ಇಡೀ ದೇಶ 6ರಿಂದ 10 ವಾರ ಲಾಕ್ ಡೌನ್ ಆಗಬೇಕು: ಬಿಲ್ ಗೇಟ್ಸ್
ನವದೆಹಲಿ, ಮಾರ್ಚ್ 27: ಜಾಗತಿಕವಾಗಿ ಕೊರೊನಾ ವ್ಯಾಪಿಸಿ, ಪರಿಸ್ಥಿತಿ ತೀರಾ ಹದಗೆಟ್ಟಿದೆ. ಇಂಥ ಸನ್ನಿವೇಶದಲ್ಲಿ ಕೊರೊನಾ ಬಗ್ಗೆ ಮೈಕ್ರೋಸಾಫ್ಟ್ ಸಂಸ್ಥಾಪಕ ಹಾಗೂ ದತ್ತಿ ಸಂಸ್ಥೆಗಳನ್ನು ನಡೆಸುವ ಬಿಲ್ ಗೇಟ್ಸ್ TED ಟಾಕ್ಸ್ ನಲ್ಲಿ ಮಾತನಾಡಿದ್ದಾರೆ. ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

"ಇಲ್ಲಿ ಮಧ್ಯಮ ಪಥ" ಎಂಬುದು ಯಾವುದೂ ಇಲ್ಲ. ಕೊರೊನಾ ವೈರಾಣು ವಿರುದ್ಧ ಹೋರಾಡಲು ಕನಿಷ್ಠ 10 ವಾರಗಳ ಕಾಲ "ಸಂಪುರ್ಣ ಸ್ಥಗಿತ" ಆಗಬೇಕು, ಕೊರೊನಾ ಯುನೈಟೆಡ್ ಸ್ಟೇಟ್ಸ್ ಪೂರ್ತಿ ಹಬ್ಬದಿರಲು ಇದು ಅನಿವಾರ್ಯ ಮತ್ತು ಆ ಮೂಲಕ ದೀರ್ಘಾವಧಿ ಆರ್ಥಿಕ ಪ್ರಭಾವವನ್ನು ಕಡಿಮೆ ಮಾಡಬಹುದು ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
ಕೊರೊನಾ ವೈರಾಣುವಿನ ಅಪಾಯ ಏನು ಅಂದರೆ, ರೋಗ ಲಕ್ಷಣಗಳು ಕಾಣಿಸಿಕೊಳ್ಳುವ ಮುನ್ನವೇ ಸೋಂಕು ತಗುಲುತ್ತದೆ. ಈ ರೀತಿಯಾದ ವೈರಾಣುಗಳು ಬಹಳ ಕೆಟ್ಟ ಸನ್ನಿವೇಶದಲ್ಲಿ ಸೃಷ್ಟಿಯಾಗಿವೆ. "ಯಾವುದಾದರೂ ಮುಂದಿನ ಕೆಲವು ದಶಕಗಳಲ್ಲಿ ಕೋಟಿ ಜನರನ್ನು ಕೊಂದರೆ, ಅದು ತೀವ್ರ ವೇಗದಲ್ಲಿ ಹಬ್ಬುವಂಥ ವೈರಾಣುಗಳೇ ಆಗಿರುತ್ತವೆ ಹೊರತು ಯುದ್ಧವಲ್ಲ. ಕ್ಷಿಪಣಿಗಳಲ್ಲ, ಸೂಕ್ಷ್ಮಾಣುಗಳು" ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
ಕೊರೊನಾ ವೈರಾಣು MERS ಹಾಗೂ SARSಗಿಂತಲೂ ಹೆಚ್ಚು ವೇಗವಾಗಿ ಸೋಂಕನ್ನು ಹಬ್ಬಿಸುತ್ತದೆ, ಆದರೆ ಅಷ್ಟು ಅಪಾಯಕಾರಿಯಲ್ಲ ಎಂದಿದ್ದಾರೆ. ಎಬೋಲಾ, ಸೋಂಕು ವಿಪರೀತದ ಹಂತಕ್ಕೆ ತಲುಪುವ ಮುನ್ನ ನಿತ್ರಾಣರಾಗುತ್ತೀರಿ. ಆ ಕಾರಣಕ್ಕೆ ಚರ್ಚ್ ಅಥವಾ ಬಸ್ ಅಥವಾ ಯಾವುದೇ ಮಳಿಗೆಯಲ್ಲಿ ನೀವು ಕಾಣಿಸಿಕೊಳ್ಳಲ್ಲ.
