Sabarimala: ದೇವಸಂ ಬೋರ್ಡ್-ಪೊಲೀಸ್ ನಡುವೆ ಶೀತಲ ಸಮರ: ಶಬರಿಮಲೆಯಲ್ಲಿ ಭಕ್ತರಿಗೆ ಸಂಕಷ್ಟ
ಶಬರಿಮಲೈ ಜನವರಿ 4: ಶಬರಿಮಲೆಯ ಋತು ಆರಂಭವಾದಾಗಿನಿಂದ ಅಯ್ಯಪ್ಪ ಸ್ವಾಮಿ ದರ್ಶನಕ್ಕಾಗಿ ಶಬರಿಮಲೆಗೆ ಸಾವಿರಾರು ಭಕ್ತರು ಭೇಟಿ ನೀಡುತ್ತಿದ್ದಾರೆ. ಈ ಸಂಖ್ಯೆ ಮಕರ ಜ್ಯೋತಿ ದರ್ಶನದ ದಿನದಂದು ಇನ್ನೂ ಹೆಚ್ಚಾಗುವ ಸಾಧ್ಯತೆ ಇದ್ದು ಈ ನಡುವೆ ಭಕ್ತರ ನಿರ್ವಹಣೆ ವಿಚಾರವಾಗಿ ದೇವಸಂ ಬೋರ್ಡ್ ಹಾಗೂ ಪೊಲೀಸರ ನಡುವೆ ಮನಸ್ತಾಪ ಆರಂಭವಾಗಿದೆ.
ಹೌದು.. ತಿರುವಾಂಕೂರು ದೇವಸಂ ಬೋರ್ಡ್ ಮತ್ತು ಪೊಲೀಸರ ನಡುವೆ ನಡೆಯುತ್ತಿರುವ ಶೀತಲ ಸಮರದಿಂದಾಗಿ ಶಬರಿಮಲೈನಲ್ಲಿ ಭಕ್ತರ ಸಂಕಷ್ಟ ಮುಂದುವರಿದಿದೆ.

ಕೇರಳದ ಶಬರಿಮಲೆಯಲ್ಲಿ ಮೊದಲು 'ವರ್ಚುವಲ್ ಕ್ಯೂ' ಎಂಬ ಯೋಜನೆಯನ್ನು ಜಾರಿಗೆ ತಂದ ಕೇರಳ ಪೊಲೀಸರು ಅದರ ಮೂಲಕ ಉತ್ತಮ ಆದಾಯ ಗಳಿಸುತ್ತಿದ್ದರು. ಜೊತೆಗೆ ವೆಬ್ಸೈಟ್ನಲ್ಲಿ ಪ್ರಕಟವಾದ ಜಾಹೀರಾತುಗಳಿಗೆ ಪೊಲೀಸ್ ಇಲಾಖೆ ಹಣ ಪಡೆಯುತ್ತಿತ್ತು. ಕೇರಳ ಹೈಕೋರ್ಟ್ ಆದೇಶದಂತೆ ಕಳೆದ ವರ್ಷ ಈ ಯೋಜನೆಯನ್ನು ದೇವಸಂ ಮಂಡಳಿಗೆ ಹಸ್ತಾಂತರಿಸಲಾಗಿತ್ತು.
ಇದಾದ ನಂತರ ದೇವಸಂ ಬೋರ್ಡ್ ಮತ್ತು ಪೊಲೀಸರ ನಡುವೆ ಭಿನ್ನಾಭಿಪ್ರಾಯ ಉಂಟಾಗಿದೆ ಎಂಬ ವರದಿಗಳು ಬಂದಿವೆ. 'ಆನ್ಲೈನ್ ಸರತಿ ವ್ಯವಸ್ಥೆ' ಜಾರಿಗೆ ಬರುವ ಮುನ್ನ ನಿತ್ಯ ಲಕ್ಷಗಟ್ಟಲೆ ಭಕ್ತರು ಆಗಮಿಸುತ್ತಿದ್ದರೂ ಕೆಲ ಗಂಟೆಗಳ ಕಾಲ ಮಾತ್ರ ದಟ್ಟಣೆ ಉಂಟಾಗುತ್ತಿತ್ತು. ಅದರ ನಂತರ ಅದು ಸರಿಯಾಗುತ್ತಿತ್ತು.

