Get Updates
Get notified of breaking news, exclusive insights, and must-see stories!

ಜೈಂಟ್ ಕಿಲ್ಲರ್ ಫರ್ನಾಂಡಿಸ್ ಬಗ್ಗೆ 10 ಅಚ್ಚರಿಯ ಸಂಗತಿ

ಹುಟ್ಟು ಹೋರಾಟಗಾರರಾಗಿ ಜನಿಸಿದ ಜಾರ್ಜ್ ಫರ್ನಾಂಡಿಸ್ ತಮ್ಮ ಬದುಕನ್ನು ಸಾಮಾಜಿಕ ಸಮಾನತೆ ಮತ್ತು ದೌರ್ಜನ್ಯಕ್ಕೊಳಗಾದವರ ದನಿಯಾಗುವ ತುಡಿತದಲ್ಲೇ ಕಳೆದರು.

ದೇಶದ ಆದರ್ಶ ರಾಜಕಾರಣಿಗಳ ಸಾಲಿನಲ್ಲಿ ಅಗ್ರ ಸಾಲಿನಲ್ಲಿ ನಿಲ್ಲುವ ಫರ್ನಾಂಡಿಸ್ ಬದುಕು ಹಲವು ಅಚ್ಚರಿಗಳಿಂದ ಕೂಡಿತ್ತು. ಪ್ರವಾಹಕ್ಕೆ ಅಭಿಮುಖವಾಗಿ ಈಜಿ, ದಡಸೇರುವ ಮನೋಬಲವೇ ಮುಂದೊಮ್ಮೆ ಅವರನ್ನು ದೇಶದ ಅತ್ಯಂತ ಯಶಸ್ವೀ ರಕ್ಷಣಾ ಸಚಿವರನ್ನಾಗಿ ಮಾಡಿತ್ತು.

ಫರ್ನಾಂಡಿಸ್ ಅವರು ತಮ್ಮ 88 ನೇ ವಯಸ್ಸಿನಲ್ಲಿ ಜ.29 ರಂದು ನವದೆಹಲಿಯಲ್ಲಿ ಕೊನೆಯುಸಿರೆಳೆದರು. ಹಲವು ವರ್ಷಗಳಿಂದ ಅಲ್ಜಮೈರ್ ಕಾಯಿಲೆಗೆ ತುತ್ತಾಗಿ ಯಾರನ್ನೂ ಗುರುತಿಸಲಾಗದ ಸ್ಥಿತಿಯಲ್ಲಿದ್ದ ಅವರು ಇಂದಿಲ್ಲ. ಆದರೆ ಅವರ ಸಾವು ರಾಜಕೀಯ, ಸಾಮಾಜಿಕ ವಲಯದಲ್ಲಿ ಸೃಷ್ಟಿಸಿದ ನಿರ್ವಾತ ತುಂಬುವುದಕ್ಕೆ ದೀರ್ಘ ಕಾಲವೇ ಹಿಡಿಯಬಹುದು.

ಫರ್ನಾಂಡಿಸ್ ಬದುಕಿನ 10 ಅಚ್ಚರಿಯ ಸಂಗತಿ ಇಲ್ಲಿದೆ.

ಜೈಂಟ್ ಕಿಲ್ಲರ್

ಜೈಂಟ್ ಕಿಲ್ಲರ್

1. ಮನೆಗೆ ಹಿರಿಮಗನಾಗಿ ಜನಿಸಿದ ಜಾರ್ಜ್ ಫರ್ನಾಂಡಿಸ್, ಶಾಲೆಯನ್ನು ಅರ್ಧಕ್ಕೇ ಬಿಟ್ಟು ಕ್ರೈಸ್ತ ಗುರುವಾಗುತ್ತೇನೆಂದು ಮನೆಬಿಟ್ಟು ಹೋಗಿದ್ದರು!

2. 1967 ರಲ್ಲಿ ಮುಂಬೈ ದಕ್ಷಿಣ ಕ್ಷೇತ್ರದಿಂದ ಕಾಂಗ್ರೆಸ್ ನ ಎಸ್ ಕೆ ಪಾಟೀಲ್ ಅವರನ್ನು ಸೋಲಿಸಿದ ನಂತರ ಅವರನ್ನು 'ಜೈಂಟ್ ಕಿಲ್ಲರ್' ಎಂದು ಕರೆಯಲಾಗುತ್ತಿತ್ತು.

ಎರಡು ವರ್ಷ ಮಾರುವೇಷದಲ್ಲಿದ್ದ ಫರ್ನಾಂಡಿಸ್

ಎರಡು ವರ್ಷ ಮಾರುವೇಷದಲ್ಲಿದ್ದ ಫರ್ನಾಂಡಿಸ್

3. 1974 ರಲ್ಲಿ ಅವರು ಇಪ್ಪತ್ತು ದಿನಗಳ ಕಾಲ ನಡೆಸಿದ ರೈಲ್ವೇ ಮುಷ್ಕರ ಇಡೀ ದೇಶವನ್ನೂ ನಡುಗಿಸಿತ್ತು. ಜನಜೀವನ ಅಸ್ತವ್ಯವಸ್ಥಗೊಳಿಸಿತ್ತು.

