Get Updates
Get notified of breaking news, exclusive insights, and must-see stories!

Earthquake warn in Uttarakhand: ಉತ್ತರಾಖಂಡದಲ್ಲಿ ಟರ್ಕಿಗಿಂತಲೂ ಭೀಕರ ಭೂಕಂಪ ಸಂಭವಿಸುವ ಎಚ್ಚರಿಕೆ!

ಟರ್ಕಿಯಷ್ಟು ದೊಡ್ಡದಾದ ಅಥವಾ ಅದಕ್ಕಿಂತ ದೊಡ್ಡದಾದ ಭೂಕಂಪ ಯಾವಾಗ ಬೇಕಾದರೂ ಉತ್ತರಾಖಂಡದದಲ್ಲಿ ಅಪ್ಪಳಿಸಬಹುದು. ಉತ್ತರಾಖಂಡದಲ್ಲಿ ಮಾತ್ರವಲ್ಲ, ಇಡೀ ಹಿಮಾಲಯ ಪ್ರದೇಶವು ಅದರ ವ್ಯಾಪ್ತಿಗೆ ಬರಬಹುದು. ಈ ಆತಂಕವನ್ನು ಹೈದರಾಬಾದ್‌ನ ನ್ಯಾಷನಲ್ ಜಿಯೋಫಿಸಿಕಲ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ನ ಮುಖ್ಯ ವಿಜ್ಞಾನಿಗಳು ವ್ಯಕ್ತಪಡಿಸಿದ್ದಾರೆ. ಪ್ರತಿ ವರ್ಷ ಭಾರತದ ಎತ್ತರ ಪ್ರದೇಶ ಸುಮಾರು 5 ಸೆಂ.ಮೀ ವೇಗದಲ್ಲಿ ಜಾರುತ್ತಿದೆ ಎಂದು ಅವರು ಹೇಳಿದ್ದಾರೆ. ಇದರಿಂದಾಗಿ ಹಿಮಾಲಯ ಪ್ರದೇಶದಲ್ಲಿ ಒತ್ತಡ ಸೃಷ್ಟಿಯಾಗುತ್ತಿದೆ. ಇದರ ಪರಿಣಾಮ ಯಾವಾಗ ಬೇಕಾದರೂ ಭೀಕರ ಭೂಕಂಪದ ರೂಪದಲ್ಲಿ ಕಂಡುಬರಬಹುದು ಎಂದು ವಿಜ್ಞಾನಿಗಳು ಹೇಳುತ್ತಿದ್ದಾರೆ.

ಹೈದರಾಬಾದ್‌ನ ನ್ಯಾಷನಲ್ ಜಿಯೋಫಿಸಿಕಲ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ನ ಮುಖ್ಯ ವಿಜ್ಞಾನಿ ಡಾ.ಎನ್.ಪೂರ್ಣಚಂದ್ರ ರಾವ್ ಅವರು 'ಉತ್ತರಾಖಂಡದಲ್ಲಿ ನಾವು ಅನೇಕ ಭೂಕಂಪನ ಕೇಂದ್ರಗಳ ಪ್ರಬಲ ಜಾಲವನ್ನು ಹೊಂದಿದ್ದೇವೆ. ಈ ಪ್ರದೇಶವನ್ನು ಹಿಮಾಚಲ ಮತ್ತು ಉತ್ತರಾಖಂಡ ಸೇರಿದಂತೆ ಪಶ್ಚಿಮ ನೇಪಾಳದ ಭಾಗದ ನಡುವಿನ ಭೂಕಂಪನ ಅಂತರ ಎಂದು ಕರೆಯಲಾಗುತ್ತದೆ. ಇಲ್ಲಿ ಭೂಕಂಪದ ಸಾಧ್ಯತೆಯಿದ., ಅದು ಯಾವಾಗ ಬೇಕಾದರೂ ಸಂಭವಿಸಬಹುದು' ಎಂದಿದ್ದಾರೆ.

'ಭೂಗತದಲ್ಲಿ ಸಾಕಷ್ಟು ಒತ್ತಡ ನಿರ್ಮಾಣ'

'ಭೂಗತದಲ್ಲಿ ಸಾಕಷ್ಟು ಒತ್ತಡ ನಿರ್ಮಾಣ'

ಡಾ.ರಾವ್ ಹೇಳುವಂತೆ, 'ಭೂಮಿಯ ಮೇಲ್ಮೈ ವಿವಿಧ ಪದರದಿಂದ ರೂಪಗೊಂಡಿದೆ. ಇವು ಪ್ರತಿ ವರ್ಷ ಸುಮಾರು 5 ಸೆಂ.ಮೀ ವೇಗದಲ್ಲಿ ಚಲಿಸುತ್ತಿದೆ. ಇದರಿಂದಾಗಿ ಹಿಮಾಲಯ ಪ್ರದೇಶದಲ್ಲಿ ಒತ್ತಡ ಸೃಷ್ಟಿಯಾಗುತ್ತಿದೆ. ಇದು ತೀವ್ರ ಭೂಕಂಪಗಳ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಇದು ಉತ್ತರಾಖಂಡದ ಮೇಲ್ಮೈ ಅಡಿಯಲ್ಲಿ ಸಾಕಷ್ಟು ಒತ್ತಡ ನಿರ್ಮಾಣ ಮಾಡುತ್ತದೆ. ಅದು ಸಂಭವಿಸುವುದು ಖಚಿತ ಎಂದು ಡಾ.ರಾವ್ ಹೇಳಿದ್ದಾರೆ. ಆದರೆ, ಭೂಕಂಪದ ದಿನಾಂಕವನ್ನು ಊಹಿಸಲು ಸಾಧ್ಯವಿಲ್ಲ ಎಂದೂ ಅವರು ಹೇಳಿದ್ದಾರೆ. ಅಷ್ಟೇ ಅಲ್ಲ, ಅದರಿಂದಾಗುವ ವಿನಾಶವೂ ಪ್ರದೇಶಕ್ಕೆ ಅನುಗುಣವಾಗಿ ಬದಲಾಗಬಹುದು ಎಂದಿದ್ದಾರೆ.

ಉತ್ತರಾಖಂಡದಲ್ಲಿ ಭೀಕರ ಭೂಕಂಪದ ಎಚ್ಚರಿಕೆ

ಉತ್ತರಾಖಂಡದಲ್ಲಿ ಭೀಕರ ಭೂಕಂಪದ ಎಚ್ಚರಿಕೆ

ಆದರೂ ನೈಜ-ಸಮಯದ ಆಧಾರದ ಮೇಲೆ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲಾಗುತ್ತಿದೆ. ಅಲ್ಲಿ ಜಿಪಿಎಸ್ ನೆಟ್‌ವರ್ಕ್ ಕೂಡ ಇದೆ ಎಂದು ಎನ್‌ಜಿಆರ್‌ಐ ಮುಖ್ಯ ವಿಜ್ಞಾನಿ ತಿಳಿಸಿದ್ದಾರೆ. ಆದರೆ ಜಿಪಿಎಸ್ ಪಾಯಿಂಟ್‌ಗಳು ಬದಲಾಗುತ್ತಿವೆ, ಇದು ಮೇಲ್ಮೈ ಅಡಿಯಲ್ಲಿ ಬದಲಾವಣೆ ಇದೆ ಎಂದು ಸೂಚಿಸುತ್ತದೆ. ಅವರ ಪ್ರಕಾರ, ವೇರಿಯೊಮೆಟ್ರಿಕ್ ಜಿಪಿಎಸ್ ಡೇಟಾ ಸಂಸ್ಕರಣೆಯು ಭೂಮಿಯಲ್ಲಿ ಏನಾಗುತ್ತಿದೆ ಎಂಬುದನ್ನು ತಿಳಿಯಲು ಒಂದು ವಿಶ್ವಾಸಾರ್ಹ ಮಾರ್ಗವಾಗಿದೆ. ಇದು ಭೂಕಂಪದ ಎಚ್ಚರಿಕೆಯನ್ನು ನೀಡಿದೆ. ಆದರೆ ಭೂಕಂಪದ ನಿಖರವಾದ ದಿನಾಂಕ ಮತ್ತು ಸಮಯವನ್ನು ನಾವು ಊಹಿಸಲು ಸಾಧ್ಯವಿಲ್ಲ, ಆದರೆ ಉತ್ತರಾಖಂಡವು ಯಾವುದೇ ಸಮಯದಲ್ಲಿ ಭೀಕರ ಭೂಕಂಪಕ್ಕೆ ಸಾಕ್ಷಿಯಾಗಲಿದೆ' ಎಂದು ಅವರು ಸ್ಪಷ್ಟ ಎಚ್ಚರಿಕೆ ನೀಡಿದ್ದಾರೆ.

8ಕ್ಕಿಂತ ಹೆಚ್ಚು ತೀವ್ರತೆಯ ಭೂಕಂಪನದ ಭೀತಿ

8ಕ್ಕಿಂತ ಹೆಚ್ಚು ತೀವ್ರತೆಯ ಭೂಕಂಪನದ ಭೀತಿ

ರಾಷ್ಟ್ರೀಯ ಭೂ ಸಂಶೋಧನಾ ಸಂಸ್ಥೆಯ ಉನ್ನತ ವಿಜ್ಞಾನಿಗಳ ಈ ಮೌಲ್ಯಮಾಪನವು ಬದರಿನಾಥ ಮತ್ತು ಕೇದಾರನಾಥಕ್ಕೆ ಹೆಬ್ಬಾಗಿಲು ಎಂದು ಪರಿಗಣಿಸಲ್ಪಟ್ಟಿರುವ ಜೋಶಿಮಠವು ಈಗಾಗಲೇ ಭೂ ಕುಸಿತಕ್ಕೆ ಒಳಗಾಗುತ್ತಿರುವ ಸಮಯದಲ್ಲಿ ಹೇಳಲಾಗಿದೆ. ಉತ್ತರಾಖಂಡದ ಇತರ ಕೆಲವು ಪ್ರದೇಶಗಳಲ್ಲೂ ಈ ಸಮಸ್ಯೆ ಎದುರಾಗಿದೆ. ರಿಕ್ಟರ್ ಮಾಪಕದಲ್ಲಿ 8 ಕ್ಕಿಂತ ಹೆಚ್ಚು ತೀವ್ರತೆಯ ಭೂಕಂಪಗಳನ್ನು 'ಮಹಾನ್ ಭೂಕಂಪಗಳು' ಎಂದು ಕರೆಯಲಾಗುತ್ತದೆ. ಇದು ಉತ್ತರಖಂಡದಲ್ಲಿ ಸಂಭವಿಸುವ ಭವಿಷ್ಯವನ್ನು ಡಾ. ರಾವ್ ನುಡಿದಿದ್ದಾರೆ.

ಇಡೀ ಹಿಮಾಲಯ ಪ್ರದೇಶದಲ್ಲಿ ಭೀಕರ ಭೂಕಂಪದ ಭೀತಿ

ಇಡೀ ಹಿಮಾಲಯ ಪ್ರದೇಶದಲ್ಲಿ ಭೀಕರ ಭೂಕಂಪದ ಭೀತಿ

ಟರ್ಕಿ ಮತ್ತು ಸಿರಿಯಾದಲ್ಲಿ ಸಂಭವಿಸಿದ ಪ್ರಬಲ ಭೂಕಂಪನದ ತೀವ್ರತೆ 7.8 ಆಗಿತ್ತು. NGRI ಯ ವಿಜ್ಞಾನಿಗಳ ಪ್ರಕಾರ, ತಾಂತ್ರಿಕವಾಗಿ ಇದನ್ನು 'ಮಹಾ ಭೂಕಂಪಗಳ' ವರ್ಗದಲ್ಲಿ ಇರಿಸಲಾಗುವುದಿಲ್ಲ. ಆದರೆ, ಇದರ ನಡುವೆಯೂ ಟರ್ಕಿಯಲ್ಲಿ ಭೀಕರ ವಿನಾಶ ಸಂಭವಿಸಿದೆ. ಇದಕ್ಕೆ ಹಲವು ಕಾರಣಗಳಿದ್ದು, ಕಾಮಗಾರಿ ಕಳಪೆ ಗುಣಮಟ್ಟದಿಂದ ಕೂಡಿದ್ದು, ಕಟ್ಟಡಗಳು ಕಾರ್ಡ್‌ಗಳ ಮನೆಯಂತೆ ಕುಸಿದು ಬೀಳಲು ಕಾರಣವಾಗಿವೆ. ಜಮ್ಮು ಮತ್ತು ಕಾಶ್ಮೀರದಿಂದ ಅರುಣಾಚಲ ಪ್ರದೇಶದವರೆಗೆ ವ್ಯಾಪಿಸಿರುವ ಹಿಮಾಲಯ ಪ್ರದೇಶದಲ್ಲಿ 8 ಕ್ಕಿಂತ ಹೆಚ್ಚು ತೀವ್ರತೆಯ ಭೂಕಂಪಗಳು ಸಂಭವಿಸುವ ಸಾಧ್ಯತೆಯಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಒಂದು ವೇಳೆ ವಿಜ್ಞಾನಿಗಳು ಹೇಳುದಂತೆ ಭೂಕಂಪನ ಸಂಭವಿಸಿದರೆ ಅದ್ಯಾವ ಅಪಾಯವನ್ನುಂಟು ಮಾಡುತ್ತದೆ ಎನ್ನುವ ಭೀತಿ ಎದುರಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+