"ಆದರೆ ಫ್ಲೂನಂಥ ಶ್ವಾಸಕೋಶ ಸಮಸ್ಯೆ ಇದ್ದಲ್ಲಿ ಮೊದಲಿಗೆ ಸ್ವಲ್ಪ ಜ್ವರ, ಆಲಸ್ಯ ಕಾಣಿಸಿಕೊಳ್ಳುತ್ತದೆ. ಆಗ ಮಾಮೂಲಿ ಕೆಲಸಗಳಿಗೆ ತೆರಳುತ್ತೀರಿ. ಇತರರಿಗೂ ಸೋಂಕು ತಗುಲುವಂತೆ ಮಾಡುತ್ತೀರಿ. ಮನುಷ್ಯರಿಂದ ಮುಷ್ಯರಿಗೆ ಉಸಿರಾಟದ ಮೂಲಕ ಹರಡುವ ವೈರಸ್ ಗಳು ಮೊದಲಿಗೆ ಯಾವುದೇ ಚಟುವಟಿಕೆಗಳನ್ನು ನಿಲ್ಲಿಸುವಂತೆ ಮಾಡಲ್ಲ. ಅದು ಬಹಳ ಕೆಟ್ಟ ಪರಿಸ್ಥಿತಿ" ಎಂದು ಐದು ವರ್ಷದ ಹಿಂದೆ TED Talksನಲ್ಲಿ ಹೇಳಿದ್ದರು.
ಜನರು ಈಗ ಜಗತ್ತಿನಾದ್ಯಂತ ಸುತ್ತಾಡುತ್ತಾರೆ. ಆದ್ದರಿಂದ ಎಲ್ಲ ಕಡೆ ಇದಕ್ಕೆ ಜನ ಬಲಿಪಶುಗಳಾಗುತ್ತಾರೆ. ನನಗೆ ಗೊತ್ತು, ವೈರಸ್ ನ ನಿಯಂತ್ರಿಸುವುದು ಬಹಳ ಕಷ್ಟ. ಯಾವಾಗ ಇದು ಮನುಷ್ಯರಿಂದ ಮನುಷ್ಯರಿಗೆ ಹಬ್ಬುವ ಕಾಯಿಲೆ ಅಂತ ಗೊತ್ತಾಯಿತೋ, ಅಂದರೆ ಜನವರಿ ಸುಮಾರಿಗೆ ಗೊತ್ತಾಯಿತು. ಆಗಲೇ ಇದರ ನಿಯಂತ್ರಣ ಕಷ್ಟ ಎಂಬುದು ತಿಳಿಯಿತು ಎಂದು ಅವರು ಹೇಳಿದ್ದಾರೆ.
ಈ ಸಂದರ್ಶನವು ಬಿಲ್ ಗೇಟ್ಸ್ ಗೆ ಅಭಿಮಾನಿಗಳಿಗೆ ಮಾತ್ರ ಅಲ್ಲ, ಕೊರೊನಾ ವೈರಾಣು ಬಗ್ಗೆ ಆತಂಕ ಇರುವ ಎಲ್ಲರೂ ನೋಡಬೇಕಾದದ್ದು. ಆ ವಿಡಿಯೋ ಇಲ್ಲಿದೆ.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications