ಅಪನಗದೀಕರಣದಿಂದ ಕಡಿಮೆ ದರದಲ್ಲಿ ಮನೆಗಳು ದೊರೆಯುತ್ತಿವೆ: ಮೋದಿ
ಸೂರತ್, ಜನವರಿ 30: ತಮ್ಮ ಸರ್ಕಾರದ ಅಪನಗದೀಕರಣ ನಿರ್ಣಯದಿಂದಾಗಿ ವಸತಿ ಮನೆಗಳು ಅಗ್ಗವಾಗಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಹೇಳಿದರು.
ಸೂರತ್ ವಿಮಾನ ನಿಲ್ದಾಣದ ಹೊಸ ಟರ್ಮಿನಲ್ಗೆ ಶಂಕುಸ್ಥಾಪನೆ ಮಾಡಿ ಅವರು ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಅಪನಗದೀಕರಣದಿಂದ ಕಡಿಮೆ ದರದಲ್ಲಿ ಯುವಕರಿಗೆ ಮನೆಗಳು ದೊರೆಯುವಂತಾಗಿದೆ ಎಂದು ಮೋದಿ, 'ನಾವು ಮಾಡಿದ ಕೆಲಸವನ್ನು ಮಾಡಲು ಈ ಹಿಂದಿನ ಸರ್ಕಾರಕ್ಕೆ ಕನಿಷ್ಟ 25 ವರ್ಷ ಬೇಕಾಗುತ್ತಿತ್ತು' ಎಂದು ಕಾಂಗ್ರೆಸ್ ಅನ್ನು ಟೀಕಿಸಿದರು.

ಅಪನಗದೀಕರಣದಿಂದ ಏನು ಲಾಭವಾಯಿತು ಎಂದು ನನ್ನು ಕೇಳುತ್ತಿರುತ್ತಾರೆ, ಆದರೆ ಅದೇ ಪ್ರಶ್ನೆಯನ್ನು ದೇಶದ ಯುವಕರಿಗೆ ಕೇಳಿ. ಅಪನಗದೀಕರಣ ಮತ್ತು ರೇರಾ ಕಾಯ್ದೆಯಿಂದಾಗಿ ರಿಯಲ್ ಎಸ್ಟೇಟ್ ದರ ಕಡಿಮೆ ಆಗಿ ಕಡಿಮೆ ಬೆಲೆಗೆ ಆಸ್ತಿ ದೊರೆಯುವಂತಾಯಿತು ಎಂದು ಮೋದಿ ಹೇಳಿದ್ದಾರೆ.
ಕಳೆದ ನಾಲ್ಕುವರೆ ವರ್ಷದ ಎನ್ಡಿಎ ಅಧಿಕಾರವದಿಯಲ್ಲಿ ನಾವು 1.50 ಕೋಟಿ ಮನೆಗಳನ್ನು ನಿರ್ಮಿಸಿದ್ದೇವೆ. ಯುಪಿಎ ಆಡಳಿತದಲ್ಲಿ ಅವರಿಗೆ ಕಟ್ಟಲಾಗಿದ್ದ ಕೇವಲ 25 ಲಕ್ಷ ಮನೆಗಳು ಮಾತ್ರ ಎಂದು ಮೋದಿ ಅಂಕಿ-ಅಂಶ ನೀಡಿದರು.
ತಮ್ಮ ಸರ್ಕಾರದ 'ಉಡಾನ್' ಯೋಜನೆಯನ್ನು ಹೊಗಳಿದ ಮೋದಿ, ಕಡಿಮೆ ದರದಲ್ಲಿ ಸಾಮಾನ್ಯರೂ ವಿಮಾನದಲ್ಲಿ ಪ್ರಯಾಣಿಸಲು 'ಉಡಾನ್' ನಿಂದ ಸಾಧ್ಯವಾಯಿತು. ಇದು ದೇಶದ ತ್ವರಿತ ಅಭಿವೃದ್ಧಿಗೆ ಸಹಾಯಕವಾಗಲಿದೆ ಎಂದು ಅವರು ಹೇಳಿದರು.
ಕಳೆದ 30 ವರ್ಷದಲ್ಲಿ ದೇಶದಲ್ಲಿ ಬಲಿಷ್ಠ ಸರ್ಕಾರ ಇರಲಿಲ್ಲ. ಮೂರು ದಶಕಗಳಿಂದಲೂ ಸಮ್ಮಿಶ್ರ ಸರ್ಕಾರವೇ ಇತ್ತು, ಹಾಗಾಗಿ ಅಭಿವೃದ್ಧಿ ಕುಂಠಿತವಾಯಿತು. ಆದರೆ ಕಳೆದ ಬಾರಿ ಬಲಿಷ್ಠ ಸರ್ಕಾರ ನಿರ್ಮಾಣವಾಗಿದೆ ಅಭಿವೃದ್ಧಿಯೂ ವೇಗವಾಗಿ ಆಗುತ್ತಿದೆ ಎಂದು ಮೋದಿ ಹೇಳಿದರು.
-
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
KEA PGNEET: ಕೆಇಎಯಿಂದ ಮತ್ತೊಂದು ಸುತ್ತಿನ ಸೀಟು ಹಂಚಿಕೆ; 783 ವೈದ್ಯಕೀಯ ಸೀಟುಗಳು ಬಾಕಿ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಗನಿಗೆ ಮುಕ್ತಿ ನೀಡಲು ಕೋರಿದ್ದ ಪೋಷಕರು -
ಮತ್ತೆ ಶುರುವಾಗುತ್ತಾ ವರ್ಕ್ ಫ್ರಂ ಹೋಮ್? ಇಂಧನ ಕೊರತೆ ಬೆನ್ನಲ್ಲೇ ಹಲವು ದೇಶಗಳಲ್ಲಿ ಕಚೇರಿಗಳಿಗೆ ನಿರ್ಬಂಧ












Click it and Unblock the Notifications