ದೂರದರ್ಶನ ಲಾಂಛನ ಬದಲಿಸಲಿದೆ ಕೇಂದ್ರ ಸರ್ಕಾರ
ತನ್ನ ಲಾಂಛನ ಬದಲಿಸಲು ದೂರದರ್ಶನ ಚಿಂತನೆ. ಹೊಸ ಲಾಂಛನಕ್ಕಾಗಿ ಬಿಡ್ ಆಹ್ವಾನ. ಸಾಂಪ್ರದಾಯಿಕ ಚೌಕಟ್ಟಿನಿಂದ ಲೋಗೋಗಳಿಂದ ಆಚೆ ಬರಲು ನಿರ್ಧರಿಸಿರುವ ಸಂಸ್ಥೆ.
ನವದೆಹಲಿ, ಜುಲೈ 25: ಸರ್ಕಾರಿ ಸ್ವಾಮ್ಯದ ದೂರದರ್ಶನ ಕೇಂದ್ರವು 1959ರಿಂದ ಉಪಯೋಗಿಸುತ್ತಿದ್ದ ತನ್ನ ಲಾಂಛನವನ್ನು ಬದಲಿಸಲು ಕೇಂದ್ರ ಮಾಹಿತಿ ಮತ್ತು ಪ್ರಚಾರ ಇಲಾಖೆ ನಿರ್ಧರಿಸಿದ್ದು, ಹೊಸ ಲಾಂಛನವನ್ನು ನೀಡಬಯಸುವವರಿಗಾಗಿ ಬಿಡ್ ಗಳನ್ನು ಆಹ್ವಾನಿಸಿದೆ.
ಸೋಮವಾರ ಸಂಜೆ ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸಿರುವ ದೂರದರ್ಶನ, ದೇಶದ ಸಂಸ್ಥೆಗಳಿಗೆ ಹಾಗೂ ನಾಗರಿಕರಿಗೆ ಉತ್ತಮವಾದ ಲಾಂಛನಗಳನ್ನು ನೀಡುವಂತೆ ಕೋರಿದೆ.

ಲಾಂಛನ ಬದಲಾವಣೆಯ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿರುವ ಸಂಸ್ಥೆಯು, ಸಾಂಪ್ರದಾಯಿಕ ಮಾದರಿಯ ಲಾಂಛನವನ್ನು ಕೈಬಿಟ್ಟು, ಇಂದಿನ ಯುವ ಜನತೆಯನ್ನು ಆಕರ್ಷಿಸಬಲ್ಲ ಹಾಗೂ ಮಕ್ಕಳ ಸ್ವಾತಂತ್ರ್ಯವನ್ನು ಒತ್ತಿ ಹೇಳಬಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಲಾಂಛನ ತಯಾರಿಸಿಕೊಡುವಂತೆ ಕೇಳಿಕೊಂಡಿದೆ.
ಹಳೆಯ ಲಾಂಛನದ ಮೇಲೆ ಕಣ್ಣಿನ ಹೋಲಿಕೆ ಇದ್ದು, ಇಂದಿನ ಪೀಳಿಗೆ ದೂರದರ್ಶನದೊಡನೆ ಸಂವಹನ ಸಾಧಿಸಲು ಸೋಲುತ್ತಿರುವುದರಿಂದ ಲಾಂಛನವನ್ನು ಬದಲಾಯಿಸಲಾಗುತ್ತಿದೆ ಎಂದು ಪ್ರಸಾರ ಭಾರತಿಯ ಸಿಇಓ ಶಶಿ ಶೇಖರ್ ಅವರು ಅಭಿಪ್ರಾಯ ಪಟ್ಟಿದ್ದಾರೆ.
Interesting spectrum of views on Doordarshan Logo from Renuka Sahane to Shekhar Suman https://t.co/s2F6QzHREK
— Shashi Shekhar (@shashidigital) July 28, 2017
ಹೊಸ ಲಾಂಛನದಲ್ಲಿ ನವ ಭಾರತದ ಆಶೋತ್ತರಗಳನ್ನು ಬಿಂಬಿಸುವುದಲ್ಲದೆ, ಹಳೆಯದನ್ನು ಉಳಿಸಿಕೊಳ್ಳಲಾಗಿದೆ. ಈ ಹೊಸ ಲಾಂಛನವನ್ನು ರೂಪಿಸುವುದಕ್ಕಾಗಿ ಸ್ಪರ್ಧೆಯನ್ನೂ ಏರ್ಪಡಿಸಿದೆ. ಲೋಗೋ ಕಳಿಸಲು ಕಡೆಯ ದಿನಾಂಕ - 13ನೇ ಆಗಸ್ಟ್, 2017. ಈ ಸ್ಪರ್ಧೆಯಲ್ಲಿ ಗೆದ್ದವರಿಗೆ 1 ಲಕ್ಷ ರುಪಾಯಿ ಬಹುಮಾನವನ್ನೂ ಸರಕಾರ ಘೋಷಿಸಿದೆ.
-
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ -
"ಜೈಲಲ್ಲಿ ನಮಗೆ ಮೊಬೈಲ್ ಕೊಟ್ಟಿದ್ದು ಡಿಜಿಪಿ ಅಲೋಕ್ ಕುಮಾರ್" ಎಂದ ಕೈದಿಗಳು, ವಿಡಿಯೋ ವೈರಲ್ -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
ದುಬೈನ ಬುರ್ಜ್ ಖಲೀಫಾ ಎದುರು ತಾಯಿಯ ಸಂಭ್ರಮ: ಅಮ್ಮನ ಆಸೆ ಈಡೇರಿಸಿದ ಮಗಳ Video Viral -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Bengaluru: ಲಂಬೋರ್ಗಿನಿ ಪ್ರಕರಣ; ಕಾರೇ ರಿಜಿಸ್ಟರ್ ಆಗಿಲ್ಲ ಎಂದ RTO, ಸ್ಟಂಟ್ ಅಲ್ಲ ಬ್ರೇಕ್ ಸ್ಕಿಡ್ ಎಂದ ರಿಕ್ಕಿ ರೈ












Click it and Unblock the Notifications