Get Updates
Get notified of breaking news, exclusive insights, and must-see stories!

ಇವಿಎಂ ಬಗ್ಗೆ ಸದಾ ದೂರುವವರು ಅಥವ ಸೋತವರು? ವಿರೋಧ ಪಕ್ಷಗಳ ಬೂಟಾಟಿಕೆ ಮಹಾರಾಷ್ಟ್ರದಲ್ಲಿ ಬಯಲು

ಮಹಾರಾಷ್ಟ್ರದಲ್ಲಿ ವಿಧಾನಸಭೆ ಚುನಾವಣೆ ಮುಗಿದು ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಈ ಚುನಾವಣೆ ಬಳಿಕ ವಿರೋಧ ಪಕ್ಷಗಳ ಮತ್ತೊಮ್ಮೆ ವಿದ್ಯುನ್ಮಾನ ಮತಯಂತ್ರ (ಇವಿಎಂ)ದ ಬಗ್ಗೆ ದೂರುತ್ತಿದ್ದಾರೆ. ಚುನಾವಣಾ ಫಲಿತಾಂಶಗಳು ಅವರ ಕಡೆ ಬಾರದಿದ್ದಾಗ ಈ ದೂರು ಸಾಮಾನ್ಯವಾಗಿದೆ. ಅದರಲ್ಲೂ ಪ್ರಮುಖವಾಗಿ ಸೊಲ್ಲಾಪುರದ ಮರ್ಕವಾಡಿ ಗ್ರಾಮ. ಇಲ್ಲಿ ಗ್ರಾಮಸ್ಥರು ಕಾನೂನು ಬಾಹಿರವಾಗಿ ಮರು ಚುನಾವಣೆಯನ್ನು ಬ್ಯಾಲೆಟ್ ಪೇಪರ್ ಮೂಲಕ ಮಾಡಲು ಯೋಜಿಸಿದ್ದರು. ಇದು ರಾಜಕೀಯ ಹತಾಶೆ ಯಾವ ಮಟ್ಟಿಗೆ ಇದೆ ಎಂಬುದಕ್ಕೆ ಪಠ್ಯದ ಮಾದರಿಯ ಉದಾಹರಣೆಯಾಗಿದೆ.

ನಿಗದಿಯಾಗಿದ್ದ ಮರು ಚುನಾವಣೆಯನ್ನು ಅಧಿಕಾರಿಗಳು ತಡೆದರು. ಮರ್ಕವಾಡಿ ಗ್ರಾಮದಲ್ಲಿ ಎನ್‌ಸಿಪಿ (ಶರದ್ ಪವಾರ್ ಬಣ) ಉತ್ತಮರಾವ್ ಜನ್ಕರ್ ಜಯಗಳಿಸಿದ್ದರು. ಚುನಾವಣೆಯಲ್ಲಿ ಅವರು 13,147 ಮತಗಳ ಅಂತರದಲ್ಲಿ ಬಿಜೆಪಿಯಿಂದ ರಾಮ್ ಸಾತ್ಪುಳೆ ಸೋಲಿಸಿದರೂ ಅವರಲ್ಲಿ ಪಡೆದ ಮತಗಳ ಕುರಿತು ಅತೃಪ್ತಿ ಇತ್ತು.

EVM Whiners Or Sore Losers Oppositions Hypocrisy Exposed In Maharashtra

ಇವಿಎಂ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದ ಗ್ರಾಮಸ್ಥರು ಮರು ಚುನಾವಣೆ ನಡೆಸುವುದಾಗಿ ಬ್ಯಾನರ್ ಹಾಕಿಸಿದ್ದರು, ಇದು ಆಡಳಿತ ವ್ಯವಸ್ಥೆಯಿಂದ ಘೋಷಣೆಯಾದ ಮರು ಚುನಾವಣೆ ಆಗಿರಲಿಲ್ಲ. ಸ್ಥಳೀಯ ಸಬ್ ಡಿವಿಷನ್ ಮ್ಯಾಜಿಸ್ಟ್ರೇಟ್‌ ಸಮಯಕ್ಕೆ ಸರಿಯಾಗಿ ಇದು ಅಕ್ರಮ ಮತ್ತು ಪ್ರಜಾಪ್ರಭುತ್ವಕ್ಕೆ ವಿರುದ್ಧವಾದ ನಡೆ ಎಂದು ತೀರ್ಮಾನ ಕೈಗೊಂಡು ಮರು ಚುನಾವಣೆ ನಿಲ್ಲಿಸಿದರು.

ಇವಿಎಂ: ಕಾಂಗ್ರೆಸ್‌ ಉಡುಗೊರೆಗಳು ಬಲಿಪಶುವಾದಂತೆ

ಈ ಹಂತದಲ್ಲಿ ವ್ಯಂಗ್ಯವನ್ನು ನಿರಾಕರಿಸುವಂತಿಲ್ಲ. ಇವಿಎಂ ಪರಿಚಯ ಮಾಡಿಡಿದ್ದೆ ಕಾಂಗ್ರೆಸ್. ಆದರೆ ಈಗ ಅದು ಅವರನ್ನು ಬಲಿಪಶು ಮಾಡುತ್ತಿದೆ. ಗ್ರಾಮಸ್ಥರಾದ ಜೈಲೇಶ್‌ ಹತಾಶೆಯನ್ನು ಪ್ರಶ್ನೆ ಮಾಡಿದ್ದಾರೆ, "ಜನರು ಪ್ರಜಾಪ್ರಭುತ್ವವನ್ನೇ ಪ್ರಶ್ನೆ ಮಾಡುತ್ತಿದ್ದಾರೆ. ಇದನ್ನು ನಾವು ಮರೆಯುವಂತಿಲ್ಲ, ಇವಿಎಂ ಅನ್ನು ಪರಿಚಯಿಸಿದ್ದೆ ಕಾಂಗ್ರೆಸ್" ಎಂದರು. ವಿರೋಧ ಪಕ್ಷಗಳ ಈ ವಾದಗಳು ಮಹತ್ವವನ್ನು ಕಳೆದುಕೊಳ್ಳುತ್ತವೆ. ಏಕೆಂದರೆ ಮಹಾವಿಕಾಸ್ ಅಘಾಡಿ (ಎಂವಿಎ) ಮೈತ್ರಿಕೂಟ ಲೋಕಸಭೆ ಚುನಾವಣೆಯಲ್ಲಿ ಜಯಗಳಿಸಿದಾಗ ಇವಿಎಂ ಬಗ್ಗೆ ಯಾವುದೇ ಅಪಸ್ವರ ಎತ್ತಿಲ್ಲ.

EVM Whiners Or Sore Losers Oppositions Hypocrisy Exposed In Maharashtra

ಮರ್ಕವಾಡಿ ಹೇಳಿತು; ಮತದಾರರಿಗೆ ಏನು ಉತ್ತಮ ತಿಳಿದಿದೆ

ಮರ್ಕವಾಡಿ ಗ್ರಾಮದ ತಳಮಟ್ಟದ ಚಿತ್ರಣ ಬೇರೆಯದೆ ಆದ ಕಥೆ ಹೇಳುತ್ತದೆ. ಬಿಜೆಪಿಯ ರಾಮ್ ಸಾತ್ಪುಳೆ ಚುನಾವಣೆಯಲ್ಲಿ ಸೋತರೂ ಸಹ ಗ್ರಾಮದಲ್ಲಿ ಗಮನಾರ್ಹವಾದ ಮುನ್ನಡೆಯನ್ನು ಪಡೆದರು, ಅದಕ್ಕೆ ಕಾರಣ ಅಭಿವೃದ್ಧಿ ಕಾರ್ಯಗಳು. ಗ್ರಾಮಸ್ಥರಾದ ಕೌಶಲ್ ಏಕೆ ಸಾತ್ಪುಳೆ ಅವರನ್ನು ಬೆಂಬಲಿಸಬೇಕು ಎಂದು ಮಾತನಾಡಿದ್ದಾರೆ, ಪ್ರವಾಸೋದ್ಯಮ ಸೆಂಟರ್ ಮತ್ತು ಪ್ರದೇಶಕ್ಕೆ ಅನುದಾನ ತಂದಿದ್ದಾರೆ ಎಂದು ಹೇಳಿದ್ದಾರೆ. "150 ಮತಗಳ ಮುನ್ನಡೆ ಪಡೆಯಲು ಅವರು ದಣಿವರಿಯದೇ ಕೆಲಸ ಮಾಡಿದ್ದಾರೆ" ಎಂದರು.

ಮಹಿಳೆಯರನ್ನು ಸಶಕ್ತರಾಗಿಸುವ ಲಡ್ಕಿ ಬಹಿನ್ ಯೋಜನೆ ಮತದಾರರನ್ನು ಸೆಳೆಯಲು ಪ್ರಮುಖ ಪಾತ್ರ ವಹಿಸಿತು. ಓಂಕಾರ್ ಆಪ್ಟಿ, "ನಾವು ಬ್ಯಾಲೆಟ್‌ ಪೇಪರ್‌ಗೆ ವಾಪಸ್ ಹೋದರೆ ತಪ್ಪುಗಳು ಆಗುವ ಸಾಧ್ಯತೆ ಇದೆ. ಲಡ್ಕಿ ಬಹಿನ್ ಯೋಜನೆಯ ಪರಿಣಾಮವನ್ನು ನಿರಾಕರಿಸಲಾಗದು" ಎಂದರು.

EVM Whiners Or Sore Losers Oppositions Hypocrisy Exposed In Maharashtra

ರಾಜಕೀಯ ಅವಕಾಶವಾದಿತನ v/s ತಳಮಟ್ಟದ ಚಿತ್ರಣ

ವಿರೋಧ ಪಕ್ಷಗಳ ಇವಿಎಂ ಟ್ಯಾಂಪರಿಂಗ್ ಆರೋಪಗಳು ರಾಜಕೀಯ ಅವಕಾಶವಾದಿತನವಾಗಿದೆ. ಗ್ರಾಮಸ್ಥರಾದ ಮಿಥುನ್ ಇದನ್ನು ಅಸಂಗತತೆ ಎಂದು ಕರೆದರು, "ಯಾವುದೇ ದೂರುಗಳು ಇದ್ದರೆ ಲೋಕಸಭೆ ಚುನಾವಣೆ ವೇಳೆ ಅವರು ಏಕೆ ಅದನ್ನು ಪ್ರಶ್ನಿಸಲಿಲ್ಲ. ಈ ಕೂಗು ಕಾನೂನು ಬಾಹಿರ" ಎಂದು ಹೇಳಿದರು. ವಿರೋಧ ಪಕ್ಷಗಳು ನಿರ್ದಿಷ್ಟ ಕಾರಣ ಇಟ್ಟುಕೊಂಡು ವಿಶ್ವಾಸಾರ್ಹತೆಯನ್ನು ಪ್ರಶ್ನೆ ಮಾಡುತ್ತಿದ್ದಾರೆ, ಬಿಜೆಪಿ ತಳಮಟ್ಟದ ಅಭಿವೃದ್ಧಿ ಬಗ್ಗೆ ಗಮನ ಹರಿಸುತ್ತಿದೆ.

"ದೇವೇಂದ್ರ ಫಡ್ನವೀಸ್, ಶಿಂಧೆ ಸಾಹೇಬ್ ಮತ್ತು ಅಜಿತ್ ದಾದಾ ಸರ್ಕಾರ ಭ್ರಷ್ಟಾಚಾರ ರಹಿತ ಆಡಳಿತ, ಮಹಿಳೆಯರಿಗಾಗಿ ತಂದ ಯೋಜನೆಗಳ ವಿಚಾರದಲ್ಲಿ ಶ್ಲಾಘನೆಗೆ ಒಳಪಟ್ಟಿದೆ" ಎಂದು ಮಿಥುನ್ ಹೇಳಿದರು. ಆದೇಶ್ ಗುಪ್ತಾ ಪ್ರಕಾರ, "ಮತದಾರರಿಗೆ ತಮ್ಮ ಶಕ್ತಿ ತಿಳಿದಿದೆ. ಅವರು ಸಾತ್ಪುಳೆಯನ್ನು ಅವರ ಕೊಡುಗೆಗಳ ಆಧಾರದ ಮೇಲೆ ಆಯ್ಕೆ ಮಾಡಿದರು" ಎಂದರು.

ಟ್ಯಾಂಪರಿಂಗ್ ಇಲ್ಲ, ಕೇವಲ ಪಾರದರ್ಶಕತೆ

ತುಂಬಾ ಸೂಕ್ಷವಾಗಿ ಅಧ್ಯಯನ ಮಾಡಿದಲ್ಲಿ ಇವಿಎಂ ಟ್ಯಾಂಪರಿಂಗ್ ಆರೋಪಗಳು ಸತ್ಯವಲ್ಲ ಎಂಬುದು ತಿಳಿಯುತ್ತದೆ. ಇವಿಎಂ ಬಗ್ಗೆ ಆರೋಪಗಳಿದ್ದರೆ, "ಲೋಕಸಭೆ ಚುನಾವಣೆ ವೇಳೆಯಲ್ಲಿ ಅವರು ಏಕೆ ಪ್ರಶ್ನಿಸಲಿಲ್ಲ. ಫಲಿತಾಂಶ ಅವರ ಪರವಾಗಿ ಬಂದಾಗ ಅದನ್ನು ಒಪ್ಪಿಕೊಳ್ಳುತ್ತಾರೆ. ಅವರ ಪರವಾಗಿ ಬಂದಿಲ್ಲ ಎಂದರೆ ಆರೋಪಗಳು ಪ್ರಾರಂಭವಾಗುತ್ತದೆ" ಎದು ಅಲೋಕ್ ಹೇಳಿದರು. ವಿರೋಧ ಪಕ್ಷಗಳ ಈ ದ್ವಂದ್ವತೆ ಮತದಾರರೊಂದಿಗೆ ನಿರ್ಮಾಣಾತ್ಮಕ, ನಿರ್ವಹಣೆಯ ಕೊರತೆಯನ್ನು ಎತ್ತಿ ತೋರಿಸುತ್ತಿದೆ.

EVM Whiners Or Sore Losers Oppositions Hypocrisy Exposed In Maharashtra

ತೀರ್ಪಿಗೆ ಗೌರವ ನೀಡುವ ಸಮಯ

ಗ್ರಾಮಸ್ಥರ ಮರು ಮತದಾನ ಯೋಜನೆ ತಪ್ಪಾದರೂ ಸಹ ರಾಜಕೀಯ ಪಕ್ಷಗಳ ಆರೋಪಗಳು ಸಾರ್ವಜನಿಕರ ಮೇಲೆ ಎಷ್ಟು ಸುಲಭವಾಗಿ ಪ್ರಭಾವ ಬೀರುತ್ತವೆ ಎಂಬುದನ್ನು ತೋರಿಸಿವೆ. ರಾಜಕೀಯ ನಾಯಕರು ತಮ್ಮ ತಾತ್ಕಾಲಿಕ ಲಾಭಕ್ಕಾಗಿ ಪ್ರಜಾಪ್ರಭುತ್ವ ಸಂಸ್ಥೆಗಳನ್ನು ಹಾಳುಮಾಡುವುದನ್ನು ತಪ್ಪಿಸಬೇಕಾಗಿದೆ. ಮರ್ಕವಾಡಿಯ ಜನರು ಅಭಿವೃದ್ಧಿಗೆ ಮತ ಹಾಕಿದ್ದಾರೆ, ವಿಭಜನೆಯ ರಾಜಕೀಯಕ್ಕೆ ಅಲ್ಲ ಎಂದು ಗ್ರಾಮಸ್ಥರೇ ಮಾತನಾಡಿದ್ದಾರೆ.

ದಿನೇಶ್ ಅವರು ಹೇಳುವಂತೆ, "ಇವಿಎಂಗಳನ್ನು ಟ್ಯಾಂಪರಿಂಗ್ ಮಾಡಿದ್ದರೆ ನಮ್ಮ ಸಂಸತ್ ಅಭ್ಯರ್ಥಿ ಗೆದ್ದಿರುತ್ತಿದ್ದರು. ಆದರೆ ನಾವು ಎಂದಿಗೂ ದೂರು ಕೊಟ್ಟಿಲ್ಲ. ಇತರರಂತೆ ನಾವು ಅಲ್ಲ, ನಾವು ತೀರ್ಪಿಗೆ ಗೌರವ ನೀಡುತ್ತೇವೆ". ಇದೇ ಮಾದರಿಯಲ್ಲಿ ಪ್ರತಿಪಕ್ಷವೂ ಅದನ್ನು ಮಾಡಬೇಕಾದ ಸಮಯ ಬಂದಿದೆ.

ಅಂತಿಮವಾಗಿ, ಎಲ್ಲಾ ರಾಜಕೀಯ ಪಕ್ಷಗಳು ಪ್ರಕ್ರಿಯೆಗಳಿಗೆ ಗೌರವ ನೀಡಿದಾಗ ಮತ್ತು ಅಸಮಾಧಾನಕ್ಕಿಂತ ಆಡಳಿತ ಬಗ್ಗೆ ಗಮನ ಹರಿಸಬೇಕು. ಮತದಾರರು ತಮ್ಮ ಆಯ್ಕೆಯನ್ನು ಮಾಡಿದ್ದಾರೆ, ಮುಂದೆ ಸಾಗೋಣ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+