Get Updates
Get notified of breaking news, exclusive insights, and must-see stories!

ದೆಹಲಿ-ಚಂಡೀಗಢ ಹೆದ್ದಾರಿಯಲ್ಲಿ ಮುಂದುವರಿದ ರೈತರ ಧರಣಿ: ಪರ್ಯಾಯ ಮಾರ್ಗಗಳು ಇಲ್ಲಿವೆ

ನವದೆಹಲಿ, ಜೂನ್. 13: ಸೂರ್ಯಕಾಂತಿ ಬೀಜಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ನೀಡಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟು ರೈತರು ದೆಹಲಿಯಿಂದ ಚಂಡೀಗಢಕ್ಕೆ ಸಂಪರ್ಕ ಕಲ್ಪಿಸುವ ಹೆದ್ದಾರಿಯನ್ನು ಹರಿಯಾಣದ ಪಿಪ್ಲಿ ಬಳಿ ಎರಡನೇ ದಿನವೂ ಬಂದ್ ಮಾಡಿದ್ದಾರೆ. ಜಿಲ್ಲಾಡಳಿತದೊಂದಿಗೆ ಎರಡು ಸುತ್ತಿನ ಮಾತುಕತೆ ನಡೆಸಿದರೂ ಯಾವುದೇ ಫಲ ಸಿಗದ ಹಿನ್ನೆಲೆಯಲ್ಲಿ ಪ್ರತಿಭಟನಾ ನಿರತ ರೈತರು ಇಂದು ಸಭೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ.

ಮಂಗಳವಾರ ಬೆಳಗ್ಗೆ ಹರ್ಯಾಣದ ಕುರುಕ್ಷೇತ್ರದಲ್ಲಿ ಸೂರ್ಯಕಾಂತಿ ಬೀಜಗಳ ಮೇಲಿನ ಕನಿಷ್ಠ ಬೆಂಬಲ ಬೆಲೆ ಬೇಡಿಕೆಯ ಕುರಿತು ರೈತರು ಮತ್ತೆ ಪ್ರತಿಭಟನಾ ಸ್ಥಳದಲ್ಲಿ ಜಮಾಯಿಸಿದ್ದರು. ಕುರುಕ್ಷೇತ್ರದಲ್ಲಿ ಪ್ರತಿಭಟನಾ ನಿರತ ರೈತರ ರಸ್ತೆ ತಡೆ ಮುಂದುವರಿದಾಗ ರೈತ ಮುಖಂಡ ರಾಕೇಶ್ ಟಿಕಾಯತ್ ಮಾತನಾಡಿ, ''ಕೇಂದ್ರ ಸರಕಾರವು ಭರವಸೆ ನೀಡಿದ ಸೂರ್ಯಕಾಂತಿ ಬೀಜಗಳನ್ನು ಎಂಎಸ್‌ಪಿಯಲ್ಲಿ ಖರೀದಿಸಿ ಮತ್ತು ಬಂಧಿತ ರೈತರನ್ನು ಬಿಡುಗಡೆ ಮಾಡಬೇಕು ಎಂದು ಇಲ್ಲಿನ ರೈತರು ಎರಡು ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ" ಎಂದಿದ್ದಾರೆ.

Farmers continue sitin Delhi Chandigarh NH-44 blocked, alternative routes here

ಸ್ಥಳೀಯ ರೈತರು ಯಾವುದೇ ನಿರ್ಧಾರ ಕೈಗೊಂಡರೂ ಬೆಂಬಲಿಸುವುದಾಗಿ ರಾಕೇಶ್ ಟಿಕಾಯತ್, ಬಲ್ಬೀರ್ ಸಿಂಗ್ ರಾಜೇವಾಲ್ ಸೇರಿದಂತೆ ರೈತ ಮುಖಂಡರು ವೇದಿಕೆಯಿಂದಲೇ ಘೋಷಿಸಿದ್ದರು. ಪ್ರತಿಭಟನೆಯ ದೃಷ್ಟಿಯಿಂದ ದೆಹಲಿಯನ್ನು ಉತ್ತರ ಭಾರತದ ರಾಜ್ಯಗಳೊಂದಿಗೆ ಸಂಪರ್ಕಿಸುವ ಈ ಪ್ರಮುಖ ಹೆದ್ದಾರಿಯಲ್ಲಿ ಪರ್ಯಾಯ ಮಾರ್ಗಗಳನ್ನು ನೀಡಲಾಗಿದೆ.

ಈ ಹೆದ್ದಾರಿಯಲ್ಲಿ ಪ್ರಯಾಣಿಸುವಾಗ ಮಾರ್ಗಗಳನ್ನು ಗಮನಿಸಿ

* ಚಂಡೀಗಢ ಅಥವಾ ಅಮೃತಸರದಿಂದ ಸಂಚಾರವನ್ನು ಸಾಧೋಪುರದಲ್ಲಿ NH-152 (ಚಂಡೀಗಢ-ಹಿಸಾರ್) ಗೆ ತಿರುಗಿಸಲಾಗುತ್ತಿದೆ.

