'ಸಲಿಂಗಿಗಳ ಪ್ರೇಮ, ಕಾಮ ಓಕೆ, ಮದುವೆ ಏಕೆ?'
ನವದೆಹಲಿ, ಸೆಪ್ಟೆಂಬರ್ 07: ಸಲಿಂಗ ಕಾಮವನ್ನು ಸುಪ್ರೀಂಕೋರ್ಟ್ ಅಪರಾಧ ಮುಕ್ತಗೊಳಿಸಿ ಮಹತ್ವದ ತೀರ್ಪು ನೀಡಿರಬಹುದು. ಆದರೆ, ಸಲಿಂಗ ಪ್ರೇಮ, ಕಾಮಕ್ಕೆ ಓಕೆ ಎಂದು ಬಲವಂತವಾಗಿ ಒಪ್ಪಿಕೊಂಡಿರುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು, ಸಲಿಂಗಿಗಳ ಮದುವೆಗೆ ಒಪ್ಪುವುದು ಕಷ್ಟ ಎಂಬ ಸುದ್ದಿ ಬಂದಿದೆ.
ಐಪಿಸಿ ಸೆಕ್ಷನ್ 377ರದ್ದು ಮಾಡುವಂತೆ ಸುಪ್ರೀಂಕೋರ್ಟ್ ನೀಡಿರುವ 493 ಪುಟಗಳ ತೀರ್ಪನ್ನು ಕೇಂದ್ರ ಸರ್ಕಾರ ಬೆಂಬಲಿಸಿದೆಯಾದರೂ, ಸಲಿಂಗ ವಿವಾಹವನ್ನು ಒಪ್ಪುವ ಸಾಧ್ಯತೆ ಇಲ್ಲ.
ಸಾಂಪ್ರದಾಯಿಕ ಹಿಂದೂಗಳು ಸಲಿಂಗ ಮದುವೆಗೆ ಅವಕಾಶ ನೀಡುವುದರ ವಿರುದ್ಧವಾಗಿದ್ದಾರೆ ಎಂದು ಕೇಂದ್ರ ಸರ್ಕಾರದ ಇಲಾಖೆ ಅಧಿಕಾರಿಯೊಬ್ಬರು ಹೇಳಿದ್ದಾರೆ.

ವಯಸ್ಕರು ಸಹಮತಿಯಿಂದ ಸಲಿಂಗದಲ್ಲಿ ತೊಡಗುವುದನ್ನು ಅಪರಾಧ ಮುಕ್ತಗೊಳಿಸುವುದಕ್ಕೆ ಸಮ್ಮತಿ ಇದೆ. ಆದರೆ, ಸಲಿಂಗಿಗಳ ನಡುವಿನವಿವಾಹವನ್ನು ಕಾನೂನುಬದ್ಧಗೊಳಿಸುವ ಬೇಡಿಕೆಯನ್ನು ಸರ್ಕಾರ ವಿರೋ ಧಿಸಲಿದೆ ಎಂದಿದ್ದಾರೆ.
ಸುಪ್ರೀಂ ಕೋ ರ್ಟ್ ತೀರ್ಪಿನ ಕಾರಣದಿಂದಾಗಿ ಸಲಿಂಗ ವಿವಾಹಕ್ಕೆ ದಾರಿ ಮಾಡಿಕೊಟ್ಟಂತಾಗುವುದಿಲ್ಲವೇ? ಎಂಬ ಪ್ರಶ್ನೆಗೆ ಉತ್ತರಿಸಿರುವ ಸರ್ಕಾರದ ಉನ್ನತ ಪದಾಧಿಕಾರಿ, ಈ ವಿಷಯದ ಬಗ್ಗೆ ದೇಶದಲ್ಲಿ ತೀವ್ರವಾಗಿ ಒಡಕಿದೆ. ಜಾಗತಿಕವಾಗಿಯೂ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಅಮೆರಿಕದಲ್ಲೂ ಸಹ ಕೆಲ ರಾಜ್ಯಗಳಲ್ಲಿ ಸಲಿಂಗ ವಿವಾಹದ ಮೇಲೆ ನಿರ್ಬಂಧವಿದೆ ಎಂದಿದ್ದಾರೆ.