4. 1975-1977 ರವರೆಗೆ ಸಿಕ್ಖ್ ವ್ಯಕ್ತಿಯಂತೆಯೇ ಗಡ್ಡ ಬೆಳೆಸಿಕೊಂಡು, ಪೇಟಾ ಧರಿಸಿ ಮಾರುವೇಷದಲ್ಲಿದ್ದರು ಫರ್ನಾಂಡಿಸ್. ನಿಜವಾದ ಗುರುತು ಸಿಕ್ಕರೆ ಜೈಲು ಸೇರಬೇಕಾಗುತ್ತದೆ, ಆಗ ಹೋರಾಟ ಮಾಡುವುದಕ್ಕಾಗುವುದಿಲ್ಲ ಎಂಬುದು ಅವರ ಯೋಚನೆಯಾಗಿತ್ತು.

ಡೈನಮೈಟ್ ಕದ್ದು ಸ್ಫೋಟಿಸುತ್ತಿದ್ದ ಜಾರ್ಜ್!

ಡೈನಮೈಟ್ ಕದ್ದು ಸ್ಫೋಟಿಸುತ್ತಿದ್ದ ಜಾರ್ಜ್!

5. ಇಂದಿರಾ ಗಾಂಧಿ ಅವರು ಭಾಷಣ ಮಾಡುತ್ತಿದ್ದ ಜಾಗಗಳ ಸುತ್ತಮುತ್ತ ಡೈನಮೈಟ್ ಗಳನ್ನು ಕದ್ದು, ಸ್ಫೋಟಿಸಿ ತುರ್ತು ಪರಿಸ್ಥಿತಿಯ ವಿರುದ್ಧ ಹೋರಾಡುತ್ತಿದ್ದರು. ಈ ಸಂದರ್ಭದಲ್ಲಿ ಹಲವು ಬಾರಿ ಜೈಲು ವಾಸ ಅನುಭವಿಸಿದ್ದರು.

6. 1977 ರಲ್ಲಿ ಬಿಹಾರದ ಮುಜಾಫರ್ ನಗರ ಕ್ಷೇತ್ರದಿಂದ ಜೈಲಿನಿಂದ ಸ್ಪರ್ಧಿಸಿದ್ದರು.

ಬಹುರಾಷ್ಟ್ರೀಯ ಕಂಪನಿಗಳಿಗೆ ಬಿಸಿ!

ಬಹುರಾಷ್ಟ್ರೀಯ ಕಂಪನಿಗಳಿಗೆ ಬಿಸಿ!

7. ಬಹುರಾಷ್ಟ್ರೀಯ ಕಂಪನಿಗಳಿಗೆ ಭಾರತ ಹೇರಿದ್ದ ಕೆಲವು ನಿಯಮಗಳನ್ನು ಪಾಲಿಸಲು ಒಲ್ಲೆ ಎಂದ ಕೋಕಾಕೋಲಾ ಮತ್ತು ಐಬಿಎಂ ಗೆ ಬಿಸಿ ಮುಟ್ಟಿಸಿದ್ದರು.

8. ಮಂಗಳೂರಿನಿಂದ-ಮುಂಬೈಗೆ ಸಂಪರ್ಕ ಕಲ್ಪಿಸುವ ಕೊಂಕಣ ರೈಲ್ವೇ ಯೋಜನೆಗೆ ನಾಂದಿ ಹಾಡಿದರು.

ತಾವೇ ಅಡುಗೆ ಮಾಡುತ್ತಿದ್ದರು

ತಾವೇ ಅಡುಗೆ ಮಾಡುತ್ತಿದ್ದರು

9. 1999 ರ ಕಾರ್ಗಿಲ್ ಯುದ್ಧದ ಸಮಯದಲ್ಲಿ ಸೈನಿಕರನ್ನು ಹುರಿದುಂಬಿಸಿ, ಸೂಕ್ತ ನಿರ್ಧಾರಗಳನ್ನು ತೆಗೆದುಕೊಂಡು ಭಾರತ ಗೆಲ್ಲುವಂತೆ ಮಾಡಿದರು.

10. ಕೇಂದ್ರ ಸಚಿವರಾದ ಮೇಲೂ ತಮ್ಮ ಬಟ್ಟೆಯನ್ನು ತಾವೇ ತೊಳೆದುಕೊಂಡು, ತಮ್ಮ ಅಡುಗೆಯನ್ನು ತಾವೇ ಮಾಡಿಕೊಂಡು ಸರಳತೆಗೆ ಹೆಸರಾಗಿದ್ದರು ಫರ್ನಾಂಡಿಸ್.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+