Get Updates
Get notified of breaking news, exclusive insights, and must-see stories!

Governor: ದಕ್ಷಿಣ ಭಾರತದಲ್ಲಿ ರಾಜ್ಯಪಾಲರು & ಸರ್ಕಾರಗಳ ನಡುವೆ ತಿಕ್ಕಾಟ ಬಲು ಜೋರು!

ರಾಜ್ಯಪಾಲರು ಮತ್ತು ರಾಜ್ಯ ಸರ್ಕಾರಗಳ ನಡುವೆ ಭೀಕರ ಕದನ ಆರಂಭವಾಗಿದೆ. ಅದರಲ್ಲೂ ಈ ತಿಕ್ಕಾಟ ದಕ್ಷಿಣ ಭಾರತದಲ್ಲಿ ಹೆಚ್ಚಾಗಿದ್ದು, ಇಂದು ಕರ್ನಾಟಕ ವಿಧಾನಸಭೆಯಲ್ಲಿ ಸಂಭವಿಸಿದ ಘಟನೆ ಸೇರಿದಂತೆ ಕೇರಳ ಮತ್ತು ತಮಿಳುನಾಡು ನೆಲದಲ್ಲೂ ಇದೇ ರೀತಿ ತಿಕ್ಕಾಟ ನಡೆದಿತ್ತು. ಅದರಲ್ಲೂ ಈಗ ಕರ್ನಾಟಕ ವಿಧಾನಸಭೆಯಲ್ಲಿ ನಡೆದಿರುವ ಘಟನೆ ವಿರೋಧ ಪಕ್ಷಗಳು ಆಡಳಿತದಲ್ಲಿ ಇರುವ ರಾಜ್ಯಗಳ ನಾಯಕರನ್ನು ಕೆರಳಿಸಿದೆ, ಹಾಗಾದರೆ ತಮಿಳುನಾಡು ಮತ್ತು ಕೇರಳದಲ್ಲಿ ಏನಾಗಿತ್ತು? ಈ ಬಗ್ಗೆ ಪೂರ್ತಿ ಮಾಹಿತಿ ತಿಳಿಯೋಣ ಬನ್ನಿ.

ದಕ್ಷಿಣ ಭಾರತದ ಪ್ರಮುಖ ರಾಜ್ಯಗಳಾಗಿರುವ ಕರ್ನಾಟಕ, ಕೇರಳ ಮತ್ತು ತಮಿಳುನಾಡಿನ ಅಧಿಕಾರ ಈಗ ವಿರೋಧ ಪಕ್ಷಗಳ ಕೈಯಲ್ಲಿ ಇದೆ. ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ವಿರುದ್ಧ ಸಮರ ಸಾರಿದ್ದಾರೆ. ಇದೇ ವಿಚಾರ ದೊಡ್ಡ ಕಿಚ್ಚು ಹೊತ್ತಿಸುತ್ತಿದ್ದು, ಇಂದು ಕೂಡ ಕರ್ನಾಟಕದಲ್ಲಿ ಹೀಗೆಯೇ ಆಗಿದೆ. ಕರ್ನಾಟಕ ರಾಜ್ಯಪಾಲರಾದ ಥಾವರ್‌ಚಂದ್ ಗೆಹ್ಲೋಟ್ ಅವರು, ಕರ್ನಾಟಕ ಕಾಂಗ್ರೆಸ್ ಸರ್ಕಾರ ರಚಿಸಿದ್ದ ಭಾಷಣದ 11 ಪ್ಯಾರಾಗ್ರಾಫ್‌ ಕೈಬಿಡದಿದ್ದರೆ ವಿಧಾನಸಭೆ ಜಂಟಿ ಅಧಿವೇಶನ ಉದ್ದೇಶಿಸಿ ಮಾತು ಆಡಲ್ಲ ಎಂದು ನಿರಾಕರಿಸಿದರು. ಹಾಗೇ ಇಲ್ಲಿ ಕೇಂದ್ರ ಸರ್ಕಾರದ ಆಡಳಿತದ ವಿರುದ್ಧ ಟೀಕೆಗಳಿವೆ, ಹೀಗಿದ್ದಾಗ ರಾಜ್ಯಪಾಲರು ಭಾಷಣ ನಿರಾಕರಿಸಿದ್ದಾರೆ. ಆದರೆ ಇದು ಕರ್ನಾಟಕದ ಕಥೆ ಮಾತ್ರವಲ್ಲ, ತಮಿಳುನಾಡು & ಕೇರಳದಲ್ಲೂ ಇದೇ ತಿಕ್ಕಾಟ ಜೋರಾಗಿದೆ.

