ಆಂಧ್ರದಲ್ಲಿ ಅಪಘಾತ, ನೆಲಮಂಗಲ ಮೂಲದ ಐವರ ಸಾವು
ಅನಂತಪುರ, ಜುಲೈ 23 : ಆಂಧ್ರಪ್ರದೇಶದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ತಿರುಪತಿಗೆ ಹೊರಟಿದ್ದ ಬೆಂಗಳೂರು ಮೂಲದ ಐವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಅಪಘಾತದಲ್ಲಿ 6 ಜನರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಅನಂತಪುರ
ಜಿಲ್ಲೆಯ
ಮುದಿಗುಬ್ಬ
ಮಂಡಲದ
ಸಂಕೇಪಲ್ಲಿ
ಎಂಬಲ್ಲಿ
ಶನಿವಾರ
ಮುಂಜಾನೆ
ಲಾರಿ
ಮತ್ತು
ಟವೇರಾ
ಮುಖಾಮುಖಿ
ಡಿಕ್ಕಿಯಾಗಿವೆ.
ಮಗು
ಸೇರಿದಂತೆ
ಐವರು
ಸ್ಥಳದಲ್ಲಿಯೇ
ಸಾವನ್ನಪ್ಪಿದ್ದಾರೆ.[ಮುಖ್ಯಮಂತ್ರಿ
ಸಾಂತ್ವನ-'ಹರೀಶ್'
ಯೋಜನೆ
ಬಗ್ಗೆ
ತಿಳಿಯಿರಿ]
ಮೃತಪಟ್ಟವರೆಲ್ಲಾ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಮೂಲದವರು. ಟವೇರಾದಲ್ಲಿ ಬೆಂಗಳೂರಿಂದ 11 ಜನರು ತಿರುಪತಿಗೆ ತೆರಳುತ್ತಿದ್ದರು. ಮುದಿಗುಬ್ಬ ಸಮೀಪ ಲಾರಿ ಟವೇರಾಕ್ಕೆ ಡಿಕ್ಕಿ ಹೊಡೆದಿದ್ದು, ಐವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. [ಅಪಘಾತವಾದಾಗ ಜೀವ ಉಳಿಸಲು ನೆರವಾಗಿ]
Also Read : ತಿರುಪತಿಯಲ್ಲಿ ಉರುಳು ಸೇವೆ ಮಾಡಲು ಆಧಾರ್ ಕಡ್ಡಾಯ!
ಅಪಘಾತದಲ್ಲಿ 6 ಜನರು ಗಾಯಗೊಂಡಿದ್ದು, ಅನಂತಪುರದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ಹೇಳಿದ್ದಾರೆ. ಅಪಘಾತದ ಬಳಿಕ ಲಾರಿ ಚಾಲಕ ಪರಾರಿಯಾಗಿದ್ದು, ಆತನಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಲಾರಿ ಚಾಲಕ ಪಾನಮತ್ತನಾಗಿದ್ದ ಎಂದು ಶಂಕಿಸಲಾಗಿದೆ.