ಕನ್ಹಯ್ಯನಿಗೆ ಸವಾಲೆಸೆದ 15 ವರ್ಷದ ಬಾಲಕಿ ಝಾನ್ವಿ
ನವದೆಹಲಿ, ಮಾರ್ಚ್ 06: ಜೆಎನ್ ಯು ವಿದ್ಯಾರ್ಥಿ ಸಂಘಟನೆ ಮುಖ್ಯಸ್ಥ ಕನ್ಹಯ್ಯ ಕುಮಾರ್ ಗೆ ಲೂಧಿಯಾನದ 15 ವರ್ಷದ ಬಾಲಕಿ ಝಾನ್ವಿ ಬೆಹಲ್ ಅವರು ಸವಾಲು ಹಾಕಿದ್ದಾರೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಬಹಿರಂಗ ಚರ್ಚೆಗೆ ಆಹ್ವಾನಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಯೋಜನೆ ಸ್ವಚ್ಛ ಭಾರತ ಅಭಿಯಾನದಲ್ಲಿ ಪಾಲ್ಗೊಂಡು ಸಾಧನೆ ಮಾಡಿರುವ ಝಾನ್ವಿ ಅವರನ್ನು ಗಣರಾಜ್ಯೋತ್ಸವ ದಿನದಂದು ಸನ್ಮಾನಿಸಲಾಗಿತ್ತು.[ಕನ್ಹಯ್ಯಾ ಶೂಟ್ ಮಾಡಿದರೆ 11 ಲಕ್ಷ ನಗದು ಬಹುಮಾನ!]
ಪ್ರಧಾನಿ
ನರೇಂದ್ರ
ಮೋದಿ
ಅವರ
ವಿರುದ್ಧ
ಮಾತನಾಡುವಾಗ
ಪ್ರಜ್ಞೆ
ಇರಲಿ.
ಅವರು
ಜನರು
ಆಯ್ಕೆ
ಮಾಡಿರುವ
ಪ್ರತಿನಿಧಿ.
ಅವರ
ವಿರುದ್ಧ
ಮಾತನಾಡುವುದಕ್ಕೂ
ಮುಂಚೆ
ಎರಡು
ಬಾರಿ
ಯೋಚನೆ
ಮಾಡಿ.
ಮೋದಿ
ಅವರನ್ನು
ನಿಂದಿಸುವುದು
ಸರಿಯಲ್ಲ.
ಅವರ
ಕುರಿತು
ಕೆಟ್ಟಭಾಷೆ
ಬಳಸುವುದು
ಒಳ್ಳೆಯದಲ್ಲ
ಎಂದು
ಝಾನ್ವಿ
ಎಚ್ಚರಿಸಿದ್ದಾರೆ.
ಅಭಿವ್ಯಕ್ತಿ ಸ್ವಾತಂತ್ರ್ಯದ ಕುರಿತು ಮಾತನಾಡುವ ನೀವು ನನ್ನೊಂದಿಗೆ ಚರ್ಚೆಗೆ ಬನ್ನಿ ಎಂದು ಬಹಿರಂಗ ಸವಾಲು ಹಾಕಿದ್ದಾರೆ. "ಸಂವಿಧಾನ ನಮಗೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನೀಡಿದೆ ಎಂದ ಮಾತ್ರಕ್ಕೆ ನಾವು ನಮ್ಮ ಮಿತಿಯನ್ನು ಮೀರಿ ಎಲ್ಲರನ್ನು ನಿಂದಿಸುವುದು ಸರಿಯಲ್ಲ ಎಂದಿದ್ದಾರೆ.[ಜೈಲಿನಿಂದ ಬಿಡುಗಡೆಯಾದ ಕನ್ಹಯ್ಯಾ ಹೇಳಿದ್ದೇನು?]
ನರೇಂದ್ರ ಮೋದಿ ಅವರು ದೇಶದ ಜನತೆಯಿಂದ ಆಯ್ಕೆಯಾದ ಪ್ರಧಾನಿಯಾಗಿದ್ದು, ಅವರನ್ನು ನಿಂದಿಸಿದರೆ ಭಾರತ ದೇಶವನ್ನು ನಿಂದಿಸಿದಂತೆ. ಈ ರೀತಿ ನಿಂದನೆ ಮಾಡುವ ಮೂಲಕ ದೇಶಕ್ಕೆ ಅಪಮಾನ ಮಾಡಿದಂತೆ, ದೇಶದ ವಿರುದ್ಧ ಯಾರೇ ಮಾತನಾಡಿದರೂ ಅದನ್ನು ಸಹಿಸಲು ಸಾಧ್ಯವಿಲ್ಲ ಎಂದು ಝಾನ್ವಿ ಅಭಿಪ್ರಾಯಪಟ್ಟಿದ್ದಾರೆ.
ಝಾನ್ವಿ ಅವರು ಇತ್ತೀಚೆಗೆ ಸಾಮಾಜಿಕ ಜಾಲ ತಾಣಗಳಲ್ಲಿ ಅಶ್ಲೀಲತೆ, ವಯಸ್ಕರ ಚಿತ್ರಗಳನ್ನು ನಿಷೇಧಿಸಬೇಕು ಎಂದು ಹರ್ಯಾಣ ಹೈಕೋರ್ಟಿನಲ್ಲಿ ರಿಟ್ ಪಿಟೀಷನ್ ಹಾಕಿದ್ದಾರೆ.ಝಾನ್ವಿ ಅವರು ರಕ್ಷಾ ಜ್ಯೋತಿ ಫೌಂಡೇಷನ್ ಎಂಬ ಸರ್ಕಾರೇತರ ಸಂಸ್ಥೆಯ ಸಕ್ರಿಯ ಕಾರ್ಯಕರ್ತೆಯಾಗಿದ್ದಾರೆ. (ಐಎಎನ್ಎಸ್)