Governors Trigger Political Storm Across Karnataka Kerala and Tamil Nadu

ರಾಜಭವನ ಮತ್ತು ವಿಧಾನಸೌಧ ನಡುವೆ ತಿಕ್ಕಾಟ

ದಕ್ಷಿಣ ಭಾರತದಲ್ಲಿ ಚುನಾಯಿತ ಸರ್ಕಾರಗಳು ಮತ್ತು ರಾಜಭವನದ ನಡುವೆ ಉದ್ವಿಗ್ನತೆ ಭುಗಿಲೆದ್ದಿದೆ. ಕರ್ನಾಟಕ, ಕೇರಳ & ತಮಿಳುನಾಡು ರಾಜ್ಯಪಾಲರು ವಿಧಾನಸಭೆ ಅಧಿವೇಶನದಲ್ಲಿ ತಮ್ಮ ವರ್ತನೆಯ ಮೂಲಕ ರಾಜಕೀಯ ವಿವಾದ ಸೃಷ್ಟಿ ಮಾಡುತ್ತಿದ್ದಾರೆ ಎಂಬ ಆರೋಪ ಮಾಡಲಾಗುತ್ತಿದೆ. ಕರ್ನಾಟಕ ಸರ್ಕಾರ ವಿಬಿ-ಜಿ RAM (ಜಿ) ಕಾಯ್ದೆ ಟೀಕಿಸುವ ಎರಡು ವಾಖ್ಯ ಮಾತ್ರ ತೆಗೆದುಹಾಕಲು ಒಪ್ಪಿಕೊಂಡಿತು. ಆದರೆ ಇದಕ್ಕೆ ಒಪ್ಪದೆ, ಭಾಷಣದಲ್ಲಿ ವಿವಾದಾತ್ಮಕ ಅಂಶ ಇದೆ ಎಂದು ರಾಜ್ಯಪಾಲರು ಭಾಷಣವನ್ನೇ ಮಾಡಲಿಲ್ಲ. ಹೀಗಾಗಿ ಕರ್ನಾಟಕ ಸರ್ಕಾರ ಕಾನೂನು ಹೋರಾಟಕ್ಕೆ ಇದೀಗ ಸಿದ್ಧತೆ ಮಾಡಿಕೊಳ್ಳುತ್ತಿದೆ.

ಅಡ್ವೊಕೇಟ್ ಜನರಲ್ ಶಶಿ ಕಿರಣ್ ಶೆಟ್ಟಿ ನವದೆಹಲಿಗೆ ತೆರಳಿದ್ದಾರೆ ಎಂದು ಮೂಲಗಳು ತಿಳಿಸಿದ್ದು, ಈಗ ರಾಜಭವನ ಮತ್ತು ವಿಧಾನಸೌಧದ ನಡುವೆ ಹೊಸ ತಿಕ್ಕಾಟ ಶುರುವಾಗಿದೆ. ಹೀಗೆ ಕರ್ನಾಟಕ ರಾಜ್ಯ ವಿಧಾನಸಭೆಯಲ್ಲಿ ರಾಜ್ಯಪಾಲರು ಭಾಷಣ ನಿರಾಕರಿಸಿದರೆ, ಕೇರಳ ಮತ್ತು ತಮಿಳುನಾಡು ರಾಜ್ಯದಲ್ಲಿ ರಾಜ್ಯಪಾಲರು ಮಾಡಿದ್ದೇನು? ಕೇರಳ ವಿಧಾನಸಭೆ ಬಜೆಟ್ ಅಧಿವೇಶನದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸರ್ಕಾರ ಹಾಗೂ ರಾಜ್ಯಪಾಲರ ನಡುವೆಯೂ ತಿಕ್ಕಾಟ ನಡೆದಿತ್ತು. ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಸುಮಾರು ಎರಡು ಗಂಟೆಗಳ ಕಾಲ ನೀತಿ ಭಾಷಣವನ್ನು ಓದಿದ್ದರು. ಆದರೆ ಈ ಭಾಷಣದಲ್ಲಿ ಕೆಲವು ಪ್ಯಾರಾಗಳಲ್ಲಿ ರಾಜ್ಯಪಾಲರು ಬದಲಾವಣೆಗಳನ್ನು ಮಾಡಿದ್ದಾರೆ ಎಂಬ ವಿಚಾರವು ದೊಡ್ಡ ಗಲಾಟೆಗೆ ಕಾರಣವಾಗಿತ್ತು.

ಸಭೆಯಿಂದ ಹೊರನಡೆದ ರಾಜ್ಯಪಾಲರು

ಕರ್ನಾಟಕ ಮತ್ತು ಕೇರಳ ರಾಜ್ಯಗಳಲ್ಲಿ ಮಾತ್ರವಲ್ಲದೆ, ನೆರೆಯ ತಮಿಳುನಾಡು ರಾಜ್ಯದಲ್ಲಿ ಕೂಡ ಭಾರಿ ದೊಡ್ಡ ಪ್ರಮಾಣದಲ್ಲಿ ಜಗಳ ಆಗಿದೆ. ತಮಿಳುನಾಡು ವಿಧಾನಸಭೆಯಲ್ಲಿ ರಾಜ್ಯಪಾಲ ಆರ್.ಎನ್. ರವಿ ಅವರು ಸಾಂಪ್ರದಾಯಿಕ ಭಾಷಣವನ್ನು ನಿರಾರಿಸಿದ್ದಾರೆ. ಅಲ್ಲದೆ ತಮಿಳುನಾಡು ರಾಜ್ಯಪಾಲ ಆರ್.ಎನ್. ರವಿ ನಿರಾಕರಿಸಿ ಸದನದಿಂದಲೇ ಹೊರಗೆ ನಡೆದಿದ್ದರು. ರಾಜ್ಯಪಾಲರ ಭಾಷಣದೊಂದಿಗೆ ವರ್ಷದ ಮೊದಲ ವಿಧಾನಸಭಾ ಅಧಿವೇಶನ ಪ್ರಾರಂಭಿಸುವ ಅಭ್ಯಾಸವನ್ನು ತೆಗೆದುಹಾಕಲು ಡಿಎಂಕೆ ಪಕ್ಷವು ಸಾಂವಿಧಾನಿಕ ತಿದ್ದುಪಡಿಗೆ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ಸ್ಟಾಲಿನ್ ಘೋಷಿಸಿದ್ದರು. ಇದೆಲ್ಲವನ್ನೂ ನೋಡುತ್ತಿದ್ದರೆ ಸದ್ಯಕ್ಕೆ ಈ ತಿಕ್ಕಾಟ ಕಡಿಮೆ ಆಗುವ ಲಕ್ಷಣಗಳು ಗೋಚರಿಸುತ್ತಿಲ್ಲ.

Take a Poll

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+