ತ್ರೈಮಾಸಿಕ ಜಿಡಿಪಿ ನಂಬಬೇಡಿ, ಇದೆಲ್ಲಾ ಸುಳ್ಳು: ಸುಬ್ರಮಣಿಯನ್ ಸ್ವಾಮಿ
ನವದೆಹಲಿ, ಡಿಸೆಂಬರ್ 24: ಜಿಡಿಪಿಗೆ ಸಂಬಂಧಿಸಿದಂತೆ ಕೇಂದ್ರ ಬಿಜೆಪಿ ಸರಕಾರವನ್ನು ಅದೇ ಪಕ್ಷದ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಟೀಕಿಸಿದ್ದಾರೆ.
ಅಪನಗದೀಕರಣ ಜಿಡಿಪಿ ಮತ್ತು ಆರ್ಥಿಕತೆ ಮೇಲೆ ಯಾವುದೇ ಪರಿಣಾಮ ಬೀರಿಲ್ಲ ಎಂಬುದನ್ನು ತೋರಿಸುವಂತೆ ಕೇಂದ್ರ ಸಂಖ್ಯಾಶಾಸ್ತ್ರ ಸಂಸ್ಥೆಯ (ಸಿಎಸ್ಒ) ಹಿರಿಯ ಅಧಿಕಾರಿಗಳ ಮೇಲೆ ನರೇಂದ್ರ ಮೋದಿ ಸರಕಾರ ಒತ್ತಡ ಹೇರಿದೆ ಎಂದು ಅವರು ಆರೋಪಿಸಿದ್ದಾರೆ.

ಅಹಮದಾಬಾದ್ ನಲ್ಲಿ ಶನಿವಾರ ಚಾರ್ಟೆಡ್ ಅಕೌಂಟೆಂಟ್ ಗಳನ್ನು ಉದ್ದೇಶಿಸಿ ಮಾತನಾಡಿದ ಸುಬ್ರಮಣಿಯನ್ ಸ್ವಾಮಿ , "ತ್ರೈಮಾಸಿಕ ಜಿಡಿಪಿ ಹಿಂದೆ ಹೋಗಬೇಡಿ. ಇದೆಲ್ಲಾ ಬೋಗಸ್. ಕೇಂದ್ರ ಸಂಖ್ಯಾಶಾಸ್ತ್ರ ಸಂಸ್ಥೆಯನ್ನು ಹುಟ್ಟುಹಾಕಿದವರು ನನ್ನ ತಂದೆ. ಹಾಗಾಗಿ ನಾನು ಈ ಮಾತನ್ನು ಹೇಳುತ್ತಿದ್ದೇನೆ. ಕೆಲವು ದಿನಗಳ ಹಿಂದೆ ಕೇಂದ್ರ ಸಚಿವ ಸದಾನಂದ ಗೌಡರ ಜತೆ ನಾನು ಅಲ್ಲಿಗೆ ಹೋಗಿದ್ದೆ. ಆಗ ಅವರು ಸಿಎಸ್ಒ ವ್ಯಕ್ತಿಗೆ ಕರೆ ಮಾಡಿದರು. ಅಪನಗದೀಕರಣದಿಂದ ಜಿಡಿಪಿಗೆ ಯಾವುದೇ ಹೊಡೆತ ಬಿದ್ದಿಲ್ಲ ಎಂದು ತೋರಿಸಲು ಒತ್ತಡ ಇತ್ತು. ಹಾಗಾಗಿ ಅಪನಗದೀಕರಣದಿಂದ ಜಿಡಿಪಿಗೆ ಏನೂ ಹಾನಿಯಾಗಲಿಲ್ಲ ಎಂದು ಅವರು ಮಾಹಿತಿ ನೀಡಿದರು," ಎಂದು ಹೇಳಿದ್ದಾರೆ.
ನನಗೆ ಗೊತ್ತಿತ್ತು ಪರಿಣಾಮ ಆಗಿದೆ ಎಂದು. ಇದರಿಂದ ನಾನು ನರ್ವಸ್ ಆದೆ. ಆಗ ನಾನು ಸಿಎಸ್ಒ ನಿರ್ದೇಶಕರ ಬಳಿ ಕೇಳಿದೆ,' ನೀವು ಹೇಗೆ ಜಿಡಿಪಿ ಲೆಕ್ಕ ಹಾಕಿದ್ರಿ' ಎಂದು.
"'ಕಳೆದ ವರ್ಷ ಔಪಚಾರಿಕ ವಲಯದ ಉತ್ಪಾದನೆಯ ಅನುಪಾತವಾಗಿ ಅನೌಪಚಾರಿಕ ಕ್ಷೇತ್ರದ ಉತ್ಪಾದನೆಯ ಜತೆ ಅನ್ವಯಿಸಲಾಗಿತ್ತು. ಜನವರಿಯಲ್ಲಿ ಇದನ್ನು ಸಂಘಟಿತ ವಲಯಕ್ಕೆ ಅನ್ವಯಿಸಲ್ಪಟ್ಟಿದೆ' ಎಂದು ಅವರು ನನಗೆ ಹೇಳಿದ್ದಾರೆ. ಸಂಬಂಧವು ಬದಲಾಗಿದೆ ಎಂದು ನಾನು ಅವರಿಗೆ ಹೇಳಿದೆ. ಆಗ ಅವರು, 'ನಾನು ಏನು ಮಾಡುವುದು? ನಾನು ಒತ್ತಡದಿಂದ ಈ ಮಾಹಿತಿ ನೀಡಿದ್ದೇನೆ,' ಎಂದರು. ಹಾಗಾಗಿ ಯಾವುದೇ ತ್ರೈಮಾಸಿಕ ಡೇಟಾವನ್ನು ನಂಬಬೇಡಿ "ಎಂದು ಸ್ವಾಮಿ ಹೇಳಿದ್ದಾರೆ. ಮತ್ತು ವಾರ್ಷಿಕ ಜಿಡಿಪಿ ಅಂಕಿಅಂಶಗಳನ್ನು ಮಾತ್ರ ನಂಬಿ ಎಂದು ಸ್ವಾಮಿ ಕಿವಿ ಮಾತು ಹೇಳಿದ್ದಾರೆ.
ಕೆಲವು ತಿಂಗಳ ಹಿಂದೆ ಸೆಪ್ಟೆಂಬರ್ 2017ರ ತ್ರೈಮಾಸಿಕದಲ್ಲಿ ಜಿಡಿಪಿ 6.3ಕ್ಕೆ ಏರಿಕೆಯಾಗಿದೆ ಎಂದು ಅರುಣ್ ಜೇಟ್ಲಿ ಹೇಳಿದ್ದರು. ಈ ಹಿಂದೆ ಜೂನ್ ತ್ರೈಮಾಸಿಕದಲ್ಲಿ ಕೇವಲ 5.7 ಜಿಡಿಪಿ ಇದ್ದು ಇದೀಗ ಜಿಡಿಪಿ ಏರಿಕೆಯಾಗಿದೆ ಎಂದು ಜೇಟ್ಲಿ ಹೇಳಿದ್ದರು. ಇದೀಗ ಈ ಡೇಟಾವನ್ನು ಸ್ವಾಮಿ ತಳ್ಳಿ ಹಾಕಿದ್ದಾರೆ. "ಜತೆಗೆ ಮೂಡೀಸ್ ಮತ್ತು ಫಿಟ್ಚೆಸ್ ನ್ನು ನಂಬಬೇಡಿ. ನೀವು ಅವರಿಗೆ ಹಣ ನೀಡಿ ನಿಮಗೆ ಬೇಕಾದ ಡೇಟಾ ಪಡೆಯಬಹುದು," ಎಂದು ಸ್ವಾಮಿ ಹಗರುವಾಗಿ ಮಾತನಾಡಿದ್ದಾರೆ.
-
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ












Click it and Unblock the Notifications