Get Updates
Get notified of breaking news, exclusive insights, and must-see stories!

ರೈತರ ಧರಣಿ ಕುರಿತು ಹಂಚಿಕೊಂಡರೆ ಟ್ವಿಟರ್‌ ಖಾತೆಗೆ ನಿರ್ಬಂಧ: ಇದು ಚಿಕ್ಕ ಮಕ್ಕಳಿಗೂ ತಿಳಿದಿತ್ತು ಎಂದ ರಾಕೇಶ್ ಟಿಕಾಯತ್‌

ಕುರುಕ್ಷೇತ್ರ, ಜೂನ್‌ 13: ಕೃಷಿ ಕಾನೂನುಗಳ ವಿರುದ್ಧ ರೈತರ ಧರಣಿಯನ್ನು ಎತ್ತಿ ತೋರಿಸಿರುವ ಅನೇಕ ಟ್ವಿಟರ್ ಖಾತೆಗಳನ್ನು ನಿರ್ಬಂಧಿಸಲಾಗಿದೆ ಎಂದು ರೈತ ನಾಯಕ ರಾಕೇಶ್ ಟಿಕಾಯತ್‌ ಮಂಗಳವಾರ ಆರೋಪಿಸಿದ್ದಾರೆ. ಮಾಜಿ ಟ್ವಿಟರ್ ಸಿಇಒ ಜಾಕ್ ಡೋರ್ಸಿ ಅವರು ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ ಹಿನ್ನೆಲೆಯಲ್ಲಿ ಟಿಕಾಯತ್‌ ಮಾತನಾಡಿದ್ದಾರೆ.

ಖಾತೆಗಳನ್ನು ನಿರ್ಬಂಧಿಸುವ ಆದೇಶಗಳನ್ನು ಅನುಸರಿಸದಿದ್ದರೆ ಟ್ವಿಟರ್‌ ಅನ್ನು ಸ್ಥಗಿತಗೊಳಿಸುವುದಾಗಿ ಭಾರತ ಸರ್ಕಾರ ಬೆದರಿಕೆ ಹಾಕಿತ್ತು ಎಂದು ಡೊರ್ಸೆ ಹೇಳಿದ್ದಾರೆ.

Ex Twitter CEO: What did Rakesh Tikait say on Jack Dorsey claims on Indian Govt

ಕೃಷಿ ಕಾನೂನುಗಳ ವಿರುದ್ಧ ಆಂದೋಲನದ ನೇತೃತ್ವ ವಹಿಸಿದ್ದ ಪ್ರಮುಖ ರೈತ ಮುಖಂಡರಲ್ಲಿ ಒಬ್ಬರಾದ ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ಮುಖಂಡ ಟಿಕಾಯತ್‌ ಅವರು, ಟ್ವಿಟರ್‌ ಮೇಲೆ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಒತ್ತಡವಿದೆ ಎಂದು ಆರೋಪಿಸಿದರು.

ರೈತರನ್ನು ಪ್ರತಿಭಟನೆಯನ್ನು ಎತ್ತಿ ತೋರಿಸುವ ಖಾತೆಗಳನ್ನು ನಿರ್ಬಂಧಿಸಬೇಕು ಎಂಬುದಾಗಿ ಅವರು ( ಕೇಂದ್ರ ಸರ್ಕಾರ ) ವಿನಂತಿಸುತ್ತಿದ್ದರು ಎಂದು ಟಿಕಾಯತ್ ಆರೋಪಿಸಿದ್ದಾರೆ.

ಕೇಂದ್ರವು ಆರೋಪಗಳನ್ನು ತಳ್ಳಿಹಾಕಿದೆ, ಡಾರ್ಸೆ ಅವರ ಟ್ವಿಟರ್ ಆಡಳಿತವು ಭಾರತೀಯ ಕಾನೂನಿನ ಸಾರ್ವಭೌಮತ್ವವನ್ನು ಒಪ್ಪಿಕೊಳ್ಳುವಲ್ಲಿ ಹಿಂದೇಟು ಹಾಕಿತ್ತು ಎಂದು ಹೇಳಿದೆ.

