Get Updates
Get notified of breaking news, exclusive insights, and must-see stories!

ದಿಲ್ಲಿ ಸರಕಾರ ರಚನೆಗೆ ನಾ ಒಲ್ಲೆ ಎಂದ ಬಿಜೆಪಿ

ನವದೆಹಲಿ, ಡಿ.9: ನಿರೀಕ್ಷೆಯಂತೆ ರಾಷ್ಟ್ರ ರಾಜಧಾನಿಯಲ್ಲಿ ತ್ರಿಶಂಕು ಸ್ಥಿತಿ ನಿರ್ಮಾಣವಾಗಿದೆ. ಭಾರಿ ಭರವಸೆಯ ಹೊಚ್ಚ ಹೊಸ ಪಕ್ಷದ ಸ್ಪರ್ಧೆಯಿಂದಾಗಿ ತ್ರಿಕೋನ ಸ್ಪರ್ಧೆ ಕಂಡ ದಿಲ್ಲಿಯಲ್ಲಿ ಒಂದು ಕೋನ ಬಿದ್ದು ಹೋಗಿದೆ. ಉಳಿದೆರಡು ಸರಕಾರ ರಚನೆಗಾಗಿ ಅಖಾಡದಲ್ಲಿವೆ.

ಈ ಸಂದರ್ಭದಲ್ಲಿ ಸಹಜವಾಗಿಯೇ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಬಿಜೆಪಿಗೆ ಸರಕಾರ ರಚಿಸುವಂತೆ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ಅವರು ಹರ್ಷವರ್ಧನ ಅವರಿಗೆ ಆಹ್ವಾನ ನೀಡಲಿದ್ದಾರೆ. ಆದರೆ ಮುಂದೇನು ಎಂಬುದೇ ಸದ್ಯದ ಕುತೂಹಲ.
(ದಿಲ್ಲಿಯಲ್ಲಿ ತ್ರಿಶಂಕು ಸ್ಥಿತಿ ನಿರ್ಮಾಣ: ಮುಂದೇನು?)

Delhi assembly polls-2013- Hung assembly BJP not to form govt
ಆದರೆ ಅಖಾಡದಲ್ಲಿ ಉಳಿದಿರುವ ಬಿಜೆಪಿ ಮತ್ತು ಆಮ್ ಆದ್ಮಿ ಪಕ್ಷಗಳೆರಡೂ ಸರಕಾರ ರಚನೆಗೆ ನಾ ಒಲ್ಲೆ ಎಂದಿವೆ. ಒಂದೊಂದೇ ಕ್ಷೇತ್ರದ ಫಲಿತಾಂಶ ಪ್ರಕಟವಾಗುತ್ತಾ ಸಾಗಿದಂತೆ ತನ್ನ ನಿರ್ಧಾರವನ್ನು ಗಟ್ಟಿ ಮಾಡಿಕೊಳ್ಳುತ್ತಾ ಸಾಗಿದ ಆಮ್ ಆದ್ಮಿಗಳು ಸಂಜೆ ವೇಳೆಗೆ ಸರಕಾರ ರಚನೆಗೆ ಯಾವುದೇ 'ಕಸರತ್ತು' ಮಾಡುವುದಿಲ್ಲ ಎಂದು ಸ್ಪಷ್ಟಪಡಿದ್ದಾರೆ.

ಇನ್ನು ಉಳಿದಿರುವುದು ಬಿಜೆಪಿ. ಗದ್ದುಗೆವರೆಗೂ ಬಂದು ಕೇವಲ 4 ಸ್ಥಾನಗಳೊಂದಿಗೆ ಮುಗ್ಗರಿಸಿದ ಬಿಜೆಪಿ ಸದ್ಯಕ್ಕೆ ಜಾಣ ನಡೆಗೆ ಮುಂದಾಗಿದೆ. ಅಧಿಕಾರ ಲಾಲಸೆಗೆ ಬಿದ್ದು ಕರ್ನಾಟಕ ಕುಖ್ಯಾತಿಯ ಆಪರೇಶನ್ ಕಮಲ ಸೇರಿದಂತೆ ಯಾವುದೇ 'ಕಸರತ್ತು' ನಡೆಸಿ, ಕೆಸರು ಮೆತ್ತಿಕೊಳ್ಳಲು ಬಿಜೆಪಿ ಬಯಸಿಲ್ಲ. ತಾವರೆ ಎಲೆಯಂತೆ ನಿಷ್ಕಳಂಕವಾಗಿರಲು ಬಯಸಿರುವ ಬಿಜೆಪಿ ಸರಕಾರ ರಚನೆಗೆ ನಾ ಒಲ್ಲೆ ಎಂದಿದೆ.

ಯಾರಪ್ಪಾ ಈ ವಿಷಯ ತಿಳಿಸಿದ್ದು ಅಂತ ಕೇಳಿದರೆ ಖುದ್ದು ಸರಕಾರ ರಚಿಸಬೇಕಿದ್ದ ಮುಖ್ಯಮಂತ್ರಿ ಅಭ್ಯರ್ಥಿ ಡಾ. ಹರ್ಷವರ್ಧನ ಅವರೇ ಇದನ್ನು ಕಡ್ಡಿಮುರಿದಂತೆ ಹೇಳಿದ್ದಾರೆ. ಒಂದು ವೇಳೆ ರಾಜ್ಯಪಾಲರು ಸರಕಾರ ರಚಿಸುವಂತೆ ಸೂಚಿಸಿದರೂ ನಾನಂತೂ ಅಂತಹ ದುಸ್ಸಾಹಸಕ್ಕೆ ಕೈಹಾಕಲಾರೆ ಎಂದು ಅವರು ಒತ್ತಿಹೇಳಿದ್ದಾರೆ.

'ಬಿಜೆಪಿಯ ಮನಮೋಹನ್ ಸಿಂಗ್' ಎಂದೇ ಖ್ಯಾತರಾದ ಸಜ್ಜನ ಹರ್ಷವರ್ಧನ ಈ ಮಾತು ಹೇಳಿರುವುದು ಕುತೂಹಲಕಾರಿಯಾಗಿದೆ. ಇಲ್ಲಿ ಒಂದು ವಿಷಯ ಹೇಳಬೇಕು. ಕಾಂಗ್ರೆಸ್ಸಿನ ಪ್ರಧಾನಿ ದಿವ್ಯಮೌನಿ ಮನಮೋಹನ ಸಿಂಗ್ ಮತ್ತು ಹರ್ಷವರ್ಧನ ಅವರಿಗೂ ಇರುವ ಒಂದೇ ವ್ಯತ್ಯಾಸವೆಂದರೆ ಹರ್ಷವರ್ಧನ ಅವರು ಸತತವಾಗಿ ನಿನ್ನೆ 5ನೆಯ ಬಾರಿಗೆ ಜನರಿಂದ ಆರಿಸಿಬಂದಿದ್ದಾರೆ. ಆದರೆ ನಮ್ಮ ಪ್ರಧಾನಿ ಭವಿಷ್ಯದಲ್ಲಾದರೂ ಒಮ್ಮೆ ಜನರಿಂದ ಆರಿಸಿ ಬರುವ ಆಸೆ ಮತದಾರರಿಗೆ ಇಲ್ಲ.

ಹೌದು ಸತತವಾಗಿ ಐದನೆಯ ಬಾರಿಗೆ ಗೆದ್ದು ಬಂದಿರುವ ಡಾ. ಹರ್ಷವರ್ಧನ ಜನ ಪೂರ್ಣಮಟ್ಟದ ಬಹುಮತ ನೀಡಿಲ್ಲ. ಜತೆಗೆ ಈಗಿನ ಸಂಖ್ಯೆಗಳನ್ನು ನೋಡಿದರೆ ಖಂಡಿತಾ ಸರಕಾರ ರಚನೆ ಸಾಧ್ಯವಾಗದು. ಹಾಗಾಗಿ ಅಧಿಕಾರಕ್ಕೆ ಆಸೆ ಪಡದೆ, ಇನ್ನಾರು ತಿಂಗಳಲ್ಲಿ ಜನರನ್ನು ಮತ್ತಷ್ಟು ಪರಿಣಾಮಕಾರಿಯಾಗಿ ತಲುಪಿ, ಅವರ ಮನಗೆಲ್ಲುವುದರೊಂದಿಗೆ ಚುನಾವಣೆಯನ್ನು ಗೆಲ್ಲುತ್ತೇವೆ. ಹಾಗಾಗಿ ನಾನಂತೂ ಮುಖ್ಯಮಂತ್ರಿ ಸರಕಾರ ರಚನೆಗೆ ಮುಂದಾಗುವುದಿಲ್ಲ ಎಂದು ಡಾ. ಹರ್ಷವರ್ಧನ ಸ್ಪಷ್ಟಪಡಿಸಿದ್ದಾರೆ.

