Get Updates
Get notified of breaking news, exclusive insights, and must-see stories!

Vijayakanth Passed away: ಡಿಎಂಕೆ ಮುಖ್ಯಸ್ಥ, ನಟ 'ವಿಜಯಕಾಂತ್' ಕೊರೊನಾದಿಂದ ನಿಧನ

ಚೆನ್ನೈ, ಡಿಸೆಂಬರ್ 28: ತಮಿಳುನಾಡಿನ ದೇಸಿಯ ಮುರ್ಪೊಕ್ಕು ದ್ರಾವಿಡ ಕಳಗಂ (DMDK) ಮುಖ್ಯಸ್ಥ ನಾಯಕ ವಿಜಯಕಾಂತ್ (71)ಅವರು ಕೊರೊನಾದಿಂದ ಬಳುತ್ತಿದ್ದರು. ಇತ್ತೀಚೆಗಷ್ಟೇ ಆಸ್ಪತ್ರೆಯಿಂದ ಬಿಡುಗಡೆ ಆಗಿ ಬಂದಿದ್ದರು. ಅವರ ಆರೋಗ್ಯದಲ್ಲಿ ಮತ್ತೆ ಏರುಪೇರಾಗಿದ್ದು, ಚಿಕಿತ್ಸೆ ಫಲಿಸದೇ ಇಂದು ಗುರುವಾರ ಬೆಳಗ್ಗೆ ಅವರು ನಿಧನರಾದರು.

ನಟ ರಾಜಕಾರಣಿಯಾಗಿರುವ ಡಿಎಂಡಿಕೆ ಮುಖ್ಯಸ್ಥ ವಿಜಯಕಾಂತ್ ಅವರಿಗೆ ಕೋವಿಡ್ ತಪಾಸಣೆಯಲ್ಲಿ ಪಾಸಿಟಿವ್ ವರದಿ ಬಂದಿತ್ತು. ಅವರು ಅನಾರೋಗ್ಯ ದಿಂದ ಬಳಲುತ್ತಿದ್ದರು ಎನ್ನಲಾಗಿದೆ. ಸಾವಿಗೂ ಮುನ್ನ ಅವರಿಗೆ ವೆಂಟಿಲೇಟರ್‌ನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಕೊನೆಯುಸಿರೆಳಿದಿದ್ದಾರೆ.

DMDK Chief and Actor Vijayakanth Passed Away after Tested Positive for Covid

ಕಳೆದ ನವೆಂಬರ್ 18ರಂದು ವಿಜಯಕಾಂತ್ ಅವರು ಕೆಮ್ಮು, ನೆಗಡಿ ಸೇರಿದಂತೆ ಅನಾರೋಗ್ಯ ದಿಂದ ಬಳಲುತ್ತಿದ್ದರು. ಈ ವೇಳೆ ಅವರನ್ನು ಚೆನ್ನೈನ MIOT ಆಸ್ಪತ್ರೆಗೆ ದಾಖಲಾಗಿತ್ತು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸಿದ್ದ ಅವರು, ಗುಣಮುಖರಾದರು. ಬಳಿಕ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಿ ಕರೆತರಲಾಗಿತ್ತು. ಗುಣಮುಖರಾದ ಬಗ್ಗೆ ವೈದ್ಯರು, ಪಕ್ಷದಿಂದ ಅಧೀಕೃತ ಮಾಹಿತಿ ದೊರೆತಿತ್ತು.

ಡಿಸ್ಚಾರ್ಜ್ ಬಳಿಕ ಆರೋಗ್ಯದಲ್ಲಿ ಏರುಪೇರು

ಅದಾದ ಬಳಿಕ ಇತ್ತೀಚೆಗೆ ಅವರ ಆರೋಗ್ಯ ಏರುಪೇರಾದ ಹಿನ್ನೆಲೆಯಲ್ಲಿ ಆರೋಗ್ಯ ತಪಾಸಣೆ ವೇಳೆ ವಿಜಯಕಾಂತ್‌ ಅವರಿಗೆ ಕೋವಿಡ್ ಸೋಂಕು ತಗುಲಿರುವುದು ದೃಢವಾಯಿತು. ಹೀಗಾಗಿ ಅವರಿಗೆ ಆಸ್ಪತ್ರೆಯಲ್ಲಿ ವೆಂಟಿಲೇಟರ್‌ನಲ್ಲಿ ಇಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು.

ಕೋವಿಡ್ ಸೋಂಕು ತಗುಲುತ್ತಿದ್ದಂತೆ ವಿಜಯಕಾಂತ ಅವರಲ್ಲಿ ಉಸಿರಾಟದ ಸಮಸ್ಯೆ ಉಲ್ಬಣಿಸಿತು. ಶ್ವಾಸಕೋಶ ದುರ್ಬಲವಾಗಿತ್ತು ಎಂದು ವೈದ್ಯ ಮೂಲಗಳು ತಿಳಿಸಿವೆ. ಅವರನ್ನು ಚೆನ್ನೈನ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಗುರುವಾರ ಮೃತಪಟ್ಟಿದ್ದಾರೆ.

DMDK Chief and Actor Vijayakanth Passed Away after Tested Positive for Covid

ಡಿ.15ರಂದು ವಿಜಯಕಾಂತ್ ಪತ್ನಿ ಅಧಿಕಾರ ಸ್ವೀಕಾರ

ವಿಜಯಕಾಂತ್ ಅವರು ಆರೋಗ್ಯ ಹದಗೆಡುತ್ತಿದೆ ಎಂಬ ಸುದ್ದಿಯ ಮಧ್ಯೆ ಡಿಸೆಂಬರ್ 15 ರಂದು ವಿಜಯಕಾಂತ್ ಅವರ ಪತ್ನಿ ಪ್ರೇಮಲತಾ ವಿಜಯಕಾಂತ್ ಅವರು ಡಿಎಂಡಿಕೆ ಪ್ರಧಾನ ಕಾರ್ಯದರ್ಶಿಯಾಗಿ ಜವಾಬ್ದಾರಿ ವಹಿಸಿಕೊಂಡರು.

ಪ್ರಧಾನ ಕಾರ್ಯದರ್ಶಿಯಾಗಿ ತಮ್ಮ ಉದ್ಘಾಟನಾ ಭಾಷಣದಲ್ಲಿ ಪ್ರೇಮಲತಾ ವಿಜಯಕಾಂತ್ ಅವರು ಪಕ್ಷ ಮತ್ತು ಅದರ ಸದಸ್ಯರ ಬಗೆಗಿನ ತಮ್ಮ ಬದ್ಧತೆ ಕುರಿತು ಮಾತನಾಡಿದ್ದರು. ನನಗೆ ವಿಜಯಕಾಂತ್ ಅವರು ಪ್ರಧಾನ ಕಾರ್ಯದರ್ಶಿ ಹುದ್ದೆ ನೀಡಿದ್ದಾರೆ. ಡಿಎಂಡಿಕೆ ಪಕ್ಷವು ಜನರ ಕಲ್ಯಾಣಕ್ಕಾಗಿ ಸ್ಥಾಪಿತವಾದದ್ದು. ನಾನು ನಿಮ್ಮೆಲ್ಲರ ಜತೆ ನಿಕಟವಾಗಿ ಪಕ್ಷಕ್ಕಾಗಿ, ಅಭಿವೃದ್ಧಿಗಾಗಿ ಶ್ರಮಿಸುತ್ತೇನೆ ಎಂದು ತಿಳಿಸಿದ್ದರು.

ವಿಜಯಕಾಂತ್ ಅವರ ಆರೋಗ್ಯದ ಬಗ್ಗೆ ವದಂತಿಗಳನ್ನು ಹಬ್ಬಿಸದಂತೆ ಮನವಿ ಮಾಡಿದ್ದರು. ಕಾರ್ಯಕರ್ತರಲ್ಲಿ ಸ್ಥೈರ್ಯ ತುಂಬಿದ್ದರು. ಆದಷ್ಟು ಶೀಘ್ರವೇ ವಿಜಯಕಾಂತ್ ಅವರು ಗುಣಮುಖರಾಗಿ ನಿಮ್ಮ ಮುಂದೆ ಬರಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು. ಆದರೆ ವಿಧಿಯಾಟವೇ ಬೇರೆಯಾಗಿದ್ದು, ಅವರ ವಿಶ್ವಾಸ ಹುಸಿಯಾಗಿದ್ದು, ವಿಜಯಕಾಂತ್ ಅವರು ಕೊರೊನಾದಿಂದ ನಿಧನರಾಗಿದ್ದು, ಇದು ಅವರ ಪತ್ನಿ ಮತ್ತು ಪಕ್ಷದ ನಾಯಕರು ಕಣ್ಣೀರಲ್ಲಿ ಮುಳುಗಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+