ಅಪನಗದೀಕರಣದಿಂದ ಕಡಿಮೆ ದರದಲ್ಲಿ ಮನೆಗಳು ದೊರೆಯುತ್ತಿವೆ: ಮೋದಿ
ಸೂರತ್, ಜನವರಿ 30: ತಮ್ಮ ಸರ್ಕಾರದ ಅಪನಗದೀಕರಣ ನಿರ್ಣಯದಿಂದಾಗಿ ವಸತಿ ಮನೆಗಳು ಅಗ್ಗವಾಗಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಹೇಳಿದರು.
ಸೂರತ್ ವಿಮಾನ ನಿಲ್ದಾಣದ ಹೊಸ ಟರ್ಮಿನಲ್ಗೆ ಶಂಕುಸ್ಥಾಪನೆ ಮಾಡಿ ಅವರು ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಅಪನಗದೀಕರಣದಿಂದ ಕಡಿಮೆ ದರದಲ್ಲಿ ಯುವಕರಿಗೆ ಮನೆಗಳು ದೊರೆಯುವಂತಾಗಿದೆ ಎಂದು ಮೋದಿ, 'ನಾವು ಮಾಡಿದ ಕೆಲಸವನ್ನು ಮಾಡಲು ಈ ಹಿಂದಿನ ಸರ್ಕಾರಕ್ಕೆ ಕನಿಷ್ಟ 25 ವರ್ಷ ಬೇಕಾಗುತ್ತಿತ್ತು' ಎಂದು ಕಾಂಗ್ರೆಸ್ ಅನ್ನು ಟೀಕಿಸಿದರು.

ಅಪನಗದೀಕರಣದಿಂದ ಏನು ಲಾಭವಾಯಿತು ಎಂದು ನನ್ನು ಕೇಳುತ್ತಿರುತ್ತಾರೆ, ಆದರೆ ಅದೇ ಪ್ರಶ್ನೆಯನ್ನು ದೇಶದ ಯುವಕರಿಗೆ ಕೇಳಿ. ಅಪನಗದೀಕರಣ ಮತ್ತು ರೇರಾ ಕಾಯ್ದೆಯಿಂದಾಗಿ ರಿಯಲ್ ಎಸ್ಟೇಟ್ ದರ ಕಡಿಮೆ ಆಗಿ ಕಡಿಮೆ ಬೆಲೆಗೆ ಆಸ್ತಿ ದೊರೆಯುವಂತಾಯಿತು ಎಂದು ಮೋದಿ ಹೇಳಿದ್ದಾರೆ.
ಕಳೆದ ನಾಲ್ಕುವರೆ ವರ್ಷದ ಎನ್ಡಿಎ ಅಧಿಕಾರವದಿಯಲ್ಲಿ ನಾವು 1.50 ಕೋಟಿ ಮನೆಗಳನ್ನು ನಿರ್ಮಿಸಿದ್ದೇವೆ. ಯುಪಿಎ ಆಡಳಿತದಲ್ಲಿ ಅವರಿಗೆ ಕಟ್ಟಲಾಗಿದ್ದ ಕೇವಲ 25 ಲಕ್ಷ ಮನೆಗಳು ಮಾತ್ರ ಎಂದು ಮೋದಿ ಅಂಕಿ-ಅಂಶ ನೀಡಿದರು.
ತಮ್ಮ ಸರ್ಕಾರದ 'ಉಡಾನ್' ಯೋಜನೆಯನ್ನು ಹೊಗಳಿದ ಮೋದಿ, ಕಡಿಮೆ ದರದಲ್ಲಿ ಸಾಮಾನ್ಯರೂ ವಿಮಾನದಲ್ಲಿ ಪ್ರಯಾಣಿಸಲು 'ಉಡಾನ್' ನಿಂದ ಸಾಧ್ಯವಾಯಿತು. ಇದು ದೇಶದ ತ್ವರಿತ ಅಭಿವೃದ್ಧಿಗೆ ಸಹಾಯಕವಾಗಲಿದೆ ಎಂದು ಅವರು ಹೇಳಿದರು.
ಕಳೆದ 30 ವರ್ಷದಲ್ಲಿ ದೇಶದಲ್ಲಿ ಬಲಿಷ್ಠ ಸರ್ಕಾರ ಇರಲಿಲ್ಲ. ಮೂರು ದಶಕಗಳಿಂದಲೂ ಸಮ್ಮಿಶ್ರ ಸರ್ಕಾರವೇ ಇತ್ತು, ಹಾಗಾಗಿ ಅಭಿವೃದ್ಧಿ ಕುಂಠಿತವಾಯಿತು. ಆದರೆ ಕಳೆದ ಬಾರಿ ಬಲಿಷ್ಠ ಸರ್ಕಾರ ನಿರ್ಮಾಣವಾಗಿದೆ ಅಭಿವೃದ್ಧಿಯೂ ವೇಗವಾಗಿ ಆಗುತ್ತಿದೆ ಎಂದು ಮೋದಿ ಹೇಳಿದರು.
-
Krunal Pandya: ವಿರಾಟ್ ಕೊಹ್ಲಿ - 2026ರ ಆರ್ಸಿಬಿ ತಂಡದ ಬಗ್ಗೆ ಸ್ಟಾರ್ ಆಟಗಾರ ಕೃನಾಲ್ ಪಾಂಡ್ಯರಿಂದ ಮಹತ್ವ ವಿಷಯ ರಿವೀಲ್ -
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ












Click it and Unblock the Notifications