ಮೇಘಾಲಯದಲ್ಲಿ ಮೊದಲ ಬಾರಿಗೆ ವಿದ್ಯುತ್ ರೈಲುಗಳ ಸಂಚಾರ
ಸೆಂಟ್ರಲ್ ಆರ್ಗನೈಸೇಶನ್ ಫಾರ್ ರೈಲ್ವೇ ಎಲೆಕ್ಟ್ರಿಫಿಕೇಶನ್ ಈ ವಿಭಾಗಗಳಲ್ಲಿ ವಿದ್ಯುದ್ದೀಕರಣ ಕಾರ್ಯಗಳನ್ನು ನಡೆಸಿದೆ. 2030 ರ ವೇಳೆಗೆ ನಿವ್ವಳ ಶೂನ್ಯ ಕಾರ್ಬನ್ ಎಮಿಟರ್ ಆಗಲು ಭಾರತೀಯ ರೈಲ್ವೇ ಪ್ರಯತ್ನಿಸುವುದಕ್ಕಿಂತ ಇದು ಒಂದು ಹೆಜ್ಜೆ ಮುಂದಿದೆ.
ಶಿಮ್ಲಾ, ಮಾರ್ಚ್ 17: ಮೇಘಾಲಯ ರಾಜ್ಯದಲ್ಲಿ ರೈಲ್ವೆಯ ಸಂಪೂರ್ಣ ವಿದ್ಯುದೀಕರಣ ಮಾಡುವ ಪ್ರಯತ್ನದ ಭಾಗವಾಗಿ ಇದೇ ಮೊದಲ ಬಾರಿಗೆ ವಿದ್ಯುತ್ ಚಾಲಿನ ರೈಲುಗಳು ಸಂಚಾರ ಆರಂಭ ಮಾಡಿವೆ.
ಮಾರ್ಚ್ 15 ರಂದು ದುಧನೈ - ಮೆಂಡಿಪಥರ್ (22.823 ಟ್ರ್ಯಾಕ್ ಕಿಲೋಮೀಟರ್) ಸಿಂಗಲ್ ಲೈನ್ ವಿಭಾಗ ಮತ್ತು ಅಭಯಪುರಿ - ಪಂಚರತ್ನ (34.59 ಟ್ರ್ಯಾಕ್ ಕಿಲೋಮೀಟರ್) ಡಬಲ್ ಲೈನ್ ವಿಭಾಗದಲ್ಲಿ ವಿದ್ಯುತ್ ಚಾಲಿತ ರೈಲುಗಳುನ್ನು ನಿಯೋಜಿಸುವ ಮೂಲಕ ಈಶಾನ್ಯ ಫ್ರಾಂಟಿಯರ್ ರೈಲ್ವೆ ಮತ್ತೊಂದು ಮೈಲಿಗಲ್ಲು ಸಾಧಿಸಿದೆ.

ರೈಲ್ವೆ ಸಚಿವಾಲಯದ ಪ್ರಕಾರ, ಸೆಂಟ್ರಲ್ ಆರ್ಗನೈಸೇಶನ್ ಫಾರ್ ರೈಲ್ವೇ ಎಲೆಕ್ಟ್ರಿಫಿಕೇಶನ್ (CORE) ಈ ವಿಭಾಗಗಳಲ್ಲಿ ವಿದ್ಯುದ್ದೀಕರಣ ಕಾರ್ಯಗಳನ್ನು ನಡೆಸಿದೆ. 2030 ರ ವೇಳೆಗೆ ನಿವ್ವಳ ಶೂನ್ಯ ಕಾರ್ಬನ್ ಎಮಿಟರ್ ಆಗಲು ಭಾರತೀಯ ರೈಲ್ವೇ ಪ್ರಯತ್ನಿಸುವುದಕ್ಕಿಂತ ಇದು ಒಂದು ಹೆಜ್ಜೆ ಮುಂದಿದೆ. ಮೆಂಡಿಪಥರ್ ಈಶಾನ್ಯ ರಾಜ್ಯ ಮೇಘಾಲಯದ ಏಕೈಕ ರೈಲು ನಿಲ್ದಾಣವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದ ನಂತರ 2014 ರಿಂದ ಕಾರ್ಯನಿರ್ವಹಿಸುತ್ತಿದೆ.
