Delhi hit and drag case: ಕೊಲೆ ಆರೋಪ ದಾಖಲಿಸಲು ಕೇಂದ್ರ ಸೂಚನೆ- ಮೂಲಗಳು
ನವದೆಹಲಿ ಜನವರಿ 13: ದೆಹಲಿಯ ಹಿಟ್ ಅಂಡ್ ಡ್ರ್ಯಾಗ್ ಪ್ರಕರಣದಲ್ಲಿ 20 ವರ್ಷದ ಯುವತಿ ಸಾವನ್ನಪ್ಪಿದ್ದು ಐವರ ವಿರುದ್ಧ ಕೊಲೆ ಆರೋಪವನ್ನು ದಾಖಲಿಸಬೇಕು ಎಂದು ಕೇಂದ್ರ ಗೃಹ ಸಚಿವಾಲಯ ನಿರ್ದೇಶನ ನೀಡಿದೆ ಎಂದು ಮೂಲಗಳು ಎನ್ಡಿಟಿವಿಗೆ ತಿಳಿಸಿವೆ. ಆ ರಾತ್ರಿ ಪ್ರತ್ಯಕ್ಷದರ್ಶಿಗಳಿಂದ ಬಂದ ಅನೇಕ ಕರೆಗಳನ್ನು ನಿರ್ಲಕ್ಷಿಸಿದ ಪೊಲೀಸರನ್ನು ತಕ್ಷಣವೇ ಅಮಾನತುಗೊಳಿಸುವಂತೆ ಸಚಿವಾಲಯವು ಹೇಳಿದೆ ಎಂದು ಮೂಲಗಳು ತಿಳಿಸಿವೆ. ಹೊಸ ವರ್ಷದಂದು ನಡೆದ ಆಘಾತಕಾರಿ ಪ್ರಕರಣದ ಕುರಿತು ತಾನು ಆದೇಶಿಸಿದ್ದ ತನಿಖೆಯ ವರದಿಯನ್ನು ಸ್ವೀಕರಿಸಿದ ನಂತರ ಸಚಿವಾಲಯದ ಈ ಸೂಚನೆಗಳನ್ನು ನೀಡಿದೆ ಎನ್ನಲಾಗುತ್ತಿದೆ.
ಐವರು ಪಾನಮತ್ತರು ಹೊಸ ವರ್ಷದಂದು ಅಂಜಲಿ ಸಿಂಗ್ ಅವರ ಸ್ಕೂಟಿಗೆ ಡಿಕ್ಕಿ ಹೊಡೆದರು. ಅಂಜಲಿ ದೇಹ ಕಾರಿಗೆ ಸಿಕ್ಕಿಕೊಂಡಾಗ ಅವರು ಕೆಲ ಕಿ.ಮೀ ವರೆಗೂ ಕಾರನ್ನೂ ಚಲಿಸಿದ್ದಾರೆ. ಘಟನೆಯ ನಂತರ ಆಕೆಯ ತಲೆ ಒಡೆದು ಆಕೆಯ ಚರ್ಮ ಸುಲಿದಿದೆ. ಆಕೆಯೊಂದಿಗೆ ಇದ್ದ ಆಕೆಯ ಸ್ನೇಹಿತೆಗೆ ಸಣ್ಣಪುಟ್ಟ ಗಾಯಗಳಾಗಿವೆ. ಮರಣೋತ್ತರ ಪರೀಕ್ಷೆಯಲ್ಲಿ ಯುವತಿ ಅಂಜಲಿ ಭೀಕರ ಗಾಯಗಳಿಂದ ಸಾವನ್ನಪ್ಪಿದ್ದಾರೆ.
ದೆಹಲಿ ಹಿಟ್ ಆಂಡ್ ಡ್ರ್ಯಾಗ್ ಕೇಸ್
ಹೊಸ ವರ್ಷದ ಮುನ್ನಾದಿನದ ಹಿನ್ನೆಲೆಯಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಮಾಡಿದ್ದರು. ಆದರೆ ಈ ಬಗ್ಗೆ ಮಾಹಿತಿ ನೀಡಲು ಪ್ರತ್ಯಕ್ಷ ದರ್ಶಿ ಮಾಡಿದ ಹಲವಾರು ಕರೆಗಳಿಗೆ ಸ್ಪಂದಿಸಲಿಲ್ಲ. ಸಾರ್ವಜನಿಕರ ತೀವ್ರ ಆಕ್ರೋಶದ ನಡುವೆಯೇ ಕೇಂದ್ರ ಗೃಹ ಸಚಿವಾಲಯ ತನಿಖೆಗೆ ಆದೇಶಿಸಿತ್ತು.
