ದೂರದರ್ಶನ ಲಾಂಛನ ಬದಲಿಸಲಿದೆ ಕೇಂದ್ರ ಸರ್ಕಾರ
ತನ್ನ ಲಾಂಛನ ಬದಲಿಸಲು ದೂರದರ್ಶನ ಚಿಂತನೆ. ಹೊಸ ಲಾಂಛನಕ್ಕಾಗಿ ಬಿಡ್ ಆಹ್ವಾನ. ಸಾಂಪ್ರದಾಯಿಕ ಚೌಕಟ್ಟಿನಿಂದ ಲೋಗೋಗಳಿಂದ ಆಚೆ ಬರಲು ನಿರ್ಧರಿಸಿರುವ ಸಂಸ್ಥೆ.
ನವದೆಹಲಿ, ಜುಲೈ 25: ಸರ್ಕಾರಿ ಸ್ವಾಮ್ಯದ ದೂರದರ್ಶನ ಕೇಂದ್ರವು 1959ರಿಂದ ಉಪಯೋಗಿಸುತ್ತಿದ್ದ ತನ್ನ ಲಾಂಛನವನ್ನು ಬದಲಿಸಲು ಕೇಂದ್ರ ಮಾಹಿತಿ ಮತ್ತು ಪ್ರಚಾರ ಇಲಾಖೆ ನಿರ್ಧರಿಸಿದ್ದು, ಹೊಸ ಲಾಂಛನವನ್ನು ನೀಡಬಯಸುವವರಿಗಾಗಿ ಬಿಡ್ ಗಳನ್ನು ಆಹ್ವಾನಿಸಿದೆ.
ಸೋಮವಾರ ಸಂಜೆ ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸಿರುವ ದೂರದರ್ಶನ, ದೇಶದ ಸಂಸ್ಥೆಗಳಿಗೆ ಹಾಗೂ ನಾಗರಿಕರಿಗೆ ಉತ್ತಮವಾದ ಲಾಂಛನಗಳನ್ನು ನೀಡುವಂತೆ ಕೋರಿದೆ.

ಲಾಂಛನ ಬದಲಾವಣೆಯ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿರುವ ಸಂಸ್ಥೆಯು, ಸಾಂಪ್ರದಾಯಿಕ ಮಾದರಿಯ ಲಾಂಛನವನ್ನು ಕೈಬಿಟ್ಟು, ಇಂದಿನ ಯುವ ಜನತೆಯನ್ನು ಆಕರ್ಷಿಸಬಲ್ಲ ಹಾಗೂ ಮಕ್ಕಳ ಸ್ವಾತಂತ್ರ್ಯವನ್ನು ಒತ್ತಿ ಹೇಳಬಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಲಾಂಛನ ತಯಾರಿಸಿಕೊಡುವಂತೆ ಕೇಳಿಕೊಂಡಿದೆ.
ಹಳೆಯ ಲಾಂಛನದ ಮೇಲೆ ಕಣ್ಣಿನ ಹೋಲಿಕೆ ಇದ್ದು, ಇಂದಿನ ಪೀಳಿಗೆ ದೂರದರ್ಶನದೊಡನೆ ಸಂವಹನ ಸಾಧಿಸಲು ಸೋಲುತ್ತಿರುವುದರಿಂದ ಲಾಂಛನವನ್ನು ಬದಲಾಯಿಸಲಾಗುತ್ತಿದೆ ಎಂದು ಪ್ರಸಾರ ಭಾರತಿಯ ಸಿಇಓ ಶಶಿ ಶೇಖರ್ ಅವರು ಅಭಿಪ್ರಾಯ ಪಟ್ಟಿದ್ದಾರೆ.
Interesting spectrum of views on Doordarshan Logo from Renuka Sahane to Shekhar Suman https://t.co/s2F6QzHREK
— Shashi Shekhar (@shashidigital) July 28, 2017
ಹೊಸ ಲಾಂಛನದಲ್ಲಿ ನವ ಭಾರತದ ಆಶೋತ್ತರಗಳನ್ನು ಬಿಂಬಿಸುವುದಲ್ಲದೆ, ಹಳೆಯದನ್ನು ಉಳಿಸಿಕೊಳ್ಳಲಾಗಿದೆ. ಈ ಹೊಸ ಲಾಂಛನವನ್ನು ರೂಪಿಸುವುದಕ್ಕಾಗಿ ಸ್ಪರ್ಧೆಯನ್ನೂ ಏರ್ಪಡಿಸಿದೆ. ಲೋಗೋ ಕಳಿಸಲು ಕಡೆಯ ದಿನಾಂಕ - 13ನೇ ಆಗಸ್ಟ್, 2017. ಈ ಸ್ಪರ್ಧೆಯಲ್ಲಿ ಗೆದ್ದವರಿಗೆ 1 ಲಕ್ಷ ರುಪಾಯಿ ಬಹುಮಾನವನ್ನೂ ಸರಕಾರ ಘೋಷಿಸಿದೆ.