* ಪ್ರಯಾಣಿಕರು ಇಸ್ಮಾಯಿಲಾಬಾದ್, ಕರ್ನಾಲ್, ಮತ್ತು NH-44 ಮೂಲಕ ಪ್ರಯಾಣಿಸಬಹುದು ಅಥವಾ ಅಂಬಾಲಾ ಕ್ಯಾಂಟ್ ಬಸ್ ನಿಲ್ದಾಣದಿಂದ ತಿರುಗಲು ಆಯ್ಕೆ ಮಾಡಬಹುದು.

* ದೆಹಲಿಯಿಂದ ಸಂಚಾರಕ್ಕೆ ಮೂರು ಪರ್ಯಾಯ ಮಾರ್ಗಗಳನ್ನು ಅಧಿಕಾರಿಗಳು ನಿಯೋಜಿಸಿದ್ದಾರೆ.

* ಪ್ರಯಾಣಿಕರು NH-44 ನಲ್ಲಿ ಕರ್ನಾಲ್‌ನಿಂದ ಇಂದ್ರಿ ರಸ್ತೆಗೆ ತಿರುಗಬಹುದು, ಲಾಡ್ವಾ, ಬಾಬೈನ್, ಶಹಬಾದ್ ಮೂಲಕ ಪ್ರಯಾಣಿಸಬಹುದು ಮತ್ತು ತಮ್ಮ ಮುಂದಿನ ಗಮ್ಯಸ್ಥಾನಕ್ಕಾಗಿ NH-44 ಅನ್ನು ತೆಗೆದುಕೊಳ್ಳಬಹುದು.

* ಇನ್ನೊಂದು ಆಯ್ಕೆಯೆಂದರೆ ಲಾಡ್ವಾ ಚೌಕ್‌ನಿಂದ ಬಲಕ್ಕೆ ತಿರುಗಿ, ರಾಡೌರ್ ಮೂಲಕ ಪ್ರಯಾಣಿಸಿ, ಮತ್ತು NH-344 (ಸಹಾರನ್‌ಪುರ-ಪಂಚಕುಲ) ತೆಗೆದುಕೊಳ್ಳುವುದು.

* ಪ್ರಯಾಣಿಕರು ಕರ್ನಾಲ್‌ನ ನಿಲೋಖೇರಿಯನ್ನು ತಲುಪಬಹುದು, ಕೌಲ್‌ಗೆ ಧಂಡ್ ರಸ್ತೆಯನ್ನು ತೆಗೆದುಕೊಳ್ಳಬಹುದು ಮತ್ತು ಅಂಬಾಲಾ ಮತ್ತು ಅದರಾಚೆಗೆ NH-152D ಮೂಲಕ ಪ್ರಯಾಣಿಸಬಹುದು.

* ಕುರುಕ್ಷೇತ್ರದಲ್ಲಿನ ಸ್ಥಳೀಯ ಸಂಚಾರವು ಸೆಕ್ಟರ್ 2/3 ರಲ್ಲಿ ಬ್ರಹ್ಮಸರೋವರ ಮತ್ತು ಕುರುಕ್ಷೇತ್ರ ವಿಶ್ವವಿದ್ಯಾನಿಲಯದ ಗೇಟ್ ಸಂಖ್ಯೆ 3 ಮೂಲಕ ಪ್ರಯಾಣಿಸಲು ಮಾರ್ಗ ಹೊಂದಿದ್ದು, ಬಳಿಕ NH-152D ಅನ್ನು ತೆಗೆದುಕೊಳ್ಳಬಹುದು.

* ಚಂಡೀಗಢದಿಂದ ದೆಹಲಿಗೆ ಪ್ರಯಾಣಿಸುವ ಪ್ರಯಾಣಿಕರು ಅಮನ್ ಹೋಟೆಲ್ ಮೇಲ್ಸೇತುವೆಯಲ್ಲಿ ಹೋಗದೆ, ಫ್ಲೈಓವರ್ ಕೆಳಗೆ ಎಡಕ್ಕೆ ತಿರುಗಬೇಕು.

* ದೆಹಲಿಗೆ NH-44 ಅನ್ನು ತೆಗೆದುಕೊಳ್ಳಲು ದೋಸರ್ಕಾ, ಅಧೋಯಾ, ಬಾಬೈನ್, ಲಾಡ್ವಾ, ಇಂದ್ರಿ ಮತ್ತು ಕರ್ನಾಲ್ ಮೂಲಕ ಪ್ರಯಾಣಿಸಬಹುದು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+