ಪೊಲೀಸ್ ನಿರ್ಲಕ್ಷ್ಯದ ಬಗ್ಗೆ ತನಿಖೆ
ಹಿರಿಯ ಪೊಲೀಸ್ ಅಧಿಕಾರಿ ನಡೆಸಿದ ತನಿಖೆಯಲ್ಲಿ ಮೂರು ಪಿಸಿಆರ್ ಸಿಬ್ಬಂದಿ ಮತ್ತು ಇಬ್ಬರು ಪೊಲೀಸ್ ಪಿಕೆಟ್ಗಳು ನಿರ್ಲಕ್ಷ್ಯದ ತಪ್ಪಿತಸ್ಥರೆಂದು ಕಂಡುಬಂದಿದೆ. ಜಿಲ್ಲಾ ಪೊಲೀಸ್ ಉಸ್ತುವಾರಿಗೂ ಶೋಕಾಸ್ ನೋಟಿಸ್ ಕಳುಹಿಸುವಂತೆ ಸಚಿವಾಲಯ ಸೂಚನೆ ನೀಡಿದೆ ಎಂದು ಮೂಲಗಳು ತಿಳಿಸಿವೆ. ಆ ಪ್ರದೇಶದಲ್ಲಿ ಕಾನೂನು-ಸುವ್ಯವಸ್ಥೆ ಹೇಗಿತ್ತು ಎಂಬುದನ್ನು ಅಧಿಕಾರಿ ಸ್ಪಷ್ಟಪಡಿಸಬೇಕು. ಸಮಾಧಾನಕರ ಪ್ರತಿಕ್ರಿಯೆ ಇಲ್ಲದಿದ್ದಲ್ಲಿ ಅವರ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ಮೂಲಗಳು ತಿಳಿಸಿವೆ.
ಆರೋಪಿಗಳು ಹೇಳಿದ್ದೇನು?
ಈ ಬಗ್ಗೆ ಆರೋಪಿಗಳು ವಿಚಾರಣೆ ವೇಳೆ ಸ್ಕೂಟಿಗೆ ಡಿಕ್ಕಿ ಹೊಡೆದ ನಂತರ ತಾವು ಗಾಬರಿಗೊಂಡಿದ್ದು, ಮಹಿಳೆ ಅಂಡರ್ಕ್ಯಾರೇಜ್ನಲ್ಲಿ ಸಿಲುಕಿರುವ ಬಗ್ಗೆ ತಿಳಿದಿರಲಿಲ್ಲ ಎಂದು ಪೊಲೀಸರಿಗೆ ತಿಳಿಸಿದ್ದಾರೆ. ಅವರು ಹರ್ಯಾಣದ ಮುರ್ತಾಲ್ನಿಂದ ಹಿಂತಿರುಗುವಾಗ ತಾವು ಕುಡಿದಿದ್ದರು ಎಂದು ಹೇಳಿದರು. ಕಾರಿನಲ್ಲಿ ಸಂಗೀತ ಜೋರಾಗಿದ್ದರಿಂದ ಅವರಿಗೆ ಏನೂ ಕೇಳಿಸಲಿಲ್ಲ ಎಂದು ಅವರು ಹೇಳಿದ್ದಾರೆ.
ಆರೋಪಿಗಳ ವಿರುದ್ಧ ಪ್ರಕರಣ ದಾಖಲು
ಮಹಿಳೆ ತಮ್ಮ ಕಾರಿನಡಿ ಸಿಲುಕಿರುವುದು ಪುರುಷರಿಗೆ ಸಂಪೂರ್ಣವಾಗಿ ತಿಳಿದಿತ್ತು ಎಂದು ಸಿಸಿಟಿವಿ ಫೂಟೇಜ್ ಮೂಲಕ ತಿಳಿದುಬಂದಿದೆ. ಪೊಲೀಸರು ತಮ್ಮ ಬಳಿ ಇರುವ ಆರು ಸಿಸಿಟಿವಿ ದೃಶ್ಯಗಳಲ್ಲಿ ಒಂದರಲ್ಲಿ ಇಬ್ಬರು ಪುರುಷರು ಅಪಘಾತ ಸಂಭವಿಸಿದ ಎರಡು ನಿಮಿಷಗಳ ನಂತರ ಕಾರಿನಿಂದ ಇಳಿದು ಸಿಕ್ಕಿಬಿದ್ದ ಮಹಿಳೆಯನ್ನು ನೋಡುವುದನ್ನು ತೋರಿಸುತ್ತದೆ ಎಂದು ದೆಹಲಿ ನ್ಯಾಯಾಲಯಕ್ಕೆ ತಿಳಿಸಿದರು. ನಂತರ ಅವರು ವಾಹನವನ್ನು ಓಡಿಸಿದರು, ದೇಹವನ್ನು ಹೊರಹಾಕಲು ಪ್ರಯತ್ನಿಸಿದರು. ಪುರುಷರ ಮೇಲೆ ಇಲ್ಲಿಯವರೆಗೆ "ಕೊಲೆಗೆ ಸಮಾನವಲ್ಲದ ಅಪರಾಧಿ ನರಹತ್ಯೆ", ಅಜಾಗರೂಕ ಚಾಲನೆ ಮತ್ತು ನಿರ್ಲಕ್ಷ್ಯದಿಂದ ಸಾವಿಗೆ ಕಾರಣವಾದ ಆರೋಪಗಳನ್ನು ಹೊರಿಸಲಾಗಿದೆ.