ಎಲೆಕ್ಟ್ರಿಕ್ ಟ್ರಾಕ್ಷನ್ ಕಾರ್ಯಾರಂಭದ ನಂತರ, ಎಲೆಕ್ಟ್ರಿಕ್ ಇಂಜಿನ್ ಮೂಲಕ ಎಳೆಯುವ ರೈಲುಗಳು ಈಗ ಮೇಘಾಲಯದ ಮೆಂಡಿಪಥರ್ನಿಂದ ನೇರವಾಗಿ ಕಾರ್ಯನಿರ್ವಹಿಸಲು ಮುಂದಾಗಿವೆ. ಇದು ಸರಾಸರಿ ವೇಗವನ್ನು ಹೆಚ್ಚಿಸುತ್ತದೆ. ಹೆಚ್ಚಿನ ಪ್ರಯಾಣಿಕ ಮತ್ತು ಸರಕು ಸಾಗಿಸುವ ರೈಲುಗಳು ಈ ವಿಭಾಗಗಳ ಮೂಲಕ ಪೂರ್ಣ ವಿಭಾಗೀಯ ವೇಗದಲ್ಲಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ. ಈ ವಿಭಾಗದಲ್ಲಿ ಸಮಯಪಾಲನೆಯೂ ಹೆಚ್ಚಲಿದೆ. ಇತರ ರಾಜ್ಯಗಳಿಂದ ಎಲೆಕ್ಟ್ರಿಕ್ ಇಂಜಿನ್ಗಳ ಮೂಲಕ ಸಾಗಿಸುವ ಪಾರ್ಸೆಲ್ ಮತ್ತು ಸರಕು ಸಾಗಿಸುವ ರೈಲುಗಳು ನೇರವಾಗಿ ಮೇಘಾಲಯವನ್ನು ತಲುಪಲು ಸಾಧ್ಯವಾಗುತ್ತದೆ ಎಂದು ರೈಲ್ವೆ ಹೇಳಿಕೆ ತಿಳಿಸಿದೆ.
ವಿದ್ಯುದ್ದೀಕರಣವು ಈಶಾನ್ಯ ಭಾರತದಲ್ಲಿ ರೈಲುಗಳ ಚಲನಶೀಲತೆಯನ್ನು ಗಣನೀಯವಾಗಿ ಸುಧಾರಿಸುತ್ತದೆ. ಪಳೆಯುಳಿಕೆ ಇಂಧನದಿಂದ ವಿದ್ಯುಚ್ಛಕ್ತಿಗೆ ಸ್ಥಳಾಂತರಗೊಳ್ಳುವುದರಿಂದ ಮಾಲಿನ್ಯದ ಕಡಿತದ ಜೊತೆಗೆ, ಈ ಪ್ರದೇಶದಲ್ಲಿ ರೈಲ್ವೆ ವ್ಯವಸ್ಥೆಯ ದಕ್ಷತೆಯೂ ಸುಧಾರಿಸುತ್ತದೆ. ಇದು ತಡೆರಹಿತ ಸಂಚಾರವನ್ನು ಸುಗಮಗೊಳಿಸುತ್ತದೆ ಮತ್ತು ಅಮೂಲ್ಯವಾದ ವಿದೇಶಿ ವಿನಿಮಯದ ಉಳಿತಾಯದ ಜೊತೆಗೆ ಈಶಾನ್ಯ ರಾಜ್ಯಗಳಿಗೆ ಮತ್ತು ಅಲ್ಲಿಂದ ಹೊರಡುವ ರೈಲುಗಳ ಸಮಯವನ್ನು ಉಳಿಸುತ್ತದೆ ಎಂದು ಹೇಳಿಕೆಯಲ್ಲಿ ಸೇರಿಸಲಾಗಿದೆ.

ರೈಲ್ವೆಯನ್ನು ಸಂಪೂರ್ಣ ವಿದ್ಯುತ್ತಿಕರಣಗೊಳಿಸುವ ಪ್ರಯತ್ನದ ಭಾಗವಾಗಿ ಕಳೆದ ವಾರ ಸೆಂಟ್ರಲ್ ರೈಲ್ವೇಸ್ ತನ್ನ ಸಂಪೂರ್ಣ ಬ್ರಾಡ್ ಗೇಜ್ ನೆಟ್ವರ್ಕ್ನ (3,825 ಕಿಲೋಮೀಟರ್ಗಳು) ಶೇಕಡಾ 100 ರಷ್ಟು ವಿದ್ಯುದ್ದೀಕರಣದೊಂದಿಗೆ ಮಹತ್ವದ ಮೈಲಿಗಲ್ಲನ್ನು ಸಾಧಿಸಿದೆ. ಕೇಂದ್ರ ರೈಲ್ವೇಯು ವಾರ್ಷಿಕವಾಗಿ 5.204 ಲಕ್ಷ ಟನ್ ಇಂಗಾಲದ ಹೆಜ್ಜೆಗುರುತುಗಳನ್ನು ಉಳಿಸುತ್ತದೆ. ಸೆಂಟ್ರಲ್ ರೈಲ್ವೇಯ ಕೊನೆಯ ವಿದ್ಯುದ್ದೀಕರಿಸದ ವಿಭಾಗ ಅಂದರೆ, ಸೊಲ್ಲಾಪುರ ವಿಭಾಗದ ಔಸಾ ರಸ್ತೆ- ಲಾತೂರ್ ರಸ್ತೆ (52 ಮಾರ್ಗ ಕಿಲೋಮೀಟರ್) ಫೆಬ್ರವರಿ 23, 2023 ರಂದು ವಿದ್ಯುದ್ದೀಕರಿಸಲ್ಪಟ್ಟಿದೆ ಎಂದು ತಿಳಿಸಿದೆ.
ವರದಿಯ ಪ್ರಕಾರ, ಭಾರತೀಯ ರೈಲ್ವೇಯು ವಿಶ್ವದಲ್ಲೇ ಅತಿ ದೊಡ್ಡ ಹಸಿರು ರೈಲ್ವೆಯಾಗಲು ಮಿಷನ್ ಮೋಡ್ನಲ್ಲಿ ಕಾರ್ಯನಿರ್ವಹಿಸುತ್ತಿದೆ ಮತ್ತು 2030 ರ ಮೊದಲು "ನಿವ್ವಳ ಶೂನ್ಯ ಇಂಗಾಲದ ಹೊರಸೂಸುವಿಕೆ" ಆಗುವತ್ತ ಸಾಗುತ್ತಿದೆ. ಈಗ ಎಲ್ಲಾ ಬ್ರಾಡ್ ಗೇಜ್ ಮಾರ್ಗಗಳಲ್ಲಿ ಸಂಪೂರ್ಣವಾಗಿ ವಿದ್ಯುದ್ದೀಕರಣಗೊಂಡಿರುವ ಕೇಂದ್ರ ರೈಲ್ವೆ, ಪ್ರತಿ ವರ್ಷ 5.204 ಲಕ್ಷ ಟನ್ಗಳಷ್ಟು ಇಂಗಾಲದ ಹೆಜ್ಜೆಗುರುತುಗಳನ್ನು ಕಡಿಮೆ ಮಾಡಲು ಸಹಾಯ ಮಾಡಿದೆ ಮತ್ತು ವಾರ್ಷಿಕವಾಗಿ 1670 ಕೋಟಿ ರೂಪಾಯಿಗಳನ್ನು ಉಳಿಸುತ್ತದೆ.
-
ಇರಾನ್ ಅಧ್ಯಕ್ಷರ ಜೊತೆ ಪ್ರಧಾನಿ ಮೋದಿ ಮಾತುಕತೆ: ಜಾಗತಿಕ ಪೂರೈಕೆ ವ್ಯತ್ಯಯದ ಬಗ್ಗೆ ಆತಂಕ -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
Power Cut: ನಾಳೆ ಮಾ.22 ರಿಂದ 25ರವರೆಗೆ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ: ಬೆಸ್ಕಾಂ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ












Click it and Unblock the Notifications