ಆರ್.ಎಸ್.ಎಸ್. ಸಹ ಸರ್ಕಾರದ ನಿಲುವನ್ನು ಬೆಂಬಲಿಸಿದೆ. ಸೆಕ್ಷನ್ 377 ಅನ್ನು ಎಲ್ಜಿಬಿಟಿ ಸಮುದಾಯವನ್ನು ಪೀಡಿಸುವ ಅಸ್ತ್ರವನ್ನಾಗಿಯೂ ಬಳಸಲಾಗುತ್ತಿತ್ತು. ಇದು ಪಕ್ಷಪಾತಕ್ಕೂ ಕಾರಣವಾಗಿತ್ತು ಎಂದು ತೀರ್ಪಿನಲ್ಲಿ ಹೇಳಲಾಗಿದೆ.
ಪ್ರತ್ಯೇಕ ತೀರ್ಪು ನೀಡಿರುವ ನ್ಯಾಯಮೂರ್ತಿ ಇಂದು ಮಲ್ಹೋತ್ರಾ, ಸಲಿಂಗಿಗಳು ಶತಮಾನದಿಂದ ಎದುರಿಸಿದ ಪೀಡನೆಗಾಗಿ ಅವರಿಗೆ ಹಾಗೂ ಅವರ ಕುಟುಂಬದವರಿಗೆ ಇತಿಹಾಸ ಕ್ಷಮೆ ಕೋರಬೇಕಿದೆ ಎಂದಿದ್ದಾರೆ. ಆದರೆ, ವಯಸ್ಕರು ಪ್ರಾಣಿಗಳ ಜೊತೆ ಲೈಂಗಿಕ ಚಟುವಟಿಕೆ ನಡೆಸುವುದು ಸೆಕ್ಷನ್ 377ರ ಅನ್ವಯ ಅಪರಾಧವಾಗಿ ಮುಂದುವರೆಯಲಿದೆ ಎಂದು ತಿಳಿಸಲಾಗಿದ
ಒಂದೇ ಲಿಂಗದವರು ಮದುವೆಯಾಗಲು ವಿವಾಹ ಕಾಯ್ದೆಯಲ್ಲಿ ಇನ್ನೂ ಯಾವುದೇ ಸೆಕ್ಷನ್ ಓಪನ್ ಆಗಿಲ್ಲ. ವಿಶೇಷ ಮದುವೆ ಕಾಯ್ದೆ ಗೆ ತಿದ್ದುಪಡಿ ಅಗತ್ಯ, ಈ ಬಗ್ಗೆ ಸರ್ವಪಕ್ಷಗಳ ನಿಲುವು ಪಡೆದು, ಸಂಸತ್ತಿನಲ್ಲಿ ಚರ್ಚೆಯಾಗಿ, ನಂತರ ಕಾನೂನಾಗಿ ಹೊರಬರಬೇಕಿದೆ. ಈಗಾಗಲೇ ಅನೇಕ ಸಲಿಂಗಿಗಳು ಭಾರತದಲ್ಲೂ ಮದುವೆ ಮಾಡಿಕೊಂಡಿದ್ದಾರೆ. ಆದರೆ, ಮದುವೆ ನೋಂದಣಿ ಮಾಡಿಕೊಳ್ಳಲು ಸಾಧ್ಯವಾಗಿಲ್ಲ.
-
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
India Rain Forecast: ಮುಂದಿನ 5 ದಿನ ಈ ಭಾಗಗಳಲ್ಲಿ ವ್ಯಾಪಕ ಮಳೆ, ಉಷ್ಣ ಅಲೆ ಎಚ್ಚರಿಕೆ -
ಶೃಂಗೇರಿ ಮಠದಿಂದ ಶಾಲಾ ಮಕ್ಕಳಿಗೆ ಸುವರ್ಣಾವಕಾಶ: 'ರಾಮಾಯಣ ಪರೀಕ್ಷೆ' ಬರೆದು 50 ಸಾವಿರ ರೂ. ನಗದು ಗೆಲ್ಲಿ -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ












Click it and Unblock the Notifications