ಇವಿಎಂ ದೋಷ: ಕೈರಾನಾ ಚುನಾವಣೆ ಮುಂದೂಡುವಂತೆ ಆಕ್ರೋಶ
ಕೈರಾನಾ, ಮೇ 28: ಉತ್ತರ ಪ್ರದೇಶದ ಕೈರಾನಾದಲ್ಲಿ ನಡೆಯುತ್ತಿರುವ ಲೋಕಸಭಾ ಉಪಚುನಾವಣೆಯಲ್ಲಿ ಮತಯಂತ್ರ(ಇವಿಎಂ)ಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ದೂರಿ, ಚುನಾವಣೆಯನ್ನು ಮುಂದೂಡುವಂತೆ ಜನ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.
ಕೇವಲ ಇವಿಎಂ ಗಳು ಮಾತ್ರವಲ್ಲದೆ ವಿವಿಪ್ಯಾಟ್(ಮತ ಖಾತ್ರಿ ಯಂತ್ರ)ದಲ್ಲಿಯೂ ದೋಷಿವಿದೆ ಎಂದು ದೂರಲಾಗಿತ್ತು. ಈ ಕಾರಣದಿಂದಲೇ ಹಲವೆಡೆ ಮತದಾನ ವಿಳಂಬವಾಯಿತು. ಇವಿಎಂ ನಲ್ಲಿ ದೋಷವಿದೆ ಎಂಬ ಕುರಿತಂತೆ ಈ ಕ್ಷೇತ್ರದ ಆರ್ ಜೆಡಿ ಅಭ್ಯರ್ಥಿ ತಬಸುಂ ಹಸನ್ ಎಂಬುವವರು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರು.
ನೂರ್ಪುರ ವಿಧಾನಸಭಾ ಉಪಚುನಾವಣೆ ಇಂದೇ ನಡೆಯುತ್ತಿದ್ದು ಅಲ್ಲೂ ಇವಿಎಂ ನಲ್ಲಿ ದೋಷವಿದೆ ಎಂದು ದೂರಲಾಗುತ್ತಿದೆ.

ನೂರ್ಪುರ ಶಾಸಕ ಲೋಕೇಂದರ್ ಸಿಂಗ್ ಕಾರು ಅಪಘಾತದಲ್ಲಿ ಮೃತಪಟ್ತಿದ್ದರಿಂದ ತೆರವಾಗಿದ್ದ ಕ್ಷೇತ್ರಕ್ಕೆ ಮತ್ತು ಕೈರಾನಾ ಬಿಜೆಪಿ ಸಂಸದ ಹುಕುಮ್ ಸಿಂಗ್ ಸಾವಿನಿಂದಾಗಿ ತೆರವಾಗಿದ್ದ ಸ್ಥಾನಗಳಿಗೆ ಮತದಾನ ನಡೆಯುತ್ತಿದ್ದು, ಮತ ಎಣಿಕೆ ಮೇ 31 ರಂದು ನಡೆಯಲಿದೆ.












Click it and Unblock the Notifications