-
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
Karnataka Weather: ಕರ್ನಾಟಕದಲ್ಲಿ ಹೆಚ್ಚಿದ ಬಿಸಿಲ ಧಗೆ: ಬಳ್ಳಾರಿಯಲ್ಲಿ ಗರಿಷ್ಠ ತಾಪಮಾನ ದಾಖಲು, ಬೀದರ್ನಲ್ಲಿ ಚಳಿ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Expenses: ಬೆಂಗಳೂರು ಎಷ್ಟು ದುಬಾರಿ, ಅಮೆಜಾನ್ ಉದ್ಯೋಗಿ ಹಂಚಿಕೊಂಡ ವಾರಾಂತ್ಯದ ವೆಚ್ಚದ ವಿಡಿಯೋ ವೈರಲ್ -
Gold Rate: ಸತತ ಇಳಿಕೆಯ ನಂತರ ಚಿನ್ನದ ಬೆಲೆ ಮತ್ತೆ ಏರಿಕೆ: ಬೆಂಗಳೂರಿನಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ವಿವರ ಇಲ್ಲಿದೆ ನೋಡಿ -
Vijay Divorce: ನನ್ನ ಸಮಸ್ಯೆಗಳ ಬಗ್ಗೆ ನೀವು ತಲೆಕೆಡಿಸಿಕೊಳ್ಳಬೇಡಿ: ಡಿವೋರ್ಸ್ ಬಗ್ಗೆ ಕೊನೆಗೂ ಮೌನ ಮುರಿದ ನಟ ದಳಪತಿ ವಿಜಯ್ -
Horoscope March 8: ಈ ರಾಶಿಯವರಿಗೆ ಉದ್ಯೋಗದಲ್ಲಿ ಒಳಿತು, ಹೂಡಿಕೆಗಳಿಂದ ಲಾಭ, ದಿನ ಭವಿಷ್ಯ -
Kamal Haasan: ನಿಮ್ಮ ಕೆಲಸ ಎಷ್ಟಿದೆಯೋ ಅಷ್ಟು ನೋಡಿಕೊಳ್ಳಿ; ಭಾರತ ಸಾರ್ವಭೌಮ ರಾಷ್ಟ್ರ: ಟ್ರಂಪ್ಗೆ ಕಮಲ್ ಹಾಸನ್ ತಿರುಗೇಟು -
ಚಿಕ್ಕಬಳ್ಳಾಪುರದ ಜಿಲ್ಲೆಯ ಸತ್ಯಸಾಯಿ ಗ್ರಾಮಕ್ಕೆ ನಟ ರಿಷಬ್ ಶೆಟ್ಟಿ ಭೇಟಿ: ಮಾನವೀಯ ಕಾರ್ಯಗಳಿಗೆ ಶ್ಲಾಘನೆ -
Kiccha Sudeep: ಸುದೀಪ್ ನಂ 1 ಅಂತ ಗೂಗಲ್ನಲ್ಲಿ ಬರುತ್ತಾ, ನಟ ಆದ್ರೆ ತಲೆ ಮೇಲೆ ಕೊಂಬು ಇದ್ಯಾ: ಡಾಗ್ ಸತೀಶ್, ವೈರಲ್ ವಿಡಿಯೋ -
IMD Weather Forecast: ಭಾರತ vs ನ್ಯೂಜಿಲೆಂಡ್ ಟಿ20 ವಿಶ್ವಕಪ್ ಫೈನಲ್: ಅಹಮದಾಬಾದ್ನಲ್ಲಿ ಹವಾಮಾನ ಹೇಗಿದೆ, ಮಳೆ ಭೀತಿ ಇದೆಯೇ -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು












Click it and Unblock the Notifications