ವಿಮಾನ ಪ್ರಯಾಣಿಕರ ಗಮನಕ್ಕೆ: ದೆಹಲಿಯಲ್ಲಿ ದಟ್ಟ ಮಂಜು: ಕೆಲವು ವಿಮಾನಗಳ ಹಾರಾಟ ರದ್ದು, ವಿಳಂಬ
ನವದೆಹಲಿ: ದೆಹಲಿಯಲ್ಲಿ ಕಳಪೆ ಗಾಳಿ ದಾಖಲಾತಿ ಮತ್ತು ದಟ್ಟ ಮಂಜಿನ ವಾತಾವರಣ ಮುಂದುವರಿದಿದೆ. ರಾಜ್ಯ ಸರ್ಕಾರ ಈ ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಳ್ಳುವಲ್ಲಿ ನಿರತವಾಗಿದೆ. ಇನ್ನೊಂದೆಡೆ ಅಗೋಚರತೆಯು ವಿಮಾನಯಾನ ಸೇವೆಗೆ ಅಡ್ಡಿ ಉಂಟು ಮಾಡಿದೆ. ಗುರುವಾರ ಒಂದೇ ದಿನ 22 ವಿಮಾನಗಳ ಹಾರಾಟ ರದ್ದಾಗಿದೆ. 80ಕ್ಕೂ ಅಧಿಕ ವಿಮಾನಗಳ ಸೇವೆಯಲ್ಲಿ ವಿಳಂಬವಾಗಿತು. ಸಂಕಷ್ಟದಲ್ಲಿರುವ ಪ್ರಯಾಣಿಕರೊಂದಿಗೆ ದೆಹಲಿ ಏರ್ಪೋರ್ಟ್ ನಿರಂತರ ಸಂಪರ್ಕದಲ್ಲಿತ್ತು.
ಬೆಳಗಿನ ಜಾವ ದೆಹಲಿಯಲ್ಲಿ ದಟ್ಟವಾದ ಮಂಜು ಆವರಿಸಿತ್ತು. ಬಹುತೇಕ ನಗರ ಮಂಜಿನಿಂದ ಮುಚ್ಚಿಕೊಂಡಿತ್ತು. ಗೋಚರತೆ ಕ್ಷಣಿಸಿತ್ತು. ಇದರಿಂದ ನಗರವಾಸಿಗಳು ಸಂಚಾರ ತೊಂದರೆ ಅನುಭವಿಸಬೇಕಾಯಿತು. ವಾಹನಗಳು, ರೈಲುಗಳ ಸಂಚಾರ ಅಸ್ತವ್ಯಸ್ತವಾಯಿತು. ಇದೇ ವೇಳೆ ಇಂದಿರಾ ಗಾಂಧಿ ಅಂತರಾಷ್ಟ್ರೀಯ (ಐಜಿಐ) ವಿಮಾನ ನಿಲ್ದಾಣದಲ್ಲಿ22 ವಿಮಾನಗಳ ಹಾರಾಟ ರದ್ದಾಯಿತು. ಹತ್ತಾರು ವಿಮಾನಗಳ ಸೇವೆಯಲ್ಲಿ ವ್ಯತ್ಯಯವಾಯಿತು. ಇದರಿಂದಾಗಿ ಪ್ರಯಾಣಿಕರಿಗೆ ಸಂಕಷ್ಟ ಎದುರಾಯಿತು. ಪ್ರಯಾಣಿಕರು ಏರ್ಪೋರ್ಟ್ನಲ್ಲಿಯೇ ಕೆಲ ಗಂಟೆಗಳನ್ನು ಕಳೆಯಬೇಕಾಯಿತು.

ಚಳಿ, ಮಂಜು ಮುನ್ಸೂಚನೆ: ವಿಮಾನ ಸೇವೆ ವ್ಯತ್ಯಯ ಮುಂದುವರಿಕೆ
ಐಎಂಡಿ ಪ್ರಕಾರ, ಮುಂದಿನ ಮೂರು ನಾಲ್ಕು ದಿನ ದೆಹಲಿಯಲ್ಲಿ ಇದೇ ರೀತಿ ಮಂಜು, ತೀವ್ರ ಚಳಿ ಮುಂದುವರಿಯಲಿದೆ. ಹೀಗಾಗಿ ಎರಡು ಮೂರು ದಿನ ಬೆಳಗ್ಗೆ ವಿಮಾನ ಸೇವೆಯಲ್ಲಿ ವ್ಯತ್ಯಯ, ಸಂಚಾರ ರದ್ದು ಹಾಗೂ ಸೇವೆಯಲ್ಲಿನ ವಿಳಂಬವು ಸಹ ಮುಂದುವರಿಯುವ ಸಾಧ್ಯತೆ ಇದೆ. ಮಧ್ಯಾಹ್ನ ಹೊತ್ತಿಗೆ ಎಂದಿನಂತೆ ಸಹಜ ಸ್ಥಿತಿಗೆ ವಿಮಾನ ಸೇವೆ ಮರಳಿತು ಎಂದು ದೆಹಲಿ ಐಜಿಐ ಗುರುವಾರ ತಿಳಿಸಿತು.
