ಚೀನಾಗೆ ಖಡಕ್ ಸಂದೇಶ ನೀಡಿದ ರಾಜನಾಥ್ ಸಿಂಗ್
ನವದೆಹಲಿ: ಭಾರತ-ಚೀನಾ ಮಧ್ಯೆ ಮಹತ್ವದ ಮಾತುಕತೆ ಶುರುವಾಗಿದ್ದು, ಗಡಿ ಸಮಸ್ಯೆ ಇತ್ಯರ್ಥಕ್ಕೆ ಈ ಬಾರಿ ಸ್ವತಃ ಚೀನಾ ಮುಗಿಬಿದ್ದು ಬಂದಿದೆ. ಇದೇ ಸಂದರ್ಭದಲ್ಲಿ ಚೀನಾ ರಕ್ಷಣಾ ಸಚಿವರಿಗೆ ನೇರ ಉತ್ತರ ನೀಡಿರುವ ರಾಜನಾಥ್ ಸಿಂಗ್, ಗಡಿಯಲ್ಲಿ ಚೀನಾ ಸೈನಿಕರು ಮಾಡುತ್ತಿರುವ ಉಪಟಳದಿಂದ ಶಾಂತಿ ಹಾಳಾಗುತ್ತಿದೆ ಎಂದು ಖಡಕ್ ತಿರುಗೇಟು ನೀಡಿದ್ದಾರೆ.
ನವದೆಹಲಿಯಲ್ಲಿ ಆಯೋಜನೆಯಾಗಿರುವ ಶಾಂಘೈ ಸಹಕಾರ ಸಂಘಟನೆ (SCO) ಶೃಂಗಸಭೆಯಲ್ಲಿ ಭಾಗವಹಿಸಲು ಚೀನಾದ ರಕ್ಷಣಾ ಸಚಿವ ಜನರಲ್ ಲಿ ಶಾಂಗ್ಫು ಭಾರತಕ್ಕೆ ಆಗಮಿಸಿದ್ದಾರೆ. ಇದೇ ಸಂದರ್ಭವನ್ನು ಗಡಿ ವಿವಾದ ಇತ್ಯರ್ಥಕ್ಕೆ ಚೀನಾ ಬಳಸಿಕೊಳ್ಳುತ್ತಿದೆ. ಸಂಜೆ ಆರಂಭವಾದ ಮಹತ್ವದ ಸಭೆಯಲ್ಲಿ ರಕ್ಷಣಾ ಇಲಾಖೆಯ ಅಧಿಕಾರಿಗಳು ಹಾಗೂ ರಾಜನಾಥ್ ಸಿಂಗ್ ಭಾಗವಹಿಸಿದ್ದರು. ಈ ವೇಳೆ ನೇರವಾಗಿ ಚೀನಾ ಸೇನೆ ತಪ್ಪುಗಳನ್ನು ತಿಳಿಸಿದರು. ಪೂರ್ವ ಲಡಾಖ್ನಲ್ಲಿ ವಾಸ್ತವ ಗಡಿರೇಖೆಯಲ್ಲಿ ಚೀನಾ ದ್ವಿಪಕ್ಷೀಯ ಒಪ್ಪಂದ ಉಲ್ಲಂಘಿಸಿರುವುದೇ ಸಮಸ್ಯೆಗೆ ಕಾರಣ ಎಂದಿದ್ದಾರೆ.

ಸಚಿವ ರಾಜನಾಥ್ ಸಿಂಗ್ ಹೇಳಿದ್ದು ಏನು?
ರಕ್ಷಣಾ ಸಚಿವಾಲಯ ಮಾಹಿತಿಯಂತೆ, ಭಾರತ-ಚೀನಾ ನಡುವಿನ ಸಂಬಂಧ ಗಡಿಯ ಶಾಂತಿಯನ್ನು ಆಧರಿಸಿದೆ. ಇದೀಗ ಅಸ್ತಿತ್ವದಲ್ಲಿರುವ ದ್ವಿಪಕ್ಷೀಯ ಒಪ್ಪಂದ ಮತ್ತು ಬದ್ಧತೆಗೆ ಅನುಗುಣವಾಗಿ ಎಲ್ಎಸಿಯ ಸಮಸ್ಯೆಗಳನ್ನು ಪರಿಹರಿಸಬೇಕಾಗಿದೆ ಎಂದು ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ. ಈ ಮೂಲಕ ಚೀನಾ ಸೈನಿಕರು ಭಾರತ ಗಡಿಯೊಳಗೆ ಬಂದು ಒಪ್ಪಂದ ಉಲ್ಲಂಘಿಸಿದ ವಿಚಾರವನ್ನ ಪ್ರಸ್ತಾಪಿಸಲಾಗಿದೆ. ಹಾಗೇ ಗಡಿ ವಿಚಾರದಲ್ಲಿ ಭಾರತ ಹೊಸ ನಿಲುವು ತೆಗೆದುಕೊಳ್ಳುವುದಿಲ್ಲ ಎಂಬ ಸಂದೇಶವನ್ನೂ ಚೀನಾ ರಕ್ಷಣಾ ಸಚಿವರ ಮೂಲಕ ನೆರೆ ದೇಶಕ್ಕೆ ರವಾನಿಸಲಾಗಿದೆ.
