ಮೊದಲ ಬಾರಿಗೆ ಕೇರಳ ಹೈಕೂರ್ಟ್‌ನಿಂದ ಯುಟ್ಯೂಬ್‌ನಲ್ಲಿ ಲೈವ್ ಸ್ಟ್ರೀಮ್‌

ತಿರುವನಂತಪುರಂ, ಡಿಸೆಂಬರ್‌ 4: ಕೇರಳ ಹೈಕೋರ್ಟ್ ಶನಿವಾರ ಮೊಟ್ಟಮೊದಲ ಬಾರಿಗೆ ಯೂಟ್ಯೂಬ್‌ನಲ್ಲಿ ತನ್ನ ವಿಚಾರಣೆಗಳನ್ನು ಲೈವ್-ಸ್ಟ್ರೀಮ್ ಮಾಡಿದೆ.

ಶಬರಿಮಲೆ ಮತ್ತು ಮಲಿಕಪ್ಪುರಂ ದೇವಾಲಯಗಳ ಮುಖ್ಯ ಅರ್ಚಕರ ಹುದ್ದೆಗೆ ಅರ್ಜಿ ಆಹ್ವಾನಿಸಿ ತಿರುವಾಂಕೂರು ದೇವಸ್ವಂ ಮಂಡಳಿ ಹೊರಡಿಸಿರುವ ಅಧಿಸೂಚನೆಯ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆಗೆ ನ್ಯಾಯಾಲಯವು ಶನಿವಾರ ವಿಶೇಷ ಸಭೆ ನಡೆಸಿತು. ಕೇರಳ ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶರ ಮುಂದೆ ಪ್ರಕರಣದ ಅರ್ಜಿದಾರರಲ್ಲಿ ಒಬ್ಬರಾದ ಸಿಜಿತ್ ಟಿಎಲ್ ಮಾಡಿದ ಮನವಿಯ ನಂತರ ಈ ಕ್ರಮ ಕೈಗೊಳ್ಳಲಾಗಿದೆ.

ತಿರುವಾಂಕೂರು ದೇವಸ್ವಂ ಬೋರ್ಡ್ ಹೊರಡಿಸಿದ ಅಧಿಸೂಚನೆಯನ್ನು ಅರ್ಜಿದಾರರು ಸಲ್ಲಿಸಿದ ರಿಟ್ ಅರ್ಜಿಯಲ್ಲಿ ಪ್ರಶ್ನಿಸಲಾಗಿದೆ. ಇದು ಭಾರತದ ಸಂವಿಧಾನದ 14, 15 (1) ಮತ್ತು 16 (2) ಪರಿಚ್ಛೇದಗಳ ಅಡಿಯಲ್ಲಿ ಬರುವ ಮೂಲಭೂತ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ಹೇಳಿದೆ. ನ್ಯಾಯವಾದಿ ಟಿ.ಆರ್.ರಾಜೇಶ್ ಅವರ ಮೂಲಕ ರಿಟ್ ಅರ್ಜಿ ಸಲ್ಲಿಸಲಾಗಿದೆ.

First time live stream from Kerala High Court on YouTube

ಮುಂದಿನ ವಿಚಾರಣೆಗಾಗಿ ನ್ಯಾಯಾಲಯವು ಡಿಸೆಂಬರ್ 17ಕ್ಕೆ ಪ್ರಕರಣವನ್ನು ಮುಂದೂಡಿದೆ. ಗಮನಾರ್ಹವಾಗಿ, ಇದು ವಿಶೇಷ ಸಿಟ್ಟಿಂಗ್ ಆಗಿರುತ್ತದೆ. ಅರ್ಜಿದಾರರ ಕೋರಿಕೆಯಂತೆ ಯೂಟ್ಯೂಬ್‌ನಲ್ಲಿ ಲೈವ್ ಸ್ಟ್ರೀಮ್ ಮಾಡಲಾಗುತ್ತದೆ. ಶಬರಿಮಲೆ 'ಮೇಲ್ಸಂತಿ' (ಮುಖ್ಯ ಅರ್ಚಕ) ನೇಮಕದಲ್ಲಿ ಕಳೆದ ಕೆಲವು ತಿಂಗಳುಗಳಿಂದ ತಾರತಮ್ಯ ಮತ್ತು ಜಾತಿವಾದದ ಆರೋಪದ ವಿವಾದಗಳು ಕೇರಳದಲ್ಲಿ ಭುಗಿಲೆದ್ದಿವೆ. ಕೇರಳ ಹೈಕೋರ್ಟ್ ಶನಿವಾರ ದೇವಸ್ವಂ ಮಂಡಳಿಯ ಅಧಿಸೂಚನೆಯನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿಗಳ ವಿಚಾರಣೆಯನ್ನು ಆಲಿಸಿದೆ. ಶಬರಿಮಲೆಯ ಮೇಲ್ಸಂತಿಯಾಗಿ ನೇಮಕಗೊಳ್ಳಲು ಮಲಯಾಳ ಬ್ರಾಹ್ಮಣರಿಂದ ಮಾತ್ರ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ನ್ಯಾಯಮೂರ್ತಿ ಅನಿಲ್ ಕೆ. ನರೇಂದ್ರನ್ ಮತ್ತು ನ್ಯಾಯಮೂರ್ತಿ ಪಿಜಿ ಅಜಿತ್‌ಕುಮಾರ್ ಅವರನ್ನೊಳಗೊಂಡ ಕೇರಳ ಹೈಕೋರ್ಟ್‌ನ ವಿಭಾಗೀಯ ಪೀಠವು ವಿಶೇಷ ಸಭೆಯಲ್ಲಿ ಅರ್ಜಿಗಳನ್ನು ಆಲಿಸಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+