Ex Twitter CEO: What did Rakesh Tikait say on Jack Dorsey claims on Indian Govt

ಈ ವಿಚಾರದ ಕುರಿತು ಪ್ರಶ್ನೆಗಳಿಗೆ ಉತ್ತರಿಸಿದ ಸಂಯುಕ್ತ ಕಿಸಾನ್ ಮೋರ್ಚಾದ ಹಿರಿಯ ನಾಯಕ ಟಿಕಾಯತ್‌ ಅವರು, 'ರೈತರ ವ್ಯಾಪ್ತಿಯನ್ನು ಕಡಿಮೆ ಮಾಡಲು ಸರ್ಕಾರದಿಂದ ಒತ್ತಡ ಇತ್ತು. ಹೀಗಾಗಿಯೇ ಅವರು ಆಂದೋಲನವನ್ನು ಕೊನೆಗೊಳಿಸುವಲ್ಲಿ ಮುಂದಾಗಿದ್ದರು' ಎಂದು ಅವರು ಹೇಳಿದರು.

ಮೋದಿ ಸರ್ಕಾರವು ರೈತರು ಮತ್ತು ರೈತ ಚಳವಳಿಯ ಖಾತೆಗಳನ್ನು ನಿರ್ಬಂಧಿಸಲು ಟ್ವಿಟರ್ ಅನ್ನು ಒತ್ತಾಯಿಸಿದೆಯೇ ಎಂದು ಕೇಳಿದಾಗ, ಆಂದೋಲನವನ್ನು ಹೈಲೈಟ್ ಮಾಡಿದ ಅನೇಕ ಖಾತೆಗಳನ್ನು ನಿರ್ಬಂಧಿಸಲಾಗಿದೆ ಎಂದು ಟಿಕಾಯತ್‌ ತಿಳಿಸಿದರು.

ರೈತರ ಆಂದೋಲನವನ್ನು ಎತ್ತಿ ತೋರಿಸಿದರೆ ಖಾತೆಗಳನ್ನು ನಿರ್ಬಂಧಿಸಲಾಗುತ್ತದೆ ಎಂಬುದು ಸಣ್ಣ ಮಕ್ಕಳಿಗೂ ತಿಳಿದಿತ್ತು ಎಂದು ಅವರು ಆರೋಪಿಸಿದರು. ಈ ಖಾತೆಗಳಲ್ಲಿ ಹೆಚ್ಚಿನವು ಇನ್ನೂ ಮುಚ್ಚಲ್ಪಟ್ಟಿವೆ ಎಂದು ಅವರು ಆರೋಪಿಸಿದರು.

ಬಿಜೆಪಿ ಸರ್ಕಾರ ತನ್ನ ಆದೇಶಗಳನ್ನು ವಿರೋಧಿಸುವುದನ್ನು ಸಹಿಸುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.

2021 ರಲ್ಲಿ ಟ್ವಿಟರ್ ಸಿಇಒ ಹುದ್ದೆಗೆ ರಾಜೀನಾಮೆ ನೀಡಿದ ಡಾರ್ಸೆ ಅವರು ಸೋಮವಾರ ಯೂಟ್ಯೂಬ್ ಸುದ್ದಿ ಕಾರ್ಯಕ್ರಮ ಬ್ರೇಕಿಂಗ್ ಪಾಯಿಂಟ್ಸ್‌ಗೆ ನೀಡಿದ ಸಂದರ್ಶನದಲ್ಲಿ ಗಂಭೀರ ಆರೋಪ ಮಾಡಿದ್ದಾರೆ.

2020 ರಲ್ಲಿ ಹೊಸ ಕಾನೂನುಗಳ ವಿರುದ್ಧ ರೈತರ ಪ್ರತಿಭಟನೆಯ ಬಗ್ಗೆ ಸರ್ಕಾರವನ್ನು ಟೀಕಿಸುವ ಪೋಸ್ಟ್‌ಗಳನ್ನು ತೆಗೆದುಹಾಕುವ ಮತ್ತು ಖಾತೆಗಳನ್ನು ನಿರ್ಬಂಧಿಸುವ ವಿನಂತಿಗಳನ್ನು ಅನುಸರಿಸದಿದ್ದಲ್ಲಿ ಭಾರತ ಸರ್ಕಾರವು ಮುಚ್ಚುವ ಬೆದರಿಕೆ ಮತ್ತು ಉದ್ಯೋಗಿಗಳ ಮೇಲೆ ದಾಳಿ ಮಾಡುವ ಬೆದರಿಕೆ ಹಾಕಿತ್ತು ಎಂದು ತಿಳಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+