ಕಾಲ ಕಾಲಕ್ಕೆ ವಿಮಾನಗಳ ಸಂಚಾರ ಕುರಿತು ಪ್ರಯಾಣಿಕರಿಗೆ ದೆಹಲಿ ಏರ್ಪೋರ್ಟ್ ಎಕ್ಸ್ ಹ್ಯಾಂಡಲ್ನಲ್ಲಿ (@DelhiAirport) ಸಲಹೆ, ಸೂಚನೆ ನೀಡುತ್ತಲೆ ಇದ್ದದ್ದು ಕಂಡು ಬಂತು. ಇದೇ ವಿಚಾರವಾಗಿ ನಾಗರಿಕ ವಿಮಾನಯಾನ ನಿರ್ದೇಶನಾಲಯ (DGCA) ಸಹ ಅಗತ್ಯ ಸಲಹೆಗಳನ್ನು ವಿಮಾನಯಾನ ಸಂಸ್ಥೆಗಳಿಗೆ ಕೊಟ್ಟಿದೆ. ಶುಕ್ರವಾರ ಬೆಳಗ್ಗೆ ಸಹ ದಟ್ಟ ಮಂಜು, ಕಡಿಮೆ ಗೋಚರತೆ ಸ್ಥಿತಿ ಉಂಟಾಗಬಹುದು. ವಿಮಾನಯಾನ ಸಂಸ್ಥೆಗಳು, ಟಿಕೆಟ್ ಬುಕ್ ಮಾಡಿದ ಪ್ರಯಾಣಿಕರು ಸಹ ನಿರಂತರ ಪರಸ್ಪರ ಸಂಪರ್ಕದಲ್ಲಿರಬೇಕು ಎಂದು ತಿಳಿಸಲಾಗಿದೆ.
ವಿಮಾನ ಸೇವೆಯ ಜೊತೆಗೆ ದೆಹಲಿ ಮಾರ್ಗದಲ್ಲಿ ಸಂಚರಿಸುವ ಹಾಗೂ ದೆಹಲಿ ರೈಲು ನಿಲ್ದಾಣದಿಂದ ಪ್ರಯಾಣ ಆರಂಭಿಸುವ ರೈಲುಗಳಲ್ಲಿ ಸೇವೆ ಇಂದು ವ್ಯತ್ಯಯವಾಯಿತು. ಅವುಗಳ ಪಟ್ಟಿ ಇಲ್ಲಿದೆ.
ವಿಳಂಬವಾದ ರೈಲುಗಳ ಪಟ್ಟಿ
1) ಹರಿದ್ವಾರ ಭಾವನಗರ ಎಕ್ಸ್ಪ್ರೆಸ್ ರೈಲು (19272 ) 1 ಗಂಟೆ 7 ನಿಮಿಷ ವಿಳಂಬ
2) ಪ್ರಯಾಗ್ರಾಜ್ ಎಕ್ಸ್ಪ್ರೆಸ್ ರೈಲು (12417) 4 ಗಂಟೆ 4 ನಿಮಿಷ ವಿಳಂಬ.
3) ರೇವಾ ಆನಂದ್ ವಿಹಾರ್ ಎಕ್ಸ್ಪ್ರೆಸ್ ರೈಲು (12427) 3 ಗಂಟೆ 57 ನಿಮಿಷ ವಿಳಂಬವಾಗಿದೆ.
4) ನವದೆಹಲಿ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು (12427) 8 ಗಂಟೆ 52 ನಿಮಿಷ ತಡವಾಗಿ ಆಗಮಿಸಿತು.
5) ಗೀತಾ ಜಯಂತಿ ಎಕ್ಸ್ಪ್ರೆಸ್ ರೈಲು (11841) 1 ಗಂಟೆ 40 ನಿಮಿಷ ವಿಳಂಬವಾಯಿತು.
6) ನೌಚಂಡಿ ಎಕ್ಸ್ಪ್ರೆಸ್ ರೈಲು (14241) ಸುಮಾರು 5 ಗಂಟೆ ಸೇವೆಯಲ್ಲಿ ವ್ಯತ್ಯವಾಯಿತು.
7) ಆನಂದ್ ವಿಹಾರ್ ಟರ್ಮಿನಸ್ ಎಕ್ಸ್ಪ್ರೆಸ್ ರೈಲು (13257) ಸುಮಾರು 12 ಗಂಟೆ ತಡವಾಗಿ ಚಲಿಸಿದೆ.
8) ಸಪ್ತ ಕ್ರಾಂತಿ ಎಕ್ಸ್ಪ್ರೆಸ್ ರೈಲು (12557) 45 ನಿಮಿಷ ವಿಳಂಬ.
9) ನವದೆಹಲಿ ಎಸಿ ಸೂಪರ್ಫಾಸ್ಟ್ ಎಕ್ಸ್ಪ್ರೆಸ್ ರೈಲು (12429) ಸುಮಾರು 45 ನಿಮಿಷಗಳಷ್ಟು ವಿಳಂಬವಾಗಿದೆ.
10) ಪದ್ಮಾವತ್ ಎಕ್ಸ್ಪ್ರೆಸ್ ರೈಲು (14207) ಸುಮಾರು 4 ಗಂಟೆಗಳಷ್ಟು ತಡವಾಯಿತು.
-
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
IPL 2026 Ticket: ಐಪಿಎಲ್ ಟಿಕೆಟ್ ಖರೀದಿ ಕುರಿತು ಬೆಂಗಳೂರು ಪೊಲೀಸರಿಂದ ಕ್ರಿಕೆಟ್ ಪ್ರೇಮಿಗಳಿಗೆ ಮಹತ್ವದ ಸಲಹೆ












Click it and Unblock the Notifications