Sabarimala: ದೇವಸಂ ಬೋರ್ಡ್-ಪೊಲೀಸ್ ನಡುವೆ ಶೀತಲ ಸಮರ: ಶಬರಿಮಲೆಯಲ್ಲಿ ಭಕ್ತರಿಗೆ ಸಂಕಷ್ಟ
ಶಬರಿಮಲೈ ಜನವರಿ 4: ಶಬರಿಮಲೆಯ ಋತು ಆರಂಭವಾದಾಗಿನಿಂದ ಅಯ್ಯಪ್ಪ ಸ್ವಾಮಿ ದರ್ಶನಕ್ಕಾಗಿ ಶಬರಿಮಲೆಗೆ ಸಾವಿರಾರು ಭಕ್ತರು ಭೇಟಿ ನೀಡುತ್ತಿದ್ದಾರೆ. ಈ ಸಂಖ್ಯೆ ಮಕರ ಜ್ಯೋತಿ ದರ್ಶನದ ದಿನದಂದು ಇನ್ನೂ ಹೆಚ್ಚಾಗುವ ಸಾಧ್ಯತೆ ಇದ್ದು ಈ ನಡುವೆ ಭಕ್ತರ ನಿರ್ವಹಣೆ ವಿಚಾರವಾಗಿ ದೇವಸಂ ಬೋರ್ಡ್ ಹಾಗೂ ಪೊಲೀಸರ ನಡುವೆ ಮನಸ್ತಾಪ ಆರಂಭವಾಗಿದೆ.
ಹೌದು.. ತಿರುವಾಂಕೂರು ದೇವಸಂ ಬೋರ್ಡ್ ಮತ್ತು ಪೊಲೀಸರ ನಡುವೆ ನಡೆಯುತ್ತಿರುವ ಶೀತಲ ಸಮರದಿಂದಾಗಿ ಶಬರಿಮಲೈನಲ್ಲಿ ಭಕ್ತರ ಸಂಕಷ್ಟ ಮುಂದುವರಿದಿದೆ.

ಕೇರಳದ ಶಬರಿಮಲೆಯಲ್ಲಿ ಮೊದಲು 'ವರ್ಚುವಲ್ ಕ್ಯೂ' ಎಂಬ ಯೋಜನೆಯನ್ನು ಜಾರಿಗೆ ತಂದ ಕೇರಳ ಪೊಲೀಸರು ಅದರ ಮೂಲಕ ಉತ್ತಮ ಆದಾಯ ಗಳಿಸುತ್ತಿದ್ದರು. ಜೊತೆಗೆ ವೆಬ್ಸೈಟ್ನಲ್ಲಿ ಪ್ರಕಟವಾದ ಜಾಹೀರಾತುಗಳಿಗೆ ಪೊಲೀಸ್ ಇಲಾಖೆ ಹಣ ಪಡೆಯುತ್ತಿತ್ತು. ಕೇರಳ ಹೈಕೋರ್ಟ್ ಆದೇಶದಂತೆ ಕಳೆದ ವರ್ಷ ಈ ಯೋಜನೆಯನ್ನು ದೇವಸಂ ಮಂಡಳಿಗೆ ಹಸ್ತಾಂತರಿಸಲಾಗಿತ್ತು.
ಇದಾದ ನಂತರ ದೇವಸಂ ಬೋರ್ಡ್ ಮತ್ತು ಪೊಲೀಸರ ನಡುವೆ ಭಿನ್ನಾಭಿಪ್ರಾಯ ಉಂಟಾಗಿದೆ ಎಂಬ ವರದಿಗಳು ಬಂದಿವೆ. 'ಆನ್ಲೈನ್ ಸರತಿ ವ್ಯವಸ್ಥೆ' ಜಾರಿಗೆ ಬರುವ ಮುನ್ನ ನಿತ್ಯ ಲಕ್ಷಗಟ್ಟಲೆ ಭಕ್ತರು ಆಗಮಿಸುತ್ತಿದ್ದರೂ ಕೆಲ ಗಂಟೆಗಳ ಕಾಲ ಮಾತ್ರ ದಟ್ಟಣೆ ಉಂಟಾಗುತ್ತಿತ್ತು. ಅದರ ನಂತರ ಅದು ಸರಿಯಾಗುತ್ತಿತ್ತು.

