₹200 ಕೋಟಿ ದಾನ ಮಾಡಿ ಸನ್ಯಾಸತ್ವ ಸ್ವೀಕರಿಸಿದ ಜೈನ ದಂಪತಿ
ಸನ್ಯಾಸತ್ವ ಎಂದರೆ ಎಲ್ಲವನ್ನೂ ತ್ಯಾಗ ಮಾಡುವ ಮನಸ್ಥಿತಿ. ಗುಜರಾತ್ನ ಶ್ರೀಮಂತ ದಂಪತಿಗಳು ನೂರಾರು ಕೋಟಿ ರೂಪಾಯಿ ಆಸ್ತಿ ಇದ್ದರೂ ಎಲ್ಲವನ್ನೂ ತ್ಯಾಗ ಮಾಡಿ ಈಗ ಸನ್ಯಾಸತ್ವ ಸ್ವೀಕರಿಸಿದ್ದಾರೆ.
ಜೈನ ದಂಪತಿಗಳು ಸುಮಾರು ₹200 ಕೋಟಿ ದೇಣಿಗೆ ನೀಡಿ ಸನ್ಯಾಸ ಸ್ವೀಕರಿಸಿದ್ದಾರೆ. ಇದೀಗ ಮೋಕ್ಷಕ್ಕಾಗಿ ಪ್ರಯಾಣ ಬೆಳೆಸಲು ಮುಂದಾಗಿದ್ದಾರೆ. ಫೆಬ್ರವರಿಯಲ್ಲಿ ನಡೆದ ಸಮಾರಂಭದಲ್ಲಿ ಭಾವೇಶ್ ಭಂಡಾರಿ ಮತ್ತು ಅವರ ಪತ್ನಿ ತಮ್ಮ ಎಲ್ಲಾ ಸಂಪತ್ತನ್ನು ದಾನ ಮಾಡಿದರು ಮತ್ತು ಈ ತಿಂಗಳ ಕೊನೆಯಲ್ಲಿ ನಡೆಯುವ ಸಮಾರಂಭದಲ್ಲಿ ಅಧಿಕೃತವಾಗಿ ಸನ್ಯಾಸತ್ವ ಸ್ವೀಕರಿಸಲಿದ್ದಾರೆ.

2022ರಲ್ಲಿ ಸನ್ಯಾಸತ್ವ ಸ್ವೀಕರಿಸಿದ ತನ್ನ 19 ವರ್ಷದ ಮಗಳು ಮತ್ತು 16 ವರ್ಷದ ಮಗನಂತೆ ಈಗ ಪೋಷಕರು ಕೂಡ ಸನ್ಯಾಸತ್ವ ಸ್ವೀಕರಿಸಲಿದ್ದಾರೆ. ಕಟ್ಟಡ ನಿರ್ಮಾಣ ಉದ್ಯಮದಲ್ಲಿದ್ದ ಹಿಮ್ಮತ್ನಗರದ ಉದ್ಯಮಿ ಇದಕ್ಕಾಗಿ ಕೋಟಿ ಕೋಟಿ ಸಂಪತ್ತನ್ನು ದಾನ ಮಾಡಿದ್ದಾರೆ.
ಎಲ್ಲಾ ಸಂಬಂಧಗಳನ್ನು ಕಡಿದುಕೊಂಡು ಸನ್ಯಾಸತ್ವ
ಏಪ್ರಿಲ್ 22 ರಂದು ಸನ್ಯಾಸತ್ವ ಪ್ರತಿಜ್ಞೆ ತೆಗೆದುಕೊಂಡ ನಂತರ, ದಂಪತಿಗಳು ಎಲ್ಲಾ ಕುಟುಂಬ ಸಂಬಂಧಗಳನ್ನು ಕಡಿದುಕೊಳ್ಳಬೇಕಾಗುತ್ತದೆ ಮತ್ತು ಯಾವುದೇ 'ಭೌತಿಕ ವಸ್ತುಗಳನ್ನು' ಜೊತೆಯಲ್ಲಿ ಇಟ್ಟುಕೊಳ್ಳಲು ಅನುಮತಿ ಇರುವುದಿಲ್ಲ. ಅವರು ಭಾರತದಾದ್ಯಂತ ಬರಿಗಾಲಿನಲ್ಲಿ ನಡೆಯುತ್ತಾರೆ ಮತ್ತು ಭಿಕ್ಷೆಯಿಂದ ಮಾತ್ರ ಮುಂದಿನ ಬದುಕು ಕಳೆಯುತ್ತಾರೆ.
ಸನ್ಯಾಸಿಗಳಾದ ಬಳಿಕ ಕೇವಲ ಎರಡು ಬಿಳಿ ವಸ್ತ್ರಗಳನ್ನು ಹೊಂದಲು ಅನುಮತಿಸಲಾಗುವುದು, ಭಿಕ್ಷೆಗಾಗಿ ಒಂದು ಬಟ್ಟಲು ಮತ್ತು "ರಾಜೋಹರಣ", (ಬಿಳಿ ಪೊರಕೆ ಜೈನ ಸನ್ಯಾಸಿಗಳು ಅವರು ಕುಳಿತುಕೊಳ್ಳುವ ಮೊದಲು ಒಂದು ಪ್ರದೇಶದಿಂದ ಕೀಟಗಳನ್ನು ದೂರ ತಳ್ಳಲು ಬಳಸುತ್ತಾರೆ) ಮಾತ್ರ ಇರುತ್ತದೆ.
ನೂರಾರು ಕೋಟಿ ಸಂಪತ್ತು ಹೊಂದಿದ ಕುಟುಂಬವೊಂದು ಹೀಗೆ ಎಲ್ಲವನ್ನೂ ದಾನ ಮಾಡಿ ಸನ್ಯಾಸತ್ವ ಸ್ವೀಕಾರ ಮಾಡಿರುವುದು ದೇಶಾದ್ಯಂತ ಜನರ ಗಮನ ಸೆಳೆದಿದೆ.
ಭಂಡಾರಿ ದಂಪತಿಗಳು ಇತರ 35 ಮಂದಿಯೊಂದಿಗೆ ನಾಲ್ಕು ಕಿಲೋಮೀಟರ್ಗಳವರೆಗೆ ಮೆರವಣಿಗೆ ನಡೆಸಿದರು, ತಮ್ಮ ಮೊಬೈಲ್ ಫೋನ್ಗಳು ಮತ್ತು ಹವಾನಿಯಂತ್ರಣಗಳು ಸೇರಿದಂತೆ ಎಲ್ಲಾ ಆಸ್ತಿಯನ್ನು ದಾನ ಮಾಡಿದರು.












Click it and Unblock the Notifications