ಈ ಮಧ್ಯೆ, ಬಿಜೆಪಿ ಮಾಜಿ ರಾಷ್ಟ್ರಾಧ್ಯಕ್ಷ ನಿತಿನ್ ಗಡ್ಕರಿ ಸಹ ಇದೇ ಮಾತನ್ನು ಹೇಳಿದ್ದಾರೆ. ಈಗಿನ ಪರಿಸ್ಥಿತಿಯಲ್ಲಿ ಸರಕಾರ ರಚನೆಗೆ ಮುಂದಾಗುವುದು ಜಾಣತನವಲ್ಲ. ಹಾಗಾಗಿ ನಾವು ಸರಕಾರ ರಚನೆ ದಾವೆಗೆ ಮುಂದಾಗುವುದಿಲ್ಲ ಎಂದು ಹೇಳಿದ್ದಾರೆ.

ಆದರೆ ಒಬ್ಬ ಬಿಜೆಪಿ ರಾಷ್ಟ್ರಾಧ್ಯಕ್ಷ ರಾಜನಾಥ್ ಸಿಂಗ್ ಮಾತ್ರ ದಿಲ್ಲಿ ಸೇರಿದಂತೆ ಎಲ್ಲಾ ನಾಲ್ಕೂ ರಾಜ್ಯಗಳಲ್ಲಿ ಸರಕಾರ ರಚಿಸುತ್ತೇವೆ ಎಂದು ಹೇಳಿರುವುದು ಕುತೂಹಲಕಾರಿಯಾಗಿದೆ. ಉಳಿದ ಮೂರು ಕಡೆ ಓಕೆ. ಆದರೆ ದಿಲ್ಲಿಯಲ್ಲಿ ಮೈಯೆಲ್ಲಾ ಕೆಸರು ಮಾಡಿಕೊಂಡು ಸರಕಾರ ರಚಿಸುತ್ತಾರಾ ಅಥವಾ ಮುಖ್ಯಮಂತ್ರಿ ಅಭ್ಯರ್ಥಿ ಮತ್ತು ಮಾಜಿ ರಾಷ್ಟ್ರಾಧ್ಯಕ್ಷರ ವಿವೇಕವನ್ನು ಪ್ರದರ್ಶಿಸುತ್ತಾರಾ? ಎಂಬುದು ಸದ್ಯದ ಕುತೂಹಲ. ಓವರ್ ಟು ರಾಜನಾಥ್ ಜೀ...

ಮರೆತ ಮಾತು: ಈಗಾಗಲೇ ದಿಲ್ಲಿ ಆಡಳಿತ ಶೋಚನೀಯ ಸ್ಥಿತಿಯಲ್ಲಿದೆ. ಹಾಗಿರುವಾಗ ದಿಲ್ಲಿಯಂತಹ ಆಯಕಟ್ಟಿನ ರಾಜ್ಯದ ವಿಧಾನಸಭೆಯನ್ನು ಹೆಚ್ಚು ಕಾಲ ಅತಂತ್ರವಾಗಿಡುವುದು ಸಮಂಜಸವಲ್ಲ. ಸಂವಿಧಾನದಲ್ಲಿಯೂ ಅದಕ್ಕೆ ಅವಕಾಶ ಇಲ್ಲ. ಹಾಗಾಗಿ ಅದು ಹೆಚ್ಚು ಕಾಲ ರಾಷ್ಟ್ರಪತಿ ಆಳ್ವಿಕೆಯಲ್ಲಿ ಉಳಿಯುವಂತಿಲ್ಲ.

ಡಿಸೆಂಬರ್ 17ಕ್ಕೆ ಈಗಿನ ವಿಧಾನಸಭೆಯ ಕಾಲಾವಧಿ ಮುಗಿಯುತ್ತದೆ. ಅಲ್ಲಿಂದ ಮುಂದಕ್ಕೆ 6 ತಿಂಗಳಲ್ಲೇ ಮತ್ತೆ ಚುನಾವಣೆ ನಡೆಯಬೇಕಾಗುತ್ತದೆ. ಅಂದರೆ ಆ ವೇಳೆಗೆ ಲೋಕಸಭಾ ಚುನಾವಣೆಗಳೂ ನಡೆಯಲಿದ್ದು, ಅದರೊಟ್ಟಿಗೆ ದಿಲ್ಲಿ ವಿಧಾನಸಭೆ ಚುನಾವಣೆಯನ್ನೂ ಮತ್ತೆ ನಡೆಸಬಹುದಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+