ಕಳೆದ ವರ್ಷದವರೆಗೆ ಪೊಲೀಸರು ವರ್ಚುವಲ್ ಸರತಿ ಯೋಜನೆ ಹೊಂದಿದ್ದಾಗ 18 ಮೆಟ್ಟಿಲುಗಳಿಗೆ ಹೆಚ್ಚಿನ ಸಂಖ್ಯೆಯ ಭಕ್ತರನ್ನು ತಿರುಗಿಸುವ ಮೂಲಕ ಜಾಮ್ ತಪ್ಪಿಸಲು ಪೊಲೀಸರು ಶ್ರದ್ಧೆಯಿಂದ ಕೆಲಸ ಮಾಡಿದರು. ಆದರೆ ಈ ವರ್ಷ ಪೊಲೀಸರು ಪ್ರತಿ ನಿಮಿಷಕ್ಕೆ 60 ಜನರನ್ನು ಮಾತ್ರ ಕರೆದುಕೊಂಡು ಹೋಗುವ ಕೆಲಸ ಮಾಡುತ್ತಿದ್ದಾರೆ. ಇದರಿಂದ ಭಕ್ತರಿಗೆ ಬೇಗ ದೇವರ ದರ್ಶನವಾಗದೆ ಕಷ್ಟವಾಗುತ್ತಿದೆ. ಹಿಂದಿರು ಭಕ್ತರು ಗಂಟೆಗಟ್ಟಲೆ ಕಾಯುವಂತ ಸ್ಥಿತಿ ನಿರ್ಮಾಣವಾಗಿದೆ.
ಹೀಗಾಗಿ ನಿಮಿಷಕ್ಕೆ ಕನಿಷ್ಠ 90 ಜನರನ್ನು ಲೋಡ್ ಮಾಡಲು ದೇವಸಂಬೋರ್ಡ್ ಮನವಿ ಮಾಡಿದೆ. ಆದರೆ ಪೊಲೀಸರು ಇದಕ್ಕೆ ಕಿವಿಗೊಟ್ಟಂತೆ ಕಾಣುತ್ತಿಲ್ಲ. ದೇವಸಂ ಬೋರ್ಡ್ ಹಾಗೂ ಪೊಲೀಸ್ ನಡುವಿನ ಈ ಶೀತಲ ಸಮರ ಶಬರಿಮಲೆಯಲ್ಲಿ ಭಕ್ತರಿಗೆ ಸಂಕಷ್ಟವನ್ನು ತಂದೊಡ್ಡಿದೆ. ಅದಾಗ್ಯೂ ದೇವಸಂ ಮಂಡಳಿ ಮನಸ್ತಾಪಗಳನ್ನು ನಿರಾಕರಿಸುತ್ತಿದೆ.
ಶೀತಲ ಸಮರ, ಭಕ್ತರಿಗೆ ಸಂಕಷ್ಟ
ಶಬರಿಮಲೆ ಋತು ಆರಂಭವಾಗುತ್ತಿದ್ದಂತೆ ಅಯ್ಯಪ್ಪನ ಸನ್ನಿದಾನದಲ್ಲಿ ಭಕ್ತರ ಉದ್ದನೆಯ ಸರತಿ ಸಾಲು ಕಾಣಬಹುದು. 12 ಗಂಟೆಗಳ ಕಾಲ ಕಾಯುವುದರಿಂದ ಭಕ್ತರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಶಬರಿಮಲೆಗೆ ತೆರಳುವ ರಸ್ತೆಗಳಲ್ಲಿ ಅಲ್ಲೊಂದು ಇಲ್ಲೊಂದು ವಾಹನಗಳನ್ನು ನಿಲ್ಲಿಸಿ ವಾಹನಗಳಲ್ಲೇ ಕಾಲ ಕಳೆಯುವ ಪರಿಸ್ಥಿತಿ ನಿತ್ಯ ಭಕ್ತರಿಗೆ ಉಂಟಾಗಿದೆ.
ದೇವಸಂ ಬೋರ್ಡ್ ಮತ್ತು ಪೊಲೀಸರ ನಡುವಿನ ಭಿನ್ನಾಭಿಪ್ರಾಯವೇ ಇಷ್ಟೆಲ್ಲಾ ತೊಂದರೆಗೆ ಕಾರಣ ಎಂಬ ಆರೋಪ ಕೇಳಿಬಂದಿದೆ. ಜ.15ರ ಮಕರಜ್ಯೋತಿ ದಿನದಂದು ಶಬರಿಮಲೆಯಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗದಂತೆ 10-15ರಿಂದ ಸ್ಪಾಟ್ ಬುಕ್ಕಿಂಗ್ ಸೌಲಭ್ಯವನ್ನು ದೇವಸಂ ಮಂಡಳಿ ಸ್ಥಗಿತಗೊಳಿಸಿದೆ. ಜ್ಯೋತಿ ದರ್ಶನ ದಿನದಂದು ಭಕ್ತಾದಿಗಳ ಸಂಖ್ಯೆಯನ್ನು 20 ಸಾವಿರಕ್ಕೆ ಇಳಿಸುವಂತೆ ಪೊಲೀಸರು ಒತ್ತಾಯಿಸುತ್ತಿರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಇಬ್ಬರ ನಡುವಿನ ಮನಸ್ತಾಪದಲ್ಲಿ ಭಕ್ತರು ತೊಂದರೆ ಅನುಭವಿಸುವಂತಾಗಿದ್ದು ವಿಪರ್ಯಾಸ.