ಒಪ್ಪಂದ ಮುರಿದಿದ್ದೇ ದೊಡ್ಡ ತಪ್ಪು!
ಜೊತೆಗೆ ಪೂರ್ವಲಡಾಖ್ನಲ್ಲಿ ವಾಸ್ತವ ಗಡಿರೇಖೆಯಲ್ಲಿ ಚೀನಾ ದ್ವಿಪಕ್ಷೀಯ ಒಪ್ಪಂದವನ್ನು ಉಲ್ಲಂಘಿಸಿರುವುದು, ಉಭಯ ದೇಶಗಳ ದ್ವಿಪಕ್ಷೀಯ ಬಾಂಧವ್ಯದ ಅಡಿಪಾಯ ಅಲುಗಾಡಿಸಿದೆ ಎನ್ನುವ ಮೂಲಕ ಚೀನಾ 3 ವರ್ಷಗಳ ಹಿಂದೆ ಮಾಡಿದ್ದ ತಪ್ಪನ್ನು ಮನವರಿಕೆ ಮಾಡಿಸಿದ್ದಾರೆ ಸಚಿವ ರಾಜನಾಥ್ ಸಿಂಗ್. ಈಗಲೂ ಗಡಿಯಲ್ಲಿ ಚೀನಾ ಸೈನಿಕರು ಮಾಡುತ್ತಿರುವ ಕಿರಿಕಿರಿಯ ಬಗ್ಗೆ ಚೀನಾದ ರಕ್ಷಣಾ ಸಚಿವರಿಗೆ ತಿಳಿಸಿಕೊಡುವ ಕೆಲಸ ಮಾಡಲಾಗಿದೆ.
ಸಂಘರ್ಷದ ಬಳಿಕ ಮೊದಲ ಭೇಟಿ
ಭಾರತ, ಚೀನಾ ಗಡಿಭಾಗ ಪೂರ್ವ ಲಡಾಖ್ನಲ್ಲಿ ವಾಸ್ತವ ಗಡಿ ರೇಖೆ ಬಳಿ ಎರಡೂ ದೇಶಗಳ ಸೈನಿಕರ ಮಧ್ಯೆ ನಡೆದಿದ್ದ ಭೀಕರ ಸಂಘರ್ಷದ ಬಳಿಕ ಇದು ಮಹತ್ವದ ಭೇಟಿಯಾಗಿದೆ. ಸೇನಾ ಸಂಘರ್ಷದ ಬಳಿಕ 3 ವರ್ಷಗಳಿಂದ ಭಾರತ ಹಾಗೂ ಚೀನಾ ಗಡಿಯಲ್ಲಿ ಬಿಗುವಿನ ವಾತಾವರಣ ಇದೆ. ಇಷ್ಟೆಲ್ಲದರ ಮಧ್ಯೆ ಚೀನಾ ರಕ್ಷಣಾ ಸಚಿವರ ಜೊತೆ ದ್ವಿಪಕ್ಷೀಯ ಚರ್ಚೆ ನಡೆಯಿತು. ಭಾರತ ಆತಿಥ್ಯ ವಹಿಸಿರುವ ಶಾಂಘೈ ಸಹಕಾರ ಸಂಘಟನೆಯ ಸಭೆಯಲ್ಲಿ ಪಾಲ್ಗೊಳ್ಳಲು ಚೀನಾ ರಕ್ಷಣಾ ಲಿ ಶಾಂಗ್ಫು ಭಾರತಕ್ಕೆ ಆಗಮಿಸಿದ್ದಾರೆ. ಇದೇ ಸಂದರ್ಭದಲ್ಲಿ ಗಡಿ ಸಮಸ್ಯೆ ಇತ್ಯರ್ಥಕ್ಕೆ ಮಹತ್ವದ ಸಭೆ ನಡೆದಿದೆ.
ಉಭಯ ರಕ್ಷಣಾ ಸಚಿವರ ಭೇಟಿ ಹಾಗೂ ಸಭೆಯಲ್ಲಿ ನಡೆದ ಮಾತುಕತೆಯ ಹೇಳಿಕೆಗಳನ್ನ ರಕ್ಷಣಾ ಸಚಿವಾಲಯ ತಿಳಿಸಿದೆ.ಗಡಿಯಲ್ಲಿನ ಬೆಳವಣಿಗೆಗಳು ಹಾಗೂ ದ್ವಿಪಕ್ಷೀಯ ಬಾಂಧವ್ಯ ಕುರಿತಾಗಿ ಉಭಯ ದೇಶಗಳ ರಕ್ಷಣಾ ಸಚಿವರು ಮುಕ್ತವಾಗಿ ಚರ್ಚಿಸಿದರು ಎಂದು ಕೂಡ ಮಾಹಿತಿ ನೀಡಲಾಗಿದೆ. ಮತ್ತೊಂದ್ಕಡೆ ಭಾರತ ಹಾಗೂ ಚೀನಾ ನಡುವಿನ ಗಡಿ ಘರ್ಷಣೆ ಅಂತ್ಯಗೊಳಿಸಲು ಎರಡೂ ದೇಶಗಳ ನಡುವೆ ಸೇನಾ ಹಂತಗಳ ಚರ್ಚೆ ನಡೆದಿದೆ. ಏಪ್ರಿಲ್ 23ರಂದು 18ನೇ ಸುತ್ತಿನ ಸಭೆ ಕೂಡ ನಡೆದಿತ್ತು. 18ನೇ ಸುತ್ತಿನ ಸಭೆ ಬಳಿಕ ಭಾರತ & ಚೀನಾ ರಕ್ಷಣಾ ಸಚಿವರು ಸಭೆ ನಡೆಸಿರುವುದು ವಿಶೇಷ.
ಅಮೆರಿಕ ಮಣಿಸುವ ತಂತ್ರದಲ್ಲಿ ಚೀನಾ?
ಡ್ರ್ಯಾಗನ್ ಚೀನಾಗೆ ಈಗ ಅಮೆರಿಕ ಜಾಗತಿಕ ಶತ್ರು. ಇದೇ ಕಾರಣಕ್ಕೆ ತನ್ನ ಅಕ್ಕಪಕ್ಕದ ಶತ್ರು ರಾಷ್ಟ್ರಗಳ ಜೊತೆ ರಾಜಿಗಾಗಿ ರಣತಂತ್ರ ರೂಪಿಸಿದೆ ಚೀನಾ. ಕೆಲವು ದಿನಗಳ ಹಿಂದಷ್ಟೇ ಫಿಲಿಪೈನ್ಸ್ ಜೊತೆಗೂ ದಕ್ಷಿಣ ಚೀನಾ ಸಮುದ್ರದ ವಿಚಾರದಲ್ಲಿ ರಾಜಿ ಮಾಡಿಕೊಂಡಿತ್ತು ಚೀನಾ. ಇದೀಗ ಭಾರತದ ಜೊತೆಗೆ ಗಡಿ ವಿವಾದ ಬಗೆಹರಿಸಿಕೊಳ್ಳುವ ಮೂಲಕ, ಅಮೆರಿಕದ ವಿರುದ್ಧ ಒಂದುಗೂಡಿಸುವ ಪ್ರಯತ್ನ ನಡೆಸಿದೆ. ಹೀಗಾಗಿಯೇ ಗಡಿಯಲ್ಲಿ ಶಾಂತಿ ಕಾಪಾಡುವುದರ ಜೊತೆಗೆ, ಬಿಕ್ಕಟ್ಟಿನ ಕುರಿತು ತ್ವರಿಗತಿಯಲ್ಲಿ ನಿರ್ಧಾರ ಕೈಗೊಳ್ಳಲು ಎರಡೂ ದೇಶಗಳು ಒಪ್ಪಿಗೆ ನೀಡಿವೆ ಎಂದಿತ್ತು ಚೀನಾ.
ನೆಮ್ಮದಿ ಇರುವ ಜಾಗದಲ್ಲಿ ಅಮೆರಿಕದ ಎಂಟ್ರಿಯಾದರೆ ಎಡವಟ್ಟು ಗ್ಯಾರಂಟಿ ಎಂಬುದು ಜನಜನಿತ ಆರೋಪ. ಈಗಲೂ ಅಷ್ಟೇ ಏಷ್ಯಾದಲ್ಲಿ ನಡೆಯುತ್ತಿರುವ ಕಿತ್ತಾಟ, ತಿಕ್ಕಾಟಗಳಿಗೆ ಅಮೆರಿಕ ಕಾರಣ ಎಂಬ ಆರೋಪ ಕೇಳಿಬರುತ್ತಿದೆ. ಇತ್ತೀಚೆಗೆ ತೈವಾನ್ ಜೊತೆ ಜಂಟಿ ಸಮರಾಭ್ಯಾಸ ನಡೆಸಿ ತೈವಾನ್ (Taiwan) ನೆಮ್ಮದಿ ಕೆಡಿಸಿತ್ತು ದೊಡ್ಡಣ್ಣ. ನಂತರ ಫಿಲಿಪೈನ್ಸ್ ಸೇನೆ ಜೊತೆಗೂ ಮಿಲಿಟರಿ ಡ್ರಿಲ್ಗೆ ಶುರು ಮಾಡಿತ್ತು. ಆದರೆ ಇದೇ ಸಮಯಕ್ಕೆ ಕಿಲಾಡಿ ಚೀನಾ, ಫಿಲಿಪೈನ್ಸ್ ಮನವೊಲಿಸಿ ದೊಡ್ಡಣ್ಣ ಅಮೆರಿಕದ ಲೆಕ್ಕಾಚಾರ ಉಲ್ಟಾ ಮಾಡಿತಾ? ಅನ್ನೋ ಡೌಟ್ ಶುರುವಾಗಿದೆ. ಜೊತೆಗೆ ಭಾರತದ ಜೊತೆಗೂ ರಾಜಿಗೆ ಮುಂದಾಗಿದೆ.
-
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video












Click it and Unblock the Notifications