ಇರಾಕ್ ಗುಡ್ಡದಲ್ಲಿ ಅಯೋಧ್ಯಾಪತಿ ಶ್ರೀರಾಮಚಂದ್ರನ ಚಿತ್ರ
ಲಕ್ನೋ, ಜೂನ್ 26: ಅಯೋಧ್ಯಾ ಶೋಧ ಸಂಸ್ಥಾನದ ಸದಸ್ಯರು ಇತ್ತೀಚೆಗೆ ನಡೆಸಿದ ಅಧ್ಯಯನ ವರದಿಗಳ ಪ್ರಕಾರ, ಇರಾಕಿನ ಗುಡ್ಡವೊಂದರ ಗೋಡೆ ಮೇಲೆ ಸಿಕ್ಕಿರುವ ಚಿತ್ರವು ಶ್ರೀರಾಮಚಂದ್ರನನ್ನು ಹೋಲುತ್ತದೆ ಎಂದು ತಿಳಿದು ಬಂದಿದೆ.
ಸಿರ್ಸಾದ ಈ ಚಿತ್ರ ಸುಮಾರು ಕ್ರಿ. ಪೂ 2000 ರ ಆಸುಪಾಸಿನದ್ದು ಎಂದು ಅಂದಾಜಿಸಲಾಗಿದೆ. ದರ್ಬಾಂದ್ ಇ ಬೆಲುಲುದ ಕಡಿದಾದ ಗುಡ್ಡದಲ್ಲಿ ಕೆತ್ತಿರುವ ಈ ಚಿತ್ರವು ಇರಾಕಿನ ಹೊರೆನ್ ಶೇಖಾನ್ ಪ್ರದೇಶದಲ್ಲಿದೆ ಎಂದು ಟೈಮ್ ಆಫ್ ಇಂಡಿಯಾ ವರದಿ ಮಾಡಿದೆ.

ಚಿತ್ರ ಹೇಗಿದೆ?: ಭಾರತದಲ್ಲಿ ಅತ್ಯಂತ ಜನಪ್ರಿಯವಾಗಿರುವ ಶ್ರೀರಾಮಚಂದ್ರನ ಜನಪ್ರಿಯ ಚಿತ್ರವನ್ನೇ ಹೋಲುತ್ತದೆ. ಬರಿ ಮೈಯಲ್ಲಿರುವ ರಾಜನೊಬ್ಬನ ಕೈಯಲ್ಲಿ ಬಿಲ್ಲು ಹಿಡಿದಿದ್ದಾನೆ, ಬಾಣದ ಬತ್ತಳಿಕೆಯನ್ನು ಹೊಂದಿದ್ದಾನೆ, ಸೊಂಟದ ಪಟ್ಟಿಗೆ ಸಣ್ಣಕತ್ತಿಯನ್ನು ಸಿಕ್ಕಿಸಿಕೊಂಡಿದ್ದಾನೆ. ಈತನ ಪಕ್ಕದಲ್ಲಿ ಕೈ ಮುಗಿದು ಭಕ್ತಿಭಾವದಿಂದ ಕುಳಿತ ಬಲಿಷ್ಠ ವ್ಯಕ್ತಿಯ ಚಿತ್ರವೊಂದಿದೆ, ಈ ಚಿತ್ರವನ್ನು ಹನುಮಾನ್ ಪ್ರತಿನಿಧಿಸುತ್ತದೆ ಎಂದು ಅಯೋಧ್ಯಾ ಶೋಧ ಸಂಸ್ಥಾನ ಸದಸ್ಯರು ಹೇಳಿದ್ದಾರೆ.
ಇರಾಕಿ ಇತಿಹಾಸಕಾರರ ಪ್ರಕಾರ, ಈ ಚಿತ್ರವು ಗುಡ್ಡಗಾಡು ಪ್ರದೇಶದ ಬುಡಕಟ್ಟು ನಾಯಕ ತರ್ದುನ್ನಿ ಅವರದ್ದಾಗಿದೆ. ಬೇರೆಡೆಗಳಲ್ಲೂ ಇಂಥ ಚಿತ್ರಗಳಿದ್ದು, ರಾಜ ಹಾಗೂ ಮೊಣಕಾಲೂರಿ ಕುಳಿತ ಕೈದಿಯನ್ನು ಹೋಲುತ್ತದೆ ಎಂದಿದ್ದಾರೆ.
ಇರಾಕಿನಲ್ಲಿ ಭಾರತದ ರಾಯಭಾರಿ ಪ್ರದೀಪ್ ಸಿಂಗ್ ರಾಜ್ ಪುರೋಹಿತ್ ಅವರ ನೇತೃತ್ವದ ಸಂಶೋಧಕರ ತಂಡವು ಉತ್ತರಪ್ರದೇಶದ ಸಾಂಸ್ಕೃತಿಕ ಇಲಾಖೆಯ ಸದಸ್ಯರು, ಎಬ್ರಿಲ್ ನ ಅಧಿಕಾರಿ, ಸುಲೈಮಾನಿಯಾ ವಿಶ್ವವಿದ್ಯಾಲಯದ ಚಂದ್ರಮೌಳಿ ಕರ್ಣ್, ಕುರ್ದಿಸ್ತಾನದ ರಾಜ್ಯಪಾಲರು ಈ ಸಂಶೋಧನಾ ತಂಡದಲ್ಲಿದ್ದರು.
ಭಾರತ ಹಾಗೂ ಮೆಸೊಪೊಟೋಮಿಯನ್ ಸಂಸ್ಕೃತಿ ನಡುವಿನ ಸಂಬಂಧಕ್ಕೆ ಇಂಥ ಸಂಶೋಧನೆಗಳು ಇಂಬು ನೀಡಲಿವೆ ಎಂದು ಅಯೋಧ್ಯಾ ಶೋಧ ಸಂಸ್ಥಾನದ ನಿರ್ದೇಶಕರಾದ ಯೋಗೇಂದ್ರ ಪ್ರತಾಪ್ ಸಿಂಗ್ ಹೇಳಿದ್ದಾರೆ.
ಕ್ರಿ. ಪೂ 4500 ರಿಂದ 1900 ಅವಧಿಯಲ್ಲಿ ಮೆಸೊಪಟೋಮಿಯಾವನ್ನು ಆಳಿದ ಸುಮೇರಿಯನ್ನರು, ಭಾರತದಿಂದ ವಲಸೆ ಹೋದವರು ಎಂದು ನಂಬಲಾಗಿದೆ. ಹೀಗಾಗಿ, ಸಿಂಧು ಕಣಿವೆ ನಾಗರೀಕತೆಗೂ ಮೆಸೊಪಟೋಮಿಯಾ ನಾಗರೀಕತೆಗೂ ಸಂಬಂಧ ಹುಡುಕುವ ಯತ್ನ ನಡೆದಿದೆ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications