ಮತಯಂತ್ರ ವಿವಾದ: ಚುನಾವಣಾ ಆಯೋಗದ ಸವಾಲು ಸ್ವೀಕರಿಸಿದ ಆಪ್
ನವದಹೆಲಿ, ಮೇ 8: ಉತ್ತರ ಪ್ರದೇಶ ಸೇರಿದಂತೆ ಇತ್ತೀಚೆಗೆ ನಡೆದ ಪಂಚರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶಗಳು ಹೊರಬೀಳುತ್ತಿದ್ದಂತೆ ಭುಗಿಲೆದ್ದಿರುವ ಮತಯಂತ್ರ ದೋಷ ವಿವಾದ ಈಗ ಹೊಸ ತಿರುವು ಪಡೆದುಕೊಂಡಿದೆ.
ಮಂಗಳವಾರ ಆರಂಭಗೊಂಡ ದೆಹಲಿ ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ಆಪ್ ಶಾಸಕ ಸೌರಭ್ ಭಾರದ್ವಾಜ್ ಅವರು ಮತಯಂತ್ರಗಳನ್ನು ಹೇಗೆ ತಿರುಚಬಹುದೆಂಬುದರ ಬಗ್ಗೆ ಪ್ರಾತ್ಯಕ್ಷಿಕೆ ನೀಡಿದ್ದಾರೆ.[ಕೇಸು ಹಾಕ್ತಿದ್ದೇನೆ ಆಶೀರ್ವಾದ ಮಾಡಿ ಎಂದ ಕಪಿಲ್ ಮಿಶ್ರಾ!]

ಖುದ್ದು ಇಂಜಿನಿಯರಿಂಗ್ ಪದವೀಧರರರೂ ಆಗಿರುವ ಸೌರಭ್ ಇದನ್ನು ಸರಳವಾಗಿ ನಿರೂಪಣೆ ಮಾಡಿದ್ದಾರೆ.
ಆದರೆ, ಇದನ್ನು ಸವಾಲಾಗಿ ತೆಗೆದುಕೊಂಡ ಚುನಾವಣಾ ಆಯೋಗ, ನೇರವಾಗಿ ಚುನಾವಣಾ ಆಯೋಗದ ಕಚೇರಿಗೆ ಬಂದು ಅಲ್ಲಿರುವ ಮತಯಂತ್ರಗಳನ್ನು ತಿರುಚುವ ಬಗ್ಗೆ ಪ್ರಾತ್ಯಕ್ಷಿಕೆ ನೀಡಬೇಕೆಂದು ಸವಾಲು ಹಾಕಿದೆ.[ಹಗರಣಗಳ ಆರೋಪ: ಕೊನೆಗೂ ಮೌನ ಮುರಿದ ಕೇಜ್ರಿವಾಲ್]
ಇದೀಗ, ಆಪ್ ಈ ಸವಾಲನ್ನು ಸ್ವೀಕರಿಸಿದ್ದು ಪಕ್ಷದ ಮುಂದಿನ ನಡೆ ಕುತೂಹಲ ಕೆರಳಿಸಿದೆ.












Click it and Unblock the Notifications