ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಸರ್ಜಿಕಲ್ ಸ್ಟ್ರೈಕ್ ಗೆ ರಾಹುಲ್ ಗಾಂಧಿಯವರನ್ನೂ ಕರೆದೊಯ್ಯಬೇಕಿತ್ತೇ?'

|
Google Oneindia Kannada News

ಪಣಜಿ, ಜುಲೈ 17: 'ಸರ್ಜಿಕಲ್ ಸ್ಟ್ರೈಕ್ ಕಾರ್ಯಾಚರಣೆ ಮಾಡುವಾಗ ಭಾರತೀಯ ಸೇನೆ ರಾಹುಲ್ ಗಾಂಧಿ ಅವರನ್ನೂ ಕರೆದೊಯ್ದಿದ್ದರೆ ಆಗ ಕಾಂಗ್ರೆಸ್ ಇದನ್ನು ನಂಬುತ್ತಿತ್ತೇನೋ' ಎಂದು ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ವ್ಯಂಗ್ಯವಾಡಿದ್ದಾರೆ.

'ನಾನು ಎಂದಿಗೂ ಸರ್ಜಿಕಲ್ ಸ್ಟ್ರೈಕ್ ಅನ್ನು ರಾಜಕೀಯದ ದೃಷ್ಟಿಯಿಂದ ನೋಡಿಲ್ಲ. ಆದರೆ ವಿರೋಧ ಪಕ್ಷಗಳು ಹೇಳುವುದೇನು? ಅಂಥದೊಂದು ಕಾರ್ಯಾಚರಣೆಯೇ ನಡೆದಿಲ್ಲ ಎಂದು. ಹಾಗಾದರೆ ಅವರನ್ನು ನಂಬಿಸುವುದಕ್ಕಾಗಿ ನಾವು ಸರ್ಜಿಕಲ್ ಸ್ಟ್ರೈಕ್ ಸಮಯದಲ್ಲಿ ಕಾರ್ಯಾಚರಣೆ ಮಾಡುವಾಗ ರಾಹುಲ್ ಗಾಂಧಿಯವರನ್ನೂ ಕರೆದೊಯ್ಯಬೇಕಿತ್ತೆ?' ಎಂದು ಪರಿಕ್ಕರ್ ಪ್ರಶ್ನಿಸಿದ್ದಾರೆ.

ಸರ್ಜಿಕಲ್ ಸ್ಟ್ರೈಕ್ ಭಾರತ ಹೆಣೆದ ಕಾಲ್ಪನಿಕ ಕತೆ: ಪಾಕಿಸ್ತಾನಸರ್ಜಿಕಲ್ ಸ್ಟ್ರೈಕ್ ಭಾರತ ಹೆಣೆದ ಕಾಲ್ಪನಿಕ ಕತೆ: ಪಾಕಿಸ್ತಾನ

ಅನಾರೋಗ್ಯದ ಕಾರಣ ಅಮೆರಿದಕ್ಕಿ ಚಿಕಿತ್ಸೆ ಪಡೆಯುತ್ತಿದ್ದ ಮನೋಹರ್ ಪರಿಕ್ಕರ್ ಹಿಂದಿರುಗಿ ಬಂದ ನಂತರ ಮೊದಲಬಾರಿಗೆ ಪಕ್ಷದ ಕಾರ್ಯಕರ್ತರ ಸಭೆ ನಡೆಸಿದರು. ಈ ಸಂದರ್ಭದಲ್ಲಿ ಮಾಜಿ ರಕ್ಷಣಾ ಸಚಿವ ಪರಿಕ್ಕರ್ ಈ ಹೇಳಿಕೆ ನೀಡಿದರು.

Did Congress want Army to take Rahul Gandhi along for surgical strikes: Parrikar

2016 ರ ಸೆಪ್ಟೆಂಬರ್ 29 ರಂದು ಪಾಕಿಸ್ತಾನದ ಗಡಿಯೊಳಗೆ ತೆರಳಿ ಭಾರತೀಯ ಸೇನೆಯು ಉಗ್ರ ನೆಲೆಯನ್ನು ಧ್ವಂಸಗೊಳಿಸಿತ್ತು. ಇದಕ್ಕೂ ಮುನ್ನ ಜಮ್ಮು ಮತ್ತು ಕಾಶ್ಮೀರದ ಉರಿಯಲ್ಲಿ ಭಯೋತ್ಪಾದಕ ಶಿಬಿರಗಳ ಮೇಳೆ ನಡೆದ ಉಗ್ರರ ದಾಳಿಯಲ್ಲಿ 20 ಭಾರತೀಯ ಸೈನಿಕರು ಹುತಾತ್ಮರಾಗಿದ್ದರು. ಈ ಕೃತ್ಯದ ನಂತರ ಭಾರತ ಸರ್ಜಿಕಲ್ ಸ್ಟ್ರೈಕ್ ನಡೆಸಿತ್ತು.

English summary
Goa chief minister Manohar Parrikar said, if the Congress would have believed in the surgical strikes if the Army had included its president Rahul Gandhi along with them in their mission!
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X