ಭಾರತಕ್ಕೆ ವಕ್ಕರಿಸಿದ ಅಲ್ ಖೈದಾ, ಮೋದಿಗೆ ಆತಂಕ
ನವದೆಹಲಿ, ಸೆ.4: ಅಲ್-ಖೈದಾ ಮುಖಂಡ ಜವಾಹಿರಿ ಭಾರತದಲ್ಲಿ ಅಲ್-ಖೈದಾ ಉಗ್ರ ಸಂಘಟನೆ ಶಾಖೆ ಆರಂಭಿಸಲಾಗಿದೆ. ಜಿಹಾದಿನ ಬಾವುಟ ಹಾರುತ್ತಿರಲಿ ಎಂಬ ವಿಡಿಯೋ ಸಂದೇಶ ನೀಡುತ್ತಿದ್ದಂತೆ ಕೇಂದ್ರ ಗುಪ್ತಚರ ದೇಶಾದ್ಯಂತ ಹೈ ಅಲರ್ಟ್ ಘೋಷಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಜೀವಕ್ಕೆ ಆಪತ್ತು ತರಲು ಸಂಚು ರೂಪಿಸುತ್ತಿರುವ ಉಗ್ರ ಸಂಘಟನೆ ಅಧಿಕೃತವಾಗಿ ಭಾರತದಲ್ಲಿ ಕಾಲಿರಿಸಿದೆ.
ಅಲ್-ಖೈದಾ
ಮುಖಂಡ
ಜವಾಹಿರಿ
ಮಾತನಾಡಿರುವ
55
ನಿಮಿಷದ
ಬೆದರಿಕೆ
ವಿಡಿಯೋದಲ್ಲಿ
ಭಾರತದಲ್ಲಿ
ಉಗ್ರ
ಸಂಘಟನೆಯ
ಶಾಖೆ
ತೆರೆಯುವುದಾಗಿ
ಅಲ್-ಖೈದಾ
ಹೇಳಿದ್ದು,
ಜಗತ್ತಿನ
ಮುಸ್ಲಿಂ
ಹೋರಾಟಗಾರರು
ಒಂದಾಗುವಂತೆ
ಕರೆ
ನೀಡಿದ್ದಾರೆ.
ಅಫ್ಘಾನಿಸ್ತಾನದ
ತಾಲಿಬಾನ್
ಮುಖಂಡ
ಮುಲ್ಲಾ
ಒಮರ್
ಜೊತೆಗಿನ
ಸಖ್ಯವನ್ನು
ಸ್ಮರಿಸಿದ್ದಾರೆ.
ಅದರೆ,
ಜಾಗತಿಕವಾಗಿ
ಬೆಳೆಯುತ್ತಿರುವ
ISIS
ಇಸ್ಲಾಮಿಕ್
ರಾಜ್ಯ
ಉಗ್ರ
ಸಂಘಟನೆಗಿಂತ
ಪ್ರಬಲವಾಗಿ
ಬೆಳೆಯಲು
ಆಲ್
ಖೈದಾ
ಸಿದ್ಧತೆ
ನಡೆಸಿದೆ
ಎಂದಿದ್ದಾರೆ.
ಭಾರತದಲ್ಲಿ ಮೊದಲಿಗೆ ಗುಜರಾತ್, ಉತ್ತರಪ್ರದೇಶ, ಬಿಹಾರ ಮತ್ತು ಮಹಾರಾಷ್ಟ್ರದಲ್ಲಿ ದಾಳಿಗೆ ಅಲ್-ಖೈದಾ ಸಂಚು ರೂಪಿಸಿದೆ ಎಂದು ಗುಪ್ತಚರ ಇಲಾಖೆ ತಿಳಿಸಿದೆ. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಹೈ ಅಲರ್ಟ್ ಘೋಷಿಸಲಾಗಿದೆ.
ಅಲ್ ಖೈದಾದ ಪಾಕಿಸ್ತಾನ ವಿಭಾಗದ ಶಾರಿಯಾ ಸಮಿತಿಯ ಮುಖ್ಯಸ್ಥ ಅಸೀಮ್ ಉಮರ್ ಅವರಿಗೆ ಭಾರತದ ಅಲ್ ಖೈದಾ ಸಂಘಟನೆ ಕೇಂದ್ರ ನಿಭಾಯಿಸುವ ಹೊಣೆ ನೀಡಲಾಗಿದೆ. ಖೈದಾತ್ ಅಲ್ ಜಿಹಾದ್ ಎಂದು ಸಂಘಟನೆಯ ಹೆಸರು ಬದಲಾಯಿಸಲಾಗಿದ್ದು ಉಸ್ತಾದ್ ಉಸಾಮಾ ಮಹಮ್ಮದ್ ಅವರು ಸಂಘಟನೆಯ ವಕ್ತಾರರಾಗಿರುತ್ತಾರೆ.
ಉಪಖಂಡಕ್ಕೆ ಸೇರಿರುವ ಬರ್ಮಾ, ಬಾಂಗ್ಲಾದೇಶ ಸೇರಿದಂತೆ ಬ್ರಿಟಿಷರು ಗುರುತಿಸಿರುವ ಎಲ್ಲಾ ಗಡಿಭಾಗಗಳನ್ನು ತುಂಡರಿಸುವಂತೆ ಕರೆ ನೀಡಲಾಗಿದೆ. ಅಲ್ ಖೈದಾ ಸಂಘಟನೆಗಳು ಪಾಕಿಸ್ತಾನ ಹಾಗೂ ಚೀನಾ ಗಡಿಭಾಗದಲ್ಲಿರುವ ಹಿಮಾಲಯ ಪರ್ವತ ಶ್ರೇಣಿಯಲ್ಲಿ ಸಂಚರಿಸುತ್ತಿರುವ ಬಗ್ಗೆ ಕಾಶ್ಮೀರದಲ್ಲಿರುವ ಗುಪ್ತಚರ ಮೂಲಗಳು ಹೇಳಿವೆ. (ಏಜೆನ್ಸೀಸ್)