ಕಳೆದ ವರ್ಷದವರೆಗೆ ಪೊಲೀಸರು ವರ್ಚುವಲ್ ಸರತಿ ಯೋಜನೆ ಹೊಂದಿದ್ದಾಗ 18 ಮೆಟ್ಟಿಲುಗಳಿಗೆ ಹೆಚ್ಚಿನ ಸಂಖ್ಯೆಯ ಭಕ್ತರನ್ನು ತಿರುಗಿಸುವ ಮೂಲಕ ಜಾಮ್ ತಪ್ಪಿಸಲು ಪೊಲೀಸರು ಶ್ರದ್ಧೆಯಿಂದ ಕೆಲಸ ಮಾಡಿದರು. ಆದರೆ ಈ ವರ್ಷ ಪೊಲೀಸರು ಪ್ರತಿ ನಿಮಿಷಕ್ಕೆ 60 ಜನರನ್ನು ಮಾತ್ರ ಕರೆದುಕೊಂಡು ಹೋಗುವ ಕೆಲಸ ಮಾಡುತ್ತಿದ್ದಾರೆ. ಇದರಿಂದ ಭಕ್ತರಿಗೆ ಬೇಗ ದೇವರ ದರ್ಶನವಾಗದೆ ಕಷ್ಟವಾಗುತ್ತಿದೆ. ಹಿಂದಿರು ಭಕ್ತರು ಗಂಟೆಗಟ್ಟಲೆ ಕಾಯುವಂತ ಸ್ಥಿತಿ ನಿರ್ಮಾಣವಾಗಿದೆ.
ಹೀಗಾಗಿ ನಿಮಿಷಕ್ಕೆ ಕನಿಷ್ಠ 90 ಜನರನ್ನು ಲೋಡ್ ಮಾಡಲು ದೇವಸಂಬೋರ್ಡ್ ಮನವಿ ಮಾಡಿದೆ. ಆದರೆ ಪೊಲೀಸರು ಇದಕ್ಕೆ ಕಿವಿಗೊಟ್ಟಂತೆ ಕಾಣುತ್ತಿಲ್ಲ. ದೇವಸಂ ಬೋರ್ಡ್ ಹಾಗೂ ಪೊಲೀಸ್ ನಡುವಿನ ಈ ಶೀತಲ ಸಮರ ಶಬರಿಮಲೆಯಲ್ಲಿ ಭಕ್ತರಿಗೆ ಸಂಕಷ್ಟವನ್ನು ತಂದೊಡ್ಡಿದೆ. ಅದಾಗ್ಯೂ ದೇವಸಂ ಮಂಡಳಿ ಮನಸ್ತಾಪಗಳನ್ನು ನಿರಾಕರಿಸುತ್ತಿದೆ.
ಶೀತಲ ಸಮರ, ಭಕ್ತರಿಗೆ ಸಂಕಷ್ಟ
ಶಬರಿಮಲೆ ಋತು ಆರಂಭವಾಗುತ್ತಿದ್ದಂತೆ ಅಯ್ಯಪ್ಪನ ಸನ್ನಿದಾನದಲ್ಲಿ ಭಕ್ತರ ಉದ್ದನೆಯ ಸರತಿ ಸಾಲು ಕಾಣಬಹುದು. 12 ಗಂಟೆಗಳ ಕಾಲ ಕಾಯುವುದರಿಂದ ಭಕ್ತರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಶಬರಿಮಲೆಗೆ ತೆರಳುವ ರಸ್ತೆಗಳಲ್ಲಿ ಅಲ್ಲೊಂದು ಇಲ್ಲೊಂದು ವಾಹನಗಳನ್ನು ನಿಲ್ಲಿಸಿ ವಾಹನಗಳಲ್ಲೇ ಕಾಲ ಕಳೆಯುವ ಪರಿಸ್ಥಿತಿ ನಿತ್ಯ ಭಕ್ತರಿಗೆ ಉಂಟಾಗಿದೆ.
ದೇವಸಂ ಬೋರ್ಡ್ ಮತ್ತು ಪೊಲೀಸರ ನಡುವಿನ ಭಿನ್ನಾಭಿಪ್ರಾಯವೇ ಇಷ್ಟೆಲ್ಲಾ ತೊಂದರೆಗೆ ಕಾರಣ ಎಂಬ ಆರೋಪ ಕೇಳಿಬಂದಿದೆ. ಜ.15ರ ಮಕರಜ್ಯೋತಿ ದಿನದಂದು ಶಬರಿಮಲೆಯಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗದಂತೆ 10-15ರಿಂದ ಸ್ಪಾಟ್ ಬುಕ್ಕಿಂಗ್ ಸೌಲಭ್ಯವನ್ನು ದೇವಸಂ ಮಂಡಳಿ ಸ್ಥಗಿತಗೊಳಿಸಿದೆ. ಜ್ಯೋತಿ ದರ್ಶನ ದಿನದಂದು ಭಕ್ತಾದಿಗಳ ಸಂಖ್ಯೆಯನ್ನು 20 ಸಾವಿರಕ್ಕೆ ಇಳಿಸುವಂತೆ ಪೊಲೀಸರು ಒತ್ತಾಯಿಸುತ್ತಿರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಇಬ್ಬರ ನಡುವಿನ ಮನಸ್ತಾಪದಲ್ಲಿ ಭಕ್ತರು ತೊಂದರೆ ಅನುಭವಿಸುವಂತಾಗಿದ್ದು ವಿಪರ್ಯಾಸ.
-
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ












Click it and Unblock the Notifications