-
ಐಪಿಎಲ್ 2026ಕ್ಕೆ ಮುಹೂರ್ತ ಫಿಕ್ಸ್: ಇಲ್ಲಿದೆ ಮಾಹಿತಿ -
Gold Rate: ಸತತ ಇಳಿಕೆಯ ನಂತರ ಚಿನ್ನದ ಬೆಲೆ ಮತ್ತೆ ಏರಿಕೆ: ಬೆಂಗಳೂರಿನಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ವಿವರ ಇಲ್ಲಿದೆ ನೋಡಿ -
ಚಿಕ್ಕಬಳ್ಳಾಪುರದ ಜಿಲ್ಲೆಯ ಸತ್ಯಸಾಯಿ ಗ್ರಾಮಕ್ಕೆ ನಟ ರಿಷಬ್ ಶೆಟ್ಟಿ ಭೇಟಿ: ಮಾನವೀಯ ಕಾರ್ಯಗಳಿಗೆ ಶ್ಲಾಘನೆ -
International Women's Day 2026: ಸ್ತ್ರೀ ಶಕ್ತಿಗೊಂದು ಗೌರವದ ನಮನ: ಮಹಿಳಾ ದಿನಾಚರಣೆಯ ಇತಿಹಾಸ, ಮಹತ್ವ ತಿಳಿಯಿರಿ -
ಎಲ್ಪಿಜಿ ಸಿಲಿಂಡರ್ ದರ 60 ರೂ ಏರಿಕೆ: ಮೋದಿ ಸರ್ಕಾರದ ವಿರುದ್ಧ ತೀವ್ರ ಟೀಕೆ -
ಧುರಂಧರ್ 2 ಟ್ರೈಲರ್ ಔಟ್: ರಕ್ತ ಚರಿತ್ರೆ ಬರೆಯಲಿದೆ ಸಿನಿಮಾ, ಭರ್ಜರಿ ಕಲೆಕ್ಷನ್ ನಿರೀಕ್ಷೆ -
Shubman Gill: ಅರ್ಜುನ್ ತೆಂಡ್ಯೂಲ್ಕರ್ ಮದುವೆಗೆ ಬಾರದ ಶುಭ್ಮನ್ ಗಿಲ್: ಸಾರಾ ಜೊತೆಗೆ ಆಯ್ತಾ ಬ್ರೇಕ್ ಅಪ್? -ಹೀಗಿದೆ ಗಾಸಿಪ್ -
ರಿಚರ್ಡ್ ಕೆಟಲ್ಬರೋ ಔಟ್: ಟಿ20 ವಿಶ್ವಕಪ್ ಫೈನಲ್ಗೂ ಮುನ್ನ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಸಂತಸದ ಸುದ್ದಿ -
Weekly Horoscope March 9–15: ಮಾರ್ಚ್ ವಾರಭವಿಷ್ಯ – 12 ರಾಶಿಗಳ ಸುಖ-ದುಃಖ, ಹಣಕಾಸು ಮತ್ತು ಆರೋಗ್ಯ ಫಲ -
Ration card: ರಾಜ್ಯದಲ್ಲಿ ಪಡಿತರಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ -
Vande Bharat Express: 20 ಬೋಗಿಗಳ 42ನೇ ವಂದೇ ಭಾರತ್ ರೈಲು ಸಂಚಾರ ಆರಂಭ, ಎಲ್ಲಿ? ವೇಳಾಪಟ್ಟಿ -
ಟಿ20 ವಿಶ್ವಕಪ್ 2026 ಫೈನಲ್ ಪಂದ್ಯ ಮಳೆಯಿಂದ ರದ್ದಾದ್ರೆ ಟ್ರೋಫಿ ಯಾರ ಮುಡಿಗೆ?; ಐಸಿಸಿ ನಿಯಮಗಳು ಹೀಗಿವೆ












Click it and Unblock the Notifications