆಯ ಪಾವಿತ್ರ್ಯತೆಗೆ ಸಂಬಂಧಿಸಿದಂತೆ ಅಯೋಧ್ಯೆ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್‌ನ ಅವಲೋಕನವನ್ನು ಅವಮಾನಿಸಬಾರದು. ಸಾವಿರ ಬಾಬರಿಗಳಿಗೆ ತೆರೆ ಬೀಳುವುದಿಲ್ಲ ಎಂಬ ಭರವಸೆಯಿದೆ" ಎಂದು ಟ್ವೀಟ್ ಮಾಡಿದ್ದಾರೆ.

ಕಾಶಿ ವಿಶ್ವನಾಥ ದೇವಾಲಯದ ಪಕ್ಕದಲ್ಲಿರುವ ಮಸೀದಿಯನ್ನು ದೇವಾಲಯದ ಮೇಲೆ ನಿರ್ಮಿಸಲಾಗಿದೆಯೇ ಎಂದು ನಿರ್ಧರಿಸಲು ಭಾರತೀತ ಪುರಾತತ್ವ ಇಲಾಖೆಯ ತಂಡವು ಜ್ಞಾನವಾಪಿ ಸಂಕೀರ್ಣದ ವೈಜ್ಞಾನಿಕ ಸಮೀಕ್ಷೆಯನ್ನು ನಡೆಸುತ್ತಿದೆ. ಮಸೀದಿಯ ವಝುಖಾನಾದಲ್ಲಿ 'ಶಿವಲಿಂಗ'ದ ರಚನೆಯು ಅಸ್ತಿತ್ವದಲ್ಲಿದೆ ಎಂದು ಹಿಂದೂಗಳು ವಾಸಿದುತ್ತಿದ್ದಾರೆ.

Gyanvapi survey: AIMIM MP Asaduddin Owaisi reaction on scientific survey of Gyanvapi

ಈ ಸ್ಥಳದಲ್ಲಿ ಹಿಂದೆ ದೇವಸ್ಥಾನವಿತ್ತು ಮತ್ತು ಮೊಘಲ್ ಚಕ್ರವರ್ತಿ ಔರಂಗಜೇಬನ ಆದೇಶದ ಮೇರೆಗೆ 17 ನೇ ಶತಮಾನದಲ್ಲಿ ಅದನ್ನು ಕೆಡವಲಾಯಿತು ಎಂದು ಹಿಂದೂ ಕಾರ್ಯಕರ್ತರು ಹೇಳುತ್ತಾರೆ. ಸರ್ವೋಚ್ಚ ನ್ಯಾಯಾಲಯವು ಶುಕ್ರವಾರ ಅಲಹಾಬಾದ್ ಹೈಕೋರ್ಟ್ ಆದೇಶವನ್ನು ತಡೆಹಿಡಿಯಲು ನಿರಾಕರಿಸಿದೆ. ಮುಸ್ಲಿಂ ಸಮುದಾಯದವರು ಇದು ಹಿಂದಿನ ಗಾಯಗಳನ್ನು ಪುನಃ ಕೆದಕುತ್ತದೆ ಎಂದು ಹೇಳಿದ್ದಾರೆ.

Gyanvapi survey: AIMIM MP Asaduddin Owaisi reaction on scientific survey of Gyanvapi

ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರ ಪೀಠವು, ಸಮೀಕ್ಷೆಯ ಸಮಯದಲ್ಲಿ ಯಾವುದೇ ಆಕ್ರಮಣಕಾರಿ ಕೃತ್ಯವನ್ನು ನಡೆಸದಂತೆ ಎಎಸ್‌ಐಗೆ ಸೂಚಿಸಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+