ಭಾರತದಿಂದ ಹೈಡ್ರೋಕ್ಸಿ ಕ್ಲೋರೊಕ್ವಿನ್ ಔಷಧಿ ರಫ್ತು ನಿರ್ಬಂಧ
ನವದೆಹಲಿ, ಜೂನ್.18: ಜಗತ್ತಿಗೆ ಜಗತ್ತು ಕೊರೊನಾವೈರಸ್ ಸೋಂಕಿನಿಂದ ಕಂಗೆಟ್ಟು ಹೋಗಿದ್ದ ಸಂದರ್ಭದಲ್ಲಿ ವಿಶ್ವದ ಎದುರಿಗೆ ರಾಮಬಾಣದಂತೆ ಕಂಡಿದ್ದೇ ಮಲೇರಿಯಾಗೆ ಬಳಸುವ ಹೈಡ್ರೋಕ್ಸಿ ಕ್ಲೋರೊಕ್ವಿನ್ ಔಷಧಿ. ಇದೇ ಔಷಧಿಯನ್ನು ರಫ್ತು ಮಾಡದಿರುವುದಕ್ಕೆ ಭಾರತ ತೀರ್ಮಾನಿಸಿದೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದಿಂದ ಮಲೇರಿಯಾಗೆ ಬಳಸುವ ಹೈಡ್ರೋಕ್ಸಿ ಕ್ಲೋರೊಕ್ವಿನ್ ಔಷಧಿಯನ್ನು ರಫ್ತು ಮಾಡುವುದನ್ನು ತತ್ ಕ್ಷಣದಿಂದಲೇ ಜಾರಿಗೆ ಬರುವಂತೆ ರದ್ದುಗೊಳಿಸಲಾಗಿದೆ. ಈ ಹಿಂದೆ ಕಳೆದ ಮಾರ್ಚ್.24ರಂದು ಕೊರೊನಾವೈರಸ್ ಹರಡುವಿಕೆ ಹಿನ್ನೆಲೆ ಮೊದಲ ಬಾರಿಗೆ ಹೈಡ್ರೋಕ್ಸಿ ಕ್ಲೋರೊಕ್ವಿನ್ ರಫ್ತಿಗೆ ನಿರ್ಬಂಧ ವಿಧಿಸಲಾಗಿತ್ತು.
ಸಕ್ರಿಯ ಔಷಧಿ ಪದಾರ್ಥಗಳ ರಫ್ತು ನೀತಿಯನ್ನು ತಕ್ಷಣದಿಂದಲೇ ಸಡಿಲಗೊಳಿಸಲಾಗಿದೆ. ಹೈಡ್ರಾಕ್ಸಿಕ್ಲೋರೋಕ್ವಿನ್ ಸಕ್ರಿಯ ಷಧೀಯ ಪದಾರ್ಥಗಳು(ಎಪಿಐ) ರಫ್ತು ನೀತಿ ಮತ್ತು ಅದರ ಸೂತ್ರೀಕರಣಗಳನ್ನು ತಕ್ಷಣದಿಂದ ಜಾರಿಗೆ ತರಲು ನಿಷೇಧಿಸಲಾಗಿದೆ "ಎಂದು ವಿದೇಶಾಂಗ ವ್ಯಾಪಾರ ನಿರ್ದೇಶನಾಲಯ (ಡಿಎಫ್ ಎಫ್ಟಿ) ಅಧಿಸೂಚನೆಯಲ್ಲಿ ತಿಳಿಸಿದೆ.

ಕೊರೊನಾವೈರಸ್ ಚಿಕಿತ್ಸೆಗೆ ಹೈಡ್ರೋಕ್ಸಿ ಕ್ಲೋರೊಕ್ವಿನ್ ಬಳಕೆ:
ಭಾರತದಲ್ಲೇ ಅತಿಹೆಚ್ಚು ಉತ್ಪಾದನೆಯಾಗುವ ಹೈಡ್ರೋಕ್ಸಿ ಕ್ಲೋರೊಕ್ವಿನ್ ಔಷಧಿಯನ್ನು ಅಸಲಿಗೆ ಮಲೇರಿಯಾ ರೋಗಿಗಳಿಗೆ ಚಿಕಿತ್ಸೆ ನೀಡುವುದಕ್ಕಾಗಿ ಬಳಕೆ ಮಾಡಲಾಗುತ್ತದೆ. ಆದರೆ ವಿಶ್ವವನ್ನು ಕೊರೊನಾವೈರಸ್ ಕಾಡುತ್ತಿರುವ ಆರಂಭಿಕ ಹಂತದಲ್ಲಿ ಹೈಡ್ರೋಕ್ಸಿ ಕ್ಲೋರೊಕ್ವಿನ್ ಔಷಧಿಯನ್ನೇ ಸೋಂಕಿತರ ಮೇಲೆ ಪ್ರಯೋಗಿಸಲು ತೀರ್ಮಾನಿಸಲಾಗಿತ್ತು. ಗಂಭೀರ ಸ್ಥಿತಿಯಲ್ಲಿರುವ ಹಲವು ಕೊವಿಡ್-19 ಸೋಂಕಿತರಿಗೆ ಇದೇ ಹೈಡ್ರೋಕ್ಸಿ ಕ್ಲೋರೊಕ್ವಿನ್ ಔಷಧಿಯನ್ನು ನೀಡಲಾಗುತ್ತಿತ್ತು. ಮೊದಮೊದಲು ಹೈಡ್ರೋಕ್ಸಿ ಕ್ಲೋರೊಕ್ವಿನ್ ಔಷಧಿಗಾಗಿ ಭಾರತ ಬೆನ್ನು ಬಿದ್ದ ಅಮೆರಿಕಾ ನಂತರದಲ್ಲಿ ಈ ಔಷಧಿಯಿಂದ ಅಡ್ಡ ಪರಿಣಾಮಗಳು ಆಗುತ್ತಿವೆ. ಹೀಗಾಗಿ ಹೈಡ್ರೋಕ್ಸಿ ಕ್ಲೋರೊಕ್ವಿನ್ ಔಷಧಿಯನ್ನು ಕೊರೊನಾವೈರಸ್ ಸೋಂಕಿತರ ಚಿಕಿತ್ಸೆಗೆ ಬಳಸಲು ಆಗುವುದಿಲ್ಲ ಎಂದು ತಿಳಿಸಿತ್ತು.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications