Get Updates
Get notified of breaking news, exclusive insights, and must-see stories!

ರಾಜಕೀಯ ಲಾಭಕ್ಕಾಗಿ ಸಂವಿಧಾನವನ್ನು ಬಳಸಿಕೊಳ್ಳುತ್ತಿರುವ ಕಾಂಗ್ರೆಸ್‌ನಿಂದ ಡಾ. ಬಿ.ಆರ್.ಅಂಬೇಡ್ಕರ್‌ಗೆ ಅವಮಾ

ಭಾರತದ ಸಂವಿಧಾನವನ್ನು ನಾವು ಮಾತ್ರ ರಕ್ಷಿಸುತ್ತಿದ್ದೇವೆ ಎಂದು ಕಾಂಗ್ರೆಸ್ ಪಕ್ಷವು ಬಿಂಬಿಸಿಕೊಳ್ಳುತ್ತಿದೆ. ಆದರೆ, ಕಾಂಗ್ರೆಸ್ ಪಕ್ಷದ ಇತಿಹಾಸವೇ ಸಂವಿಧಾನವನ್ನು ಯಾವ ರೀತಿ ಅಗೌರವಿಸಲಾಗಿದೆ ಎನ್ನುವುದನ್ನು ಸ್ಪಷ್ಟವಾಗಿ ತೋರಿಸುತ್ತದೆ. ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ನಿರ್ಲಕ್ಷಿಸುವುದರಿಂದ ತುರ್ತು ಪರಿಸ್ಥಿತಿಯ ಸಮಯದಲ್ಲಿ ಪ್ರಜಾಪ್ರಭುತ್ವ ಸಂಸ್ಥೆಗಳನ್ನು ಹತ್ತಿಕ್ಕುವವರೆಗೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಐಎನ್‌ಸಿ) ಭಾರತೀಯ ಸಂವಿಧಾನದ ತತ್ವಗಳು ಮತ್ತು ಚೌಕಟ್ಟು ಎರಡನ್ನೂ ಪದೇ ಪದೇ ಅಪಮಾನಿಸಿದೆ.

ಭಾರತೀಯ ಸಂವಿಧಾನದ ಪ್ರಮುಖ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ನಾಯಕತ್ವವನ್ನು ಕಾಂಗ್ರೆಸ್ ಪಕ್ಷವು ಎಂದಿಗೂ ಒಪ್ಪಿಕೊಂಡಿಲ್ಲ ಹಾಗೂ ಗೌರವಿಸಿಯೂ ಇಲ್ಲ. ಡಾ.ಬಿ ಆರ್ ಅಂಬೇಡ್ಕರ್ ಅವರ ದೃಷ್ಟಿಕೋನವನ್ನು ಅಳವಡಿಸಿಕೊಳ್ಳುವ ಬದಲು ಕಾಂಗ್ರೆಸ್ ಪಕ್ಷವು ನಿರಂತರವಾಗಿ ದುರ್ಬಲಗೊಳಿಸಿದ್ದಾರೆ. ಇನ್ನು ಈ ನಿರ್ಲಕ್ಷ್ಯವು ಕೇವಲ ಸಿದ್ಧಾಂತಕ್ಕೆ ಸೀಮಿತವಾಗಿಲ್ಲ. ಸೈದ್ಧಾಂತಿಕ ಭಿನ್ನಾಭಿಪ್ರಾಯ ಮಾತ್ರವೂ ಅಲ್ಲ. ಈ ಅಪಮಾನವನ್ನು ಡಾ. ಬಿ.ಆರ್ ಅಂಬೇಡ್ಕರ್ ಅವರ ಜೀವನದುದ್ದಕ್ಕೂ ಉದ್ದೇಶಪೂರ್ವಕ ಮಾಡಲಾಗಿದೆ. ರಾಜಕೀಯ ಹಿನ್ನಡೆ ಹಾಗೂ ವೈಯಕ್ತಿಕ ತಿರಸ್ಕಾರಗಳನ್ನು ಡಾ.ಬಿ ಆರ್ ಅಂಬೇಡ್ಕರ್ ಅವರು ಎದುರಿಸಬೇಕಾಯಿತು.

Dr B R Ambedkar is insulted by the Congress which is using the Constitution for political gain

ಇನ್ನು ಡಾ.ಬಿಆರ್ ಅಂಬೇಡ್ಕರ್ ಅವರ ಪರಂಪರೆಯನ್ನು ನಾವು ರಕ್ಷಿಸುತ್ತಿದ್ದೇವೆ ಎಂದು ಕಾಂಗ್ರೆಸ್ ಹೇಳಿಕೊಳ್ಳುವುದು ವಿಚಿತ್ರವೇ ಸರಿ. ಅವರನ್ನು ಕಾಂಗ್ರೆಸ್ ಪಕ್ಷವು ನಿರಂತರವಾಗಿ ವಿರೋಧಿಸಿಕೊಂಡೇ ಬಂದಿದೆ. ಈಗ ಅವರ ಪ್ರತಿಷ್ಠೆಯನ್ನು ಎತ್ತಿಹಿಡಿಯುತ್ತಿರುವ ಕಾಂಗ್ರೆಸ್ ಪಕ್ಷವು ಹಿಂದೆ ಅವರನ್ನು ಅಧಿಕಾರದಿಂದ ದೂರವಿಡಲು ಮತ್ತು ಅವರ ಧ್ವನಿಯನ್ನು ಕ್ಷೀಣಿಸುವಂತೆ ಮಾಡಲು ಸಾಧ್ಯವಿರುವ ಎಲ್ಲಾ ಕೆಲಸಗಳನ್ನೂ ಮಾಡಿದೆ. ಇನ್ನು ಈ ಸಂಘರ್ಷ ಪ್ರಾರಂಭವಾಗಿದ್ದು 1930ರಲ್ಲಿ ಅಂಬೇಡ್ಕರ್ ಅವರು ದಲಿತರ ಪರವಾಗಿ ಮಾತನಾಡಲು ಲಂಡನ್‌ನಲ್ಲಿ ನಡೆದ ದುಂಡು ಮೇಜಿನ ಸಮ್ಮೇಳನದಲ್ಲಿ ಭಾಗವಹಿಸಿದ್ದರು.

ಇದನ್ನು ಕಾಂಗ್ರೆಸ್ ಬಹಿಷ್ಕರಿಸಿತು. ಮುಂದುವರಿದು ನ್ಯಾಯಯುತ ಪ್ರಾತಿನಿಧ್ಯವನ್ನು ಖಚಿತಪಡಿಸಿಕೊಳ್ಳಲು ದಲಿತರಿಗೆ ಪ್ರತ್ಯೇಕ ಮತದಾನದ ಅವಕಾಶ ನೀಡಬೇಕು ಎಂದು ಅವರು ಕೋರಿದಾಗ, ಮಹಾತ್ಮ ಗಾಂಧಿ ಮತ್ತು ಕಾಂಗ್ರೆಸ್ ಅದನ್ನು ಬಲವಾಗಿ ವಿರೋಧಿಸಿತ್ತು. ಆದರೆ ಅವರು ಮಾತ್ರ ದಲಿತರು ಸೇರಿದಂತೆ ಎಲ್ಲಾ ಭಾರತೀಯರ ಪರವಾಗಿ ಮಾತನಾಡಬೇಕೆಂದು ಒತ್ತಾಯಿಸಿದ್ದರು.

ಸಂವಿಧಾನ ಸಭೆಗೆ ಅಂಬೇಡ್ಕರ್ ಅವರ ಪ್ರವೇಶವನ್ನು ಕಾಂಗ್ರೆಸ್ ತಡೆಯಿತು. ಬಂಗಾಳ ಮತ್ತು ಮುಸ್ಲಿಂ ಲೀಗ್‌ನ ಬೆಂಬಲದಿಂದಾಗಿ ಅವರು ಸಂವಿಧಾನ ಸಭೆಗೆ ಪ್ರವೇಶಿಸಿದರು. ಆದರೆ, ಈಗ ಚುನಾವಣೆ ಪ್ರಚಾರಗಳಲ್ಲಿ ಅವರ ಇಮೇಜ್ ಅನ್ನು ಬಳಸಿಕೊಳ್ಳುತ್ತಿರುವ ಪಕ್ಷವಲ್ಲ. ದೇಶದ ವಿಭಜನೆಯ ನಂತರವೂ ಅವರಿಗೆ ಹೊಸ ಹುದ್ದೆಯನ್ನು ಕೊಡುವ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷವು ಅವರನ್ನು ಬಾಂಬೆ ಪ್ರವೇಶಿಸುವುದಕ್ಕೆ ಅವಕಾಶ ಮಾಡಿಕೊಟ್ಟಿತ್ತು. ಅದೂ ಸಹ ಸಂವಿಧಾನವನ್ನು ರಚಿಸುವಲ್ಲಿ ಅವರು ಪ್ರಮುಖ ಪಾತ್ರವನ್ನು ವಹಿಸಿದ್ದರಿಂದ. ಭಾರತದ ಮೊದಲ ಕಾನೂನು ಸಚಿವರಾಗಿ ಅಂಬೇಡ್ಕರ್ ಹಿಂದೂ ಕೋಡ್ ಬಿಲ್‌ನಂತಹ ಸುಧಾರಣೆಗಳನ್ನು ತರಲು ಪ್ರಯತ್ನಿಸಿದರು. ಅದು ಮಹಿಳೆಯರ ಹಕ್ಕುಗಳನ್ನು ಸುಧಾರಿಸುತ್ತಿತ್ತು. ಆದರೆ ಕಾಂಗ್ರೆಸ್ ಅದನ್ನು ಬೆಂಬಲಿಸಲು ನಿರಾಕರಿಸಿತು. ಕಡೆಗಣಿನೆಗೆ ಒಳಗಾದ ಡಾ.ಬಿಆರ್ ಅಂಬೇಡ್ಕರ್ ಅವರು 1951ರಲ್ಲಿ ರಾಜೀನಾಮೆ ನೀಡಿದರು.

ಮುಂದಿನ ಚುನಾವಣೆಯಲ್ಲಿಯೇ ಕಾಂಗ್ರೆಸ್ ಅವರ ವಿರುದ್ಧ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಮುಂದಾಯಿತು. ಜವಾಹರಲಾಲ್‌ ನೆಹರೂ ಅವರು ಸ್ವತಃ ಅವರನ್ನು ಸೋಲಿಸುವುದಕ್ಕೆ ಪ್ರಚಾರ ಮಾಡಿದರು. ಅಂಬೇಡ್ಕರ್ ಅವರು 1952ರಲ್ಲಿ ಮತ್ತು ಮತ್ತೊಮ್ಮೆ 1954 ರಲ್ಲಿ ಸೋತರು. 1956 ಅವರು ನಿಧನರಾದಾಗ ಕಾಂಗ್ರೆಸ್ ಸರ್ಕಾರ ಅವರ ಪಾರ್ಥಿವ ಶರೀರಕ್ಕೆ ಅಧಿಕೃತ ಸಾರಿಗೆ ವ್ಯವಸ್ಥೆಯನ್ನು ಸಹ ಮಾಡಲಿಲ್ಲ. ಯಾವುದೇ ರಾಷ್ಟ್ರೀಯ ಗೌರವ, ಭಾರತ ರತ್ನ ಗೌರವವನ್ನು ನೀಡಲಿಲ್ಲ. ವರ್ಷಗಳವರೆಗೆ ಸ್ಮಾರಕವನ್ನು ಸ್ಥಾಪಿಸುವ ಕೆಲಸವನ್ನೂ ಮಾಡಲಿಲ್ಲ. ಸಂಸತ್ತಿನಲ್ಲಿ ಅವರ ಭಾವಚಿತ್ರವನ್ನು ಅಳವಡಿಸುವುದಕ್ಕೆ ಸಾರ್ವಜನಿಕ ಚಳವಳಿಗಳು ಪ್ರಾರಂಭವಾಗಬೇಕಾಯಿತು.

ಈಗ ಅಂಬೇಡ್ಕರ್ ಅವರ ಆದರ್ಶಗಳನ್ನು ಎತ್ತಿಹಿಡಿಯುವುದಾಗಿ ಹೇಳಿಕೊಳ್ಳುವ ಪಕ್ಷವು, ಅಂಬೇಡ್ಕರ್ ಅವರ ಜೀವಿತಾವಧಿಯಲ್ಲಿ ಅವರನ್ನು ಅವಮಾನಿಸಿದೆ. ಅವರ ನಿರ್ಧಾರಗಳನ್ನು ವಿರೋಧಿಸಿರುವ ಹಾಗೂ ಅಗೌರವ ತೋರಿಸಿರುವ ದೀರ್ಘ ಇತಿಹಾಸವನ್ನು ಹೊಂದಿದೆ. ಈಗ ರಾಜಕೀಯ ಉದ್ದೇಶಕ್ಕಾಗಿ ಅವರ ಹೆಸರನ್ನು ಬಳಸಿಕೊಳ್ಳಲಾಗುತ್ತಿದೆ.

ತುರ್ತು ಪರಿಸ್ಥಿತಿ: ಭಾರತೀಯ ಪ್ರಜಾಪ್ರಭುತ್ವದ ಕರಾಳ ಅಧ್ಯಾಯ

ಪ್ರಜಾಪ್ರಭುತ್ವ ಮೌಲ್ಯಗಳಿಗೆ ಸಂಪೂರ್ಣ ದ್ರೋಹವೆಸಗಿರುವ ಒಂದು ಪ್ರಸಂಗವಿದ್ದರೆ, ಅದು ಜೂನ್ 25, 1975 ರಂದು ಇಂದಿರಾ ಗಾಂಧಿಯವರ ಕಾಂಗ್ರೆಸ್ ಸರ್ಕಾರ ಹೇರಿದ ತುರ್ತು ಪರಿಸ್ಥಿತಿ. 21 ತಿಂಗಳ ಅವಧಿಯು ಸಂಪೂರ್ಣ ಅಧಿಕಾರವನ್ನು ಹೇಗೆ ಸಂಪೂರ್ಣವಾಗಿ ಭ್ರಷ್ಟಗೊಳಿಸುತ್ತದೆ ಎಂಬುದಕ್ಕೆ ಇದೊಂದು ಸ್ಪಷ್ಟವಾದ ಉದಾಹರಣೆಯಾಗಿದೆ.

ಸಾರ್ವಜನಿಕ ಸ್ವಾತಂತ್ರ್ಯ ಅಮಾನತು: ಈ ಸಂದರ್ಭದಲ್ಲಿ ಮೂಲಭೂತ ಹಕ್ಕುಗಳನ್ನು ಹತ್ತಿಕ್ಕಲಾಯಿತು. ಜೀವನ ಮತ್ತು ಸ್ವಾತಂತ್ರ್ಯದ ಮೂಲಭೂತ ಹಕ್ಕು ಹೇಬಿಯಸ್ ಕಾರ್ಪಸ್ ( Habeas corpus) ರಿಟ್‌ ಅನ್ನು ಅಮಾನತುಗೊಳಿಸಲಾಯಿತು. ನ್ಯಾಯಾಂಗದ ಬಾಯಿ ಮುಚ್ಚಿಸಲಾಯಿತು. ಅಲ್ಲದೇ ಪತ್ರಿಕಾ ಮಾಧ್ಯಮವನ್ನು ಸೆನ್ಸಾರ್‌ಗೆ ಒಳಪಡಿಸಲಾಯಿತು.

ವಿರೋಧ ಪಕ್ಷವನ್ನು ಜೈಲಿಗೆ ಹಾಕಲಾಯಿತು: ಅಟಲ್ ಬಿಹಾರಿ ವಾಜಪೇಯಿ, ಎಲ್ ಕೆ ಅಡ್ವಾಣಿ, ಜಯಪ್ರಕಾಶ್ ನಾರಾಯಣ್ ಅವರಂತಹ ನಾಯಕರು ಹಾಗೂ ಪತ್ರಕರ್ತರು ಸೇರಿದಂತೆ ದೇಶದ ಪ್ರಮುಖರು ಸೇರಿದಂತೆ 1 ಲಕ್ಷಕ್ಕೂ ಹೆಚ್ಚು ರಾಜಕೀಯ ವಿರೋಧಿಗಳನ್ನು ಜೈಲಿಗೆ ಹಾಕಲಾಯಿತು. ಅವರ ಕುಟುಂಬದವರಿಗೆ ಹಿಂಸೆ ನೀಡಲಾಯಿತು. ಅಲ್ಲದೇ ದೇಶದಲ್ಲೇ ಭಯದ ವಾತಾವರಣವನ್ನು ಸೃಷ್ಟಿಸಲಾಯಿತು.

ಬಲವಂತದ ಸಂತಾನಹರಣ: ಸಂಜಯ್ ಗಾಂಧಿ ನೇತೃತ್ವದ ಕಾಂಗ್ರೆಸ್ ಆಡಳಿತವು ಕಠಿಣ ಜನಸಂಖ್ಯಾ ನಿಯಂತ್ರಣ ಕ್ರಮಗಳನ್ನು ಜಾರಿಗೆ ತಂದಿತು. ಲಕ್ಷಾಂತರ ಜನರನ್ನು, ವಿಶೇಷವಾಗಿ ಬಡವರು ಮತ್ತು ಬಡತನ ರೇಖೆಯ ಕೆಳಗೆ ಇರುವವರನ್ನು ಬಲವಂತವಾಗಿ ಸಂತಾನಹರಣ ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಯಿತು. ಇದು ಮಾನವ ಹಕ್ಕುಗಳ ಸಂಪೂರ್ಣ ಹಾಗೂ ಸ್ಪಷ್ಟ ಉಲ್ಲಂಘನೆಯಾಗಿದೆ.

ರಾಜಕೀಯ ಉದ್ದೇಶಕ್ಕಾಗಿ ಸಂವಿಧಾನಕ್ಕೆ ತಿದ್ದುಪಡಿ: ತುರ್ತು ಪರಿಸ್ಥಿತಿಯ ಸಮಯದಲ್ಲಿ 4 ನೇ ತಿದ್ದುಪಡಿಯನ್ನು ಮಾಡಲಾಯಿತು. ಇದಕ್ಕೆ ಸಾಂವಿಧಾನಿಕ ದಂಗೆ ಎಂದು ಕರೆಯಲಾಯಿತು - ಕಾಂಗ್ರೆಸ್ ಇದನ್ನು ಅಂಗೀಕರಿಸಿತು. ಸಾರ್ವಜನಿಕವಾಗಿ ಚರ್ಚೆಯನ್ನೇ ಮಾಡದೆ "ಸಮಾಜವಾದಿ" ಮತ್ತು "ಜಾತ್ಯತೀತ" ಪದಗಳನ್ನು ಸಂವಿಧಾನ ಪೀಠಿಕೆಗೆ ಸೇರಿಸಲಾಯಿತು. ಇದು ಸಂವಿಧಾನದ ಸ್ವರೂಪವನ್ನು ಮೂಲಭೂತವಾಗಿ ಬದಲಾಯಿಸಿತು. ಈ ತತ್ವಗಳನ್ನು ಎತ್ತಿಹಿಡಿಯಲು ಅಲ್ಲ, ಆದರೆ ಆಡಳಿತದ ರಾಜಕೀಯ ನಿರೂಪಣೆಯ ದೃಷ್ಟಿಯಿಂದ ಈ ಬದಲಾವಣೆಯನ್ನು ಮಾಡಲಾಯಿತು.

ಕಾಂಗ್ರೆಸ್‌ನಿಂದ ಅಂಬೇಡ್ಕರ್ ಅವರ ದೃಷ್ಟಿಕೋನಕ್ಕೆ ದ್ರೋಹ

ದಲಿತರಿಗೆ ನಿಜವಾದ ಸಬಲೀಕರಣವಿಲ್ಲ: 50 ವರ್ಷಗಳಿಗೂ ಹೆಚ್ಚು ಕಾಲ ಭಾರತವನ್ನು ಆಳಿದರೂ, ಕಾಂಗ್ರೆಸ್ ಎಸ್‌ಸಿ/ಎಸ್‌ಟಿ ಸಮುದಾಯಗಳನ್ನು ಉನ್ನತೀಕರಿಸುವಲ್ಲಿ ಅಲ್ಪ ಪ್ರಗತಿ ಸಾಧಿಸಿತು. ಸಾಮಾಜಿಕ ನ್ಯಾಯದ ಬಗ್ಗೆ ಕೇವಲ ಪ್ರಚಾರಕ್ಕೆ ಸೀಮಿತವಾಗಿದೆ. ಹಿಂದುಳಿದ ಸಮುದಾಯಗಳು ಇಂದಿಗೂ ಪೂರ್ಣ ಪ್ರಗತಿ ಸಾಧಿಸಿಲ್ಲ.

ಅಂಬೇಡ್ಕರ್‌ಗೆ ಚುನಾವಣಾ ಅವಕಾಶ ತಿರಸ್ಕರಿಸಲಾಯಿತು: ಅಂಬೇಡ್ಕರ್ ಅವರ ಪಕ್ಷವಾದ ಪರಿಶಿಷ್ಟ ಜಾತಿಗಳ ಒಕ್ಕೂಟವನ್ನು ಕಾಂಗ್ರೆಸ್ ಎಂದಿಗೂ ಬೆಂಬಲಿಸಲಿಲ್ಲ. ಬದಲಾಗಿ, ಅವರು ಚುನಾವಣಾ ರಾಜಕೀಯದಲ್ಲಿ ಪ್ರಗತಿ ಸಾಧಿಸದಂತೆ ನೋಡಿಕೊಂಡರು.

ಮತಾಂತರದ ಬಗ್ಗೆ ಅವರ ಎಚ್ಚರಿಕೆಗಳನ್ನು ನಿರ್ಲಕ್ಷಿಸಿದರು: ಅಂಬೇಡ್ಕರ್ ಅವರು ಸಾಮಾಜಿಕ ಸುಧಾರಣೆಗಾಗಿ ಪ್ರತಿಪಾದಿಸುವಾಗ ಮತಾಂತರಗಳ ವಿರುದ್ಧ ಎಚ್ಚರಿಕೆ ನೀಡಿದ್ದರು. ವಿಶೇಷವಾಗಿ ಭಾರತೀಯ ಸಾಂಸ್ಕೃತಿಕ ಮೌಲ್ಯಗಳೊಂದಿಗೆ ಹೊಂದಾಣಿಕೆಯಾಗದ ನಂಬಿಕೆಗಳ ಬಗ್ಗೆ. ಕಾಂಗ್ರೆಸ್ ಈ ಕಳವಳಗಳನ್ನು ನಿರ್ಲಕ್ಷಿಸಿದ್ದಲ್ಲದೆ, ಮತಬ್ಯಾಂಕ್ ರಾಜಕೀಯಕ್ಕಾಗಿ ಕೋಮುವಾದಿ ಓಲೈಕೆಯನ್ನು ಪ್ರೋತ್ಸಾಹಿಸಿತು.

ಬಿಜೆಪಿ ಮಾತಿನಂತೆ ನಡೆದುಕೊಂಡಿದೆ

ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ಗೌರವಿಸಲು ಬಿಜೆಪಿ ಹಲವಾರು ಸ್ಪಷ್ಟ ಕ್ರಮಗಳನ್ನು ತೆಗೆದುಕೊಂಡಿದೆ. ಕೇವಲ ಮಾತಿನಿಂದ ಮಾತ್ರವಲ್ಲ. ನೀತಿ ಮತ್ತು ಸಂಘಟನಾತ್ಮಕ ಬದಲಾವಣೆಗಳ ಮೂಲಕ.

ಅಂಬೇಡ್ಕರ್ ಸ್ಮಾರಕಗಳು ಮತ್ತು ಸಂವಿಧಾನ ದಿನ: ಪಂಚತೀರ್ಥ ಉಪಕ್ರಮ, ಸಂವಿಧಾನ ದಿನದ ಮಾನ್ಯತೆ ಮತ್ತು ದೆಹಲಿಯಲ್ಲಿ ಅಂಬೇಡ್ಕರ್ ಅಂತರರಾಷ್ಟ್ರೀಯ ಕೇಂದ್ರದ ಅಭಿವೃದ್ಧಿಯು ಅವರ ಪರಂಪರೆಯನ್ನು ಸಂರಕ್ಷಿಸುವ ಕ್ರಮವು ಬಿಜೆಪಿಯ ಬದ್ಧತೆಗೆ ಸಾಕ್ಷಿಯಾಗಿದೆ.

ಕಲ್ಯಾಣ ಯೋಜನೆಗಳು: ಬಿಜೆಪಿ ಸರ್ಕಾರಗಳ ಅಡಿಯಲ್ಲಿ, ಸ್ಟ್ಯಾಂಡ್-ಅಪ್ ಇಂಡಿಯಾ, ಮುದ್ರಾ ಯೋಜನೆ ಮತ್ತು ಇಡಬ್ಲ್ಯೂಎಸ್ ಮೀಸಲಾತಿಗಳಂತಹ ಮಹತ್ವದ ಕಲ್ಯಾಣ ಯೋಜನೆಗಳು ದಲಿತರು, ಬುಡಕಟ್ಟು ಜನಾಂಗದವರು ಮತ್ತು ಒಬಿಸಿಗಳಿಗೆ ನೇರವಾಗಿ ಪ್ರಯೋಜನವನ್ನು ನೀಡಿವೆ - ಅಂಬೇಡ್ಕರ್ ಪ್ರತಿಪಾದಿಸಿದ ಸಾಮಾಜಿಕ ನ್ಯಾಯದ ಕನಸನ್ನು ನನಸಾಗಿಸಿದೆ.

ರಾಜಕೀಯ ಪ್ರಾತಿನಿಧ್ಯ: ಬಿಜೆಪಿ ಪಕ್ಷವು ಹಿಂದುಳಿದ ಸಮುದಾಯಗಳ ನಾಯಕರನ್ನು ಉನ್ನತ ಸ್ಥಾನಗಳಿಗೆ ಏರಿಸಿದೆ. ರಾಮ್ ನಾಥ್ ಕೋವಿಂದ್ ಅವರು ರಾಷ್ಟ್ರಪತಿಯಾದರು. ಅವರ ಹಾದಿಯಾಗಿ ಹಲವು ಮಂತ್ರಿಗಳು ಮತ್ತು ರಾಜ್ಯದ ಮುಖ್ಯಮಂತ್ರಿಗಳವರೆಗೆ ಹಲವು ಪ್ರಮುಖ ಅವಕಾಶಗಳನ್ನು ಬಿಜೆಪಿ ಮಾಡಿದೆ.

ಕಾಂಗ್ರೆಸ್ಸಿನ ಬೂಟಾಟಿಕೆಗೆ ಹಿಡಿದ ಕನ್ನಡಿ!

ಆರ್‌ಎಸ್‌ಎಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ತುರ್ತು ಪರಿಸ್ಥಿತಿಗೆ ಕ್ಷಮೆಯಾಚಿಸುವಂತೆ ಕಾಂಗ್ರೆಸ್ ಪಕ್ಷವನ್ನು ಕೇಳಿದಾಗ, ಪಕ್ಷದ ಹಿಂದಿನ ನಿರ್ಧಾರಗಳು ಮತ್ತೆ ಮುನ್ನೆಲೆಗೆ ಬಂದಿವೆ. ಒಂದು ಕಾಲದಲ್ಲಿ ಸ್ವಾತಂತ್ರ್ಯಗಳನ್ನು ನಿರ್ಬಂಧಿಸಿದ್ದ ಪಕ್ಷವು ಈಗ ಸಂವಿಧಾನವನ್ನು ರಕ್ಷಿಸುತ್ತಿದ್ದೇವೆ ಎಂದು ಹೇಳುತ್ತಿದೆ. ಅದೂ ಸಹ ಆ ಪಕ್ಷ ಸಂವಿಧಾನಕ್ಕೆ ಮಾಡಿದ್ದ ಅಪಪ್ರಚಾರವನ್ನು ಮರೆತು.

ನಿಜವಾದ ಸಮಸ್ಯೆ ಸಂವಿಧಾನವನ್ನು ಯಾರು ಹೆಚ್ಚು ತೋರಿಸುತ್ತಾರೆ ಎಂಬುದರಲ್ಲ, ಆದರೆ ಕಠಿಣ ಸಮಯದಲ್ಲಿ ಅದರ ಮೌಲ್ಯಗಳನ್ನು ನಿಜವಾಗಿಯೂ ಯಾರು ರಕ್ಷಿಸಿದರು ಎಂಬುದರಲ್ಲಿ. ಕಾಂಗ್ರೆಸ್‌ಗೆ, ತುರ್ತು ಪರಿಸ್ಥಿತಿಯ ಸಮಯದಲ್ಲಿ ಹೇಗೆ ನಡೆದುಕೊಂಡಿತ್ತು ಎನ್ನುವುದನ್ನು ಸ್ವೀಕರಿಸುವುದು ಮತ್ತು ಅಂಬೇಡ್ಕರ್ ಅವರನ್ನು ಹೇಗೆ ನಡೆಸಿಕೊಂಡಿತು ಎನ್ನುವ ವಿಚಾರದಲ್ಲಿ ಸಾರ್ವಜನಿಕ ನಂಬಿಕೆಯನ್ನು ಮರಳಿ ಪಡೆಯಲು ಇರುವ ಪ್ರಮುಖ ಹಂತಗಳಾಗಿರಬಹುದು. ಅದು ಆಗುವ ವರೆಗೆ ಅನೇಕ ಜನರು ಪಕ್ಷದ ಪ್ರಸ್ತುತ ನಿಲುವನ್ನು ಪ್ರಶ್ನಿಸುತ್ತಲೇ ಇರುತ್ತಾರೆ - ಯಾಕೆಂದರೆ ಇತಿಹಾಸ ಯಾವಾಗಲೂ ಮುಖ್ಯವಾಗುತ್ತದೆ. "ಇತಿಹಾಸದಿಂದ ಪಾಠ ಕಲಿಯದವರು ಇತಿಹಾಸ ಸೃಷ್ಟಿಸಲಾರರು"

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+